ಹೊಸ ಸಿನಿಮಾ ನಟರಿಗೆ ಪ್ರೋತ್ಸಾಹ ನೀಡಿ ಬೆಂಬಲ ನೀಡುತ್ತಿರುವ ದರ್ಶನ್ ’ಬಜಾರ್’ ಚಿತ್ರನಟ ಧನ್ವೀರ್‌ಗೆ ರಿಲೀಸ್‌ಗೂ ಮುನ್ನ ಕರೆ ಮಾಡಿ ಪ್ರಾಂಕ್ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ ’ಬಜಾರ್’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಿಲೀಸ್‌ಗೂ ಮುನ್ನ ಧನ್ವೀರ್‌ಗೆ ದರ್ಶನ್ ಕಾಲ್ ಮಾಡಿ ಏನ್ ಮಾತನಾಡಿದ್ದಾರೆ ಗೊತ್ತಾ?

Add Asianetnews Kannada as a Preferred SourcegooglePreferred

ಸಿನಿಮಾ ರಿಲೀಸ್ ಆಗುವ ಹಿಂದಿನ ದಿನ ಧನ್ವೀರ್ ಗೆ ಅಪರಿಚಿತ ನಂಬರ್‌ನಿಂದ ಕಾಲ್‌ವೊಂದು ಬಂದಿತ್ತು ಅದರಲ್ಲಿ "ನಾನು ನಿಮ್ಮ ಕಟ್ಟಾ ಅಭಿಮಾನಿ. ನಾಳೆ ಸಿನಿಮಾ ರಿಲೀಸ್ ಆಗ್ತಿದೆ. ಭಯಪಟ್ಕೋಬೇಡಿ. ಎಲ್ಲಾ ಥಿಯೇಟರ್ ಗೂ ಭೇಟಿ ಕೊಡಿ, ಎಲ್ಲಾ ಒಳ್ಳೆದಾಗುತ್ತದೆ" ಎಂದು ಮಾತನಾಡಿದ ಕೆಲ ಸಮಯದ ನಂತರ ಧ್ವನಿ ಕೇಳಿ ಅದು ದರ್ಶನ್ ಎಂದು ತಿಳಿಯಿತು ಎಂದು ಧನ್ವೀರ್ ಹೇಳಿದ್ದಾರೆ.

'ಬಜಾರ್' ಬಿಡುಗಡೆ ದಿನ ಧನ್ವೀರ್ ದರ್ಶನ್ ಮನೆಗೆ ಭೇಟಿ ನೀಡಿದ ನಂತರವೇ ಕೆಜಿ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರಕ್ಕೆ ಭೇಟಿ ನೀಡಿದರು.

ಸಿಂಪಲ್ ಸುನಿ "ಬಜಾರ್" ಚಿತ್ರದಲ್ಲಿ ಅದಿತಿ ಪಾತ್ರವೇನು ಗೊತ್ತಾ?