ಎಂಬತ್ನಾಲ್ಕು ಪಾತ್ರಗಳು ರಂಗಭೂಮಿ ಪಾಲಾದ ‘ಗಿಣಿ ಹೇಳಿದ ಕಥೆ’ !
ಸಾಕಷ್ಟು ವರ್ಷಗಳ ಕಾಲ ಧ್ಯಾನಿಸದೇ ದೃಷ್ಯ ಕಾವ್ಯವೊಂದು ಸಾಕಾರಗೊಳ್ಳಲು ಸಾಧ್ಯವಿಲ್ಲ. ಅದರ ಹಿಂದೆ ಶ್ರದ್ಧೆ ಇಲ್ಲದಿದ್ದರೆ ಒಂದೊಳ್ಳೆ ಚಿತ್ರವಾಗಿ ರೂಪುಗೊಳ್ಳುವುದೂ ದೂರದ ಮಾತು. ಆದರೆ ಗಿಣಿ ಹೇಳಿದ ಕಥೆಯ ಹಿಂದೆ ಅಂಥಾ ಧ್ಯಾನವಿದೆ. ವರ್ಷಾಂತರಗಳ ಪರಿಶ್ರಮ ಮತ್ತು ಶ್ರದ್ಧೆಗಳಿವೆ.
ಹೇಳಿಕೇಳಿ ಈ ಚಿತ್ರದ ನಿರ್ಮಾಪಕ, ನಾಯಕ ಮತ್ತು ಕಥೆ ಚಿತ್ರಕಥೆ, ಸಭಾಷಣೆಕಾರ ದೇವ್ ಅವರು ರಂಗಭೂಮಿಯಿಂದಲೇ ಬಂದವರು. ತಾವೊಂದು ಚಿತ್ರ ಮಾಡಿದರೆ ರಂಗಭೂಮಿ ಕಲಾವಿದರಿಗೆ ಹೆಚ್ಚಿನ ಆಧ್ಯತೆ ಕೊಡಬೇಕೆಂಬ ಮಹದಾಸೆ ಅವರಿಗಿತ್ತು. ಅದನ್ನು ಈ ಸಿನಿಮಾ ಮೂಲಕ ಅಕ್ಷರಶಃ ಮಾಡಿ ತೋರಿಸಿದ್ದಾರೆ.
ಧ್ರುವ ಮೆಚ್ಚಿದ ಗಿಣಿ ಹೇಳಿದ ಕತೆ ಜ.11ಕ್ಕೆ
ಅದಕ್ಕೆ ಈ ಚಿತ್ರದ ತಾರಾಗಣವೇ ಸಾಕ್ಷಿಯಾಗುತ್ತೆ. ಯಾಕೆಂದರೆ, ಇದರಲ್ಲಿ ಬಹುಪಾಲು ರಂಗಭೂಮಿ ಕಲಾವಿದರೇ ನಟಿಸಿದ್ದಾರೆ. ಗಿಣಿ ಹೇಳಿದ ಕಥೆಯಲ್ಲಿ ಒಟ್ಟು ಎಂಬತ್ತೇಳು ಪಾತ್ರಗಳಿವೆ. ಅದರಲ್ಲಿ ಎಂಬತ್ನಾಲಕ್ಕು ಪಾರತ್ರಗಳಿಗೆ ರಂಗಭೂಮಿ ಕಲಾವಿದರೇ ಜೀವ ತುಂಬಿದ್ದಾರೆ. ಸಾಮಾನ್ಯವಾಗಿ ಚಿತ್ರಗಳಲ್ಲಿ ರಂಗಭೂಮಿ ಕಲಾವಿದರಿಗೆ ಅವಕಾಶ ಸಿಗೋದೇ ಅಪರೂಪ. ಆದರೆ ಈ ಚಿತ್ರದಲ್ಲಿ ಕರ್ನಾಟಕದ ಮೂಲೆ ಮೂಲೆಯ ಕಲಾವಿದರೂ ನಟಿಸಿದ್ದಾರೆ.
ದೇಸಿ ಕಥೆಗೆ ಕ್ರಿಯೇಟಿವ್ ಝಲಕ್ ನೀಡಿದ ’ಗಿಣಿ ಹೇಳಿದ ಕಥೆ’
ಈ ಸಿನಿಮಾ ಸಂಗೀತ ನಿರ್ದೇಶನ ಮಾಡಿರುವವರು ಹಿತನ್ ಹಾಸನ್. ಅವರ ಮೂರನೇ ಚಿತ್ರವಿದು. ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಚಿತ್ರದ ಭಿನ್ನವಾದ ಕಥೆಗೆ ಪೂರಕವಾದ ಸಂಗೀತ ಸಂಯೋಜನೆ ಮಾಡುವುದೇ ಸವಾಲಾಗಿತ್ತು. ಅದನ್ನು ಹಿತನ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆಯೂ ಕೇಳಿ ಬರುತ್ತಿದೆ. ಸೀಮಿತ ಬಜೆಟ್ಟಿನಲ್ಲಿ, ಸೀಮಿತವಾದ ಪರಿಕರಗಳೊಂದಿಗೆ ಹಿತನ್ ಹಾಡುಗಳನ್ನು ರೂಪಿಸಿದ್ದಾರೆ.