Asianet Suvarna News Asianet Suvarna News

ಲೋಕಸಭಾ ಚುನಾವಣೆ ದಿಕ್ಕು ಬದಲಿಸಲಿರುವ ಈ 10 ಯೋಜನೆಗಳು

ಲೋಕ ಸಮರಕ್ಕೆ ಎಲ್ಲ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ ಮತ್ತು ಮಾಡಿಕೊಳ್ಳುತ್ತಿವೆ. ಆದರೆ ರಾಜಕಾರಣವನ್ನೆಲ್ಲ ಹೊರತುಪಡಿಸಿ ಕೇಂದ್ರ ಸರಕಾರ ನೀಡಿದ ಮಹತ್ವದ ಯೋಜನೆಗಳ ಮೇಲೆ ಒಂದು ಕಣ್ಣು ಹಾಯಿಸಬೇಕಿದೆ.

Loksabha Elections 2019 10 game changing decisions by PM Narendra Modi
Author
Bengaluru, First Published Mar 12, 2019, 11:01 PM IST

ನವದೆಹಲಿ[ಮಾ. 12] ರಾಜಕಾರಣದ ತಂತ್ರಗಳು ಏನೇ ಇರಬಹುದು. ಜನರನ್ನು ತಲುಪಲು ಪಕ್ಷಗಳು ವಿವಿಧ ರೀತಿಯ ಸರ್ಕಸ್ ಮಾಡಬಹುದು. ಆದರೆ ಕಳೆದ ಅವಧಿಯಲ್ಲಿ ಪೊಲಿಟಿಕಲ್ ಗೇಮ್ ಬದಲಾಯಿಸುವ ಟಾಪ್ 10 ಯೋಜನೆಗಳು ಏನು? ಇಲ್ಲಿದೆ ಉತ್ತರ.

1. ಸರ್ಜಿಕಲ್ ದಾಳಿ:  1971ರ ನಂತರ ಭಾರತ ಪಾಕಿಸ್ತಾನದ ಒಳಗ್ಗೆ ನುಗ್ಗಿ ಉಗ್ರರನ್ನು ಸದೆ ಬಡಿದು ಬಂದಿದೆ. ಇದು ಸಹಜವಾಗಿಯೇ ದೇಶದ ಜನರಲ್ಲಿ ರಾಷ್ಟ್ರಾಭಿಮಾನ ಮೂಡಿಸಿದೆ.

ಸರ್ಜಿಕಲ್ ದಾಳಿಗೆ ಸಾಕ್ಷಿ ಬೇಕೆ? ಇಲ್ಲಿದೆ ನೋಡಿ

2. ಉರಿ ದಾಳಿ: ಕೊಂಚ ಹಿಂದಕ್ಕೆ ಹೋದರೆ ನಮ್ಮ ಯೋಧರ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದ ಉಗ್ರರ ಹುಟ್ಟು ಅಡಗಿಸಿದ್ದ ಉರಿ ದಾಳಿ ಸಪ್ಟೆಂಬರ್ 29, 2016ರ ಕಹಿ ಘಟನೆಗೆ ಸಾಂತ್ವನ ಹೇಳಿದ್ದು ಸುಳ್ಳಲ್ಲ.

3. ಶೇ. 10 ಮೀಸಲು: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೂ ನೀಡಿರುವ ಶೇ. 10 ಮೀಸಲು ಒಂದು ದಿಟ್ಟ ಹೆಜ್ಜೆ.

4. ಆದಾಯ ತೆರಿಗೆ ಮಿತಿ: 2019ರ ಬಜೆಟ್ ನಲ್ಲಿ ಘೋಷಣೆ ಮಾಡಿದ ಆದಾಯ ತೆರಿಗೆ ರಿಬೇಟ್ ಬದಲಾವಣೆ ಮಧ್ಯಮ ವರ್ಗವದವರಿಗೆ ಲಾಭ ತಂದುಕೊಡಲಿದೆ. 6.5 ಲಕ್ಷ ರೂ. ವರೆಗೆ ವಾರ್ಷಿಕ ಆದಾಯ ಇರುವವರಿಗೆ ನೆರವು ನೀಡಲಿರುವುದು ಸುಳ್ಳಲ್ಲ.

ಎಲ್ಲರಿಗೂ ತುಂಬಾ ಇಂಪಾರ್ಟೆಂಟ್: ಇದು ಟ್ಯಾಕ್ಸ್ ವಿನಾಯ್ತಿಯ ಬಜೆಟ್!

5. ಕಿಸಾನ್ ಸಮ್ಮಾನ್ ನಿಧಿ ಯೋಜನೆ: 5 ಹೆಕ್ಟೇರ್ ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಸಹಾಯಧನ ನೀಡುವ ಯೋಜನೆ ನೇರವಾಗಿ ರೈತರ ಖಾತೆಗೆ ನೇರವಾಗಿ ದೊರೆಯಲಿದೆ. 

ಉಳುವಾ ಯೋಗಿಗೆ ಮೋದಿ ಸರ್ಕಾರದ ಬಂಪರ್ ಗಿಫ್ಟ್: 6 ಸಾವಿರ ಸಹಾಯಧನ!

6. ಆಯುಷ್ಮಾನ್ ಭಾರತ್: 2018ರಲ್ಲಿ ಜಾರಿಗೆ ಬಂದ ಯೋಜನೆ ಆರೋಗ್ಯ ವಿಮೆ ನೀಡಲಿದ್ದು 5 ಲಕ್ಷ ರೂ. ವರೆಗೂ ನೆರವು ನೀಡಲಿದೆ. 100 ಮಿಲಿಯನ್ ಕುಟುಂಬಗಳಿಗೆ ಇದು ಸಹಾಯವಾಗಲಿದೆ ಎಂದು ಲೆಕ್ಕ ಹಾಕಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆ ಸಂಪೂರ್ಣ ವಿವರ

7. ಪ್ರಧಾನ ಮಂತ್ರಿ ಉಜ್ವಲ ಯೋಜನೆ: 2016ರಲ್ಲಿ ಜಾರಿಯಾದ ಯೋಜನೆ 5 ಕೋಟಿ ಬಡ ಮಹಿಳೆಯರಿಗೆ ಗ್ಯಾಸ್ ಸಂಪರ್ಕ ನೀಡುವ ಗುರಿಯೊಂದಿಗೆ ಜಾರಿಗೆ ಬಂತು. 1600 ರೂ. ಸಬ್ಸಿಡಿ ದರದಲ್ಲಿ ದೇಶದ ಬಡ ಕುಟುಂಬಗಳಿಗೆ ಅನಿಲ ಸಂಪರ್ಕ ನೀಡುತ್ತ ಬರಲಾಗಿದೆ.

8. ಸ್ವಚ್ಛ ಭಾರತ ಅಭಿಯಾನ: ಸ್ವಚ್ಛ ಭಾರತ ಅಭಿಯಾನ ದೇಶದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ತನ್ನಿಂದ ತಾನೇ ಮೂಡಿಬಂತು. 

9. ತಲಾಕ್ ನಿಷೇಧ: ತ್ರಿಪಲ್ ತಲಾಖ್ ಬಗ್ಗೆ ಜಾರಿಯಾದ ಮಹತ್ವದ ತೀರ್ಮಾನ ನಿಜಕ್ಕೂ ಬದಲಾವಣೆಯ ಹೆಜ್ಜೆ ಇಟ್ಟಿತು, ತ್ರಿಪಲ್ ತಲಾಖ್ ನ್ನು ಅಪರಾಧ ಎಂದು ಪರಿಗಣನೆಗೆ ಬಂದಿದ್ದು ಮುಸ್ಲಿಂ ಮಹಿಳೆಯರಲ್ಲಿ ಹೊಸ ವಿಶ್ವಾಸ ತುಂಬಿತು.

10. ಎಸ್ ಸಿ, ಎಸ್ಟಿ ನಿಯಮ: ಎಸ್ ಸಿ, ಎಸ್ಟಿಗಳ ಹಕ್ಕು ಕಾಪಾಡಲು 2018ರಲ್ಲಿ ಸಂಸತ್ ನಲ್ಲಿ ಪಾಸ್ ಆದ ಮಸೂದೆ ಸಹ ಒಂದು ಮೈಲುಗಲ್ಲು.

Follow Us:
Download App:
  • android
  • ios