Asianet Suvarna News Asianet Suvarna News

ಉ​ಕ್ರೇನ್‌ ವೈದ್ಯ​ ವಿದ್ಯಾ​ರ್ಥಿ​ಗಳ ಶಿಕ್ಷಣಕ್ಕೆ ಶೀಘ್ರ ಪರಿಹಾರ: ಕೇಂದ್ರ ಸಚಿವ ಜೈಶಂಕರ್‌

ನಾವು ಉಕ್ರೇನ್‌ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿನ ವಿದೇಶಾಂಗ ಸಚಿವರೊಡನೆ ಮಾತುಕತೆ ನಡೆಸಿ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಗಮನ ಸೆಳೆದಿದ್ದೇನೆ ಎಂದ ಜೈಶಂಕರ್‌

Soon Solution for Education of Ukraine Medical Students Says Union Minister S Jaishankar grg
Author
Bengaluru, First Published Aug 14, 2022, 2:22 PM IST

ರಾಮನಗರ(ಆ.14):  ಉಕ್ರೇನ್‌ ವೈದ್ಯ​ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವುದನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಈಗ ಅವರ ವ್ಯಾಸಂಗ ಕುರಿತು ಭಾರತೀಯ ಮೆಡಿಕಲ್‌ ಕೌನ್ಸಿಲ್‌, ಕೇಂದ್ರ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಗಮನ ಹರಿ​ಸು​ತ್ತಿವೆ ಎಂದು ವಿದೇ​ಶಾಂಗ ವ್ಯವ​ಹಾ​ರ​ಗಳ ಸಚಿವ ಜೈಶಂಕರ್‌ ತಿಳಿ​ಸಿ​ದರು. ಸುದ್ದಿ​ಗೋ​ಷ್ಠಿ​ ನಡೆ​ಸಿದ ಅವರು, ಉಕ್ರೇನ್‌ ನಿಂದ ಮರ​ಳಿ​ರುವ ವಿದ್ಯಾ​ರ್ಥಿ​ಗಳ ಶಿಕ್ಷ​ಣದ ಸವಾಲು ಎದು​ರಾ​ಗಿದೆ. ವೈದ್ಯಕೀಯ ಶಿಕ್ಷಣದಲ್ಲಿ ಅಂತಿಮ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್‌ ತರಬೇತಿ ಬೇಕಾಗಿದೆ. ನಾವು ಉಕ್ರೇನ್‌ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಅಲ್ಲಿನ ವಿದೇಶಾಂಗ ಸಚಿವರೊಡನೆ ಮಾತುಕತೆ ನಡೆಸಿ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ಗಮನ ಸೆಳೆದಿದ್ದೇನೆ ಎಂದ​ರು.

ಈ ವಿದ್ಯಾರ್ಥಿಗಳ ವ್ಯಾಸಂಗದ ಬಗ್ಗೆ ಪರ್ಯಾಯ ಮಾರ್ಗಗಳ ಬಗ್ಗೆಯೂ ಅವಲೋಕನ ನಡೆಯುತ್ತಿದೆ. ಆದರೆ, ಅದು ಸುಲಭವಲ್ಲ. ಹಲವಾರು ನಿಯಮಗಳನ್ನು ಗಮನಿಸಬೇಕಾಗಿದೆ. ಕೆಲವು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟಿನ ಮೊರೆ ಹೋಗಿರುವ ಬಗ್ಗೆ ತಮ್ಮ ಗಮನಕ್ಕಿದೆ ಎಂದರು.

Russia-Ukraine War: ಅತಂತ್ರರಾದ ವಿದ್ಯಾರ್ಥಿಗಳ ನೆರವಿಗೆ ಬಂದ ಸಿದ್ಧಗಂಗಾ ಮಠ

ಭಾರತದಲ್ಲಿ ಆ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಮುಂದುವರೆಸಲು ಅವಕಾಶ ಸಿಗಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ​ಚಿ​ವರು, ಭಾರತೀಯ ಮೆಡಿಕಲ್‌ ಕೌನ್ಸಿಲ್‌, ಆರೋಗ್ಯ ಮತ್ತು ಶಿಕ್ಷಣ ಸಚಿವಾಲಯಗಳು ಈ ವಿಚಾರದಲ್ಲಿ ಚಿಂತನೆಗಳನ್ನು ನಡೆಸುತ್ತಿವೆ. ಕೇಂದ್ರ ಸರ್ಕಾರವೂ ಈ ವಿದ್ಯಾರ್ಥಿಗಳು ಎದುರಿಸುತ್ತಿರುವ ಸವಾಲುಗಳ ನಿವಾರಣೆಗೆ ಗಮನ ಕೇಂದ್ರೀಕರಿಸಿದೆ.

ಎಲ್ಲ ಆಯಾ​ಮ​ಗ​ಳ​ಲ್ಲಿಯೂ ವಿದ್ಯಾ​ರ್ಥಿ​ಗಳ ಬಗ್ಗೆ ಚಿಂತನೆ ನಡೆ​ಯು​ತ್ತಿದೆ. ಶೀಘ್ರ​ದಲ್ಲಿ ಎಲ್ಲ​ ಸ​ಮ​ಸ್ಯೆ​ಗ​ಳನ್ನು ಪರಿ​ಹ​ರಿ​ಸು​ತ್ತೇವೆ. ನಮ್ಮ ದೇಶದಲ್ಲಿಯೇ ಓದುವ ಅವಕಾಶ ನೀಡುವ ಬಗ್ಗೆಯೂ ಕಾನೂನಿನ ಅಧ್ಯಯನ ನಡೆಯುತ್ತಿದೆ. ಎಲ್ಲರೂ ಸರ್ಕಾರದ ನೀತಿಗಳ ಬಗ್ಗೆಯೂ ತಿಳಿದುಕೊಳ್ಳಬೇಕಾಗಿದೆ. ಸುಪ್ರಿಂ ಕೋರ್ಟ್‌ ಏನು ಹೇಳುತ್ತದೆ ಎಂಬ ಬಗ್ಗೆಯೂ ಕಾದು ನೋಡಬೇಕಾಗಿದೆ ಎಂದು ಹೇಳಿ​ದರು.

ಉಕ್ರೇನ್- ರಷ್ಯಾ ಯುದ್ಧ: ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸುತ್ತೂರು ಮಠ ಆಸರೆ

ಪ್ರತಿ ನೂರು ಕಿಮೀಗೆ ಒಂದು ವಿಮಾನ ನಿಲ್ದಾಣ ಇರಬೇಕು ಎಂಬುದು ಪ್ರಧಾನಿ ಮೋದಿ ಆಶಯ, ಈ ಬಗ್ಗೆ ಸಂಬಂಧಿ​ಸಿದ ಸಚಿ​ವಾ​ಲಯ ಕಾರ್ಯೋ​ನ್ಮು​ಖ​ವಾ​ಗಿ​ರು​ತ್ತದೆ. ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ವಿಮಾನ ನಿಲ್ದಾಣಗಳಲ್ಲಿನ ಒತ್ತಡ ಕಡಿಮೆ ಮಾಡುವ ವಿಚಾರದ ಬಗ್ಗೆ ಗಮನ ಹರಿಸಿರುತ್ತಾರೆ ಎಂಬ ವಿಶ್ವಾಸವಿದೆ. ತಾವು ದೆಹಲಿಗೆ ಹಿಂದಿರುಗಿದ ನಂತರ ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ಪ್ರಸ್ತಾಪಿಸುವುದಾಗಿ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದರು.
ಭಾರತದ ಲೇಖಕ ಸಲ್ಮಾನ್‌ ರಷ್ದಿ ಮೇಲೆ ಅಮೇರಿಕಾದಲ್ಲಿ ಹಲ್ಲೆ ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಇಡೀ ವಿಶ್ವ ಈ ಹಲ್ಲೆಯನ್ನು ಖಂಡಿಸಿದೆ. ಬೆಳಗ್ಗೆಯಿಂದ ನಾನು ರಾಮನಗರದಲ್ಲೇ ಇದ್ದೇನೆ. ಈ ಬಗ್ಗೆ ಉಭಯ ರಾಷ್ಟದೊಂದಿಗೆ ಮಾತನಾಡುತ್ತೇನೆ ಎಂದರು.

ಬಿಜೆಪಿ ನೇತೃ​ತ್ವದ ಸರ್ಕಾರ ಹಾಗೂ ಹಿಂದಿನ ಸರ್ಕಾ​ರ​ಗಳ ಆಡ​ಳಿ​ತ​ವನ್ನು ಜನರು ಗಮ​ನಿ​ಸಿ​ದ್ದಾರೆ. ಕಳೆದ 8 ವರ್ಷಗಳ ಆಡಳಿತದಲ್ಲಿ ವ್ಯತ್ಯಾಸವೇನು ಎಂಬುದರ ಬಗ್ಗೆ ತಿಳಿದುಕೊಂಡಿದ್ದಾರೆ. ಈ ವ್ಯತ್ಯಾಸವನ್ನು ನಾನು ಹೇಳಿದರೆ ಯಾರೂ ನಂಬವುದಿ​ಲ್ಲ. ಆದರೆ, ವಿವಿಧ ಕಾರ್ಯಕ್ರಮಗಳು, ಯೋಜನೆಗಳಿಂದ ತಮ್ಮ ಜೀವನದಲ್ಲಿ ಆದ ಪರಿವರ್ತನೆ ಮತ್ತು ಪ್ರಗತಿಯ ಬಗ್ಗೆ ಫಲಾನುಭವಿಗಳು ವ್ಯಕ್ತಪಡಿಸಿರುವ ಅನಿಸಿಕೆಗಳು ಮೋದಿ ಸರ್ಕಾರ ಮತ್ತು ಇತರ ಸರ್ಕಾರಗಳ ನಡುವಿನ ವ್ಯತ್ಯಾಸವನ್ನು ಕಾಣಬಹುದು. ಮೋದಿ​ ಆಡಳಿತದಲ್ಲಿ ಇಡೀ ದೇಶವೇ ಅಭಿವೃದ್ಧಿ ಕಾಣುತ್ತಿದೆ. ಅವರ ಮೂಲಕ ​ಬೆಂಗ​ಳೂರು ಗ್ರಾಮಾಂತರ ಕ್ಷೇತ್ರ ಸೇರಿ​ದಂತೆ ಇಡೀ ದೇಶದಲ್ಲೆ ಗೆಲುವು ಸಾಧಿಸುತ್ತೆವೆ. ತಮ್ಮ ಭೇಟಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ ಅಂತ ವಿದೇ​ಶಾಂಗ ವ್ಯವ​ಹಾ​ರ​ಗಳ ಸಚಿವ ಜೈಶಂಕರ್‌ ತಿಳಿಸಿದ್ದಾರೆ.   
 

Follow Us:
Download App:
  • android
  • ios