Asianet Suvarna News Asianet Suvarna News

ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿದ 49 ವಿದ್ಯಾ​ರ್ಥಿ​ಗಳು ಅಸ್ವ​ಸ್ಥ

ಹಲ್ಲಿ ಬಿದ್ದ ಬಿಸಿ​ಯೂಟ ಸೇವಿಸಿ 49 ವಿದ್ಯಾ​ರ್ಥಿ​ಗಳು ಅಸ್ವ​ಸ್ಥ​ಗೊಂಡಿ​ರುವ ಘಟನೆ ತಾಲೂ​ಕಿನ ಅಪ್ಪ​ನ​ದೊಡ್ಡಿ ಗ್ರಾಮ​ದಲ್ಲಿ ಶನಿ​ವಾರ ನಡೆ​ಸಿದ್ದು, ಮಕ್ಕ​ಳನ್ನು ಆಸ್ಪ​ತ್ರೆಗೆ ದಾಖ​ಲಿಸಿ ಚಿಕಿತ್ಸೆಗೊಳ​ಪ​ಡಿ​ಸಿ​ದೆ.

Consumption of poisoned food: More than 40 school children are sick in appanadoddi raichur rav
Author
First Published Jul 2, 2023, 5:20 AM IST

ರಾಯಚೂರು (ಜು.2) : ಹಲ್ಲಿ ಬಿದ್ದ ಬಿಸಿ​ಯೂಟ ಸೇವಿಸಿ 49 ವಿದ್ಯಾ​ರ್ಥಿ​ಗಳು ಅಸ್ವ​ಸ್ಥ​ಗೊಂಡಿ​ರುವ ಘಟನೆ ತಾಲೂ​ಕಿನ ಅಪ್ಪ​ನ​ದೊಡ್ಡಿ ಗ್ರಾಮ​ದಲ್ಲಿ ಶನಿ​ವಾರ ನಡೆ​ಸಿದ್ದು, ಮಕ್ಕ​ಳನ್ನು ಆಸ್ಪ​ತ್ರೆಗೆ ದಾಖ​ಲಿಸಿ ಚಿಕಿತ್ಸೆಗೊಳ​ಪ​ಡಿ​ಸಿ​ದೆ. ಘಟನೆಯಿಂದ ಪಾಲ​ಕರು ಹಾಗೂ ಗ್ರಾಮ​ಸ್ಥ​ರ​ಲ್ಲಿ ಆತಂಕ ಉಂಟಾ​ಗಿದ್ದು, ಸ್ಥಳಕ್ಕೆ ಗ್ರಾಮೀಣ ಶಾಸಕ ಬಸ​ನ​ಗೌಡ ದದ್ದ​ಲ್‌, ವೈದ್ಯಾ​ಧಿ​ಕಾ​ರಿ​ಗಳು ಭೇಟಿ ನೀಡಿ ಪರಿ​ಶೀ​ಲನೆ ನಡೆಸಿ​ದ್ದಾರೆ. ಇದೇ ವೇಳೆ ಘಟನೆ ಮಾಹಿತಿ ಪಡೆದ ಸಚಿವ ಎನ್‌.​ಎ​ಸ್‌. ​ಬೋ​ಸ​ರಾಜು ಜಿಲ್ಲಾ​ಡ​ಳಿ​ತಕ್ಕೆ ಅಗತ್ಯ ಕ್ರಮ ಕೈಗೊ​ಳ್ಳಲು ಸೂಚನೆ ನೀಡಿ​ದ್ದಾರೆ.

ಒಟ್ಟು 188 ವಿದ್ಯಾ​ರ್ಥಿ​ಗ​ಳಿ​ರುವ ಅಪ್ಪನದೊಡ್ಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಂದಿ​ನಂತೆ ಶನಿ​ವಾರ ಮಧ್ಯಾಹ್ನ ಬಿಸಿಯೂಟಕ್ಕೆ ಉಪ್ಪಿಟ್ಟು ಮಾಡಿದ್ದು, 1ನೇ ತರಗತಿಯಿಂದ 5ನೇ ತರಗತಿಯವರೆಗಿನ ಒಟ್ಟು 123 ವಿದ್ಯಾರ್ಥಿಗಳು ಉಪ್ಪಿಟ್ಟು ಸೇವನೆ ಮಾಡಿದ್ದಾರೆ. ಈ ವೇಳೆ ಮಕ್ಕ​ಳಲ್ಲಿ ಹೊಟ್ಟೆನೋವು, ವಾಂತಿ ಕಾಣಿ​ಸಿ​ಕೊಂಡಿದ್ದು, ತಕ್ಷಣ ಅವ​ರನ್ನು ರಾಯ​ಚೂರು ನಗ​ರದ ರಿಮ್ಸ್‌ ಬೋಧಕ ಆಸ್ಪ​ತ್ರೆಗೆ ದಾಖ​ಸಲಾ​ಗಿ​ದೆ. 37 ವಿದ್ಯಾ​ರ್ಥಿ​ಗ​ಳಿಗೆ ಸಮೀ​ಪದ ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

ಸರ್ಕಾರಿ ಶಾಲಾ ಆವರಣದಲ್ಲಿ ಬೆಳೆದ ವಿಷಕಾರಿ ಬೀಜ ತಿಂದು, ಅಸ್ವಸ್ಥರಾದ ಮಕ್ಕಳು

ಇನ್ನೂ 30 ಜನ ವಿದ್ಯಾ​ರ್ಥಿ​ಗ​ಳಿಗೆ ಅಪ್ಪನದೊಡ್ಡಿ ಶಾಲೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಇಲಾಖೆಯ ವೈದ್ಯರ ತಂಡ ಗ್ರಾಮದಲ್ಲಿ ಬೀಡು​ಬಿ​ಟ್ಟಿ​ದ್ದು, ಎಲ್ಲ ವಿದ್ಯಾರ್ಥಿಗಳು ಆರಾಮವಾಗಿದ್ದಾರೆ. ಯಾವುದೇ ಆತಂಕಪಡುವಂತಿಲ್ಲ. ಎಲ್ಲ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿ ನಿಗಾವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ತಿಳಿಸಿದ್ದಾರೆ.

ಗ್ರಾಮೀಣ ಶಾಸಕರ ಭೇಟಿ:

ಘಟನೆ ಮಾಹಿತಿ ಪಡೆದ ಗ್ರಾಮೀಣ ಶಾಸಕ ಬಸ​ನ​ಗೌಡ ದದ್ದಲ್‌ ಕೂಡಲೇ ಅಪ್ಪನದೊಡ್ಡಿದ ಶಾಲೆ, ಯಾಪ​ಲ​ದಿನ್ನಿ ಪಿಎ​ಚ್‌ಸಿ ಹಾಗೂ ರಿಮ್ಸ್‌​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಲೆ ಶಿಕ್ಷ​ಕರು, ಎಸ್ಡಿ​ಎಂಸಿ, ಪಾಲ​ಕರು, ಗ್ರಾ​ಮ​ಸ್ಥ​ರು ಹಾಗೂ ಆರೋಗ್ಯ ಇಲಾಖೆ ಅಧಿ​ಕಾ​ರಿ​ಗ​ಳೊಂದಿಗೆ ಚರ್ಚೆ ನಡೆ​ಸಿ​ದರು. ಆತಂಕ​ಗೊಂಡ ಮಕ್ಕಳು ಮತ್ತು ಪಾಲ​ಕ​ರಿಗೆ ಆತ್ಮ​ಸ್ಥೈ​ರ್ಯ​ವನ್ನು ತುಂಬಿ​ದ​ರು.

ಬೆಂಗಳೂರು: ಕಲುಷಿತ ನೀರು ಕುಡಿದು 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ವಿದ್ಯಾ​ರ್ಥಿ​ಗಳ ಆರೋ​ಗ್ಯದ ಮೇಲೆ ನಿಗಾವ​ಹಿ​ಸಲು ಸಚಿವ ಬೋಸರಾಜು ಸೂಚನೆ

ರಾಯ​ಚೂ​ರು: ತಾಲೂಕಿನ ಅಪ್ಪನದೊಡ್ಡಿ ಗ್ರಾಮದಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥರಾದ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ಜಿಲ್ಲಾ​ಧಿ​ಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗೆ ಸೂಚ​ನೆ ನೀಡಿ​ರು​ವು​ದಾಗಿ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವ ಎನ್‌.ಎಸ್‌. ಬೋಸರಾಜು ತಿಳಿ​ಸಿ​ದ್ದಾ​ರೆ.

ಅಪ್ಪ​ನ​ದೊಡ್ಡಿ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಸಿಯೂಟದ ಬಗ್ಗೆ ಆಯಾ ಶಾಲಾ ಮುಖ್ಯಸ್ಥರು ಮತ್ತು ಬಿಟಿಯೂಟ ಅಡುಗೆ ಸಿಬ್ಬಂದಿ ಸ್ವಚ್ಛತೆಗೆ ಮುಂದಾಗಿ, ಅಗತ್ಯ ಮುಂಜಾ​ಗ್ರತಾ ಕ್ರಮ​ವನ್ನು ವಹಿ​ಸ​ಬೇ​ಕು, ಇಂತಹ ಘಟನೆ ಮರು​ಕ​ಳಿ​ಸ​ದಂತೆ ಎಚ್ಚ​ರಿಕೆ ವಹಿ​ಸ​ಬೇಕು.

ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಬಿಸಿಯೂಟಕ್ಕೆ ಅಗತ್ಯ ವ್ಯವಸ್ಥೆ ಮತ್ತು ಅಡುಗೆ ಮಾಡಲು ಶುದ್ಧ ನೀರು, ಅಡುಗೆ ಕೊಠಡಿಯಲ್ಲಿ ಕ್ರಿಮಿ ಕೀಟಗಳು ಇರದಂತೆ ಅಗತ್ಯ ಕ್ರಮ ವಹಿಸಲು ಆಯಾ ಶಾಲಾ ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಬೇಕು. ಪ್ರತಿದಿನ ಅಡುಗೆ ಮಾಡಿದ ತಕ್ಷಣ ಸಂಬಂಧಿಸಿದ ಅಡುಗೆ ಸಿಬ್ಬಂದಿ, ಶಾಲೆ ಮುಖ್ಯಸ್ಥರು ತಪಾಸಣೆ ಮಾಡಲು ಜಿಲ್ಲಾ​ಡ​ಳಿ​ತಕ್ಕೆ ನಿರ್ದೇ​ಶಿ​ಸಲಾ​ಗಿ​ದೆ.

ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 55 ಮಕ್ಕಳು ಅಸ್ವಸ್ಥ

ಇಷ್ಟೇ ಅಲ್ಲದೇ ಅಸ್ವ​ಸ್ಥ​ರಾದ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲು ರಿಮ್ಸ್‌ ಬೋಧ​ಕ ಆಸ್ಪತ್ರೆಯ ಮುಖ್ಯಸ್ಥರಿಗೆ ಅಗತ್ಯ ಚಿಕಿತ್ಸೆಗೆ ಸೂಚಿಸಬೇಕು ಮತ್ತು ಗ್ರಾಮದಲ್ಲಿರುವ ಕೆಲ ವಿದ್ಯಾರ್ಥಿಗಳು ಅಲ್ಪ ಪ್ರಮಾಣದಲ್ಲಿ ಅಸ್ವಸ್ಥಗೊಂಡವರ ತಪಾಸಣೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇ​ಶಿ​ಸಿರುವು​ದಾಗಿ ಸಚಿ​ವರು ಹೇಳಿ​ಕೆ ನೀಡಿ​ದ್ದಾರೆ.

Follow Us:
Download App:
  • android
  • ios