Asianet Suvarna News Asianet Suvarna News

Daily Horoscope: ಕಟಕಕ್ಕೆ ಸ್ಥಳ ಬದಲಾವಣೆ ಸಾಧ್ಯತೆ, ಮೀನಕ್ಕೆ ಹೆಚ್ಚುವ ಲಾಭ

8 ಮೇ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಸಿಂಹಕ್ಕೆ ಮಾತು ಮನೆ ಕೆಡಿಸುವುದು, ನಿಯಂತ್ರಣ ಅಗತ್ಯ

Dina Bhavishya of May 8th 2022 in Kannada SKR
Author
Bangalore, First Published May 8, 2022, 5:06 AM IST | Last Updated May 8, 2022, 5:06 AM IST

ಮೇಷ(Aries): ವ್ಯಾಪಾರಿಗಳಿಗೆ ಅಧಿಕ ಲಾಭ. ಗರ್ಭಿಣಿಯರು ಹೆಚ್ಚು ಎಚ್ಚರಿಕೆಯಿಂದಿರಿ. ಬೇಸರ ಕಾಡಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದ್ದು, ವೇಗದ ಮೇಲೆ ನಿಯಂತ್ರಣವಿರಲಿ. ಸಂಗಾತಿಯೊಂದಿಗೆ ಸುಂದರ ದಿನ. ಗಾಯತ್ರಿ ಮಂತ್ರ ಜಪಿಸಿ. 

ವೃಷಭ(Taurus): ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ ಎದುರಾಗುವುದು. ವಿಪರೀತ ಕೂದಲುದುರುವುದರ ಬಗ್ಗೆ ಕಂಗಾಲಾಗುವಿರಿ. ಹತ್ತಿರದ ಬಂಧುಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದು ಆತಂಕವಾಗುವುದು. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

ಮಿಥುನ(Gemini): ರಿಯಲ್ ಎಸ್ಟೇಟ್‍ ಕ್ಷೇತ್ರದವರಿಗೆ, ಎಲೆಕ್ಟ್ರಾನಿಕ್ ಕ್ಷೇತ್ರದವರಿಗೆ ಅನುಕೂಲ. ನಿಮ್ಮ ಹೊಸ ಯೋಚನೆಗಳಿಗೆ ಬೆಂಬಲ, ಪ್ರೋತ್ಸಾಹ ದೊರಕುವುದು. ಮಕ್ಕಳ ಭವಿಷ್ಯದ ಕುರಿತು ಅತಿಯಾಗಿ ಚಿಂತಿಸುತ್ತಿರುವಿರಿ, ಅದರ ಅಗತ್ಯವಿಲ್ಲ. ಆದಿತ್ಯ ಹೃದಯ ಪಠಣ ಮಾಡಿ. 

ಕಟಕ(Cancer): ಸ್ಥಳ ಬದಲಾವಣೆ ಸಾಧ್ಯತೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಎಚ್ಚರಿಕೆ ನಡೆ ಅಗತ್ಯ. ಧೀರ್ಘ ಕಾಲದ ಆರೋಗ್ಯ ಸಮಸ್ಯೆಗಳು ಹೈರಾಣಾಗಿಸುವುವು. ಒಮ್ಮೆ ವೈದ್ಯರ ಸಲಹೆ ಪಡೆಯಿರಿ. ಮಾತು ಮುಖ್ಯವಾಗಿರುವ ಕೆಲಸಗಳಲ್ಲಿ ಪ್ರಶಂಸೆ ಗಳಿಸುವಿರಿ. ಸೂರ್ಯನಿಗೆ ಅರ್ಘ್ಯ ಸಲ್ಲಿಸಿ. 

Surya Gochar: ಮೇ 15ರ ನಂತರ ಈ ಐದು ರಾಶಿಗಳಿಗೆ ಭಲೇ ಅದೃಷ್ಟ!

ಸಿಂಹ(Leo): ಅನಗತ್ಯ ಮಾತಿನಿಂದ ಶತ್ರುತ್ವ, ವಾಗ್ವಾದ ಹೆಚ್ಚಾಗುವುದು. ಬಹಳ ಕಾಲದಿಂದ ಕೈಗೆ ಬರದಿದ್ದ ಸಾಲ ಹಿಂದೆ ಬರುವುದು. ನಾನಾ ಕಡೆಗಳಿಂದ, ನಾನಾ ರೀತಿಯಲ್ಲಿ ಖರ್ಚು ವೆಚ್ಚ ಕಂಡು ಬರುವುದು. ಕುಟುಂಬದ ಸಮಸ್ಯೆಗಳು ಕೊನೆ ಮುಟ್ಟದೆ ಕಿರಿಕಿರಿ ಹೆಚ್ಚಬಹುದು. 

ಕನ್ಯಾ(Virgo): ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗುವಿರಿ. ಉತ್ತಮ ಕೆಲಸಕ್ಕಾಗಿ ನಿಮ್ಮ ಗೆಳೆಯರ ತಂಡದ ಮುಂದಾಳತ್ವ ವಹಿಸಿ ಸೈ ಎನಿಸಿಕೊಳ್ಳುವಿರಿ. ಅನಿರೀಕ್ಷಿತ ಧನಲಾಭವಿರಲಿದೆ. ನೀವು ಮನೆಯವರ ಬಗ್ಗೆ ತೋರುತ್ತಿರುವ ಅಸಡ್ಡೆಯ ಪರಿಣಾಮಗಳನ್ನು ಎದುರಿಸುವಿರಿ. ಹಳದಿ ಧಾನ್ಯಗಳನ್ನು ದಾನ ಮಾಡಿ. 

ತುಲಾ(Libra): ಸ್ವಂತ ಉದ್ಯೋಗಿಗಳಿಗೆ ಅಧಿಕ ಲಾಭವಿರಲಿದೆ. ತಂದೆ ತಾಯಿಯೊಂದಿಗೆ ಜಗಳ ಬೇಡ. ಅವರ ಮಾತಿನಲ್ಲಿ ಸತ್ಯವಿರುವುದೇ ನೋಡಿ. ನಿಮ್ಮದೇ ಸರಿ ಎನಿಸಿದರೆ ನಿಧಾನವಾಗಿ ಮನವರಿಕೆ ಮಾಡಿಸಿ. ನಿಮ್ಮ ಅತಿಯಾದ ಆತ್ಮಪ್ರತಿಷ್ಠೆ ಬಿಟ್ಟು ನೋಡಿ. ಆದಿತ್ಯ ಹೃದಯ ಪಠಣ ಮಾಡಿ. 

ವೃಶ್ಚಿಕ(Scorpio): ನೀವು ಮಾಡಿದ ಉಳಿತಾಯಗಳು ನಿಮ್ಮನ್ನು ಕಾಪಾಡಲಿವೆ. ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಪ್ರಯತ್ನ ಬೇಡ. ಮತ್ತೊಬ್ಬರ ಮಕ್ಕಳ ವಿಚಾರದಲ್ಲಿ ಅತಿಯಾಗಿ ಮೂಗು ತೂರಿಸಬೇಡಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದೆ ತಳಮಳ ಅನುಭವಿಸುವಿರಿ. ಗಾಯತ್ರಿ ಮಂತ್ರ ಜಪಿಸಿ.

ಇಂಥ ಕನಸು ಬಿದ್ದರೆ ಶೀಘ್ರದಲ್ಲೇ ಹಣದ ಸುರಿಮಳೆಯಾಗಲಿದೆ ಎಂದರ್ಥ!

ಧನುಸ್ಸು(Sagittarius): ಪತಿ ಪತ್ನಿ ನಡುವಿನ ಜಗಳದಲ್ಲಿ ಮೂರನೆಯವರು ಮೂಗು ತೂರಿಸಲು ಬಿಡಬೇಡಿ. ಉದಾಸೀನತೆಯಿಂದ ಸಮಯ ಹಾಳಾಗುವುದು. ದಂಪತಿಗೆ ಸಂತಾನ ವಿಷಯದಲ್ಲಿ ಸಕಾರಾತ್ಮಕ ಸುದ್ದಿ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ಸಾಹ, ಪ್ರಶಂಸೆ ಇರಲಿದೆ. ಮನೆ ದೇವರಿಗೆ ಪ್ರಾರ್ಥಿಸಿ. 

ಮಕರ(Capricorn): ಆಸ್ತಿ ಕೊಳ್ಳುವವರಿಗೆ ಗೊಂದಲಗಳು ಕಾಡಲಿವೆ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಅರಸಿ ಬರಲಿವೆ. ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಕುಲ ದೇವರ ಸ್ಮರಣೆ ಮಾಡಿ. 

ಕುಂಭ(Aquarius): ಮಕ್ಕಳ ಶೈಕ್ಷಣಿಕ ಪ್ರಗತಿ ಸಂತೋಷ ನೀಡುವುದು. ಹೊಸ ವಾಹನ ಕೊಳ್ಳಬಹುದು. ಸಾಲ ಮಾಡಬೇಕಾದ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಯೋಚಿಸಿ. ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ಮೀನ(Pisces): ವಾಹನ ಬಿಡಿ ಭಾಗಗಳ ವ್ಯಾಪಾರ, ಲೋಹದ ವ್ಯಾಪಾರ, ವಸ್ತ್ರ, ವಾಹನ ವ್ಯಾಪಾರದಲ್ಲಿ ಲಾಭವಿರಲಿದೆ. ಕೆಲಸ ಕಾರ್ಯಗಳು ಸರಾಗವಾಗಿ ಸಾಗುವುವು. ಯಾವುದೇ ಕಾರಣಕ್ಕೂ ಬೇಡದ ಚಟಗಳ ಸಹವಾಸಕ್ಕೆ ಹೋಗಬೇಡಿ. ಆದಿತ್ಯ ಹೃದಯ ಪಠಣ ಮಾಡಿ. 

Latest Videos
Follow Us:
Download App:
  • android
  • ios