Asianet Suvarna News Asianet Suvarna News

Daily Horoscope: ಮೇಷಕ್ಕೆ ಅಭಿವೃದ್ಧಿ, ಮಕರಕ್ಕೆ ಹೆಚ್ಚುವ ಆತಂಕ

17 ಫೆಬ್ರವರಿ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಸಿಂಹಕ್ಕೆ ಅನಿರೀಕ್ಷಿತ ಸಂಭ್ರಮ, ತುಲಾ ರಾಶಿಗೆ ಧನ ಲಾಭ

Daily horoscope of February 17th 2022 in Kannada SKR
Author
Bangalore, First Published Feb 17, 2022, 5:04 AM IST | Last Updated Feb 17, 2022, 5:04 AM IST

ಮೇಷ(Aries): ಚುರುಕಿನಿಂದ ಕೆಲಸಗಳು ಸಾಗುತ್ತಾ ಹೋಗುತ್ತವೆ. ಚಿನ್ನಾಭರಣ ವ್ಯಾಪಾರಿಗಳು, ಪ್ರವಾಸೋದ್ಯಮದಲ್ಲಿರುವವರಿಗೆ ಲಾಭ. ಭೂಮಿಯ ವ್ಯವಹಾರದಲ್ಲಿ ಅಭಿವೃದ್ಧಿ ಆಗುತ್ತದೆ. ಅಂದುಕೊಂಡದ್ದನ್ನು ಮಾಡುವುದು ಸಾಧ್ಯವಾಗುತ್ತದೆ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ವೃಷಭ(Taurus): ಮನೆಯಲ್ಲಿ ನಡೆದ ದುರಂತವನ್ನೇ ನೆನೆಸಿಕೊಂಡು ಇನ್ನೂ ಎಷ್ಟು ದಿನ ದೂಡುವಿರಿ? ಹಿಂದಿನದನ್ನು ಹಿಂದೆ ಬಿಟ್ಟು, ಭವಿಷ್ಯದತ್ತ ಗಮನ ಹರಿಸಿ. ಆಗ ಮಾತ್ರ ನಿಮ್ಮ ಜೊತೆಗಿರುವವರೆಲ್ಲ ಸುಖವಾಗಿರಲು ಸಾಧ್ಯ. ಉದ್ಯೋಗ, ಹವ್ಯಾಸದಲ್ಲಿ, ಮಕ್ಕಳ ಲಾಲನೆ ಪಾಲನೆಯಲ್ಲಿ ಇಡೀ ದಿನ ತೊಡಗಿಸಿಕೊಳ್ಳಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಮಿಥುನ(Gemini): ಸಂಬಂಧಿಕರ ಮೋಸ, ವಂಚನೆ, ಅಹಿತಕರ ಮಾತುಗಳಿಗೆ ಮನಸ್ಸು ಕೆಡುವುದು. ಕೋಪ ನಿಯಂತ್ರಿಸಿಕೊಳ್ಳಿ. ಪ್ರತಿಕ್ರಿಯೆ ಕೂಡಲೇ ಕೊಡುವ ಅಭ್ಯಾಸಕ್ಕೆ ತಡೆ ನೀಡಿ. ಹಲವು ಬಾರಿ ಅಸೂಯೆಗೆ ಬೆಳವಣಿಗೆಯೇ ಉತ್ತರವಾದರೆ ಚೆನ್ನಾಗಿರುತ್ತದೆ ಎಂಬುದು ಗೊತ್ತಿರಲಿ. ರಾಯರ ಆರಾಧನೆ ಮಾಡಿ.

ಕಟಕ(Cancer): ವೃತ್ತಿಗೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಸಂದಿಗ್ಧತೆ ಇದ್ದರೆ, ಆ ಬಗ್ಗೆ ನಾಲ್ಕು ಜನ ನಂಬಿಕಸ್ಥರೊಡನೆ ಚರ್ಚಿಸಿ. ರಕ್ತದೊತ್ತಡ, ತಲೆನೋವು ಇತ್ಯಾದಿ ಬಾಧೆ ಉಂಟಾಗಬಹುದು. ಬೆನ್ನು ನೋವು ಬರಬಹುದು. ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ. 

ಸಿಂಹ(Leo): ನಿಮ್ಮದೇ ಹಣ ಹಿಂದಿರುಗಿಸಲು ಕೇಳಲು ಸಂಕೋಚ ಬೇಡ. ಅನಿರೀಕ್ಷಿತ ಸಂತಸದ ಸುದ್ದಿಯೊಂದು ಕಿವಿಗೆ ಬೀಳಲಿದೆ. ಪ್ರೇಮ ಸಂಬಂಧಗಳು ನಿಮ್ಮ ಜೀವನೋತ್ಸಾಹ ಹೆಚ್ಚಿಸಲಿವೆ. ಮಕ್ಕಳ ಓದಿನ ವಿಚಾರದಲ್ಲಿ ಹೆಚ್ಚಿನ ಗಮನ ವಹಿಸಿ. ಲಕ್ಷ್ಮೀ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಿ. 

ಕನ್ಯಾ(Virgo): ದುಡುಕು ವರ್ತನೆಯಿಂದ ಧನನಷ್ಟವಾಗಿ ಚಿಂತಿಸುವಂತಾಗಬಹುದು. ಇದರಿಂದ ಮನೆಯವರಿಂದ ಬೈಸಿಕೊಳ್ಳುವಿರಿ. ಅಪಘಾತ ಸಾಧ್ಯತೆಗಳಿದ್ದು, ಪ್ರಯಾಣ ಸಂದರ್ಭ ಹೆಚ್ಚಿನ ಎಚ್ಚರ ಅಗತ್ಯ. ನೋವಿನ ವಿಷಯಗಳನ್ನು ಕೇಳಬೇಕಾಗಬಹುದು. ರಾಮ ಧ್ಯಾನ ಮಾಡಿ. 

Vastu Tips : ಯಶಸ್ಸಿಗೆ ಅಡ್ಡಿ ತರುತ್ತಿರುವ ವಸ್ತು ನಿಮ್ಮ ಟೇಬಲ್ ಮೇಲಿರಬಹುದು!

ತುಲಾ(Libra): ನಿರುದ್ಯೋಗಿಗಳಿಗೆ ಹೊಸ ಕೆಲಸ ದೊರೆತು ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಉದ್ಯೋಗಿಗಳಿಗೂ ಪ್ರಗತಿ ಇರುತ್ತದೆ.  ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರಿಗೆ ಲಾಭವಿರಲಿದೆ. ರೈತರಿಗೆ ಉತ್ಸಾಹವಿರಲಿದೆ. ದಾಂಪತ್ಯದಲ್ಲಿ ಸಿಹಿ ಇರಲಿದೆ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ವೃಶ್ಚಿಕ(Scorpio): ಅಂದುಕೊಂಡ ಕೆಲಸಗಳು ವೇಗ ಗತಿಯಲ್ಲಿ ನಡೆಯುತ್ತದೆ. ಮನೆ, ಆಸ್ತಿ, ಭೂಮಿ ವಿಚಾರದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳುವಿರಿ. ಆದರೆ ಇದೆಲ್ಲ ಅನವಶ್ಯಕ. ಒಡಹುಟ್ಟಿದವರೊಂದಿಗಿನ ವಿವಾದಗಳಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಅಸ್ಥಿರತೆ ಉಂಟಾಗಬಹುದು. ರಾಘವೇಂದ್ರ ಅಷ್ಟೋತ್ತರ ಹೇಳಿಕೊಳ್ಳಿ. 

Black Magic: ವಾಮಾಚಾರದ ಪರಿಣಾಮ ತಗ್ಗಿಸಲು ಮನೆಯಲ್ಲೇ ಈ ರಕ್ಷಣಾತ್ಮಕ ಪರಿಹಾರ ಮಾಡಿಕೊಳ್ಳಿ

ಧನುಸ್ಸು(Sagittarius): ನಿಮ್ಮ ಕೆಲವು ಮಾತುಗಳು ಮನೆಯಲ್ಲಿದ್ದವರಿಗೆ ನೋವು ತರಬಹುದು. ನಿಮ್ಮ ಉದ್ವೇಗ, ಮಾತಿನ ಮೇಲೆ ಹತೋಟಿ ಸಾಧಿಸಲಾಗದೇ ಮನಃಶಾಂತಿ ಹಾಳಾಗುವುದು. ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. 

ಮಕರ(Capricorn): ಭವಿಷ್ಯ(future)ದ ಬಗ್ಗೆ ಚಿಂತಿಸುವಿರಿ. ಬುದ್ಧಿ ನಿಮ್ಮ ಸ್ಥಿಮಿತದಲ್ಲಿರಲ್ಲ. ನಿದ್ರಾಹೀನತೆ ಕಾಡಬಹುದು. ಆತಂಕ ಹೆಚ್ಚಾಗಬಹುದು. ಸಹೋದ್ಯೋಗಿಗಳು ನಿಮ್ಮ ದೌರ್ಬಲ್ಯಗಳನ್ನು ತಮ್ಮ ಲಾಭಕ್ಕೆ ಬಳಸಬಹುದು. ತಿರುಪತಿ ತಿಮ್ಮಪ್ಪನನ್ನು ಸ್ಮರಿಸಿ. 

ಕುಂಭ(Aquarius): ಒತ್ತಡ ಹೆಚ್ಚುತ್ತದೆ. ಆದರೂ ತಾಳ್ಮೆಯಿಂದ ಸನ್ನಿವೇಶವನ್ನು ನಿಭಾಯಿಸುತ್ತೀರಿ. ಬಾಕಿ ಇರುವ ಕಾನೂನು ಪ್ರಕರಣಗಳಲ್ಲಿ ನಿಮಗೆ ಜಯ ಸಿಗುತ್ತದೆ. ಧನಾನುಕೂಲಗಳು ಚೆನ್ನಾಗಿರುತ್ತದೆ. ತಂದೆ ತಾಯಿಯ ಬಳಿ ನಿಮ್ಮ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳಿ. ಅಗತ್ಯ ಇರುವವರಿಗೆ ಧನ ಸಹಾಯ ಮಾಡಿ. 

ಮೀನ(Pisces): ಸ್ವಂತ ಉದ್ಯೋಗದಲ್ಲಿ ಕೆಲಸಗಳು ನಿಧಾನವಾದರೂ ಫಲ ಚೆನ್ನಾಗಿದೆ. ಹಣ ಸಂಪಾದನೆಯ ಅನುಕೂಲಗಳು ಬರುತ್ತವೆ. ಪ್ರತಿಷ್ಠೆ ಹೆಚ್ಚುವುದು. ಅಭಿವೃದ್ಧಿ ಕಾಣುವಿರಿ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು. ಧನ್ವಂತರಿ ಶ್ಲೋಕ ಹೇಳಿಕೊಳ್ಳಿ. 

Latest Videos
Follow Us:
Download App:
  • android
  • ios