Asianet Suvarna News Asianet Suvarna News

Daily Horoscope: ಮೀನಕ್ಕೆ ಭಾಗ್ಯೋದಯದ ಕಾಲ, ನೋಡಿ ನಿಮ್ಮ ರಾಶಿಫಲ

1 ಏಪ್ರಿಲ್ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?

Daily horoscope of April 1st 2022 in Kannada SKR
Author
Bangalore, First Published Apr 1, 2022, 5:00 AM IST | Last Updated Apr 1, 2022, 7:03 AM IST

ಮೇಷ(Aries): ಬಹು ದಿನಗಳ ನಿಮ್ಮ ಬಯಕೆ ಕಾರ್ಯರೂಪಕ್ಕೆ ಇಳಿಯಲಿದ್ದು, ಅಭಿವೃದ್ಧಿ ಪಡೆಯಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ, ಗೃಹ ನಿರ್ಮಾಣ ಯೋಗ ಕೂಡಿ ಬರಲಿದೆ. ಅವಿವಾಹಿತರಿಗೆ ವಿವಾಹ ಯೋಗವೂ ಇದೆ. ನೀವು ಹಾಕಿದ ಬಂಡವಾಳ ವಾಪಾಸ್ ಬರುತ್ತದೆ. ಮಹಾಲಕ್ಷ್ಮೀ ಆರಾಧನೆ ಮಾಡಿ. 

ವೃಷಭ(Taurus): ಕೆಲಸ ಕಾರ್ಯಕ್ಕೆ ಅಡ್ಡಿ ಆತಂಕ ಎದುರಾಗುವುದು. ಉದಾಸೀನತೆ ಸಲ್ಲದು. ಋಣಾತ್ಮಕ ಚಿಂತನೆಗಳು ಸಲ್ಲವು. ಆರೋಗ್ಯ ಸಮಸ್ಯೆಗಳು ಕಂಡು ಬರುವುವು. ಕೌಟುಂಬಿಕವಾಗಿ ಸಂತೃಪ್ತಿ ಇರುತ್ತದೆ. ನಿಮ್ಮ ಮನಸ್ಸಿನ ಕ್ಲೇಶಗಳನ್ನು ಕುಟುಂಬದವರೊಡನೆ ಹಂಚಿಕೊಳ್ಳಿ. ಲಲಿತಾ ಸಹಸ್ರನಾಮ ಪಠಿಸಿ.  

ಮಿಥುನ(Gemini): ಹಣದ ಮುಗ್ಗಟ್ಟು, ದುಪ್ಪಟ್ಟು ಖರ್ಚುವೆಚ್ಚಗಳು ಕಂಡು ಬಂದರೂ ಸಧ್ಯದಲ್ಲೇ ಹಂತ ಹಂತದ ಅಭಿವೃದ್ಧಿ ಇರಲಿದೆ. ಪಾಲುದಾರಿಕೆ ವ್ಯವಹಾರಗಳು ಉತ್ತಮ ಫಲ ಕೊಡಲು ಆರಂಭಿಸಲಿವೆ. ನಿಮ್ಮ ವಾಕ್ಚಾತುರ್ಯವನ್ನು ಎಲ್ಲರೂ ಮೆಚ್ಚುವರು. ದುರ್ಗಾ ಅಷ್ಟೋತ್ತರ ಹೇಳಿಕೊಳ್ಳಿ.

ಕಟಕ(Cancer): ವಾಹನ ಸಂಚಾರ ಹಾಗೂ ಆರೋಗ್ಯದ ಕಡೆ ಹೆಚ್ಚಿನ ಲಕ್ಷ್ಯ ಅಗತ್ಯ. ಏನೇ ಕಾರ್ಯವಿದ್ದರೂ ಪ್ರಯತ್ನ ಬಲದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಕಾರ್ಯ ವಿಳಂಬದಿಂದ ಮಾನಸಿಕ ಅಶಾಂತಿ ಕಾಣುತ್ತದೆ. ತಾಯಿ ಶಾರದಾಂಬೆಯ ಸ್ಮರಣೆ ಮಾಡಿ. 

ಸಿಂಹ(Leo): ಖರ್ಚು ವೆಚ್ಚಗಳ ಹಿಡಿತ ತಪ್ಪಿ ಆರ್ಥಿಕ ವಿಚಾರದಲ್ಲಿ ಗೊಂದಲ ತೋರಿಬಂದೀತು. ಕಾರ್ಯಕ್ಷೇತ್ರದಲ್ಲಿ ವ್ಯಾವಹಾರಿಕವಾಗಿ ಉತ್ತಮ ಪ್ರಗತಿ ಕಂಡು ಬರಲಿದೆ. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಪಾರ್ವತಿ ದೇವಿಗೆ ಕುಂಕುಮಾರ್ಚನೆ ಮಾಡಿ.

ಚೈತ್ರ ಅಮಾವಾಸ್ಯೆಯಂದು ಕೂಡಿ ಬರಲಿದೆ ವಿಶೇಷ ಯೋಗ!

ಕನ್ಯಾ(Virgo): ಸಮಸ್ಯೆಗಳು ಹೆಚ್ಚಿದಂತೆನಿಸಬಹುದು. ಬಂದದ್ದೆಲ್ಲ ಬರಲಿ, ಆ ಭಗವಂತನ ದಯೆಯೊಂದಿರಲಿ ಎಂಬ ಸಂಯಮದಿಂದ ಅವನ್ನು ಎದುರಿಸಿ. ವ್ಯಾವಹಾರಿಕವಾಗಿ ಕಿರಿಕಿರಿ ಹೆಚ್ಚಲಿವೆ. ಜಡ ಕಾಡಲಿದೆ. ವಾಹನಗಳು, ಮನೆಯ ಎಲೆಕ್ಟ್ರಾನಿಕ್ ಉಪಕರಣಗಳು ರಿಪೇರಿಗೆ ಬರಲಿವೆ. ಮಹಾಲಕ್ಷ್ಮೀ ಪೂಜೆ ಮಾಡಿ. 

ತುಲಾ(Libra): ಹೊಸ ವ್ಯವಹಾರ, ವ್ಯಾಪಾರಗಳಿಗೆ ಸಕಾಲ. ಧೀರ್ಘಯೋಜನೆಯ ಕಾರ್ಯಗಳಿಗೆ ಪೂರಕ ಆರ್ಥಿಕ ಲಾಭಗಳಿವೆ. ದೂರ ಪ್ರಯಾಣದಲ್ಲಿ ಜಾಗ್ರತೆ ಅಗತ್ಯ. ಅವಿವಾಹಿತರಿಗೆ ಅನಿರೀಕ್ಷಿತ ಕಂಕಣಬಲ ಒದಗಿ ಬರುವುದು. ನಿಮ್ಮ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ. 

ವೃಶ್ಚಿಕ(Scorpio): ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಶೈಕ್ಷಣಿಕ ರಂಗದಲ್ಲಿ, ಪರೀಕ್ಷೆಗಳಲ್ಲಿ ಭಾಗವಹಿಸಿದವರಿಗೆ ಹಾಗೂ ಸಂದರ್ಶನ ಎದುರಿಸಿದವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಪ್ರೇಮ ವ್ಯವಹಾರಗಳಿಗೆ ಜಯ ಸಿಗಲಿದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದೇಕೆ?

ಧನುಸ್ಸು(Sagittarius): ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಏಕಾಗ್ರತೆ ಸಾಧಿಸಿ ಪರಿಶ್ರಮ ಹಾಕಿದರೆ ದಿನಾಂತ್ಯಕ್ಕೆ ನಷ್ಟ ತುಂಬಿಕೊಳ್ಳಬಹುದು. ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ಸಾಹ, ಗೌರವ, ಮನ್ನಣೆ. ಪ್ರಯಾಣ ಯೋಗವಿದೆ. ಸಹೋದರರ ಸಹಕಾರ ಸಿಗಲಿದೆ. ದುರ್ಗಾ ಅಷ್ಟೋತ್ತರ ಪಠಿಸಿ.

ಮಕರ(Capricorn): ಹಿರಿಯರೊಡನೆ ಯಾವುದೇ ವಿಷಯ ವಾದಿಸಲು ಹೋಗದಿರಿ. ಕೌಟುಂಬಿಕವಾಗಿ ಸಣ್ಣ ಸಣ್ಣ ವಿಚಾರಗಳು ಮನಸ್ಸಿನ ನೆಮ್ಮದಿ ಕೆಡಿಸಲಿವೆ.  ತಾಳ್ಮೆ- ಸಂಯಮದಿಂದ ಮುಂದುವರಿಯಿರಿ. ಸ್ನೇಹಿತರ ಸಹಕಾರ ಸಿಗಲಿದೆ. ಲಲಿತಾ ಸಹಸ್ರನಾಮ ಪಠಿಸಿ.  

ಕುಂಭ(Aquarius): ನೀವೇನೇ ಯೋಚನೆ ಮಾಡಿದರೂ ಅದು ತಾನಾಗಿಯೇ ಸಿದ್ದಿಸುವ ಮೂಲಕ ನಿಮ್ಮ ಆತ್ಮಶಕ್ತಿಯ ಬಗ್ಗೆ ನಿಮಗೇ ಅಚ್ಚರಿಯೆನಿಸುವುದು. ಹೊಸ ಹೊಸ ವಸ್ತುಗಳನ್ನು ಕೊಳ್ಳಲಿರುವಿರಿ. ನಿಮ್ಮ ಹಾಗೂ ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದ ಯೋಜನೆ ರೂಪಿಸುವಿರಿ. ಮುತ್ತೈದೆಗೆ ಬಾಗೀನ ನೀಡಿ.

ಮೀನ(Pisces): ವ್ಯಾಪಾರ- ವ್ಯವಹಾರದಲ್ಲಿ ಅಭಿವೃದ್ಧಿದಾಯಕ ಆದಾಯ ಇರಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಿ. ಅವರ ರೋಗ ನಿರೋಧಕ ಶಕ್ತಿ ಹೆಚ್ಚಿಸುವತ್ತ ಗಮನ ಹರಿಸಿ. ಆರ್ಥಿಕವಾಗಿ ಭಾಗ್ಯೋದಯದ ಕಾಲ. ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಬೆಳವಣಿಗೆ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios