ಒರಿಸ್ಸಾ ರಾಜ್ಯದಿಂದ ಗಾಂಜಾವನ್ನು ತಂದು ಮೈಸೂರಿನ ಪೆಡ್ಲರ್‌ಗೆ ಮಾರಾಟ ಮಾಡಲು ನಿಂತಿದ್ದ 3 ಜನ ಪೆಡ್ಲರ್‌ಗಳನ್ನು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದ ಸಿಸಿಬಿ ಪೊಲೀಸರು, ಆರೋಪಿಗಳ ವಶದಲ್ಲಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಉದಯಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು(ಆ.11):  ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಪೆಡ್ಲರ್‌ಗಳನ್ನು ಮೈಸೂರಿನ ಸಿಸಿಬಿ ಘಟಕದ ಪೊಲೀಸರು ಬಂಧಿಸಿ, 2.60 ಲಕ್ಷ ಮೌಲ್ಯದ ಒಟ್ಟು 6 ಕೆ.ಜಿ 520 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಮಹದೇವಪುರ ಮುಖ್ಯ ರಸ್ತೆಯಲ್ಲಿರುವ ಎಸ್ಸಾರ್‌ ಪೆಟ್ರೋಲ್‌ ಬಂಕ್‌ ಪಕ್ಕದ ರಸ್ತೆಯಲ್ಲಿ ಸೋಮವಾರ ಒರಿಸ್ಸಾ ರಾಜ್ಯದಿಂದ ಗಾಂಜಾವನ್ನು ತಂದು ಮೈಸೂರಿನ ಪೆಡ್ಲರ್‌ಗೆ ಮಾರಾಟ ಮಾಡಲು ನಿಂತಿದ್ದ 3 ಜನ ಪೆಡ್ಲರ್‌ಗಳನ್ನು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದ ಸಿಸಿಬಿ ಪೊಲೀಸರು, ಆರೋಪಿಗಳ ವಶದಲ್ಲಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಉದಯಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು: ಗಾಂಜಾ ಸಾಗಿಸುತ್ತಿದ್ದ ಆರೋಪಿ ಬಂಧನ

ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌, ಡಿಸಿಪಿ ಎಸ್‌. ಜಾಹ್ನವಿ, ಸಿಸಿಬಿ ಘಟಕದ ಎಸಿಪಿ ಎಸ್‌.ಎನ್‌. ಸಂದೇಶ್‌ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್‌ ಎ. ಮಲ್ಲೇಶ್‌, ಎಸ್‌ಐಗಳಾದ ಪ್ರತಿಭಾ ಜಂಗವಾಡ, ರಾಜು ಕೋನಕೇರಿ, ಎಎಸ್‌ಐ ಆರ್‌. ರಾಜು ಮತ್ತು ಸಿಂಬ್ಬದಿ ಪುರುಷೋತ್ತಮ್‌, ರಾಮೇಗೌಡ, ಎಚ್‌.ಪಿ. ಮಧುಕುಮಾರ್‌, ಕೆ. ಪುಟ್ಟಮ್ಮ, ವಿ. ರಘು, ಅರುಣ್‌ಕುಮಾರ್‌, ಕೆ.ಜಿ. ಶ್ರೀನಿವಾಸ್‌ ಈ ಪತ್ತೆ ಮಾಡಿದ್ದಾರೆ.