Asianet Suvarna News Asianet Suvarna News

Madikeri: ಹಿಂದೂಗಳ ಹತ್ಯೆಗೆ ಸ್ಕೆಚ್‌: ಸ್ಫೋಟಕ ಆಡಿಯೋ ವೈರಲ್‌

ಪೆಟ್ರೋಲ್‌ ಬಾಂಬ್‌ ಬಳಸಿ ಹಿಂದೂಗಳ ಹತ್ಯೆಗೆ ಸ್ಕೆಚ್‌ ಹಾಕಿರುವ ಸ್ಫೋಟಕ ಆಡಿಯೋ ಒಂದು ವೈರಲ್‌ ಆಗಿದ್ದು, ಮಡಿಕೇರಿಯಲ್ಲಿ ಪ್ರಕರಣ ದಾಖಲಿಸಿ ಇಬ್ಬರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ.

Sketch to kill Hindus audio goes viral at madikeri gvd
Author
First Published Oct 15, 2022, 11:23 PM IST

ಮಡಿಕೇರಿ (ಅ.15): ಪೆಟ್ರೋಲ್‌ ಬಾಂಬ್‌ ಬಳಸಿ ಹಿಂದೂಗಳ ಹತ್ಯೆಗೆ ಸ್ಕೆಚ್‌ ಹಾಕಿರುವ ಸ್ಫೋಟಕ ಆಡಿಯೋ ಒಂದು ವೈರಲ್‌ ಆಗಿದ್ದು, ಮಡಿಕೇರಿಯಲ್ಲಿ ಪ್ರಕರಣ ದಾಖಲಿಸಿ ಇಬ್ಬರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ಜೆಡಿಎಸ್‌ ಮುಖಂಡ ಹಾಗೂ ಮಡಿಕೇರಿ ನಗರಸಭೆ ಸದಸ್ಯ ಮುಸ್ತಾಫ ಅಲಿಯಾಸ್‌ ಮುಸ್ತು ಹಾಗೂ ಬೆಟ್ಟಗೇರಿಯ ರಿಯಲ್‌ ಎಸ್ಟೇಟ್‌ ಉದ್ಯಮಿ ಅಬ್ದುಲ್ಲ ಬಂಧಿತ ಆರೋಪಿಗಳು.

ಮೂರು ನಿಮಿಷದ ಮಲೆಯಾಳಂ ಆಡಿಯೋ ವೈರಲ್‌ ಆಗಿದ್ದು, ಕೊಡಗು ಜಿಲ್ಲೆಯ 50ಕ್ಕೂ ಅಧಿಕ ಸ್ಥಳಗಳ ಟಾರ್ಗೆಟ್‌ ಮಾಡಲಾಗಿದೆ. ಆಡಿಯೋ ದಾಖಲೆ ಸಹಿತ ಮಡಿಕೇರಿ ನಿವಾಸಿ ಶೇಷಪ್ಪ ರೈ ಎಂಬವರು ಮಡಿಕೇರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಇಡೀ ಮಡಿಕೇರಿ ಹೊತ್ತಿ ಉರಿಯುವಂತೆ ಮಾಡುವ ಪ್ಲಾನ್‌ ಮಾಡಲಾಗಿತ್ತು. ನಾವು ಸತ್ರೂ ಪರವಾಗಿಲ್ಲ ಹಿಂದೂಗಳನ್ನು ಬಿಡಬಾರದು ಎಂದು ಶೇಷಪ್ಪ ರೈ ಫೋನ್‌ನಲ್ಲಿ ಇಬ್ಬರ ಸಂಭಾಷಣೆ ರೆಕಾರ್ಡ್‌ ಆಗಿದೆ.

Yadgir: ಅ.19ಕ್ಕೆ ಜನಸಂಕಲ್ಪ ಯಾತ್ರೆ ಸಮಾವೇಶ: ಶಾಸಕ ರಾಜೂಗೌಡ

ಹಿಂದೂಗಳು ಜಾಸ್ತಿ ಸೇರುವ ಜಾಗದಲ್ಲಿ ಪೆಟ್ರೋಲ್‌ ಬಾಂಬ್‌ ಹಾಕಬೇಕು. ಹಿಂದೂ ನಾಯಿಗಳನ್ನು ನಾವು ಸುಮ್ಮನೆ ಬಿಡಬಾರದು. ಪೆಟ್ರೋಲ್‌ ಬಾಂಬ್‌ ಹಾಕಿ ಹಿಂದೂಗಳ ಕೊಲ್ಲಬೇಕು. ಇಡೀ ಮಡಿಕೇರಿ ನಗರ ಹೊತ್ತಿ ಉರಿಯುವಂತೆ ಮಾಡಬೇಕು. ನಾವು ಸತ್ತರೂ ಪರವಾಗಿಲ್ಲ ಹಿಂದೂಗಳನ್ನ ಬಿಡಬಾರದು. ಎಷ್ಟು ಹಣ ಬೇಕಾದರೂ ಖರ್ಚಾದರೂ ತೊಂದರೆ ಇಲ್ಲ. ನಾವೆಲ್ಲ ಸೇರಿ ಅದಕ್ಕೆ ಬೇಕಾಗುವ ಹಣ ಹೊಂದಿಸಬೇಕು ಎಂಬ ಮಾತುಗಳು ಮಲಯಾಳಂ ಭಾಷೆಯಲ್ಲಿ ಸಂಭಾಷಣೆಯಾಗಿದೆ.

ಎಣ್ಣೆಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡೋರಿಗೆ ಶಾಕ್: ನಕಲಿ ವೆಬ್‌ಸೈಟ್ ಮೂಲಕ ವಂಚನೆ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಶೇಷಪ್ಪ ರೈ, ನಾಲ್ಕು ತಿಂಗಳ ಹಿಂದೆಯೇ ಆಡಿಯೋ ಸಿಕ್ಕಿದೆ. ಪಿಎಫ್‌ಐ ನಿಷೇಧ ಆದ ಮೇಲೆ ಆಡಿಯೋವನ್ನು ಪೂರ್ಣವಾಗಿ ಕೇಳಿಸಿಕೊಂಡಿದ್ದು, ದೇಶದ್ರೋಹದ ಸಂಭಾಷಣೆ ಖಾತ್ರಿಯಾದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಮಡಿಕೇರಿ ನಗರ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ.

Follow Us:
Download App:
  • android
  • ios