userpic
user icon
0 Min read

ಎಂಥಾ ಕಾಲ ಬಂತು ನೋಡಿ; ಸ್ನೇಹಿತೆ ಸೈಕಲ್ ಕೊಡದ್ದಕ್ಕೆ ಬಾಲಕಿ ಆತ್ಮಹತ್ಯೆ!

Minor Girl end her life trivial reason incident took place in Hiriyur, Chitradurga rav

Synopsis

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಪಕ್ಕದ ಮನೆ ಬಾಲಕಿ ಸೈಕಲ್ ಕೊಡಲು ನಿರಾಕರಿಸಿದ್ದಕ್ಕೆ 11 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಪಂದನ ಎಂಬ ಬಾಲಕಿ ಮನನೊಂದು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಚಿತ್ರದುರ್ಗ (ಏ.25): ಪಕ್ಕದ ಮನೆ ಬಾಲಕಿ ಸೈಕಲ್ ಕೊಡಲು ನಿರಾಕರಿಸಿದ್ದಕ್ಕೆ ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹರಿಶ್ಚಂದ್ರ ಘಾಟ್ ನಗರದಲ್ಲಿ ನಡೆದಿದೆ.

ಗೋಪಾಲ್ ಮತ್ತು ರುದ್ರಮ್ಮ ದಂಪತಿಯ ಪುತ್ರಿ ಸ್ಪಂದನ (ವಯಸ್ಸು 11), ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಸ್ಪಂದನ ನಿತ್ಯವೂ ತನ್ನ ಸ್ನೇಹಿತೆಯೊಂದಿಗೆ ಸೈಕಲ್ ಓಡಿಸುತ್ತಿದ್ದಳು. ಘಟನೆಯ ದಿನ, ಸೈಕಲ್ ಕೊಡಲು ನಿರಾಕರಿಸಿದ್ದರಿಂದ ಮನನೊಂದ ಸ್ಪಂದನ, ಮನೆಯ ಕೊಠಡಿಯೊಳಗೆ ಹೋಗಿ ಬಾಗಿಲು ಲಾಕ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ: Shivamogga: ಗೃಹಿಣಿ ಆತ್ಮಹತ್ಯೆ: ರಸ್ತೆಯ ಮಧ್ಯದಲ್ಲಿ ಶವವಿಟ್ಟು ಆತ್ಮಹತ್ಯೆ
 
ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. ಈ ದುರ್ಘಟನೆಯಿಂದಾಗಿ ಕುಟುಂಬ ಮತ್ತು ಸಮುದಾಯದಲ್ಲಿ ಆಘಾತ ಮೂಡಿದೆ. ಬಾಲಕಿಯ ಆತ್ಮಹತ್ಯೆಗೆ ಕಾರಣವಾದ ಮಾನಸಿಕ ಒತ್ತಡದ ಬಗ್ಗೆ ತನಿಖೆ ಮುಂದುವರಿಯಲಿದೆ. 

ಮಕ್ಕಳನ್ನು ಶಿಕ್ಷಣದ ಮೂಲಕ ಸುಸಂಸ್ಕೃತರನ್ನಾಗಿಸಿ: ಶಾರದಮ್ಮ ಸಲಹೆ

 ಹಿರಿಯೂರು: ಗುರುವಿನ ಸ್ಥಾನಕ್ಕೆ ಪೂಜ್ಯನೀಯ ಸ್ಥಾನವಿದೆ. ಕಳೆದ 20ವರ್ಷಗಳ ಹಿಂದಿನ ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಣೆ ಮಾಡಿಕೊಂಡು ಆ ಸಮಯದ ಗುರುಗಳಿಗೆ ಗೌರವ ಸಲ್ಲಿಸುತ್ತಿರುವುದು ಪ್ರಶಂಸನೀಯ. ಶಿಕ್ಷಕರ ವೃತ್ತಿ ಜೀವನದಲ್ಲಿ ಇದು ಮರೆಯಲಾಗದ ದಿನ. ಮಕ್ಕಳನ್ನು ಶಿಕ್ಷಣದ ಮೂಲಕ ಸುಸಂಸ್ಕೃತರನ್ನಾಗಿ ಸಂಸ್ಕಾರಯುತರನ್ನಾಗಿ ಮಾಡಿ, ನಿಮ್ಮಂತೆ ಗುರುಗಳ ಸೇವೆಯನ್ನು ಮಾಡುವಂತೆ ಬೆಳೆಸಿ ಎಂದು ನಿವೃತ್ತ ಶಿಕ್ಷಕಿ ಶಾರದಮ್ಮ ಹೇಳಿದರು.
ಅವರು ನಗರದ ಸಂಗೀತ್ ಕಂಫರ್ಟ್ ಸಭಾಂಗಣದಲ್ಲಿ ವಾಗ್ದೇವಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ1990ರಿಂದ 2002ನೇ ಸಾಲಿನವರೆಗೆ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ಗುರುಶಿಷ್ಯರ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಕಳೆದ 20ವರ್ಷಗಳ ಹಿಂದಿನ ವಿದ್ಯಾರ್ಥಿ ಜೀವನವನ್ನು ಸ್ಮರಿಸಿ ಗುರುಗಳಿಗೆ ಗೌರವ ಸಲ್ಲಿಸುತ್ತಿರುವುದು ಪ್ರಶಂಸನೀಯ. ಮಕ್ಕಳನ್ನು ಶಿಕ್ಷಣದ ಮೂಲಕ ಸುಸಂಸ್ಕೃತರನ್ನಾಗಿ ಸಂಸ್ಕಾರಯುತರನ್ನಾಗಿ ಮಾಡಿ, ನಿಮ್ಮಂತೆ ಗುರುಗಳ ಸೇವೆಯನ್ನು ಮಾಡುವಂತೆ ಬೆಳೆಸಿ ಎಂದರು.

ಇದನ್ನೂ ಓದಿ: ಬೇಸಿಗೆ ರಜೆಯಲ್ಲಿ ನಿಮ್ಮ ಮಕ್ಕಳಿಗೆ ಈ ತರಗತಿಗಳು ಗಣಿತ ಭಯವನ್ನು ಹೋಗಲಾಡಿಸುತ್ತೆ!

ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಶಿವಶಂಕರ್‌ಮಠದ್ ಮಾತನಾಡಿ, ಜೀವನದಲ್ಲಿ ಶಿಸ್ತು , ಸಂಸ್ಕಾರ, ವಿದ್ಯೆ ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಕೊಂಡೂಯ್ಯುತ್ತವೆ. ಹಳೆಯ ವಿದ್ಯಾರ್ಥಿಗಳಾದ ನೀವುಗಳು ಇಂದು ನಿಮ್ಮದೇ ಆದ ಬದುಕನ್ನು ಕಟ್ಟಿಕೊಂಡಿದ್ದೀರಿ. ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸುವ ಜೊತೆಗೆ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ನಿಮ್ಮ ಕರ್ತವ್ಯ ಎಂದರು.

ನಿವೃತ್ತ ಶಿಕ್ಷಕರಾದ ಗಿರಿಜಮ್ಮ, ಕಸ್ತೂರಿ, ವರಮಹಾಲಕ್ಷ್ಮಿ, ಜಯಲಕ್ಷ್ಮಿ, ಶಿರೀನ್, ವಿಶಾಲಾಕ್ಷಿ , ಯಶೋಧ, ಗೀತಾಲಕ್ಷ್ಮಿ, ಶಕೀಲಾ, ಶೋಭಾ , ರುಕ್ಮಿಣಿ, ಶಿಕ್ಷಕರುಗಳಾದ ರಾಜನ್, ಭರತ್, ವೀರೇಶ್, ಹಳೆಯ ವಿದ್ಯಾರ್ಥಿಗಳಾದ ಅಬ್ದುಲ್ ಕರೀಮ್, ತನ್ವೀರ್‌ ಉಲ್ಲಾ, ಮೈಲಾರಿ, ಅರುಣಾ, ಜಗದೀಶ್‌ ಭಂಡಾರಿ, ಪೈರೋಜ್, ಅಂಬಿಕಾ, ನೀತಾ,ಲಕ್ಷ್ಮಿ, ದೀಪಾ, ಶಿಲ್ಪಾ ಉಪಸ್ಥಿತರಿದ್ದರು. 

Download App

Latest Videos