ಮಗು ಮಾಡಿಕೊಳ್ಳುವ ವಿಚಾರವಾಗಿ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ನವೀನ್ ಮತ್ತೆ ಮಗು ಮಾಡಿಕೊಳ್ಳೋಣ ಎಂದರೆ, ಗಿರಿಜಾ ತಕ್ಷಣಕ್ಕೆ ಮಗು ಬೇಡ ಎಂದು ಹೇಳುತ್ತಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು. 

ಬೆಂಗಳೂರು(ಏ.14): ಮಗು ಮಾಡಿಕೊಳ್ಳುವ ವಿಚಾರಕ್ಕೆ ನವ ವಿವಾಹಿತ ದಂಪತಿ ನಡುವೆ ನಡೆದ ಜಗಳದ ವೇಳೆ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಗೈದಿರುವ ಘಟನೆ ಎಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅನ್ನಸಂದ್ರಪಾಳ್ಯದ ನಿವಾಸಿ (30) ಕೊಲೆಯಾದ ವರು. ಈ ಸಂಬಂಧ ಪತಿ ನವೀನ್ (31) ಎಂಬಾತನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಡಿಸಿದ್ದಾರೆ.

Add Asianetnews Kannada as a Preferred SourcegooglePreferred

ರಾಮನಗರ ತಾಲೂಕಿ ಮಾಯಗಾನಹಳ್ಳಿ ಮೂಲದ ನವೀನ್ ಕುಮಾರ್ ಕೆಲ ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ಅಂಗಡಿ ಮತ್ತು ಬೇಕರಿಗಳಿಗೆ ಬ್ರೆಡ್ ಪೂರೈಸುವ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದ. ಗಿರಿಜಾ ಪೋಷಕರು ಭಟ್ಕಳ ಮೂಲದವರು. ಈ ಹಿಂದೆ ಯಶವಂತಪುರದಲ್ಲಿ ನೆಲೆಸಿದ್ದರು. ಈ ವೇಳೆ ನವೀನ್ ಕುಮಾರ್‌ಗೆ ಪರಿಚಿತರಾ ಗಿದ್ದರು. ಈ ಪರಿಚಯದ ಮೇಲೆ 8 ತಿಂಗಳ ಹಿಂದೆಯಷ್ಟೇ ಎರಡೂ ಕುಟುಂಬಗಳು ಮಾತುಕತೆ ನಡೆಸಿ ನವೀನ್ ಮತ್ತು ಗಿರಿಜಾಗೆ ಮದುವೆ ಮಾಡಿಸಿದ್ದರು.

ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪ್ಪ: ಮಕ್ಕಳನ್ನ ಕೊಂದು ಪೊಲೀಸರಿಗೆ ತಾಯಿಯೇ ಕಾಲ್​ ಮಾಡಿದ್ಲು..!

ಮಗು ಮಾಡಿಕೊಳ್ಳುವ ವಿಚಾರಕ್ಕೆ ಮನಸ್ತಾಪ: 

ಮದುವೆ ಬಳಿಕ ದಂಪತಿ ಅನ್ನಸಂದ್ರಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಗಿರಿಜಾ ಗೃಹಿಣಿಯಾಗಿದ್ದರು. ಇತ್ತೀ ಚೆಗೆ ಗಿರಿಜಾಗೆ ಗರ್ಭಪಾತವಾಗಿತ್ತು. ಮಗು ಮಾಡಿಕೊಳ್ಳುವ ವಿಚಾರವಾಗಿ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಅಂದರೆ, ನವೀನ್ ಮತ್ತೆ ಮಗು ಮಾಡಿಕೊಳ್ಳೋಣ ಎಂದರೆ, ಗಿರಿಜಾ ತಕ್ಷಣಕ್ಕೆ ಮಗು ಬೇಡ ಎಂದು ಹೇಳುತ್ತಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.

ನವೀನ್ ಕುಮಾರ್ ಜಗಳ ತೆಗೆದು ಕತ್ತು ಹಿಸುಕಿ ಕೊಲೆಗೈದ: 

ಶುಕ್ರವಾರ ರಾತ್ರಿ ಮಗು ಮಾಡಿಕೊಳ್ಳುವ ವಿಚಾರವಾಗಿ ದಂಪತಿ ನಡುವೆ ಮತ್ತೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ದಾಗ ನವೀನ್, ಗಿರಿಜಾಳ ಕುತ್ತಿಗೆ ಹಿಸುಕಿ ಕೊಲೆಗೈದು ಪರಾರಿಯಾಗಿದ್ದ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿದ್ದು, ಎಚ್‌ಎ ಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.