Asianet Suvarna News Asianet Suvarna News

ಮಾನ್ವಿ: ಸಾಲಬಾಧೆ ತಾಳದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಕೃಷಿಗಾಗಿ ಬ್ಯಾಂಕ್‌ನಲ್ಲಿ 2 ಲಕ್ಷ ಮತ್ತು ಖಾಸಗಿ ಸಾಲ ಪಡೆದುಕೊಂಡಿದ್ದ ಮೃತ ರೈತ| ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಯಡಿವಾಳ ಗ್ರಾಮದಲ್ಲಿ ನಡೆದ ಘಟನೆ| ಮೃತನ ಪತ್ನಿ ನೀಡಿದ ದೂರಿನನ್ವಯ ಮಾನ್ವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

Farmer Commited Suicide in Manvi in Raichur grg
Author
Bengaluru, First Published Mar 18, 2021, 3:16 PM IST

ಮಾನ್ವಿ(ಮಾ.18):  ಬೆಳೆನಷ್ಟ ಹಾಗೂ ಸಾಲಬಾಧೆ ತಾಳದೆ ಹೊಲದಲ್ಲಿ ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಯಡಿವಾಳ ಗ್ರಾಮದಲ್ಲಿ ಬುಧವಾರ ನಡೆದಿದೆ.

ಯಂಕಾರೆಡ್ಡಿ (43) ಮೃತ ರೈತ. ಕೃಷಿಗಾಗಿ ಪಿಜಿಬಿ ಬ್ಯಾಂಕ್‌ನಲ್ಲಿ 2 ಲಕ್ಷ ಮತ್ತು ಖಾಸಗಿ ಸಾಲ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ. 

ಬ್ಯಾಡ​ಗಿ: ಅಧಿಕಾರಿ ಕಿರುಕುಳಕ್ಕೆ ಬೇಸತ್ತು ಆತ್ಮ​ಹ​ತ್ಯೆಗೆ ಯತ್ನಿ​ಸಿದ ಸಾರಿಗೆ ನೌಕ​ರ

ಬೆಳೆ ನಷ್ಟ ಅನುಭವಿಸಿದ್ದರ ಪರಿಣಾಮ ಸಾಲ ಮರುಪಾವತಿಗೆ ತೊಂದರೆ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ನೀಡಿದ ದೂರಿನನ್ವಯ ಮಾನ್ವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios