Asianet Suvarna News Asianet Suvarna News

Vijay Hazare Trophy: ತಮಿಳುನಾಡು ವಿರುದ್ಧ ಅಲ್ಪ ಮೊತ್ತಕ್ಕೆ ಕುಸಿದ ಕರ್ನಾಟಕ

ಕರ್ನಾಟಕ ತಂಡದ ಬ್ಯಾಟಿಂಗ್ ವೈಫಲ್ಯ
ಕೊನೆಯ 19 ರನ್ ಗೆ 7 ವಿಕೆಟ್ ಕಳೆದುಕೊಂಡ ಮನೀಷ್ ಪಾಂಡೆ ಟೀಮ್
ಎಂ.ಸಿದ್ಧಾರ್ಥ, ಸಾಯಿ ಕಿಶೋರ್ ಭರ್ಜರಿ ದಾಳಿ

Vijay Hazare Trophy Karnataka Allout for 122 against Tamilnadu
Author
Thiruvananthapuram, First Published Dec 9, 2021, 12:52 PM IST

ತಿರುವನಂತಪುರಂ (ಡಿ.09): ಬ್ಯಾಟಿಂಗ್ ವಿಭಾಗದ ದಯನೀಯ ವೈಫಲ್ಯದೊಂದಿಗೆ ಕರ್ನಾಟಕ ತಂಡ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು (Tamilnadu) ವಿರುದ್ಧದ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದೆ. ಬಿ ಗುಂಪಿನ 2ನೇ ಪಂದ್ಯದಲ್ಲಿ ಕರ್ನಾಟಕ ತಂಡ 36.3 ಓವರ್ ಗಳಲ್ಲಿ ಕೇವಲ 122 ರನ್ ಗೆ ಆಲೌಟ್ ಆಯಿತು. ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ (Greenfield International Stadium) ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ ಗೆದ್ದ ಕರ್ನಾಟಕ ತಂಡಡದ ನಾಯಕ ಮನೀಷ್ ಪಾಂಡೆ (Manish Pandey) ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿದರು. ಪಿಚ್ ನ ಮೇಲಿನ ತೇವಾಂಶದ ಲಾಭ ಪಡೆದ ತಮಿಳುನಾಡು ತಂಡ ಮೊದಲ ಓವರ್ ನಲ್ಲಿಯೇ ಕಳೆದ ಪಂದ್ಯದ ಗರಿಷ್ಠ ರನ್ ಸಾಧಕ ರವಿಕುಮಾರ್ ಸಮರ್ಥ್ (Ravikumar Samarth) ಅವರ ವಿಕೆಟ್ ಉರುಳಿಸಿತು.

ಮೊದಲ ಓವರ್ ನಲ್ಲಿಯೇ ಆಘಾತ ಕಂಡ ಬಳಿಕ ಆರಂಭಿಕ ಆಟಗಾರ ರೋಹನ್ ಕದಮ್ ಹಾಗೂ ಸಿದ್ಧಾರ್ಥ್ ಕೆವಿ ಎಚ್ಚರಿಕೆಯ ಬ್ಯಾಟಿಂಗ್ ಮಾಡುವ ಪ್ರಯತ್ನ ಮಾಡಿದರು. ಆದರೆ, ವೇಗಿಗಳಾದ ಸಂದೀಪ್ ವಾರಿಯರ್ (Sandeep Warrier)ಹಾಗೂ ರಘುಪತಿ ಸಿಲಂಬರಸನ್ (R Silambarasan) ನಿಖರ ದಾಳಿಯ ಮೂಲಕ ಕರ್ನಾಟಕ ಬ್ಯಾಟ್ಸ್ ಮನ್ ಗಳ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು. 14 ಎಸೆತಗಳಲ್ಲಿ 6 ರನ್ ಬಾರಿಸಿದ್ದ ಸಿದ್ಧಾರ್ಥ್ ಕೆವಿ ( KV Siddharth) 6ನೇ ಓವರ್ ನಲ್ಲಿ ರಘುಪತಿ ಸಿಲಂಬರಸನ್ ಗೆ ವಿಕೆಟ್ ಒಪ್ಪಿಸಿದಾಗ ರಾಜ್ಯ ತಂಡ ಹಿನ್ನಡೆ ಕಂಡಿತು.

Vijay Hazare Trophy: ಪುದುಚೇರಿ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಕರ್ನಾಟಕ
ಈ ಹಂತದಲ್ಲಿ ಜೊತೆಯಾದ ರೋಹನ್ ಕದಮ್ (37) ಹಾಗೂ ನಾಯಕ ಮನೀಷ್ ಪಾಂಡೆ (40) 3ನೇ ವಿಕೆಟ್ ಗೆ ಅಮೂಲ್ಯ 67 ರನ್ ಜೊತೆಯಾಟವಾಡುವ ಮೂಲಕ ಚೇತರಿಕೆ ನೀಡಿದ್ದರು. ಜೊತೆಯಾಟ ಉತ್ತಮವಾಗಿ ಸಾಗುತ್ತಿದ್ದ ಹಂತದಲ್ಲಿ ದಾಳಿಗಿಳಿದ ಅನುಭವಿ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ರೋಹನ್ ಕದಮ್ (Rohan Kadam) ಅವರನ್ನು ಎಲ್ ಬಿ ಬಲೆಗೆ ಬೀಳಿಸಿದರೆ, ತಂಡದ ಮೊತ್ತ 100ರನ್ ಗಡಿ ದಾಟಿದ ಬೆನ್ನಲ್ಲಿಯೇ ಮನೀಷ್ ಪಾಂಡೆ, ಎಂ.ಸಿದ್ಧಾರ್ಥ್(M Siddharth) ಎಸೆತಕ್ಕೆ ಬೌಲ್ಡ್ ಆಗಿ ಹೊರನಡೆದರು.

19 ರನ್ ಗೆ 7 ವಿಕೆಟ್ ಕಳೆದುಕೊಂಡ ಕರ್ನಾಟಕ
ಒಂದು ಹಂತದಲ್ಲಿ 3 ವಿಕೆಟ್ ಗೆ 103 ರನ್ ಗಳೊಂದಿಗೆ ಸವಾಲಿನ ಮೊತ್ತ ಪೇರಿಸುವ ವಿಶ್ವಾಸದಲ್ಲಿದ್ದ ಕರ್ನಾಟಕ ತಂಡಕ್ಕೆ ಸಾಯಿಕಿಶೋರ್ (28ಕ್ಕೆ 3) ಹಾಗೂ ಎಂ.ಸಿದ್ಧಾರ್ಥ್ (23ಕ್ಕೆ 4) ಆಘಾತ ನೀಡಿದರು. ಕೇವಲ 19 ರನ್ ಗಳ ಅಂತರದಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡ ರಾಜ್ಯ ತಂಡ 122 ರನ್ ಗಳಿಗೆ ಆಲೌಟ್ ಆಯಿತು. ಅನುಭವಿ ಬ್ಯಾಟ್ಸ್ ಮನ್ ಕರುಣ್ ನಾಯರ್ ಸತತ 2ನೇ ಪಂದ್ಯದಲ್ಲಿ ತಮ್ಮ ವೈಫಲ್ಯ ಮುಂದುವರಿಸಿದರೆ, ಕಳೆದ ಪಂದ್ಯದಲ್ಲಿ ಮಿಂಚಿನ ಅರ್ಧಶತಕ ಸಿಡಿಸಿದ್ದ ಶರತ್ ಶ್ರೀನಿವಾಸ್ ಕೇವಲ 3 ರನ್ ಬಾರಿಸಿ ಸಾಯಿ ಕಿಶೋರ್ ಗೆ ವಿಕೆಟ್ ಒಪ್ಪಿಸಿದರು.

Vijay Hazare Trophy: ಕರ್ನಾಟಕ ತಂಡ ಪ್ರಕಟ, ಮನೀಶ್ ಪಾಂಡೆಗೆ ನಾಯಕ ಪಟ್ಟ
ಅನುಭವಿ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಜೆ.ಸುಚಿತ್ ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಕೆಳ ಹಂತದಲ್ಲಿ ವೆಂಕಟೇಶ ಮುರಳೀಧರ್ (Venkatesh Muralidhara), ವಿದ್ಯಾಧರ್ ಪಾಟೀಲ್ (Vidyadhar Patil), ಕೆಸಿ ಕಾರ್ಯಪ್ಪ(KC Cariappa) ಕಡಿಮೆ ಮೊತ್ತಕ್ಕೆ ವಿಕೆಟ್ ನೀಡಿದರು. ತಮಿಳುನಾಡು ಪರವಾಗಿ ಸಾಯಿ ಕಿಶೋರ್ (Sai Kishore) ಹಾಗೂ ಎಂ.ಸಿದ್ದಾರ್ಥ್ ಅಲ್ಲದೆ, ಸಂದೀಪ್ ವಾರಿಯರ್, ರಘುಪತಿ ಸಿಲಂಬರಸನ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಉರುಳಿಸಿದರು.

Follow Us:
Download App:
  • android
  • ios