Asianet Suvarna News Asianet Suvarna News

ರಣಜಿ ಟ್ರೋಫಿ: ಮೊದಲ ಪಂದ್ಯಕ್ಕೆ ಕರ್ನಾ​ಟಕ ತಂಡ ಪ್ರಕಟ

ಈಗಾಗಲೇ ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಜಯಿಸಿರುವ ಕರ್ನಾಟಕ ಇದೀಗ ರಣಜಿ ಟ್ರೋಫಿ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಡಿಸೆಂಬರ್ 09ರಿಂದ ತಮಿಳುನಾಡು ವಿರುದ್ಧ ಆರಂಭವಾಗಲಿರುವ ಮೊದಲ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಕರ್ನಾಟಕ ತಂಡ ಪ್ರಕಟವಾಗಿದೆ. ಯಾರೆಲ್ಲ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ...

 

Ranji Trophy KSCA announced Karnataka Squad for First match against Tamil Nadu
Author
Bengaluru, First Published Dec 5, 2019, 12:40 PM IST

ಬೆಂಗ​ಳೂ​ರು(ಡಿ.05): 2019-20ರ ರಣ​ಜಿ ಋುತು​ವಿಗೆ ದಿನ​ಗ​ಣನೆ ಆರಂಭ​ಗೊಂಡಿದ್ದು, ಡಿ.9ರಿಂದ ದಿಂಡಿ​ಗಲ್‌ನಲ್ಲಿ ನಡೆ​ಯ​ಲಿ​ರುವ ತಮಿ​ಳು​ನಾಡು ವಿರು​ದ್ಧದ ‘ಬಿ’ ಗುಂಪಿನ ಪಂದ್ಯಕ್ಕೆ ಬುಧ​ವಾರ ಕರ್ನಾ​ಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 15 ಸದಸ್ಯರ ತಂಡ​ವನ್ನು ಪ್ರಕ​ಟಿ​ಸಿತು. ತಂಡಕ್ಕೆ ಕರುಣ್‌ ನಾಯರ್‌ ನಾಯ​ಕ​ರಾ​ಗಿದ್ದು, ಮಯಾಂಕ್‌ ಅಗರ್‌ವಾಲ್‌, ದೇವ​ದತ್‌ ಪಡಿಕ್ಕಲ್‌ ಸ್ಥಾನ ಪಡೆ​ದಿ​ದ್ದಾರೆ. 

ರಣಜಿ ಟೂರ್ನಿಗೆ ಸಜ್ಜಾಗ್ತಿದೆ ಕರ್ನಾಟಕ

ವೆಸ್ಟ್‌ಇಂಡೀಸ್‌ ವಿರು​ದ್ಧ ಸರ​ಣಿಗೆ ಆಯ್ಕೆಯಾಗಿ​ರುವ ಕಾರಣ, ಕೆ.ಎಲ್‌.ರಾ​ಹುಲ್‌ ಹಾಗೂ ಮನೀಶ್‌ ಪಾಂಡೆಯನ್ನು ಆಯ್ಕೆಗೆ ಪರಿ​ಗ​ಣಿ​ಸಿಲ್ಲ. ಬ್ಯಾಟಿಂಗ್‌ ವಿಭಾಗದಲ್ಲಿ ಬಲಿ​ಷ್ಠವಾ​ಗಿ​ರುವ ಕರ್ನಾ​ಟಕ, ಶ್ರೇಯಸ್‌ ಗೋಪಾಲ್‌, ಕೆ.ಗೌ​ತಮ್‌ ಹಾಗೂ ಜೆ.ಸು​ಚಿತ್‌ರಂತಹ ಅನು​ಭವಿ ಸ್ಪಿನ್ನರ್‌ಗಳನ್ನು ಹೊಂದಿದೆ. ಆದರೆ ತಂಡದ ವೇಗದ ಪಡೆ ದುರ್ಬ​ಲ​ವಾಗಿ ಕಾಣು​ತ್ತಿದೆ. ರೋನಿತ್‌ ಮೋರೆ ವೇಗದ ಪಡೆಯನ್ನು ಮುನ್ನ​ಡೆಸಲಿದ್ದು, ವಿ.ಕೌ​ಶಿಕ್‌, ಡೇವಿಡ್‌ ಮಥಾ​ಯಿಸ್‌ ಹಾಗೂ ಕೆ.ಎಸ್‌.ದೇ​ವಯ್ಯ ಸ್ಥಾನ ಪಡೆ​ದಿ​ದ್ದಾರೆ. ಅನು​ಭವಿ ವೇಗಿ ಅಭಿ​ಮನ್ಯು ಮಿಥುನ್‌, ಯುವ ವೇಗಿ ಪ್ರಸಿದ್ಧ್ ಕೃಷ್ಣಗೆ ಸ್ಥಾನ ಸಿಕ್ಕಿಲ್ಲ.

ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಸ್ಮಿತ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೊಹ್ಲಿ

ತಂಡ: ಕರುಣ್‌ ನಾಯರ್‌ (ನಾ​ಯ​ಕ), ಮಯಾಂಕ್‌ ಅಗರ್‌ವಾಲ್‌, ದೇವ​ದತ್‌ ಪಡಿ​ಕ್ಕಲ್‌, ನಿಶ್ಚಲ್‌.ಡಿ, ಆರ್‌.ಸ​ಮಥ್‌ರ್‍, ಪವನ್‌ ದೇಶ​ಪಾಂಡೆ, ಕೆ.ಗೌ​ತಮ್‌, ಶ್ರೇಯಸ್‌ ಗೋಪಾಲ್‌ (ಉ​ಪ​ನಾ​ಯ​ಕ), ಜೆ.ಸು​ಚಿತ್‌, ಶರತ್‌ ಬಿ.ಆರ್‌ (ವಿ​ಕೆಟ್‌ ಕೀಪರ್‌), ಶರತ್‌ ಶ್ರೀನಿ​ವಾಸ್‌ (ವಿ​ಕೆಟ್‌ ಕೀಪರ್‌), ರೋನಿತ್‌ ಮೋರೆ, ವಿ.ಕೌ​ಶಿಕ್‌, ಡೇವಿಡ್‌ ಮಥಾ​ಯಿಸ್‌, ಕೆ.ಎಸ್‌.ದೇ​ವಯ್ಯ.

ರಣ​ಜಿ: ಸೌರಾಷ್ಟ್ರ ಪರ ಆಡ​ಲಿ​ರುವ ಪೂಜಾರ

ರಾಜ್‌ಕೋಟ್‌: ಡಿ.9ರಿಂದ ಆರಂಭವಾಗಲಿರುವ 2019-20ರ ರಣಜಿ ಟ್ರೋಫಿಯಲ್ಲಿ ಭಾರತ ತಂಡದ ತಾರಾ ಬ್ಯಾಟ್ಸ್‌ಮನ್‌ ಚೇತೇ​ಶ್ವರ್‌ ಪೂಜಾರ ಸೌರಾಷ್ಟ್ರ ಪರ ಆಡ​ಲಿ​ದ್ದಾರೆ. ಮೊದ​ಲೆ​ರಡು ಪಂದ್ಯ​ಗ​ಳಿಗೆ ಬುಧ​ವಾರ ತಂಡ ಪ್ರಕಟಗೊಂಡಿದ್ದು, ಪಟ್ಟಿ​ಯಲ್ಲಿ ಪೂಜಾರ ಹೆಸ​ರಿದೆ. 

2020ರ ಫೆಬ್ರವ​ರಿಯಲ್ಲಿ ಭಾರ​ತ ತಂಡ ನ್ಯೂಜಿ​ಲೆಂಡ್‌ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರ​ಣಿ​ಯನ್ನು ಆಡ​ಲಿದೆ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿ​ಯನ್‌ಶಿಪ್‌ನಲ್ಲಿ ಅಜೇ​ಯ​ವಾಗಿ ಉಳಿ​ದಿ​ರುವ ಭಾರ​ತ ತಂಡಕ್ಕೆ ಈ ಸರಣಿ ಅತ್ಯಂತ ಮಹ​ತ್ವದೆನಿ​ಸಿದೆ. ಈ ನಿಟ್ಟಿ​ನಲ್ಲಿ ಉತ್ತಮ ತಯಾರಿ ನಡೆ​ಸಲು ಪೂಜಾರ ರಣಜಿ ಟ್ರೋಫಿ​ಯನ್ನು ಬಳ​ಸಿ​ಕೊ​ಳ್ಳು​ವು​ದಾಗಿ ತಿಳಿ​ದು​ಬಂದಿದೆ. ಮೊದಲ ಪಂದ್ಯ​ದಲ್ಲಿ ಸೌರಾಷ್ಟ್ರ ತಂಡ ಹಿಮಾ​ಚಲ ಪ್ರದೇಶವನ್ನು ಎದು​ರಿ​ಸ​ಲಿದೆ.
 

Follow Us:
Download App:
  • android
  • ios