Asianet Suvarna News Asianet Suvarna News

ರಣಜಿ ಟೂರ್ನಿಗೆ ಸಜ್ಜಾಗ್ತಿದೆ ಕರ್ನಾಟಕ

ಈಗಾಗಲೇ ವಿಜಯ್ ಹಜಾರೆ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಜಯಿಸಿ ಬೀಗುತ್ತಿರುವ ಕರ್ನಾಟಕ ತಂಡ ಇದೀಗ, ರಣಜಿ ಟ್ರೋಫಿ ಮೇಲೆ ಕಣ್ಣಿಟ್ಟಿದೆ. 30 ಆಟಗಾರರನ್ನೊಳಗೊಂಡ ಸಂಭಾವ್ಯ ತಂಡವನ್ನು ಕೆಎಸ್‌ಸಿಎ ಪ್ರಕಟಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

30 members Probable squad for Karnataka Ranji Team announced
Author
Bengaluru, First Published Dec 4, 2019, 1:15 PM IST

ಬೆಂಗಳೂರು[ಡಿ.04]: ಡಿ. 9ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಗಾಗಿ ಕರ್ನಾಟಕದ 30 ಆಟಗಾರರ ಸಂಭಾವ್ಯ ತಂಡವನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಮಂಗಳವಾರ ಪ್ರಕಟಿಸಿದೆ. ಅಂಡರ್‌ 19 ವಿಶ್ವಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾದ ಶುಭಾಂಗ್‌ ಹೆಗ್ಡೆ ಹಾಗೂ ವಿದ್ಯಾಧರ್‌ ಪಾಟೀಲ್‌ಗೆ 30 ಸದ​ಸ್ಯರ ಪಟ್ಟಿ​ಯಲ್ಲಿ ಸ್ಥಾನ ಸಿಕ್ಕಿದೆ. 

ಸತತ 2 ಬಾರಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದ ಮೊದಲ ತಂಡ ಕರ್ನಾಟಕ!

ಶುಭಾಂಗ್‌ ಕಳೆದ ಋುತು​ವಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ​ದ್ದರು. ವಡೋ​ದರಾದಲ್ಲಿ ಬರೋ​ಡಾ ವಿರುದ್ಧ ನಡೆದಿದ್ದ ರಣಜಿ ಪಂದ್ಯ​ದಲ್ಲಿ ಕರ್ನಾ​ಟಕ ಪರ ಆಡಿ, 4 ವಿಕೆಟ್‌ ಕಬ​ಳಿ​ಸಿ​ದ್ದರು. ವಿದ್ಯಾ​ಧರ್‌ ಇನ್ನೂ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಿಲ್ಲ. ಉಳಿ​ದಂತೆ ಕೆ.ಎಲ್‌.ರಾ​ಹುಲ್‌, ಮನೀಶ್‌ ಪಾಂಡೆ, ಕರುಣ್‌ ನಾಯರ್‌, ಮಯಾಂಕ್‌ ಅಗರ್‌ವಾಲ್‌ ಸೇರಿ​ದಂತೆ ಈ ಋುತು​ವಿ​ನಲ್ಲಿ ವಿಜಯ್‌ ಹಜಾರೆ, ಮುಷ್ತಾಕ್‌ ಅಲಿ ಟಿ20 ಟೂರ್ನಿ​ಯಲ್ಲಿ ಆಡಿದ ಬಹು​ತೇಕ ಆಟ​ಗಾ​ರರು ಸ್ಥಾನ ಪಡೆ​ದಿ​ದ್ದಾರೆ. ವಿಜಯ್‌ ಹಜಾರೆ ಏಕ​ದಿನ ಹಾಗೂ ಮುಷ್ತಾಕ್‌ ಅಲಿ ಟಿ20 ಟೂರ್ನಿ​ಯಲ್ಲಿ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿದ ಕರ್ನಾ​ಟಕ, ರಣಜಿ ಟ್ರೋಫಿ ಮೇಲೂ ಕಣ್ಣಿ​ಟ್ಟಿದೆ. ‘ಬಿ’ ಗುಂಪಿ​ನ​ಲ್ಲಿ​ರುವ ಕರ್ನಾ​ಟಕ, ಡಿ.9ರಿಂದ ಆರಂಭ​ಗೊ​ಳ್ಳ​ಲಿ​ರುವ ಮೊದಲ ಪಂದ್ಯ​ದಲ್ಲಿ ತಮಿಳುನಾಡು ವಿರುದ್ಧ ಸೆಣ​ಸ​ಲಿದೆ.

30 ಸದಸ್ಯರ ಸಂಭಾವ್ಯರ ಪಟ್ಟಿ: 

ಮಯಾಂಕ್‌, ದೇವದತ್‌, ರಾಹುಲ್‌, ಕರುಣ್‌, ನಿಶ್ಚಲ್‌, ಮನೀಶ್‌, ಪವನ್‌, ರೋಹನ್‌, ಅಭಿಷೇಕ್‌, ಲಿಯಾನ್‌, ಶರತ್‌ ಬಿ.ಆ​ರ್‌, ಲುವ್ನಿತ್‌, ಶರತ್‌ ಶ್ರೀನಿವಾಸ್‌, ಪ್ರಸಿದ್ಧ್, ಮಿಥುನ್‌, ರೋನಿತ್‌, ಡೇವಿಡ್‌, ಕೌಶಿಕ್‌, ವಿದ್ಯಾಧರ್‌, ಅಭಿಲಾಶ್‌, ಪ್ರತೀಕ್‌, ಶ್ರೇಯಸ್‌, ಗೌತಮ್‌, ಸುಚಿತ್‌, ಪ್ರವೀಣ್‌, ಶುಭಾಂಗ್‌, ಆದಿತ್ಯ, ಸಿದ್ಧಾರ್ಥ್, ಸಮರ್ಥ್, ದೇವಯ್ಯ.
 

 

Follow Us:
Download App:
  • android
  • ios