Asianet Suvarna News Asianet Suvarna News

ಏಕದಿನ ವಿಶ್ವ​ಕಪ್‌ ಬಗ್ಗೆ ಖಾತ​ರಿ​ಗಾ​ಗಿ ಪಾಕಿಸ್ತಾ​ನ​ಕ್ಕೆ ತೆರ​ಳಿದ ಐಸಿಸಿ..!

* ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ದತೆ ಆರಂಭಿಸಿರುವ ಐಸಿಸಿ
* ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ನಡೆಯಲಿರುವ ಟೂರ್ನಿ
* ವಿಶ್ವಕಪ್ ಪಾಲ್ಗೊಳ್ಳುವಿಕೆ ಬಗ್ಗೆ ಪಾಕ್‌ ನಿರ್ಧಾರ ತಿಳಿಯಲು ಮುಂದಾದ ಐಸಿಸಿ

ICC officials in Pakistan to secure Cricket World Cup 2023 participation kvn
Author
First Published Jun 1, 2023, 12:02 PM IST

ಕರಾ​ಚಿ(ಜೂ.01): ಅಕ್ಟೋ​ಬ​ರ್‌-ನವೆಂಬ​ರ್‌​ನಲ್ಲಿ ಭಾರ​ತ​ದಲ್ಲಿ ನಡೆ​ಯ​ಲಿ​ರುವ ಏಕ​ದಿನ ವಿಶ್ವ​ಕಪ್‌ನಲ್ಲಿ ಪಾಲ್ಗೊ​ಳ್ಳುವ ಬಗ್ಗೆ ಹಾಗೂ ತನ್ನ ಪಂದ್ಯ​ಗ​ಳಿಗೆ ಹೈಬ್ರೀಡ್‌ ಮಾದ​ರಿಗೆ ಒತ್ತಾ​ಯಿ​ಸು​ವು​ದಿಲ್ಲ ಎಂಬು​ದರ ಖಾತರಿ ಪಡೆ​ದು​ಕೊ​ಳ್ಳಲು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಕೌನ್ಸಿ​ಲ್‌​(ಐಸಿಸಿ​) ಅಧಿ​ಕಾ​ರಿ​ಗ​ಳು ಪಾಕಿ​ಸ್ತಾ​ನಕ್ಕೆ ತೆರ​ಳಿ​ದ್ದಾರೆ ಎಂದು ತಿಳಿ​ದು​ಬಂದಿದೆ. 

ವರ​ದಿ​ಗಳ ಪ್ರಕಾ​ರ ಐಸಿಸಿ ಮುಖ್ಯಸ್ಥ ಗ್ರೆಗ್‌ ಬಾಕ್ಲೇರ್‍ ಹಾಗೂ ಸಿಇಒ ಜೆಫ್‌ ಆ್ಯಲರ್ರ್ಡೆಸ್‌ ಲಾಹೋ​ರ್‌ಗೆ ತೆರಳಿ ಪಾಕ್‌ ಕ್ರಿಕೆಟ್‌ ಮಂಡ​ಳಿ​(​ಪಿ​ಸಿ​ಬಿ) ಅಧಿ​ಕಾ​ರಿ​ಗಳ ಜೊತೆ ಚರ್ಚಿಸಿ, ವಿಶ್ವ​ಕ​ಪ್‌​ನಲ್ಲಿ ಆಡುವ ಬಗ್ಗೆ ಭರ​ವಸೆ ಪಡೆ​ದು​ಕೊಂಡಿ​ದ್ದಾರೆ ಎನ್ನ​ಲಾ​ಗಿದೆ. ಏಷ್ಯಾ​ಕಪ್‌ ಆಡಲು ಭಾರತ ತಂಡ ಪಾಕಿ​ಸ್ತಾ​ನಕ್ಕೆ ಬರ​ದಿ​ದ್ದರೆ, ನಾವು ಕೂಡಾ ಭಾರ​ತ​ದಲ್ಲಿ ವಿಶ್ವ​ಕಪ್‌ ಆಡು​ವು​ದಿಲ್ಲ ಎಂದು ಪಿಸಿಬಿ ಅಧ್ಯಕ್ಷ ನಜಂ ಸೇಠಿ ಇತ್ತೀ​ಚೆಗೆ ಎಚ್ಚ​ರಿ​ಸಿ​ದ್ದ​ರು. ಅಲ್ಲದೇ, ಏಕ​ದಿನ ವಿಶ್ವ​ಕ​ಪ್‌ನ ತನ್ನ ಪಂದ್ಯ​ಗ​ಳನ್ನು ಭಾರ​ತದ ಹೊರ​ಗಡೆ ನಡೆಸಲು ಒತ್ತಾ​ಯಿ​ಸಿ​ದ್ದಾಗಿ ವರ​ದಿ​ಯಾ​ಗಿತ್ತು.

ಶ್ರೀಲಂಕಾ​ದಲ್ಲಿ ಏಷ್ಯಾ​ಕಪ್‌ ನಡೆ​ಸಿ: ಬಿಸಿ​ಸಿಐ ಒತ್ತಾ​ಯ

ನವ​ದೆ​ಹ​ಲಿ: ಏಷ್ಯಾ​ಕಪ್‌ ಕ್ರಿಕೆಟ್‌ ಟೂರ್ನಿ​ಯನ್ನು ಪಾಕಿ​ಸ್ತಾನ ಅಥವಾ ಹೈಬ್ರೀಡ್‌ ಮಾದ​ರಿ​ಯಲ್ಲಿ ನಡೆ​ಸಲು ಒಪ್ಪದ ಬಿಸಿ​ಸಿಐ, ಶ್ರೀಲಂಕಾ​ದಲ್ಲಿ ಟೂರ್ನಿ ಆಯೋ​ಜಿ​ಸು​ವಂತೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿ​ಲ್‌​(​ಎ​ಸಿ​ಸಿ​)ಗೆ ಮನವಿ ಮಾಡಿದ್ದು, ಇದನ್ನು ಶ್ರೀಲಂಕಾ, ಬಾಂಗ್ಲಾ​ದೇಶ, ಆಫ್ಘಾ​ನಿ​ಸ್ತಾನ ಕ್ರಿಕೆಟ್‌ ಮಂಡ​ಳಿ​ಗಳು ಬೆಂಬ​ಲಿ​ಸಿವೆ ಎಂದು ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿ​ದೆ. 

ಗಿಲ್-ರಿಂಕು: ಐಪಿಎಲ್‌-16ರಲ್ಲಿ ಉದಯಿಸಿದ 11 ನವತಾರೆಯರು!

ಮೂರೂ ಮಂಡ​ಳಿ​ಗಳು ಪಾಕಿ​ಸ್ತಾನ ಕ್ರಿಕೆಟ್‌ ಮಂಡ​ಳಿ​(​ಪಿ​ಸಿ​ಬಿ) ಜೊತೆ ನಿಲ್ಲಲು ನಿರಾ​ಕ​ರಿ​ಸಿದ್ದು, ಹೀಗಾಗಿ ಲಂಕಾ​ದಲ್ಲೇ ಟೂರ್ನಿ ನಡೆ​ಯುವ ಸಾಧ್ಯತೆ ಹೆಚ್ಚು. ಆರಂಭ​ದಿಂದಲೂ ಬಿಸಿ​ಸಿಐ, ಪಾಕ್‌​ನಲ್ಲಿ ಟೂರ್ನಿ ಆಯೋ​ಜ​ನೆ​ಯನ್ನು ವಿರೋ​ಧಿ​ಸು​ತ್ತಿದ್ದು, ಪಿಸಿಬಿ ಪ್ರಸ್ತಾ​ಪಿ​ಸಿದ್ದ ಹೈಬ್ರೀಡ್‌ ಮಾದ​ರಿಗೂ ಒಪ್ಪಿ​ರ​ಲಿಲ್ಲ. ತಟಸ್ಥ ಸ್ಥಳ​ದಲ್ಲಿ ಟೂರ್ನಿ ನಡೆ​ಸಿ​ದರೆ ಮಾತ್ರ ಭಾರತ ತಂಡ ಪಾಲ್ಗೊ​ಳ್ಳ​ಲಿದೆ ಎಂದು ಪಟ್ಟು​ಹಿ​ಡಿ​ದಿದ್ದು, ಈ ಬಗ್ಗೆ ಶೀಘ್ರ​ದಲ್ಲೇ ಅಂತಿಮ ನಿರ್ಧಾರ ಹೊರ​ಬೀ​ಳುವ ನಿರೀ​ಕ್ಷೆ​ಯಿದೆ. ಈ ನಡುವೆ ಟೂರ್ನಿ ಆಯೋ​ಜ​ನೆಗೆ ಸಿದ್ಧ​ವಿ​ರು​ವು​ದಾಗಿ ಲಂಕಾ ಮಂಡಳಿ ಕೂಡಾ ತಿಳಿ​ಸಿದೆ.

ಟೆಸ್ಟ್‌ ಫೈನಲ್‌ಗೆ ನಾಯಕ ರೋಹಿತ್‌ ಅಭ್ಯಾಸ ಶುರು

ಲಂಡನ್‌: ಐಪಿಎಲ್‌ನ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಸೋತ ಬಳಿಕ ಲಂಡನ್‌ಗೆ ಪ್ರಯಾಣಿಸಿದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ, ಮಂಗಳವಾರ ತಂಡದೊಂದಿಗೆ ಸಸೆಕ್ಸ್‌ನ ಅರುಂಡೆಲ್‌ ಕ್ಯಾಸೆಲ್‌ ಕೌಂಟಿ ಮೈದಾನದಲ್ಲಿ ಅಭ್ಯಾಸ ನಡೆಸಿದರು. ತಂಡದ ಸದಸ್ಯರೊಂದಿಗೆ ದೀರ್ಘ ಸಮಾಲೋಚನೆ ನಡೆಸಿದ ರೋಹಿತ್‌, ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌, ಬೌಲಿಂಗ್‌ ಕೋಚ್‌ ಪಾರಸ್‌ ಮಾಂಬ್ರೆ, ಬ್ಯಾಟಿಂಗ್‌ ಕೋಚ್‌ ವಿಕ್ರಂ ರಾಥೋಡ್‌ ಜೊತೆಯೂ ಮಾತುಕತೆ ನಡೆಸಿದರು.

ಐಪಿಎಲ್‌ನಲ್ಲಿ ಮಿಂಚಿದ ಮೋಹಿತ್‌ ಭಾರತ ತಂಡಕ್ಕೆ?

ನವದೆಹಲಿ: ಕಳೆದ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ನ ನೆಟ್‌ ಬೌಲರ್‌ ಆಗಿದ್ದ ಮೋಹಿತ್‌ ಶರ್ಮಾ ಈ ವರ್ಷ ತಂಡದ ಪ್ರಮುಖ ಬೌಲರ್‌ ಆಗಿ ಕಾಣಿಸಿಕೊಂಡರು. ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡ 34 ವರ್ಷದ ಮೋಹಿತ್‌, ಅಭೂತಪೂರ್ವ ಪ್ರದರ್ಶನ ನೀಡಿ 14 ಪಂದ್ಯಗಳಲ್ಲಿ 27 ವಿಕೆಟ್‌ ಕಬಳಿಸಿದರು. 2015ರಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡ ಮೋಹಿತ್‌, ಇದೀಗ ಮತ್ತೆ ತಂಡಕ್ಕೆ ವಾಪಸಾಗಲು ಎದುರು ನೋಡುತ್ತಿದ್ದಾರೆ. ಈ ವರ್ಷ ಜುಲೈನಲ್ಲಿ ವಿಂಡೀಸ್‌ನಲ್ಲಿ 5 ಟಿ20 ಪಂದ್ಯಗಳ ಸರಣಿ ಆಡಲಿರುವ ಭಾರತ ತಂಡಕ್ಕೆ ಮೋಹಿತ್‌ ಆಯ್ಕೆಯಾಗುವ ನಿರೀಕ್ಷೆ ಇದೆ.

ನಮೀಬಿಯಾ ಪ್ರವಾಸಕ್ಕೆ ರಾಜ್ಯ ಕ್ರಿಕೆಟ್‌ ತಂಡ

ಬೆಂಗಳೂರು: 2023-24ರ ದೇಸಿ ಋುತು ಆರಂಭಕ್ಕೂ ಮುನ್ನ ಕರ್ನಾಟಕ ಕ್ರಿಕೆಟ್‌ ತಂಡ ನಮೀಬಿಯಾ ಪ್ರವಾಸಕ್ಕೆ ತೆರಳಿದೆ. ಕಳೆದ ಋುತುವಿನಲ್ಲಿ ಹಿರಿಯ, ಅಂಡರ್‌-25, ಅಂಡರ್‌-19 ತಂಡಗಳಲ್ಲಿದ್ದ ಆಟಗಾರರನ್ನು ಒಟ್ಟುಗೂಡಿಸಿ ತಂಡ ರಚಿಸಲಾಗಿದೆ. ತಂಡದಲ್ಲಿ ಹಿರಿಯ ಆಟಗಾರರಾದ ಆರ್‌.ಸಮಥ್‌ರ್‍, ಕೆ.ವಿ.ಸಿದ್ಧಾಥ್‌ರ್‍ ಜೊತೆ ಯುವ ಬ್ಯಾಟರ್‌ ನಿಕಿನ್‌ ಜೋಸ್‌, ವೇಗಿಗಳಾದ ವೈಶಾಖ್‌, ವಿದ್ವತ್‌ ಕೂಡಾ ಇದ್ದಾರೆ. ರಾಜ್ಯ ತಂಡವು ನಮೀಬಿಯಾ ವಿರುದ್ಧ 5 ಏಕದಿನ ಪಂದ್ಯಗಳನ್ನು ಆಡಲಿದ್ದು, ಜೂ.2, 4, 7, 9 ಹಾಗೂ 11ರಂದು ಪಂದ್ಯಗಳು ನಡೆಯಲಿವೆ.

Follow Us:
Download App:
  • android
  • ios