Asianet Suvarna News Asianet Suvarna News

ಈ ವರ್ಷ ಐಪಿ​ಎಲ್‌ ಬಗ್ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಸುಳಿ​ವು

ಈ ವರ್ಷ ಒಂದಾದರೂ ಟೂರ್ನಿ ನಡೆಯಲಿದೆ ಎನ್ನುವ ಮೂಲಕ ಐಪಿಎಲ್ ಆಯೋಜನೆಯ ಬಗ್ಗೆ ಆಶಾವಾದ ಹುಟ್ಟುಹಾಕುವಂತೆ ಸಂದೇಶವನ್ನು ಕ್ರೀಡಾಸಚಿವ ಕಿರಣ್ ರಿಜಿಜು ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Good News Sports Minister Kiren Rijiju talks about the future of IPL in 2020
Author
New Delhi, First Published May 24, 2020, 9:08 AM IST

ನವ​ದೆ​ಹ​ಲಿ(ಮೇ.24): ತಕ್ಷ​ಣಕ್ಕೆ ಭಾರ​ತ​ದ​ಲ್ಲಿ ಯಾವುದೇ ಅಂತಾ​ರಾ​ಷ್ಟ್ರೀಯ ಕ್ರೀಡಾ​ಕೂಟ ಇಲ್ಲವೇ ಟೂರ್ನಿ​ಗಳು ನಡೆ​ಯು​ವು​ದಿಲ್ಲ. ಆದರೆ ಈ ವರ್ಷ​ದಲ್ಲಿ ಒಂದಾ​ದ​ರೂ ಟೂರ್ನಿ ನಡೆ​ಯ​ಲಿದೆ ಎನ್ನುವ ಮೂಲಕ ಐಪಿ​ಎಲ್‌ ನಡೆ​ಯುವ ಬಗ್ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿ​ಜು ಸುಳಿವು ನೀಡಿ​ದ್ದಾರೆ. 

ಅಕ್ಟೋ​ಬರ್‌-ನವೆಂಬರ್‌ನಲ್ಲಿ ನಡೆ​ಯ​ಬೇ​ಕಿ​ರುವ ಐಸಿಸಿ ಟಿ20 ವಿಶ್ವ​ಕಪ್‌ ಮುಂದೂ​ಡ​ಲ್ಪ​ಟ್ಟರೆ ಆ ಅವ​ಧಿ​ಯಲ್ಲಿ ಐಪಿ​ಎಲ್‌ ಆಯೋ​ಜಿ​ಸಲು ಬಿಸಿ​ಸಿಐ ಯೋಜನೆ ರೂಪಿ​ಸು​ತ್ತಿ​ದೆ. ಈ ನಿಟ್ಟಿ​ನಲ್ಲಿ ಕ್ರೀಡಾ ಸಚಿ​ವರ ಹೇಳಿಕೆ ಮಹತ್ವ ಪಡೆ​ದು​ಕೊಂಡಿದೆ.

ಆಸ್ಟ್ರೇಲಿಯಾದಲ್ಲಿ ಈ ವರ್ಷ ನಡೆಯಬೇಕಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಬಹುತೇಕ ಮುಂದೂಡಲ್ಪಡಲಿದೆ ಎನ್ನಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಟೂರ್ನಿ ನಡೆದರೂ ಅಚ್ಚರಿಯಿಲ್ಲ. ಇವೆಲ್ಲವುಗಳಿಗಿಂತ ಹೆಚ್ಚಾಗಿ ಐಪಿಎಲ್ ಭಾರತದಲ್ಲಿ ನಡೆಯಬೇಕಿದ್ದರೆ ಕೊರೋನಾ ನಿಯಂತ್ರಣಕ್ಕೆ ಬರಬೇಕಿದೆ.

ಅಭ್ಯಾಸ ಆರಂಭಿ​ಸಿದ ದೇಶದ ಮೊದಲ ಕ್ರಿಕೆ​ಟಿಗ ಶಾರ್ದೂಲ್‌

ಪಾಲ್ಘರ್‌: ವೇಗಿ ಶಾರ್ದೂಲ್‌ ಠಾಕೂರ್‌ ಶನಿ​ವಾರ ಇಲ್ಲಿನ ಬೊಯ್ಸಾರ್‌ ಮೈದಾ​ನ​ದಲ್ಲಿ ಅಭ್ಯಾಸ ನಡೆ​ಸುವ ಮೂಲಕ, ದೇಶ​ದಲ್ಲಿ ಅಭ್ಯಾಸ ಪುನಾ​ರಂಭಿ​ಸಿದ ಮೊದಲ ಅಂತಾ​ರಾ​ಷ್ಟ್ರೀಯ ಕ್ರಿಕೆ​ಟಿಗ ಎನಿ​ಸಿ​ಕೊಂಡರು. 

ಕ್ರಿಕೆ​ಟಿ​ಗ​ರಿಗೆ ಮಾರ್ಗ​ಸೂಚಿ ಪ್ರಕ​ಟಿ​ಸಿದ ಐಸಿ​ಸಿ; ಬಾಲ್‌ ಮುಟ್ಟಿದ ಮೇಲೆ ಸ್ಯಾನಿ​ಟೈ​ಸರ್!

ಕೊರೋನಾ ಸೋಂಕು ವ್ಯಾಪ​ಕ​ವಾಗಿ ಹರ​ಡು​ತ್ತಿ​ರುವ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ ಕ್ರಿಕೆಟ್‌ ಚಟು​ವ​ಟಿಕೆಯನ್ನು ಸ್ಥಗಿತಗೊಳಿ​ಸ​ಲಾ​ಗಿತ್ತು. ಹಸಿರು, ಕಿತ್ತಳೆ ವಲ​ಯ​ಗ​ಳಲ್ಲಿ ಕ್ರೀಡಾ​ಪ​ಟು​ಗ​ಳ ಅಭ್ಯಾ​ಸಕ್ಕೆ ಸರ್ಕಾರ ಅನು​ಮತಿ ನೀಡಿದ ಬೆನ್ನಲ್ಲೇ ಶಾರ್ದೂಲ್‌ ಮೈದಾ​ನ​ಕ್ಕಿ​ಳಿದು, ಸ್ಥಳೀಯ ಕ್ರಿಕೆ​ಟಿ​ಗರ ಜೊತೆ ನೆಟ್ಸ್‌ ಅಭ್ಯಾಸ ನಡೆ​ಸಿ​ದರು.


 

Follow Us:
Download App:
  • android
  • ios