Asianet Suvarna News Asianet Suvarna News

ವಿಶ್ವ​ಕಪ್‌ನಲ್ಲಿ ಶತಕ ತಪ್ಪಿಸಿದ್ದೇ ಧೋನಿ..! ’ಗಂಭೀರ’ ಆರೋಪ

2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಕೇವಲ 3 ರನ್‌ಗಳಿಂದ ಶತಕ ವಂಚಿತರಾಗಲು ಧೋನಿಯೇ ಕಾರಣ ಎಂದು ’ಗಂಭೀರ’ ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಅಂದು ಆಗಿದ್ದೇನು ಎನ್ನುವ ರಹಸ್ಯವನ್ನು ಎಡಗೈ ಬ್ಯಾಟ್ಸ್‌ಮನ್ ಬಯಲು ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Former Cricketer Gautam Gambhir reveals how MS Dhoni reminder led to his dismissal in 2011 World Cup final
Author
New Delhi, First Published Nov 18, 2019, 10:53 AM IST

"

ನವ​ದೆ​ಹ​ಲಿ[ನ.18]: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟ​ಗಾರ ಗೌತಮ್‌ ಗಂಭೀರ್‌ 2011ರ ಐಸಿಸಿ ಏಕ​ದಿನ ವಿಶ್ವ​ಕಪ್‌ ಫೈನಲ್‌ನಲ್ಲಿ ಶತಕ ಕೈತ​ಪ್ಪಲು ಎಂ.ಎಸ್‌.ಧೋ​ನಿಯೇ ಕಾರಣ ಎಂಬ ಗಂಭೀರ ಆರೋಪ ಮಾಡಿ​ದ್ದಾರೆ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆ​ದಿದ್ದ ಫೈನಲ್‌ನಲ್ಲಿ ಗಂಭೀರ್‌ 122 ಎಸೆತ​ಗ​ಳಲ್ಲಿ 97 ರನ್‌ ಗಳಿಸಿ ಔಟಾ​ಗಿ​ದ್ದರು. ಈ ಹಿಂದೆಯೂ ಗಂಭೀರ್ ವಿರುದ್ಧ ಹಲವಾರು ಬಾರಿ ಹರಿಹಾಯ್ದಿದ್ದಾರೆ.

ಮೀಟಿಂಗ್‌ಗೆ ಚಕ್ಕರ್, ಕಮೆಂಟರಿಗೆ ಹಾಜರ್; ಗಂಭೀರ್ ಕಾಲೆಳೆದ ಫ್ಯಾನ್ಸ್!

ಭಾರತ ವಿಶ್ವ​ಕಪ್‌ ಗೆಲ್ಲು​ವಲ್ಲಿ ಗಂಭೀರ್‌ ಪ್ರಮುಖ ಪಾತ್ರವಹಿಸಿ​ದ್ದರು. ವೀರೇಂದ್ರ ಸೆಹ್ವಾಗ್‌ ಹಾಗೂ ಸಚಿನ್‌ ತೆಂಡು​ಲ್ಕರ್‌ ಔಟಾದ ಬಳಿಕ, ಗಂಭೀರ್‌ ನಾಯಕ ಧೋನಿ ಜತೆ ಸೇರಿ 109 ರನ್‌ಗಳ ಜೊತೆ​ಯಾಟವಾಡಿ​ದ್ದರು. ತಿಸಾರ ಪೆರೇರಾ ಎಸೆದ 42ನೇ ಓವರ್‌ನಲ್ಲಿ ಗಂಭೀರ್‌ ವಿಕೆಟ್‌ ಕಳೆ​ದು​ಕೊಂಡಿ​ದ್ದರು.

ಮಾಸ್ಕ್ ಧರಿಸಿದ ಬಾಂಗ್ಲಾ ತಂಡ; ದೆಹಲಿ ಸಿಎಂ ಕೇಜ್ರಿವಾಲ್ ತಿವಿದ ಗಂಭೀರ್!

ಖಾಸಗಿ ವೆಬ್‌ಸೈಟ್‌ವೊಂದಕ್ಕೆ ನೀಡಿ​ರುವ ವಿಡಿಯೋ ಸಂದ​ರ್ಶ​ನ​ದಲ್ಲಿ ಗಂಭೀರ್‌, ಧೋನಿ ವಿರುದ್ಧ ಹರಿ​ಹಾಯ್ದಿದ್ದಾರೆ. ‘ನಾ​ನೇಕೆ 97 ರನ್‌ಗಳಿಗೆ ಔಟಾದೆ, ಆಗ ಏನಾ​ಯಿ​ತು ಎನ್ನುವ ಪ್ರಶ್ನೆಯನ್ನು ಹಲವು ಬಾರಿ ಕೇಳ​ಲಾ​ಗಿದೆ. ನಾನು ಪ್ರತಿ​ಯೊ​ಬ್ಬ​ರಿಗೂ ಹೇಳ​ಲು ಇಚ್ಛಿ​ಸು​ತ್ತೇನೆ, 97 ರನ್‌ ತಲು​ಪುವ ವರೆಗೂ ನಾನು ನನ್ನ ವೈಯ​ಕ್ತಿಕ ಮೊತ್ತದ ಕಡೆ ಗಮನ ಹರಿ​ಸಿ​ರ​ಲಿಲ್ಲ. ಶ್ರೀಲಂಕಾ ನೀಡಿದ್ದ ಗುರಿ ತಲು​ಪು​ವು​ದೊಂದೇ ನನ್ನ ತಲೆಯಲ್ಲಿ​ತ್ತು’ ಎಂದು ಗಂಭೀರ್‌ ಹೇಳಿ​ದ್ದಾರೆ.

ಗಂಭೀರ್‌ ಪ್ರಕಾರ ಅವರು ಶತ​ಕದ ಸನಿ​ಹ​ದ​ಲ್ಲಿ​ದ್ದಾಗ ಧೋನಿ ವೈಯ​ಕ್ತಿಕ ಮೈಲಿ​ಗ​ಲ್ಲಿನ ಬಗ್ಗೆ ನೆನ​ಪಿ​ಸಿದ್ದೇ ಔಟಾ​ಗಲು ಕಾರಣ. ‘ನ​ನಗೆ ನೆನ​ಪಿದೆ. ನಾನು, ಧೋನಿ ಕ್ರೀಸ್‌ನಲ್ಲಿ​ದ್ದೆವು. ಓವರ್‌ ಮುಗಿ​ಯು​ತ್ತಿ​ದ್ದಂತೆ ಧೋನಿ ನನ್ನ ಬಳಿ ಬಂದು ಕೇವಲ 3 ರನ್‌ ಬಾಕಿ ಇದೆ. 3 ರನ್‌ ಗಳಿಸಿದರೆ ನಿನ್ನ ಶತಕ ಪೂರ್ಣ​ಗೊ​ಳ್ಳ​ಲಿದೆ ಎಂದ​ರು. ತಕ್ಷಣ ನನ್ನ ಗಮನ ವೈಯ​ಕ್ತಿಕ ಸಾಧನೆಯತ್ತ ಹೊರ​ಳಿತು. ವೈಯ​ಕ್ತಿಕ ಮೊತ್ತದ ಬಗ್ಗೆ ಯೋಚಿ​ಸು​ವಾಗ ಏಕಾ​ಗ್ರತೆ ಹಾಳಾ​ಗು​ತ್ತದೆ. ನಾನು ಲಂಕಾ ನೀಡಿದ್ದ ಗುರಿಯನ್ನಷ್ಟೇ ಗಮ​ನ​ದ​ಲ್ಲಿ​ಟ್ಟು​ಕೊಂಡು ಆಟ ಮುಂದು​ವ​ರಿ​ಸಿ​ದ್ದರೆ ಸುಲಭವಾಗಿ ಶತಕ ಪೂರೈ​ಸು​ತ್ತಿದ್ದೆ’ ಎಂದು ಗಂಭೀರ್‌ ಬೇಸರ ವ್ಯಕ್ತ​ಪ​ಡಿ​ಸಿ​ದ್ದಾರೆ.

Be Practical ಧೋನಿ ನಿವೃತ್ತಿಗೆ ’ಗಂಭೀರ’ ಸಲಹೆ

ಎಂ.ಎಸ್‌.ಧೋನಿ ಅಜೇಯ 91 ರನ್‌ ಗಳಿಸಿ, 28 ವರ್ಷಗಳ ಬಳಿಕ ಭಾರತ ತಂಡ ಏಕ​ದಿನ ವಿಶ್ವ ಚಾಂಪಿ​ಯನ್‌ ಆಗಲು ನೆರ​ವಾ​ಗಿ​ದ್ದರು. 2007ರ ಟಿ20 ವಿಶ್ವ​ಕಪ್‌ ಫೈನಲ್‌ನಲ್ಲೂ ಗಂಭೀರ್‌ 75 ರನ್‌ ಗಳಿ​ಸಿ, ತಂಡಕ್ಕೆ ಆಸರೆಯಾಗಿ​ದ್ದರು. ಎರಡೂ ಫೈನಲ್‌ಗಳಲ್ಲಿ ಗಂಭೀರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿ​ರ​ಲಿಲ್ಲ.


ನವೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios