Asianet Suvarna News Asianet Suvarna News

ರಣಜಿ ಟ್ರೋಫಿ: ಇತಿ​ಹಾಸ ಬರೆಯಲು ಸಜ್ಜಾದ ಕರ್ನಾ​ಟ​ಕ!

ವಿಜಯ್ ಹಜಾರೆ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದು ಬೀಗುತ್ತಿರುವ ಕರ್ನಾಟಕ ತಂಡ ಇದೀಗ ರಣಜಿ ಟ್ರೋಫಿ ಗೆಲುವಿನತ್ತ ಚಿತ್ತ ನೆಟ್ಟಿದೆ. ಒಂದು ವೇಳೆ ರಣಜಿ ಟ್ರೋಫಿ ಜಯಿಸಿದರೆ, ಒಂದೇ ವರ್ಷದಲ್ಲಿ 3 ದೇಶಿ ಟ್ರೋಪಿ ಗೆದ್ದ ಮೊದಲ ತಂಡ ಎನ್ನುವ ಗೌರವಕ್ಕೆ ಕರ್ನಾಟಕ ಪಾತ್ರವಾಗಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

After Vijay Hazare and Mushtaq Ali trophy now Karnataka eye on Ranji Trophy
Author
Bengaluru, First Published Dec 8, 2019, 12:23 PM IST

ಬೆಂಗ​ಳೂರು(ಡಿ.08): ವಿಜಯ್‌ ಹಜಾರೆ ಏಕ​ದಿನ ಹಾಗೂ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಗಳನ್ನು ಗೆದ್ದು ಬೀಗಿ​ರುವ ಕರ್ನಾ​ಟಕ ತಂಡ, ಡಿ.9ರಿಂದ ಆರಂಭ​ಗೊ​ಳ್ಳ​ಲಿ​ರುವ ರಣಜಿ ಟ್ರೋಫಿ​ಯಲ್ಲೂ ಮಿಂಚು ಹರಿ​ಸಲು ಸಜ್ಜಾ​ಗಿದೆ. ಪ್ರಥಮ ದರ್ಜೆ ಮಾದ​ರಿ​ಯಲ್ಲೂ ಚಾಂಪಿ​ಯನ್‌ ಆಗಿ ಇತಿ​ಹಾಸ ಬರೆ​ಯುವ ಉತ್ಸಾ​ಹ ರಾಜ್ಯ ತಂಡದ್ದಾಗಿದೆ. ಈ ವರೆಗೂ ತಂಡ​ವೊಂದು ಒಂದೇ ಋುತು​ವಿ​ನ​ಲ್ಲಿ ಮೂರು ಮಾದ​ರಿಯಲ್ಲಿ ಚಾಂಪಿ​ಯನ್‌ ಆದ ಉದಾ​ಹ​ರಣೆಗಳಿಲ್ಲ. ಅಂತಹ ಅಪ​ರೂ​ಪದ ಸಾಧನೆಯನ್ನು ಕರ್ನಾ​ಟಕ ತಂಡ ಮಾಡಲು ಪಣ​ತೊ​ಟ್ಟಿದೆ.

ಈ ಹಿಂದೆ 2013-14, 2014-15ರ ಋುತು​ವಿ​ನಲ್ಲಿ ಕರ್ನಾ​ಟಕ ವಿಜಯ್‌ ಹಜಾರೆ ಹಾಗೂ ರಣಜಿ ಟ್ರೋಫಿ ಚಾಂಪಿ​ಯನ್‌ಶಿಪ್‌ಗಳನ್ನು ಗೆದ್ದಿತ್ತು. ಇರಾನಿ ಟ್ರೋಫಿಯೂ ರಾಜ್ಯ ತಂಡದ ಪಾಲಾ​ಗಿತ್ತು. ಆದರೆ ಮುಷ್ತಾಕ್‌ ಅಲಿ ಟೂರ್ನಿ​ಯನ್ನು ಗೆದ್ದಿ​ರ​ಲಿಲ್ಲ. 2018-19ರಲ್ಲಿ ಮೊದಲ ಬಾರಿಗೆ ಮುಷ್ತಾಕ್‌ ಅಲಿ ಟಿ20 ಟೂರ್ನಿ​ಯನ್ನು ಗೆದ್ದಾಗ ರಣಜಿ, ವಿಜಯ್‌ ಹಜಾರೆ ಟೂರ್ನಿಯನ್ನು ಜಯಿ​ಸ​ಲಿಲ್ಲ. ಈ ಬಾರಿ ಮೊದ​ಲೆ​ರಡು ಟೂರ್ನಿ​ಗ​ಳನ್ನು ಗೆದ್ದಿ​ರುವ ಕರ್ನಾ​ಟಕ, ರಣಜಿ ಗೆದ್ದು ಹೊಸ ಇತಿ​ಹಾಸ ಬರೆ​ಯುವ ಅವ​ಕಾಶ ಪಡೆ​ದಿದೆ.

ರಣಜಿ ಟ್ರೋಫಿ: ಮೊದಲ ಪಂದ್ಯಕ್ಕೆ ಕರ್ನಾ​ಟಕ ತಂಡ ಪ್ರಕಟ

ಕಳೆದ ಕೆಲ ವರ್ಷಗಳಿಂದ ರಾಜ್ಯ ತಂಡ ಅತ್ಯಂತ ಬಲಿಷ್ಠವಾ​ಗಿದೆ. ಪ್ರತಿ​ಭಾ​ವಂತ ಆಟ​ಗಾ​ರ​ರಿಂದ ಕೂಡಿ​ರುವ ತಂಡ ಸ್ಥಿರ ಪ್ರದ​ರ್ಶನ ತೋರು​ತ್ತಿದ್ದು, ಕಳೆದ 2 ಆವೃತ್ತಿಗಳ ರಣಜಿ ಟೂರ್ನಿ​ಯಲ್ಲಿ ಸೆಮಿ​ಫೈ​ನಲ್‌ ಪ್ರವೇ​ಶಿ​ಸಿತ್ತು. ಈ ಬಾರಿ ಮತ್ತಷ್ಟು ಪ್ರೌಢತೆ ಹಾಗೂ ಅನು​ಭವಿ ಆಟ​ಗಾ​ರ​ರನ್ನು ಹೊಂದಿ​ರುವ 8 ಬಾರಿ ಚಾಂಪಿ​ಯನ್‌ ತಂಡ, ತನ್ನ ಟ್ರೋಫಿಗಳ ಖಾತೆಗೆ ಮತ್ತೊಂದನ್ನು ಸೇರ್ಪಡೆಗೊಳಿ​ಸಲು ಎದುರು ನೋಡು​ತ್ತಿದೆ.

ಬಲಿಷ್ಠ ಬ್ಯಾಟಿಂಗ್‌ ಪಡೆ

ಕರ್ನಾ​ಟ​ಕದ ಬಲವೇ ಬ್ಯಾಟಿಂಗ್‌. ಉತ್ಕೃಷ್ಟ ಲಯ​ದ​ಲ್ಲಿ​ರುವ ಮಯಾ​ಂಕ್‌ ಅಗರ್‌ವಾಲ್‌, ದೇವ​ದತ್‌ ಪಡಿ​ಕ್ಕಲ್‌ ತಂಡದ ಬ್ಯಾಟಿಂಗ್‌ ಆಧಾ​ರವೆನಿ​ಸಿ​ದ್ದಾರೆ. ಕರುಣ್‌ ನಾಯರ್‌, ಆರ್‌.ಸ​ಮರ್ಥ್, ರೋಹನ್‌ ಕದಂ, ಬಿ.ಆರ್‌.ಶ​ರತ್‌ರಂತಹ ಪ್ರತಿ​ಭಾ​ನ್ವಿತ ಬ್ಯಾಟ್ಸ್‌ಮನ್‌ಗಳ ಸೇವೆ ತಂಡಕ್ಕೆ ಲಭ್ಯ​ವಾ​ಗ​ಲಿದೆ. ಡಿ.9ರಿಂದ ಆರಂಭ​ಗೊ​ಳ್ಳ​ಲಿ​ರುವ ಮೊದಲ ಪಂದ್ಯ​ದಲ್ಲಿ ಕರ್ನಾ​ಟಕ, ತಮಿ​ಳು​ನಾಡು ವಿರುದ್ಧ ಸೆಣ​ಸ​ಲಿದೆ. ದಿಂಡಿ​ಗಲ್‌ನಲ್ಲಿ ನಡೆ​ಯ​ಲಿ​ರುವ ಪಂದ್ಯಕ್ಕೆ ಮನೀಶ್‌ ಪಾಂಡೆ, ಕೆ.ಎಲ್‌.ರಾ​ಹುಲ್‌ ಹಾಗೂ ಕಳೆದ ಬಾರಿಯ ಗರಿಷ್ಠ ರನ್‌ ಸರ​ದಾರ ಕೆ.ವಿ.​ಸಿ​ದ್ಧಾರ್ಥ್ ಅಲ​ಭ್ಯ​ರಾ​ಗ​ಲಿ​ದ್ದಾರೆ. ಆದರೂ ಕರ್ನಾ​ಟ​ಕ ಅತ್ಯು​ತ್ತಮ ಬ್ಯಾಟಿಂಗ್‌ ಪಡೆಯನ್ನು ಹೊಂದಿದೆ.

ಕಾಡ​ಲಿದೆ ವಿನಯ್‌ ಅನು​ಪ​ಸ್ಥಿ​ತಿ!

ತಂಡದ ಬೌಲಿಂಗ್‌ ಬೆನ್ನೆ​ಲುಬು ಎನಿ​ಸಿದ್ದ ವಿನಯ್‌ ಕುಮಾರ್‌ ಈ ಋುತು​ವಿ​ನಲ್ಲಿ ಪುದು​ಚೇರಿ ತಂಡಕ್ಕೆ ವಲಸೆ ಹೋಗಿ​ದ್ದಾರೆ. ಹಲವು ವರ್ಷಗಳ ಕಾಲ ತಂಡದ ಬೌಲಿಂಗ್‌ ಪಡೆಯನ್ನು ಮುನ್ನ​ಡೆ​ಸಿದ್ದ ವಿನಯ್‌ ಅನು​ಪ​ಸ್ಥಿತಿ ಬಲ​ವಾಗಿ ಕಾಡ​ಲಿದೆ. ಮೊದಲ ಪಂದ್ಯಕ್ಕೆ ಹಿರಿಯ ವೇಗಿ ಅಭಿ​ಮನ್ಯು ಮಿಥುನ್‌, ಪ್ರಸಿದ್ಧ್ ಕೃಷ್ಣ ಅಲ​ಭ್ಯ​ರಾ​ಗ​ಲಿ​ದ್ದಾರೆ. ಹೀಗಾಗಿ ವೇಗದ ಬೌಲಿಂಗ್‌ ಪಡೆಯನ್ನು ಮುನ್ನ​ಡೆ​ಸುವ ಹೊಣೆ ರೋನಿತ್‌ ಮೋರೆ ಹೆಗ​ಲಿದೆ ಬೀಳ​ಲಿದೆ. ಯುವ ವೇಗಿ ದೇವಯ್ಯ ಮೇಲೆ ನಿರೀಕ್ಷೆ ಇರಿ​ಸಲಾ​ಗಿದೆ. ಸ್ಪಿನ್ನರ್‌ಗಳಾದ ಶ್ರೇಯಸ್‌ ಗೋಪಾಲ್‌, ಜೆ.ಸು​ಚಿತ್‌, ಕೆ.ಗೌ​ತಮ್‌ ದೊಡ್ಡ ಪಾತ್ರ ನಿರ್ವ​ಹಿ​ಸ​ಬೇ​ಕಿದೆ.

ಪ್ರಮುಖ ಆಕ​ರ್ಷಣೆ

* ದೇವ​ದತ್‌ ಪಡಿ​ಕ್ಕಲ್‌: ವಿಜಯ್‌ ಹಜಾರೆ ಹಾಗೂ ಮುಷ್ತಾಕ್‌ ಅಲಿ ಟಿ20 ಟೂರ್ನಿ​ಗ​ಳಲ್ಲಿ ಗರಿಷ್ಠ ರನ್‌ ಕಲೆಹಾಕಿದ ದೇವ​ದತ್‌ ಪಡಿಕ್ಕಲ್‌, ರಣ​ಜಿ ಟ್ರೋಫಿ​ಯಲ್ಲೂ ರನ್‌ ಹೊಳೆ ಹರಿ​ಸಲು ಕಾಯು​ತ್ತಿ​ದ್ದಾರೆ. ಇವರ ಆಟದ ಮೇಲೆ ಬಿಸಿ​ಸಿಐ ಆಯ್ಕೆ ಸಮಿತಿ ಸಹ ಕಣ್ಣಿ​ಟ್ಟಿದೆ. ಪಡಿ​ಕ್ಕಲ್‌ ರಣಜಿ ಟ್ರೋಫಿ​ಯಲ್ಲಿ ಮಿಂಚಿ, ಐಪಿಎಲ್‌ನಲ್ಲೂ ಅಬ್ಬ​ರಿ​ಸಿ​ದರೆ ಮುಂದಿನ ವರ್ಷದ ಕೊನೆಯೊಳಗೆ ಭಾರತ ತಂಡ​ದಲ್ಲಿ ಸ್ಥಾನ ಗಿಟ್ಟಿ​ಸಿ​ದರೆ ಅಚ್ಚ​ರಿ​ಯಿಲ್ಲ.

* ಮಯಾಂಕ್‌ ಅಗರ್‌ವಾಲ್‌: ದೇಸಿ ಕ್ರಿಕೆಟ್‌ನ ಸೂಪರ್‌ ಸ್ಟಾರ್‌ ಎನಿ​ಸಿ​ಕೊಂಡಿದ್ದ ಮಯಾಂಕ್‌, ಭಾರತ ಟೆಸ್ಟ್‌ ತಂಡ​ದಲ್ಲಿ ಸ್ಥಾನಗಳಿ​ಸಿ​ದರು. ಆಡಲು ಅವ​ಕಾಶ ಸಿಕ್ಕ ಕೂಡಲೇ ಅಬ್ಬ​ರಿ​ಸಿದ ಮಯಾಂಕ್‌, 8 ಟೆಸ್ಟ್‌ಗಳಲ್ಲಿ 800ಕ್ಕೂ ಹೆಚ್ಚು ರನ್‌ ಚಚ್ಚಿ ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆ​ದರು. ಮಯಾಂಕ್‌ ಉಪ​ಸ್ಥಿತಿ ಸಹ​ಜ​ವಾ​ಗಿಯೇ ಎದು​ರಾ​ಳಿ​ಗ​ಳಲ್ಲಿ ನಡುಕ ಹುಟ್ಟಿ​ಸ​ಲಿದೆ.

ಕರ್ನಾ​ಟ​ಕದ ವೇಳಾ​ಪಟ್ಟಿ

ದಿನಾಂಕ ಎ​ದು​ರಾ​ಳಿ

ಡಿ.9-12 ತಮಿ​ಳು​ನಾ​ಡು

ಡಿ.17-20 ಉತ್ತರ ಪ್ರದೇ​ಶ

ಡಿ.25-28 ಹಿಮಾ​ಚಲ ಪ್ರದೇ​ಶ

ಜ.3-6 ಮುಂಬೈ

ಜ.11-14 ಸೌರಾಷ್ಟ್ರ

ಜ.27-30 ರೈಲ್ವೇಸ್‌

ಫೆ.4-7 ಮಧ್ಯ​ಪ್ರ​ದೇ​ಶ

ಫೆ.12-15 ಬರೋ​ಡಾ

Follow Us:
Download App:
  • android
  • ios