ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚು| ರೋಗಿಗಳ ಮನೆ ಬಾಗಿಲಿಗೆ ಮದ್ಯ ಪೂರೈಕೆಗೆ ಸರ್ಕಾರ ನಿರ್ಧಾರ

ಶಿಲ್ಲಾಂಗ್‌(ಏ.01): ಲಾಕ್‌ಡೌನ್‌ನಿಂದಾಗಿ ಮದ್ಯ ಸಿಗದೇ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ, ಮೇಘಾಲಯ ಸರ್ಕಾರ ಮನೆ ಬಾಗಿಲಿಗೇ ಮಧ್ಯ ಪೂರೈಕೆಗೆ ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

21ವರ್ಷಕ್ಕಿಂತ ಮೇಲ್ಪಟ್ಟ, ವೈದ್ಯಕೀಯ ಕಾರಣಗಳಿದ್ದವರಿಗೆ ಮಾತ್ರ ಈ ಸೌಲಭ್ಯ ಇದ್ದು, ವೈದ್ಯರು ಬರೆದು ಕೊಟ್ಟಿರುವ ಚೀಟಿ ಹೋಂದಿರುವುದು ಕಡ್ಡಾಯ.

ಲಾಕ್‌ಡೌನ್ ಎಫೆಕ್ಸ್: ರಾಜ್ಯದಲ್ಲಿ ಮದ್ಯ ಸಿಗದೆ 17 ಮಂದಿ ಆತ್ಮಹತ್ಯೆ!

ಇದಕ್ಕಾಗಿಯೇ ತೆರೆಯಲಾಗಿರುವ ಆನ್‌ಲೈನ್‌ ಸೈಟ್‌ನಲ್ಲಿ ವೈದ್ಯಕೀಯ ಚೀಟಿಯನ್ನು ಅಪ್ಲೋಡ್‌ ಮಾಡಬೇಕು. ಬಳಿಕ ಆಯಾ ಜಿಲ್ಲೆಯ ಉಗ್ರಾಣದಿಂದಲೇ ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.