Asianet Suvarna News Asianet Suvarna News

ಕೊರೋನಾ ಲಾಕ್‌ಡೌನ್ ನಡುವೆಯೇ ಕಿಕ್ಕಿರಿದು ಸೇರಿದ ಜನಸ್ತೋಮ...!

ಇಡೀ ಭಾರತ ಲಾಕ್‌ಡೌನ್ ಆದ್ರೂ ಕೊರೋನಾ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ.  ಭಾರತವೂ ಸಹ ಎಚ್ಚರ ತಪ್ಪಿದ್ರೆ ಗಂಡಾಂತರ ತಪ್ಪಿದ್ದಲ್ಲ ಎಂದು ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಎಚ್ಚರಿಸಿದೆ. ಆದ್ರೂ ಬಸ್‌ ನಿಲ್ದಾಣವೊಂದರಲ್ಲಿ ಜನ ಸಾಗರವೇ ಸೇರಿದೆ.

Lockdown Migrant workers in very large numbers at Delhi Anand Vihar bus terminal During Lockdown
Author
Bengaluru, First Published Mar 28, 2020, 9:46 PM IST

ಬೆಂಗಳೂರು, (ಮಾ.28): ಸಾಮೂಹಿಕ ಅಂತರ ಕಾಯ್ದುಕೊಳ್ಳದಿದ್ದರೆ ಡೇಂಜರ್ ಜೋನ್‌ಗೆ ಭಾರತ ಹೋಗಲಿದ್ದು, ಅಂತರ ಕಾಯ್ದುಕೊಳ್ಳದಿದ್ದರೆ 20 ಕೋಟಿ ಜನರಿಗೆ ಕೊರೋನಾ ವೈರಸ್ ಹರಡುವ ಅಪಾಯವಿದೆ. ಕೇವಲ 60 ದಿನಗಳಲ್ಲಿ 20 ಕೋಟಿ ಜನರಿಗೆ ಸೋಂಕು ಹರಡೋ ಸಾಧ್ಯತೆಯಿದೆ. 

"

ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ರೆ ಭಾರತ ಭಾರೀ ಗಂಡಾಂತರಕ್ಕೆ ಸಿಲುಕಲಿದ್ದು, ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾದ್ರೆ ಮಾತ್ರ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರಲಿದೆ ಎಂದು ಅಮೆರಿಕದ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಎಚ್ಚರಿಕೆ ಕೊಟ್ಟಿದೆ.

ಕರ್ನಾಟಕದಲ್ಲಿ ಶನಿವಾರ ಒಂದೇ ದಿನ 12 ಕೊರೋನಾ: ಇಲ್ಲಿದೆ ಜಿಲ್ಲಾವಾರು ಮಾಹಿತಿ..!

ಆದಾಗ್ಯೂ ರಾಷ್ಟ್ರ ರಾಜಧಾನಿ ನವದೆಹಲಿಯ ಆನಂದ್ ವಿಹಾರ್ ಬಸ್ ಟರ್ಮಿನಲ್ ಬಳಿ ಇದ್ದಕ್ಕಿದ್ದಂತೆಯೇ ಜನಸಾಗರವೇ ಹರಿದುಬಂದಿದೆ. ಉತ್ಸವ, ಜಾತ್ರೆಯ ರೀತಿಯಲ್ಲಿ ಜನಸ್ತೋಮವೇ ನೆರೆದಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರು ದೆಹಲಿಗೆ ಕೆಲಸಕ್ಕೆಂದು ಅರಸಿ ಬೇರೆ-ಬೇರೆ ಊರುಗಳಿಂದ ಬಂದಿದ್ದರು. ಇದೀಗ ಅವರು ತವರಿಗೆ ವಾಪಸ್ ಆಗುತ್ತಿದ್ದು, ಪೊಲೀಸ್ ಹದ್ದಿನ ಕಣ್ಣಿನ ನಡುವೆಯೇ ಬಸ್ ಟರ್ಮಿನಲ್‌ನಲ್ಲಿ ಕಿಕ್ಕಿರಿದು ಸೇರಿದ್ದಾರೆ.

ಈ ಸಾಗರವನ್ನು  ಕಂಡು ನೆಟ್ಟಿಗರು ಹೌಹಾರಿದ್ದು, ಇವರಲ್ಲಿ ಒಬ್ಬರಿಗೆ ಸೋಂಕಿತರು ಇದ್ದರೆ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಖಡಕ್ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios