ನರೇಶ್ ವೇಸ್ಟ್ ಫೆಲೋ, ಪವಿತ್ರಾ ಲೋಕೇಶ್ಗೆ ನಾಚಿಕೆಯಿಲ್ಲ: ನಟಿ ಶ್ರೀ ರೆಡ್ಡಿ ಗರಂ
ರಮ್ಯಾ ರಘುಪತಿ- ಪವಿತ್ರಾ ಲೋಕೇಶ್ ಫೈಟ್ ನೋಡಲಾರದೆ ಎಂಟ್ರಿ ಕೊಟ್ಟ ಶ್ರೀ ರೆಡ್ಡಿ. ಪವನ್ ಕಲ್ಯಾಣ್ರನ್ನು ಹೊಲಿಸಿದ್ದು ಯಾಕೆ?
ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಸ್ನೇಹವನ್ನು ಪತ್ನಿ ರಮ್ಯಾ ರಘುಪತಿ ಪ್ರಶ್ನೆ ಮಾಡುವ ಮೂಲಕ ಮಾಧ್ಯಮಗಳಲ್ಲಿ ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ನರೇಶ್ ನನ್ನ ಜೊತೆ ಕೆಲಸ ಮಾಡಿರುವ ಸಹ ಕಲಾವಿದ ಎಂದು ಹೇಳಿರುವ ಪವಿತ್ರಾ ಈಗ ಒಂದೇ ರೂಮ್ನಲ್ಲಿ ನರೇಶ್ ಜೊತೆ ಕಾಣಿಸಿಕೊಂಡು ಕಾಂಟ್ರವರ್ಸಿಗೆ ಗುರಿಯಾಗಿದ್ದಾರೆ. ಐಶ್ವರ್ಯ ರೈ ಧರಿಸಿರುವ ವಜ್ರದ ನೆಕ್ಲೇಸ್ ಡಿಸೈನ್ ನನ್ನ ಬಳಿ ಇದ್ದರೆ ಅವರಿಂದ ಪಡೆದುಕೊಂಡಿರುವೆ ಅಂತಲ್ಲ ಎಂದು ರಮ್ಯಾ ಪ್ರಶ್ನೆಗಳಿಗೆ ಉಲ್ಟಾ ಉತ್ತರ ಕೊಟ್ಟಿದ್ದರು.
ಕಳೆದು ಒಂದೆರಡು ವಾರಗಳಿಂದ ನರೇಶ್, ರಮ್ಯಾ ಮತ್ತು ಪವಿತ್ರಾ ಕಾಂಟ್ರವರ್ಸಿ ನೋಡಿ ಜನರಿಗೆ ಸಾಕಾಗಿದೆ. ಲೀಗಲ್ ಆಗಿ ಮಾಡಬೇಕಿರುವ ಕೆಲಸವನ್ನು ಮಾಧ್ಯಮಗಳ ಮೂಲಕ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಕೊಂಕು ಮಾತನಾಡುತ್ತಿದ್ದಾರೆ.
ತೆಲುಗು ಚಿತ್ರರಗದಲ್ಲಿ ಆರ್ಜಿವಿ ಹೇಗೆ ಕಾಂಟ್ರವರ್ಸಿ ಡೈರೆಕ್ಟರ್ ಹಾಗೆನೇ ನಟಿ ಶ್ರೀ ರೆಡ್ಡಿ ಕೂಡ ಕಾಂಟ್ರವರ್ಸಿ ಕ್ವೀನ್. ಪ್ರತಿಯೊಬ್ಬರ ಪರ್ಸನಲ್ ಲೈಫ್ ಬಗ್ಗೆ ಟಾಂಗ್ ಕೊಡುತ್ತಾ ಟ್ರೋಲ್ ಮಾಡುವ ನಟಿ ಇದೀಗ ನರೇಶ್, ಪವಿತ್ರಾ ಮತ್ತು ಪವನ್ ಕಲ್ಯಾಣ್ ಬಗ್ಗೆ ಮಾತನಾಡಿದ್ದಾರೆ. 'ನರೇಶ್ ಒಬ್ಬ ವೇಸ್ಟ್ ಫೆಲೋ. ನಮ್ಮ ಸಂಘದಿಂದ ನನ್ನನ್ನು ಹೊರ ಹಾಕಿದ್ದಾನೆ. ಅವನಿಂದಾಗಿ ಇಡೀ ಸಂಘವು ಅಶುದ್ಧವಾಯಿತ್ತು ಅದಿಕ್ಕೆ ಅಗ ನಾನು ಆಸಿಡ್ನಿಂದ ತೊಳೆಯುವುದಕ್ಕೆ ಹೇಳಿದ್ದೆ. ಆದರೆ ಎನು ಮಾಡುವುದು ಇದೆಲ್ಲಾ ಆತನ ಕರ್ಮದ ಫಲ. ತಡವಾದರೂ ಪರವಾಗಿಲ್ಲ ಈ ಮನುಷ್ಯನಿಗೆ ಕರ್ಮ ಗೊತ್ತಾಗುತ್ತೆ. ಕಾಸ್ಟಿಂಗ್ ಕೌಚ್ ಬಗ್ಗೆ ನಾನು ಧ್ವನಿ ಎತ್ತಿದ್ದಾಗ ಆಧಾರವಿಲ್ಲದೆ ನನ್ನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಪವಿತ್ರಾ ಲೋಕೇಶ್ ಕೂಡ ಆಧಾರವಿಲ್ಲದೆ ಕಾಮೆಂಟ್ ಮಾಡುತ್ತಾರೆ ಆದರೆ ಈಗ ಸಮಸ್ಯೆ ಅವಳಿಗೆ ಬಂದಿದೆ ಈಗ ಯಾರು ಸಹಾಯ ಮಾಡುತ್ತಾರೆ ಎಂದು ನೋಡಬೇಕು' ಎಂದು ಶ್ರೀ ರೆಡ್ಡಿ ಮಾತನಾಡಿದ್ದಾರೆ.
ನರೇಶ್ ಮತ್ತು ಪವಿತ್ರಾ ಲೋಕೇಶ್ ಬಗ್ಗೆ ಮಾತನಾಡಿರುವ ಶ್ರೀ ರೆಡ್ಡಿ ಪವನ್ ಕಲ್ಯಾಣ್ರನ್ನು ಟೀಕಿಸಿದ್ದಾರೆ. 'ಮತ್ತೊಂದು ವಿಚಾರ ಹೇಳಬೇಕು ನನ್ನನ್ನು ಸಂಕಷ್ಟಕ್ಕೆ ಸಿಲುಕಿಸಿದವರ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಅಟರ್ ಫ್ಲಾಪ್ ಆಗುತ್ತಿದೆ' ಎಂದು ಹೇಳಿದ್ದಾರೆ.
ನರೇಶ್ ಗೆಳೆಯನಾ, ಜೊತೆಗಾರನಾ? ಪವಿತ್ರಾ ಲೋಕೇಶ್ ಉತ್ತರ
ಕ್ಷಮೆ ಕೇಳಿದ ನಟಿ ಶ್ರೀ ರೆಡ್ಡಿ:
ಮೀಟೂ ಅಭಿಯಾನ ವೇಳೆ ಪವನ್ ಕಲ್ಯಾಣ್ ವಿರುದ್ಧ ಶ್ರೀ ರೆಡ್ಡಿ ತಿರುಗಿಬಿದ್ದಿದ್ದರು. ಆಗ ಪವನ್ಗೆ ಮಿಡಲ್ ಫಿಂಗರ್ (Middle Finger) ತೋರಿಸಿ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದ್ದರು. ಅಲ್ಲದೇ ಪವನ್ ಅವರ ತಾಯಿಯನ್ನು ಎಳೆದು ತಂದೆ ಕೆಟ್ಟದಾಗಿ ಮಾತನಾಡಿದ್ದರು. ಈ ಘಟನೆ ನಡೆದು ವರ್ಷಗಳೇ ಕಳೆಯುತ್ತಿದೆ. ಈಗ ಶ್ರೀ ರೆಡ್ಡಿ ಕ್ಷಮೆ ಕೇಳಿದ್ದಾರೆ.
ದೀಪಿಕಾ ಪಡುಕೋಣೆನಾ, ಹೇಮಮಾಲಿನಿನಾ?, ರಮ್ಯಾ ವಿರುದ್ಧ ಪವಿತ್ರಾ ಲೋಕೇಶ್ ಕಿಡಿ
ಮೀಟೂ ಸಮಯದಲ್ಲಿ ಸ್ರೀರೆಡ್ಡಿ ಅರೆಬೆತ್ತಲಾಗಿ (Half Naked) ಆಗಿ ಬಂದು ತೆಲುಗು ಚಿತ್ರರಂಗದ ನಿರ್ಮಾಪಕ ಸುರೇಶ್ ಬಾಬು (Suresh Babu) ಪುತ್ರ ಅಭಿರಾಮ್ ದಗ್ಗುಬಾಟಿ (Abhiram Daggubati) ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಾರೆಂಬ ಆರೋಪ ಮಾಡಿದ್ದರು. ಈ ವೇಳೆ ಪವನ್ ಕಲ್ಯಾಣ್ಗೆ ಸಪೋರ್ಟ್ ಮಾಡಲು ಶ್ರೀರೆಡ್ಡಿ ಸಾಕಷ್ಟು ಮನವಿ ಮಾಡಿಕೊಂಡಿದ್ದರು. ಆದರೆ ಪವನ್ ಪ್ರತಿಕ್ರಿಯೆ ನೀಡಿರಲಿಲ್ಲ. ಈ ವಿಚಾರಕ್ಕೆ ಕೋಪಗೊಂಡ ಶ್ರೀರೆಡ್ಡಿ ಪವನ್ ಮತ್ತು ಅವರ ತಾಯಿಯನ್ನು ಹಿಗ್ಗಾಮುಗ್ಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಶ್ರೀ ರೆಡ್ಡಿ ಮಾತುಗಳನ್ನು ಕೇಳಿ ಅಭಿಮಾನಿಗಳು ಮತ್ತು ಪವನ್ ಫ್ಯಾಮಿಲಿ ಮಾತ್ರವಲ್ಲದೇ ಇಡೀ ಚಿತ್ರರಂಗವೇ ಬೇಸರ ಮಾಡಿಕೊಂಡಿತ್ತು.
ಅಂದು ಆಡಿದ ಮಾತು ಈಗಲೂ ಮನಸ್ಸಿಗೆ ನೋವು ಮಾಡುತ್ತಿದೆ, ಎಂದು ಸೋಷಿಯಲ್ ಮೀಡಿಯಾದಲ್ಲಿ (Social Media) ವಿಡಿಯೋ ಹಂಚಿಕೊಂಡು, 'ಚಿರಂಜೀವಿ (Mega Star Chiranjeevi) ಟಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್. ನಾನು ಅವರ ತಾಯಿ ಅಂಜನಾ ದೇವಿ (Anjana Devi) ಬಗ್ಗೆ ಮಾತನಾಡಬಾರದಿತ್ತು ಅಲ್ಲದೇ ಅಂತಹ ಅವಾಚ್ಯ ಶಬ್ದಗಳನ್ನು ಬಳಸಬಾರದಿತ್ತು. ನಾನು ಅಂದು ಆಡಿದ ಮಾಡಿದ ಮಾತಿಗೆ ಒಂದು ಅಂಜನಾ ದೇವಿಯವರಿಗೆ ಕ್ಷಮೆ ಕೇಳುತ್ತೇನೆ,' ಎಂದು ಮಾತನಾಡಿದ್ದಾರೆ.