ಮುಂಬೈ ಕ್ರೂಸ್ ಡ್ರಗ್ಸ್ ಕೇಸಲ್ಲಿ ಬಾಲಿವುಡ್ ಸ್ಟಾರ್ ಶಾರೂಖ್ ಮಗನ ಆರ್ಯನ್ ಖಾನ್ ಜೊತೆ ಜೈಲು ಸೇರಿದ ಅರ್ಬಾಜ್ ಖಾನ್ ವಿಡಿಯೋ ವೈರಲ್ ಆಗಿದೆ. ಎನ್‌ಸಿಬಿ ಆಫೀಸ್‌ಗೆ ತಂದೆ ಜೊತೆ ಬಂದ ಅರ್ಬಾಝ್ ಸ್ಟಾಪಿಟ್ ಡ್ಯಾಡ್ ಎಂದ್ದಿದ್ದು ಪಾಪ್ಪರಾಜಿಗಳು ನಗು ತಡೆಯಲಾಗದೆ ವಿಡಿಯೋದಲ್ಲಿ ಜೋರಾಗಿ ನಕ್ಕಿದ್ದಾರೆ.

ಜನರಿಗೆ ಕ್ಯಾಮೆರಾ ಅಂದರೆ ಲವ್. ಒಂಚೂರು ಕ್ಯಾಮೆರಾ ಫೋಕಸ್ ಆದರೆ ಅದು ಸಾವಿನ ಮನೆ ಇರಲಿ, ಖುಷಿಯ ಸ್ಥಳವಿರಲಿ, ಅಪಘಾತವಿರಲಿ ಏನೇ ಇರಲಿ ನಾ ಮುಂದು ತಾ ಮುಂದು ಎಂದು ಕ್ಯಾಮೆರಾದತ್ತ ಬರುತ್ತಾರೆ. ಇದು ಬಡವ, ಶ್ರೀಮಂತನೆನ್ನದೆ ಎಲ್ಲರಿಗೂ ಇರುವ ಸಾಮಾನ್ಯ ಸ್ವಭಾವ. ಇತ್ತೀಚೆಗೆ ಡ್ರಗ್ಸ್ ಕೇಸಲ್ಲಿ ಅರೆಸ್ಟ್ ಆದ ಅರ್ಬಾಜ್ ಮರ್ಚೆಂಟ್ (Arbaaz Merchant)ಅಪ್ಪನನ್ನು ಕರೆದುಕೊಂಡು ಎನ್‌ಸಿಬಿ ಆಫೀಸ್‌ಗೆ ಬಂದು ಹೇಗೆ ಅವಸ್ಥೆ ಪಟ್ಟಿದ್ದಾರೆ ನೋಡಿ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಅರ್ಬಾಜ್‌ನ ತಂದೆ ಅಸ್ಲಾಮ್ ಮರ್ಚೆಂಟ್ ಅವರು ಎನ್‌ಸಿಬಿ(NCB) ಕಚೇರಿಯಿಂದ ನಿರ್ಗಮಿಸುವಾಗ ಪಾಪರಾಜಿಗಳಿಗೆ ಪೋಸ್ ನೀಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅಸ್ಲಾಮ್ ಮಗ ಅರ್ಬಾಜ್‌ನನ್ನು ಹತ್ತಿರ ಹಿಡಿದುಕೊಂಡು ಕ್ಯಾಮರಾ ನೋಡಿ ಮುಗುಳ್ನಗುತ್ತಾಗ ಪೋಸ್ ನೀಡಿದ್ದಾರೆ. ಅರ್ಬಾಜ್ ಮುಖಮುಚ್ಚಿಕೊಂಡು, ಡ್ಯಾಡ್ ಸ್ಟಾಪಿಟ್ ಎಂದು ದೂರ ನಡೆದಿದ್ದಾರೆ. ನಂತರ ಫೋಟೋಗ್ರಫರ್ಸ್‌ಗಳ ಮಧ್ಯೆ ದಾರಿ ಮಾಡಿಕೊಂಡು ಬಂದು ಕಾರು ಹತ್ತಿದ್ದಾರೆ.

Malik Vs Wankhede| ಸಮೀರ್‌ ವಾಂಖೆಡೆಗೆ ಶಾಕ್: ನವಾಬ್ ಮಲಿಕ್ ವಿರುದ್ಧದ ಕೇಸ್‌ ವಜಾ!

ಮತ್ತೊಂದು ವೀಡಿಯೊದಲ್ಲಿ ಆರ್ಯನ್ ಪಾಪರಾಜಿಗಳಿಗೆ ಯಾವುದೇ ಗಮನ ಕೊಡದೆ ನೇರವಾಗಿ NCB ಕಚೇರಿಯೊಳಗೆ ನಡೆಯುವುದನ್ನು ತೋರಿಸಿದೆ. ಅಕ್ಟೋಬರ್ 3 ರಂದು, ಆರ್ಯನ್ ಮತ್ತು ಅರ್ಬಾಜ್ ಅವರನ್ನು ಇತರ ಆರು ಮಂದಿಯೊಂದಿಗೆ ಬಂಧಿಸಲಾಯಿತು.

View post on Instagram

ಗೋವಾಕ್ಕೆ ಹೋಗುವ ಕ್ರೂಸ್ ಹಡಗಿನಲ್ಲಿ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದ ನಂತರ ಈ ಬಂಧನ ನಡೆದಿದೆ. ಆರ್ಥರ್ ರೋಡ್ ಜೈಲಿನಲ್ಲಿ ಮೂರು ವಾರಗಳಿಗೂ ಹೆಚ್ಚು ಕಾಲ ಕಳೆದ ನಂತರ, ಬಾಂಬೆ ಹೈಕೋರ್ಟ್‌ನಿಂದ ತಲಾ 1 ಲಕ್ಷ ವೈಯಕ್ತಿಕ ಬಾಂಡ್‌ನಲ್ಲಿ ಅವರಿಗೆ ಜಾಮೀನು ನೀಡಲಾಯಿತು. ಅವರ ಜಾಮೀನು ಆದೇಶದ ಷರತ್ತುಗಳ ಪ್ರಕಾರ, ಅವರು ಪ್ರತಿ ವಾರ ಎನ್‌ಸಿಬಿ ಮುಂದೆ ಹಾಜರಾಗುತ್ತಿದ್ದಾರೆ.

ಆರ್ಯನ್ (Aryan khan)ಅವರ ವಿವರವಾದ ಜಾಮೀನು ಆದೇಶವು ಈ ತಿಂಗಳ ಆರಂಭದಲ್ಲಿ ಲಭ್ಯವಾಯಿತು. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿಯಲ್ಲಿ ಅಪರಾಧ ಎಸಗಲು ಅರ್ಬಾಜ್, ಮುನ್‌ಮುನ್ ಧಮೇಚಾ ಮತ್ತು ಇತರರೊಂದಿಗೆ ಪಿತೂರಿ ನಡೆಸಿದ್ದಾರೆ ಎಂದು ಸೂಚಿಸಲು ಅವರ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದು ಅದರಲ್ಲಿ ಹೇಳಲಾಗಿದೆ.

View post on Instagram

ಈ ಪ್ರಕರಣದ ಬಗ್ಗೆ ಶಾರುಖ್ ಅಥವಾ ಅವರ ಪತ್ನಿ ಗೌರಿ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆರ್ಯನ್ ಅವರ ವಿವರವಾದ ಜಾಮೀನು ಆದೇಶವನ್ನು ಬಿಡುಗಡೆ ಮಾಡಿದ ನಂತರ, ಸಂಜಯ್ ಗುಪ್ತಾ ಅವರು ಟ್ವೀಟ್ ಮಾಡಿ, ಆದ್ದರಿಂದ ಆರ್ಯನ್ ಖಾನ್ ನಿರಪರಾಧಿ ಎಂದು ಬಾಂಬೆ ಹೈಕೋರ್ಟ್ ಹೇಳುತ್ತದೆ. ಅವನು ಅನುಭವಿಸಿದ್ದನ್ನು ಯಾರು ಸರಿದೂಗಿಸುತ್ತಾರೆ ? ಅವನ ಕುಟುಂಬವು ನೋವು ಅನುಭವಿಸಿತು ಎಂದಿದ್ದಾರೆ.