Kickout stars: ಸಿನಿಮಾದಿಂದ ರಾತ್ರೋರಾತ್ರಿ ಹೊರ ಹಾಕಲ್ಪಟ್ಟ ಬಾಲಿವುಡ್ ತಾರೆಯರು!
ಕೆಲವು ಬಾಲಿವುಡ್ ನಟ-ನಟಿಯರನ್ನು ಹೇಳದೇ ಕೇಳದೇ ರಾತ್ರೋರಾತ್ರಿ ಚಿತ್ರದಿಂದ ಹೊರಕ್ಕೆ ಇಡಲಾಗಿತ್ತು. ಆ ತಾರೆಗಳಾರು?
ಕೆಲವು ನಟ-ನಟಿಯರಿಗೆ ಕೆಲವೊಂದು ಸೂಪರ್ಹಿಟ್ ಚಿತ್ರಗಳು ತಾವೇಗಿಯೇ ಅರಸಿಕೊಂಡು ಬಂದರೆ, ಇನ್ನು ಹಲವರಿಗೆ ಟ್ಯಾಲೆಂಟ್ (Talent) ಇದ್ದರೂ ಅವಕಾಶಗಳೇ ಸಿಗುವುದಿಲ್ಲ. ಇನ್ನು ಕೆಲವು ತಾರೆಯರು ಯಾವ್ಯಾವುದೋ ಕಾರಣಗಳಿಗೆ ಆಫರ್ ರಿಜೆಕ್ಟ್ ಮಾಡಿದರೆ, ಇನ್ನು ಕೆಲವರಿಗೆ ಬಂದ ಆಫರ್ಗಳೂ ಕೈಬಿಟ್ಟು ಹೋಗುವುದು ಇದೆ. ಅರ್ಥಾತ್, ನಟ ನಟಿಯರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡ ಮೇಲೂ ಏಕಾಏಕಿ ಅವರನ್ನು ಆ ಚಿತ್ರಕ್ಕೆ ಬೇಡ ಎನ್ನುವುದು ನಡೆಯುತ್ತದೆ. ಕೆಲವು ಸಲ, ಇದಕ್ಕೆ ಚಿತ್ರ ನಿರ್ಮಾಪಕರು ಸೂಕ್ತ ಕಾರಣ ನೀಡಿದರೆ, ಎಷ್ಟೋ ಸಂದರ್ಭಗಳಲ್ಲಿ ರಾತ್ರೋರಾತ್ರಿ ಚಿತ್ರದಿಂದ ಹೊರಕ್ಕೆ ಹಾಕಿದ್ದೂ (Kickout) ಇದೆ. ಅಷ್ಟಕ್ಕೂ ಇಂಥ ನಟ ನಟಿಯರ ದೊಡ್ಡ ಬಳಗವೇ ಇದ್ದು, ಸೂಪರ್ಸ್ಟಾರ್ಗಳು ಎನಿಸಿಕೊಂಡವರೂ ಈ ಲಿಸ್ಟ್ನಲ್ಲಿ ಇದ್ದಾರೆ. ಅವರ ಪರಿಚಯ ಇಲ್ಲಿ ಮಾಡಿಕೊಡಲಾಗಿದೆ.
ಅರ್ಜುನ್ ಕಪೂರ್ (Arjun Kapoor), ಗೋವಿಂದ
ಬಾಲಿವುಡ್ನ ಖ್ಯಾತ ನಟ ಅರ್ಜುನ್ ಕಪೂರ್ ಕಬೀರ್ ಸಿಂಗ್ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ನಂತರ ನಿರ್ಮಾಪಕರು ಅರ್ಜುನ್ ಕಪೂರ್ ಅವರನ್ನು ಚಿತ್ರದಿಂದ ಹೇಳದೇ ಕೇಳದೆ ಕೈಬಿಟ್ಟರು. ಗೋವಿಂದ (Govinda) ಈಗ ಚಿತ್ರರಂಗದಿಂದ ದೂರ ಹೋಗಿರಬಹುದು, ಆದರೆ ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಇವರದ್ದೇ ಹವಾ. ಆದರೆ ವಿಚಿತ್ರ ಎಂದರೆ 'ಜಗ್ಗಾ ಜಾಸೂಸ್' ಚಿತ್ರಕ್ಕೆ ಇವರಿಗೆ ಆಫರ್ ಕೊಟ್ಟು ರಿಜೆಕ್ಟ್ ಮಾಡಲಾಗಿತ್ತು. ಅದರ ಬಗ್ಗೆ ಸಾಕಷ್ಟು ವಿವಾದಗಳು ಎದ್ದಿದ್ದವು. ಇದಕ್ಕೆ ರಣಬೀರ್ ಕಪೂರ್ ಕೂಡ ಕ್ಷಮೆ ಕೇಳಿದ್ದರು.
Valentines Day: ಬೆಡ್ರೂಮಲ್ಲಿ ತಬ್ಬಿ ಮುದ್ದಾಡಿದ ವೀಡಿಯೋ ಪೋಸ್ಟ್ ಮಾಡಿದ ರಶ್ಮಿಕಾ ಮಂದಣ್ಣ!
ಆಲಿಯಾ ಭಟ್ (Alia Bhatt), ದೀಪಿಕಾ ಪಡುಕೋಣೆ
ಇದೀಗ ಬಾಲಿವುಡ್ನ ಕ್ವೀನ್ ಎನಿಸಿಕೊಂಡಿರುವ ನಟಿ ಆಲಿಯಾ ಭಟ್ 'ರಾಬ್ತಾ' ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ವರದಿಗಳ ಪ್ರಕಾರ ನಿರ್ಮಾಪಕರು ಅವರನ್ನು ಚಿತ್ರದಿಂದ ಕೈಬಿಟ್ಟಿದ್ದಾರೆ. ಡೇಟ್ಸ್ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಸರಿಯಾದ ಕಾರಣ ಗೊತ್ತಿಲ್ಲ. ಪಠಾಣ್ ಚಿತ್ರದಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿದ ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಹೆಸರನ್ನು ಈ ಪಟ್ಟಿಯಲ್ಲಿ ನೋಡಿದರೆ ನೀವು ಆಶ್ಚರ್ಯ ಪಡಬೇಕು. ಮಾಧ್ಯಮ ವರದಿಗಳ ಪ್ರಕಾರ, ಬೈಜು ಬಾವ್ರಾ ಚಿತ್ರದಿಂದ ನಟಿಯನ್ನು ಹೊರಹಾಕಲಾಯಿತು.
ಪ್ರಿಯಾಂಕಾ ಚೋಪ್ರಾ (Priyanka Chopra), ತಾಪ್ಸಿ ಪನ್ನು, ಸಾರಾ ಅಲಿ ಖಾನ್
ಈ ಪಟ್ಟಿಯಲ್ಲಿ ಬಾಲಿವುಡ್ನಿಂದ ಹಾಲಿವುಡ್ಗೆ ಹೆಸರು ಗಳಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಹೆಸರೂ ಸೇರಿದೆ. ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ ಅವರಿಗೆ ಮಾಹಿತಿ ನೀಡದೆ ಎರಡು ಚಿತ್ರಗಳಿಂದ ಕೈಬಿಡಲಾಗಿದೆ. ಈ ವಿವಾದ ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಚಿತ್ರಗಳ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಬಾಲಿವುಡ್ ಖ್ಯಾತ ನಟಿ ತಾಪ್ಸಿ ಪನ್ನು (Tapsi Pannu) ಮೊದಲು 'ಪತಿ ಪತ್ನಿ ಔರ್ ವೋ' ಚಿತ್ರಕ್ಕಾಗಿ ನಟಿಸಬೇಕಿತ್ತು. ಆದರೆ ದಿಢೀರ್ ಎಂದು ಈ ಚಿತ್ರದಲ್ಲಿ ಭೂಮಿ ಪೆಡ್ನೇಕರ್ ಕಾಣಿಸಿಕೊಂಡರು. ಸೈಫ್ ಅಲಿ ಖಾನ್ ಅವರ ಪುತ್ರಿ ಮತ್ತು ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಅವರನ್ನು ರಾತ್ರೋರಾತ್ರಿ ದಿ ಇಮ್ಮಾರ್ಟಲ್ ಅಶ್ವತ್ಥಾಮ ಚಿತ್ರದಿಂದ ಹೊರಹಾಕಲಾಯಿತು. ಸ್ಕ್ರಿಪ್ಟ್ ಬದಲಾವಣೆಯೇ ಇದಕ್ಕೆ ಕಾರಣ ಎನ್ನಲಾಗಿದೆ.
ಕಾರ್ತಿಕ್ ಆರ್ಯನ್ (Karthik Aryan), ಸನ್ನಿ ಡಿಯೋಲ್
ಶೆಹಜಾದ ನಟ ಕಾರ್ತಿಕ್ ಆರ್ಯನ್ ಅವರನ್ನು 'ದೋಸ್ತಾನಾ 2' ಚಿತ್ರದಿಂದ ಕೈಬಿಡಲಾಗಿದೆ. ವರದಿಗಳ ಪ್ರಕಾರ ಕಾರ್ತಿಕ್ ಆರ್ಯನ್ ಮತ್ತು ಕರಣ್ ಜೋಹರ್ ನಡುವಿನ ವಿವಾದವೇ ಇದಕ್ಕೆ ಕಾರಣ. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜಾಹ್ನವಿ ಕಪೂರ್ ಜೊತೆ ಕಾಣಿಸಿಕೊಳ್ಳಬೇಕಿತ್ತು. ಚಿತ್ರ ಗದರ್ 2 ಖ್ಯಾತಿಯ ನಟ ಸನ್ನಿ ಡಿಯೋಲ್ (Sunny Deol) ಅವರ ಸ್ಥಾನವನ್ನು ಸಹ ಚಿತ್ರದಿಂದ ಬದಲಾಯಿಸಲಾಗಿದೆ. ಸುದ್ದಿ ಪ್ರಕಾರ, ಸನ್ನಿ ಡಿಯೋಲ್ 'ಪೃಥ್ವಿರಾಜ್' ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ನಂತರ ತಯಾರಕರು ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಸೇರಿಸಿಕೊಂಡರು.
ಹಣ ಪೀಕಲು ರಾಖಿ ಮೊದಲ ಗಂಡಂಗೂ ಹೀಗೆ ಮಾಡಿದ್ಲು ಎಂದ ಆದಿಲ್ ಲಾಯರ್!