Asianet Suvarna News Asianet Suvarna News

Bigg Boss 15: ತಂಗಿ ಶಮಿತಾ ಬಿಗ್‌ಬಾಸ್ ಗೆಲುವಿಗೆ ಶಿರಡಿಗೆ ಹೋಗಿ ಶಿಲ್ಪಾ ಪ್ರಾರ್ಥನೆ

  • ಬಿಗ್‌ಬಾಸ್ ಸೀಸನ್ 15ರಲ್ಲಿ ಹೆಚ್ಚಿದ ಫೈಟ್
  • ತಂಗಿ ಬಿಗ್‌ಬಾಸ್ ವಿನ್ನರ್ ಆಗಲು ಅಕ್ಕನ ಪ್ರಾರ್ಥನೆ
  • ಶಿರಡಿಗೆ ಹೋಗಿ ಪ್ರಾರ್ಥನೆ ಸಲ್ಲಿಸಿದ ನಟಿ
Shilpa Shetty and Rajiv Adatia travel to Shirdi to pray for sister Shamitas win in Bigg Boss 15 dpl
Author
Bangalore, First Published Jan 6, 2022, 4:14 PM IST

ಬಿಗ್‌ಬಾಸ್ 15ರ ಸೀಸನ್ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ನಟಿ ರಾಖಿ ಸಾವಂತ್, ಅವರ ಪತಿ ಎನ್ನಲಾದ ರಿತೇಶ್, ಡೆವೊಲಿನ, ರಶ್ಮಿ, ತೇಜಸ್ವಿ ಪ್ರಕಾಶ್, ಶಮಿತಾ ಶೆಟ್ಟಿ ಸೇರಿ ಬಿಗ್ ಬಾಸ್ ಮನೆಯೊಳಗೆ ಗದ್ದಲವೋ ಗದ್ದಲ. ಬಾಲಿವುಡ್‌ ನಟಿ ಶಮಿತಾ ಶೆಟ್ಟಿ ಬಿಗ್‌ಬಾಸ್ ಒಟಿಟಿಯಲ್ಲಿ ಮಿಂಚಿದ ನಂತರ ಈಗ ಬಿಗ್‌ಬಾಸ್ 15ರಲ್ಲೂ ಭಾಗವಹಿಸಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂಗಿಯಾಗಿರುವ ಶಮಿತಾ ಶೆಟ್ಟಿ ಬಿಗ್‌ಬಾಸ್ ಮನೆಯಲ್ಲಿ ಸುದ್ದಿ ಮಾಡುತ್ತಲೇ ಇದ್ದಾರೆ. ಇದೀಗ ತಂಗಿಯ ಗೆಲುವಿಗಾಗಿ ಪ್ರಾರ್ಥಿಸಲು ಶಿಲ್ಪಾ ಶೆಟ್ಟಿ ಶಿರಡಿಗೆ ಪ್ರಯಾಣಿಸಿದ್ದಾರೆ.

ಶಿಲ್ಪಾ ಶೆಟ್ಟಿ ತನ್ನ ಸಹೋದರಿ ಶಮಿತಾ ಶೆಟ್ಟಿ ಬಿಗ್ ಬಾಸ್ 15 ಶೋ ಅನ್ನು ಗೆಲ್ಲಲು ಯಾವುದೇ ಛಾನ್ಸ್ ಬಿಡುತ್ತಿಲ್ಲ. ಇದಕ್ಕೂ ಮೊದಲು, ಅವರು ತಮ್ಮ ಸಹೋದರಿ ಕಾರ್ಯಕ್ರಮದ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಕಾರಣ ತಮ್ಮ ಅಭಿಮಾನಿಗಳನ್ನು ಸಾಧ್ಯವಾದಷ್ಟು ಬೆಂಬಲಿಸುವಂತೆ ಒತ್ತಾಯಿಸಿದ್ದಾರೆ. ಇದೀಗ ಶಿಲ್ಪಾ ತಮ್ಮ ರಾಖಿ ಸಹೋದರ ರಾಜೀವ್ ಅದಾತಿಯಾ ಅವರೊಂದಿಗೆ ತಮ್ಮ ಸಹೋದರಿಯ ಗೆಲುವಿಗೆ ಆಶೀರ್ವಾದ ಪಡೆಯಲು ಶಿರಡಿಗೆ ತೆರಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by Rajiv Adatia (@rajivadatia)

'ನಿನ್ ಶೆಟ್ಟಿಗಿರಿ ಸರಿಮಾಡ್ತೀನಿ', ಶಿಲ್ಪಾಶೆಟ್ಟಿ ತಂಗಿ ಮೇಲೆ ಹರಿಹಾಯ್ದ ನಟಿ

ರಾಜೀವ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನನ್ನ ಸಹೋದರಿ ಶಿಲ್ಪಾಶೆಟ್ಟಿ ಜೊತೆ ಶಿರಡಿಗೆ ಹೊರಟೆ.. ಓಂ ಸಾಯಿ ರಾಮ್!..ಎಂದು ಬರೆದಿದ್ದಾರೆ. ಶಿಲ್ಪಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಲವಾರು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಶಮಿತಾಗೆ ಆಶೀರ್ವಾದ ಪಡೆಯಲು ಶಿರಡಿಗೆ ತನ್ನ ಸಹೋದರ ಮತ್ತು ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿದ್ದೇನೆ ಎಂದು ಹಂಚಿಕೊಂಡಿದ್ದಾರೆ. ರಾಜೀವ್ ಅವರು ಬಿಗ್ ಬಾಸ್ 15 ರ ಭಾಗವಾಗಿದ್ದರು. ಇತ್ತೀಚೆಗೆ ಸಲ್ಮಾನ್ ಖಾನ್ ನಡೆಸಿಕೊಡೋ ಜನಪ್ರಿಯ ಶೋನಿಂದ ಎಲಿಮಿನೇಟ್ ಆದರು.

ಪದೇ ಪದೇ ಶಿಲ್ಪಾ ತನ್ನ ಸಹೋದರಿಯನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲಿಸುವುದನ್ನು ಕಾಣಬಹುದು. ಇತ್ತೀಚೆಗೆ, ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಅವರ ಸಹೋದರಿಗೆ ಬೆಂಬಲವನ್ನು ತೋರಿಸಿದರು.

ಶಿಲ್ಪಾ ಶೆಟ್ಟಿ ತಂಗಿಗೆ ಕೆಂಪು ಗುಲಾಬಿ ಕೊಟ್ಟು ಪ್ರೀತಿ ಹೇಳಿದ ರಾಖಿ ಸಾವಂತ್ ಗಂಡ

ಅವರು ಶಮಿತಾ ಅವರ ಅಭಿಮಾನಿ ಎಡಿಟ್ ಮಾಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ರಿಯಾಲಿಟಿ ಶೋನಲ್ಲಿ ಪ್ರತಿ ಅಡಚಣೆಯನ್ನು ಎದುರಿಸಲು ತನ್ನ ಸಹೋದರಿ ಪ್ರಯತ್ನದ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಎಂದು ಉಲ್ಲೇಖಿಸಿದ್ದಾರೆ. ನಿರಂತರ ಬೆಂಬಲಕ್ಕಾಗಿ ಶಿಲ್ಪಾ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಈ ಪ್ರಯಾಣದುದ್ದಕ್ಕೂ ಎಲ್ಲರೂ ತನಗೆ ಬೆಂಬಲವನ್ನು ನೀಡುವಂತೆ ಒತ್ತಾಯಿಸಿದರು.

ಶಮಿತಾ ಹೊರತುಪಡಿಸಿ, ಸ್ಪರ್ಧೆಯಲ್ಲಿ ಕರಣ್ ಕುಂದ್ರಾ, ಪ್ರತೀಕ್ ಸೆಹಜ್‌ಪಾಲ್, ನಿಶಾಂತ್ ಭಟ್, ತೇಜಸ್ವಿ ಪ್ರಕಾಶ್, ರಾಖಿ ಸಾವಂತ್, ದೇವೋಲೀನಾ ಭಟ್ಟಾಚಾರ್ಯ, ಉಮರ್ ರಿಯಾಜ್ ಮತ್ತು ರಶ್ಮಿ ದೇಸಾಯಿ ಇದ್ದಾರೆ. ಬಿಗ್ ಬಾಸ್ 15 ರ ಫಿನಾಲೆಗೆ ಕೇವಲ ಎರಡು ವಾರಗಳು ಮಾತ್ರ ಉಳಿದಿವೆ. ಆದ್ದರಿಂದ ಪ್ರತಿಯೊಬ್ಬರೂ ಟ್ರೋಫಿಯನ್ನು ಮನೆಗೆ ತರಲು ಪ್ರಯತ್ನಿಸುತ್ತಿದ್ದಾರೆ.

ಬಿಗ್ ಬಾಸ್ 15(Biggboss 15) ಅದರ ಅಂತಿಮ ಹಂತಕ್ಕೆ ಹತ್ತಿರವಾಗುತ್ತಿದ್ದಂತೆ, ಚಾಲೆಂಜರ್‌ಗಳಾದ ಸುರ್ಭಿ ಚಂದನಾ, ಮುನ್‌ಮುನ್ ದತ್ತಾ, ಆಕಾಂಕ್ಷಾ ಪುರಿ ಮತ್ತು ವಿಶಾಲ್ ಸಿಂಗ್ ನೀಡಿದ ಟಿಕೆಟ್ ಟು ಫಿನಾಲೆ ಟಾಸ್ಕ್ ಅನ್ನು ಗೆಲ್ಲಲು ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ಡೆವೊಲಿನಾ ಟಾಸ್ಕ್ ಮಧ್ಯೆ ಮೂತ್ರ ಮಾಡಿದ್ದು ಸುದ್ದಿಯಾಗಿತ್ತು. ದೇವೋಲೀನಾ ಪ್ರತೀಕ್ ಮತ್ತು ಉಮರ್‌ಗೆ ತಾನು ಮೂತ್ರ ವಿಸರ್ಜಿಸಬೇಕೆಂದು ಹೇಳುತ್ತಿದ್ದಳು. ಆದರೆ ಬಿಟ್ಟುಕೊಟ್ಟು ಕೆಳಗಿಳಿಯುವ ಬದಲು, ಪ್ರತೀಕ್‌ಗೆ ಬಕೆಟ್‌ಗಳನ್ನು ನೀರನ್ನು ಎಸೆಯುವಂತೆ ಕೇಳಿದಳು. ಆದ್ದರಿಂದ ಅವಳು ತನ್ನ ಪ್ಯಾಂಟ್‌ಗೆ ಮೂತ್ರ ವಿಸರ್ಜಿಸುತ್ತಾಳೆ. ಉಮರ್ ದೇವೋಲೀನಾ ಅವರನ್ನು ಶ್ಲಾಘಿಸಿದರು.

Follow Us:
Download App:
  • android
  • ios