Asianet Suvarna News Asianet Suvarna News

ಬದುಕಲ್ಲ ಅನಿಸ್ತಿದೆ, ಪ್ಲೀಸ್​ ಇದೊಂದು ಆಸೆ ನೆರವೇರಿಸು ಎನ್ನುತ್ತಲೇ ಕೊನೆಯುಸಿರೆಳೆದ ನಟ ಸತೀಶ್​ ಕೌಶಿಕ್​!

ಇತ್ತೀಚೆಗೆ ನಿಧನರಾದ ನಟ, ನಿರ್ದೇಶಕ ಸತೀಶ್​ ಕೌಶಿಕ್​ ಅವರು ತಮಗೆ ಸಾವು ಸಮೀಪಿಸುತ್ತಿದೆ ಎಂದು ತಿಳಿಯುತ್ತಲೇ ಆಡಿದ್ದ ಕೊನೆಯ ಮಾತುಗಳೇನು? 
 

Satish Kaushik last words mujhe bacha lo main marna nahin chahta before death
Author
First Published Mar 12, 2023, 5:44 PM IST | Last Updated Mar 12, 2023, 5:44 PM IST

ಹಿರಿಯ ನಟ ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಅವರು ಇದೇ 9ರಂದು ನಿಧನರಾಗಿದ್ದಾರೆ. ಮೇಲ್ನೋಟಕ್ಕೆ ಎದೆ ನೋವಿನಿಂದ ಬಳಲಿದ್ದ ಅವರು ಮೃತಪಟ್ಟಿರುವುದಾಗಿ ಹೇಳಲಾಗುತ್ತಿದ್ದರೂ, ಅವರ ಸಾವಿನ ಕುರಿತು ಹಲವಾರು ಅನುಮಾನದ ಹುತ್ತಗಳು ಬೆಳೆಯತೊಡಗಿವೆ. ಹೋಳಿ ಪಾರ್ಟಿಯಲ್ಲಿ ಭಾಗವಹಿಸಿ ಸಂತೋಷದಿಂದ ನಲಿದಾಡುತ್ತಿದ್ದ ಸತೀಶ್​ ಕೌಶಿಕ್​ ದಿಢೀರನೆ ಎದೆನೋವೆಂದು ಹೇಳಿದ್ದಷ್ಟೇ ನೆಪ. ಆಸ್ಪತ್ರೆಗೆ ಸಾಗಿಸಿ ಸ್ವಲ್ಪ ಹೊತ್ತಿನಲ್ಲಿಯೇ ಅವರು ಇಹಲೋಕ ತ್ಯಜಿಸಿದರು. ಆದರೆ ಇದು ಸಾವಲ್ಲ, ಕೊಲೆ ಎನ್ನುವ ಸಂಶಯ ಪೊಲೀಸರಿಗೆ ಬಂದಿದೆ. ಹೋಳಿ ಪಾರ್ಟಿಯಲ್ಲಿಯೇ ಏನೋ ಎಡವಟ್ಟು ಆಗಿರುವ ಶಂಕೆಯಿಂದ ಇದಾಗಲೇ ಪೊಲೀಸರು ಹೋಳಿ ಪಾರ್ಟಿ ಆಯೋಜಿಸಿದ್ದ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ಫಾರ್ಮ್‌ಹೌಸ್ ಮಾಲೀಕ ಪರಾರಿಯಾಗಿದ್ದು, ಪೊಲೀಸರ ಸಂದೇಹ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಸದ್ಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. 

ಇದರ ಮಧ್ಯೆಯೇ, ಮಹಿಳೆಯೊಬ್ಬರು ತಮ್ಮ ಪತಿಯೇ ಸತೀಶ್​ ಅವರನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ಕೊಟ್ಟಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ! 'ಸತೀಶ್ ಅವರು ನನ್ನ ಪತಿಗೆ ದುಬೈನಲ್ಲಿ (Dubai) ಹೂಡಿಕೆ ಮಾಡಲು 15 ಕೋಟಿ ರೂ. ನೀಡಿದ್ದರು. ಈಗ ಅದನ್ನವರು ವಾಪಸ್ ಕೇಳುತ್ತಿದ್ದರು. ಆದರೆ ನನ್ನ ಪತಿ ಅದನ್ನು ತಿರುಗಿಸಲಿಲ್ಲ, ಬದಲಿಗೆ ಕೆಲವು ಮಾತ್ರೆಗಳನ್ನು ನೀಡಿ, ಸತೀಶ್ ಅವರನ್ನು  ಕೊಲೆ ಮಾಡಿದ್ದಾರೆ' ಎಂದು ದೆಹಲಿ ಪೊಲೀಸ್ ಕಮಿಷನರ್‌ಗೆ (Police Commissioner) ಮಹಿಳೆ ದೂರಿದ್ದಾರೆ! '2022ರ ಆಗಸ್ಟ್‌ನಲ್ಲಿ ದುಬೈಗೆ ಭೇಟಿ ನೀಡಿದ್ದ ಸತೀಶ್ ಕೌಶಿಕ್ ಅವರು ನನ್ನ ಪತಿಗೆ 15 ಕೋಟಿ ರೂ.ಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ನನ್ನ ಪತಿ ಮತ್ತು ಸತೀಶ್ ಕೌಶಿಕ್ ಅವರ ನಡುವೆ ವಾಗ್ವಾದ ನಡೆದಿತ್ತು. ಆಗ ನಾನುಅಲ್ಲಿಯೇ ಇದ್ದೆ. ನನಗೆ ಹಣದ ಅವಶ್ಯಕತೆ ಇದೆ. ನಾನು 15 ಕೋಟಿ ರೂ.ಗಳನ್ನು ನೀಡಿ 3 ವರ್ಷ ಆಗಿದೆ. ಇನ್ನೂ ನೀನು ವಾಪಸ್​ ಕೊಡುತ್ತಿಲ್ಲ, ನಾನು ಮೋಸ ಹೋಗಿದ್ದೇನೆ ಎನಿಸುತ್ತಿದೆ. ನನ್ನ ಹಣ ವಾಪಸ್ ಕೊಡು ಎಂದು ಸತೀಶ್ ಹೇಳುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೆ. ಆದರೆ ನನ್ನ ಪತಿಗೆ ಅದನ್ನು ತಿರುಗಿಸುವ ಮನಸ್ಸು ಇರಲಿಲ್ಲ. ಅದಕ್ಕಾಗಿಯೇ ಕೊಲೆ ಮಾಡಿದ್ದಾರೆ' ಎಂದು ಮಹಿಳೆ ಹೇಳಿದ್ದಾರೆ.

Satish Kaushik ಸಾವಿಗೆ ಭಾರಿ ಟ್ವಿಸ್ಟ್​: ನನ್ನ ಪತಿಯೇ ಕೊಲೆ ಮಾಡಿದ್ದು ಎಂದ ಮಹಿಳೆ!

ಇವೆಲ್ಲವುಗಳ ನಡುವೆಯೇ ಸತೀಶ್​ ಕೌಶಿಕ್​ ಅವರು ಆಡಿದ್ದ ಕೊನೆಯ ಮಾತುಗಳನ್ನು ನೆನಪಿಸಿಕೊಂಡು ಅವರ ಮ್ಯಾನೇಜರ್ ಸಂತೋಷ್ ರೈ ಕಣ್ಣೀರಿಟ್ಟಿದ್ದಾರೆ. ವರದಿಗಳ ಪ್ರಕಾರ, ಅವರ ಕೊನೆಯ ಕ್ಷಣಗಳಲ್ಲಿ ಅವರ ಮ್ಯಾನೇಜರ್ ಸಂತೋಷ್ ರೈ (Santosh Rai) ಅವರೊಂದಿಗೆ ಇದ್ದರು. ಅವರು ಸತೀಶ್ ಅವರ ಕೊನೆಯ ಕ್ಷಣಗಳನ್ನು ಬಹಿರಂಗಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡುತ್ತಾ ಸಂತೋಷ್​, ಇಡೀ ಕಥೆಯನ್ನು ವಿವರವಾಗಿ ಹೇಳಿದ್ದಾರೆ. 'ಸತೀಶ್​ ಅವರು ಬುಧವಾರ ಅಂದರೆ ಘಟನೆಯ ಹಿಂದಿನ ರಾತ್ರಿ ಊಟದ ನಂತರವೂ ಸಂಪೂರ್ಣವಾಗಿಯೇ ಚೆನ್ನಾಗಿದ್ದರು. ರಾತ್ರಿ 8.30ರ ಸುಮಾರಿಗೆ ಊಟ ಮಾಡಿದ್ದರು.  ನಾವು ಮಾರ್ಚ್ 9 ರಂದು ಬೆಳಿಗ್ಗೆ 8.50 ಕ್ಕೆ ಮುಂಬೈಗೆ ವಿಮಾನವನ್ನು ಹಿಡಿಯಬೇಕಾಗಿತ್ತು. ಅದಕ್ಕಾಗಿ ಅವರು, ಸಂತೋಷ್, ಬೇಗ ಮಲಗು, ನಾವು ಬೆಳಿಗ್ಗೆ ಹೊರಡಬೇಕು ಎಂದರು. ನಂತರ ನಾನು ಪಕ್ಕದ ಕೋಣೆಗೆ ಹೋಗಿ ಮಲಗಿದೆ' ಎಂದು ಸಂತೋಷ್​ ಹೇಳಿದರು.

'ಸತೀಶ್​ ಅವರು ತಮ್ಮ ಕಾಗಜ್  2 (Kagaz 2) ಚಿತ್ರವನ್ನು ನೋಡಬೇಕು ಎಂದು ಹೇಳುತ್ತಿದ್ದರು. ಈ ಚಿತ್ರದ ಎಡಿಟಿಂಗ್​ ಕೆಲಸ ಬಾಕಿ ಇತ್ತು. ಆದ್ದರಿಂದ ನನ್ನನ್ನು ಅವರು ಕರೆದಿದ್ದರು. ಬೆಳಿಗ್ಗೆ 11 ಗಂಟೆಗೆ ನನಗೆ ಕರೆ ಮಾಡಿದರು. ನಂತರ 11.30ಕ್ಕೆ ಸಿನಿಮಾ ನೋಡತೊಡಗಿದರು. 12 ಗಂಟೆಯ ಸುಮಾರಿಗೆ ಅವರು ನನ್ನ ಹೆಸರನ್ನು ಜೋರಾಗಿ ಕೂಗಲು ಪ್ರಾರಂಭಿಸಿದರು. ನಾನು ಓಡಿ ಬಂದೆ. ಆಗ ಅವರು ಯಾಕೋ ಉಸಿರಾಟ ಏರುಪೇರಾಗುತ್ತಿದೆ. ದಯವಿಟ್ಟು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಎಂದರು. ಕೂಡಲೇ ಕಾರು ಹತ್ತಿ ಆಸ್ಪತ್ರೆಗೆ ಹೊರಟೆವು. ಆಸ್ಪತ್ರೆಗೆ ಹೋದ ತಕ್ಷಣ ಎದೆನೋವು ಮತ್ತಷ್ಟು ಹೆಚ್ಚಾಯಿತು. ಅವರು ಒದ್ದಾಡುತ್ತಿದ್ದರು. ಆಗಲೇ ಅವರಿಗೆ ತಾವು ಸಾಯುತ್ತೇವೆ ಎಂದು ಎನ್ನಿಸಿತೋ ಏನೋ ಗೊತ್ತಿಲ್ಲ. ನನ್ನ ಭುಜದ ಮೇಲೆ ತಲೆಯಿಟ್ಟು ಹೇಳಿದರು- ಸಂತೋಷ್, ನಾನು ಸಾಯಲು ಬಯಸುವುದಿಲ್ಲ, ನನ್ನನ್ನು ಉಳಿಸಿ ಪ್ಲೀಸ್​ ಎಂದರು. ನಾನು ಮಗಳು ವಂಶಿಕಾಗಾಗಿ ಬದುಕಲು ಬಯಸುತ್ತೇನೆ. ಆದರೆ ನಾನು ಬದುಕುವುದಿಲ್ಲ ಎಂದು ನಾನು ಭಾವಿಸುತ್ತೇನೆ.. ನನಗೆ ಏನಾದರೂ ಆದರೆ ನನ್ನ ಶಶಿ ಮತ್ತು ವಂಶಿಕಾಳನ್ನು ನೋಡಿಕೊಳ್ಳಿ ಎಂದು ಹೇಳಿದರು. ಇಷ್ಟು ಹೇಳುತ್ತಲೇ ಅವರು ಜಗತ್ತಿಗೆ ವಿದಾಯ ಹೇಳಿದರು' ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡು ಸಂತೋಷ್​ ಕಣ್ಣೀರು ಹಾಕಿದ್ದಾರೆ. 

ಸತೀಶ್ ಕೌಶಿಕ್ ಸಾವಿಗೆ ಟ್ವಿಸ್ಟ್: ಹೋಳಿ ಪಾರ್ಟಿ ಸ್ಥಳದಲ್ಲಿ ಔಷಧ ಪತ್ತೆ, ಫಾರ್ಮ್ ಹೌಸ್ ಮಾಲೀಕ ಪರಾರಿ!

ಶಶಿ ಕೌಶಿಕ್​ ಅವರ ಜೊತೆ ಸತೀಶ್​ ಅವರ ವಿವಾಹವು (Marriage) 1985ರಲ್ಲಿ ನಡೆದಿದೆ. ಈ ದಂಪತಿಗೆ ವಂಶಿಕಾ ಮತ್ತು ಶಾನು ಎಂಬ ಇಬ್ಬರು ಮಕ್ಕಳು. ಮಗ ಶಾನು ಎರಡು ವರ್ಷದವನಿರುವಾಗಲೇ ತೀರಿಕೊಂಡಿದ್ದ. ಮಗಳು ವಂಶಿಕಾಗೆ ಈಗ 10 ವರ್ಷ. 

Latest Videos
Follow Us:
Download App:
  • android
  • ios