Bigg Boss #MeToo ಸಂತ್ರಸ್ತರಿಗೆ ಅವಕಾಶವಿಲ್ಲ, ಆರೋಪಿಗಳು ಯಶಸ್ವಿಯಾಗಿದ್ದಾರೆ: ತನುಶ್ರೀ ದತ್ತಾ
ಬಿಗ್ ಬಾಸ್ ಸೀಸನ್ 16ರಲ್ಲಿ ಮೀ ಟೂ ಆರೋಪಿ. ಬಾಲಿವುಡ್ ನಟಿಯರು ಫುಲ್ ಗರಂ....ರಿಯಾಲಿಟಿ ಶೋ ವಿರುದ್ಧ ನಿಲ್ಲುತ್ತಾರಾ ತನುಶ್ರೀ?
2018ರಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸಿಂಪಲ್ ಆಂಡ್ ಬ್ಯೂಟಿಫುಲ್ ನಟಿ ತನುಶ್ರೀ ದತ್ತಾ ಮೀ ಟೂ ಅಭಿಯಾನದ ವೇಳೆ ಧ್ವನಿ ಎತ್ತಿದ್ದರು. ಬಿ-ಟೌನ್ನಲ್ಲಿ ಅವಕಾಶ ವಂಚಿತರಾದವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಹಾಗೂ ತಮಗಾದ ಅನುಭವವನ್ನು ರಿವೀಲ್ ಮಾಡಿದ್ದರು. ತನುಶ್ರೀ ಧೈರ್ಯ ನೋಡಿ ಇನ್ನಿತ್ತರ ನಟಿಯರು ಮೀ ಟೂ ಅಭಿಯಾನಕ್ಕೆ ಕೈ ಜೋಡಿಸಿದ್ದರು. ಈ ವೇಳೆ ಸಾಜಿದ್ ಖಾನ್ ವಿರುದ್ಧ ಅತಿ ಹೆಚ್ಚು ಆರೋಪ ಕೇಳಿ ಬಂದಿತ್ತು.
ಈಗ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಸೀಸನ್ 16ರಲ್ಲಿ ಮೀ ಟೂ ಅರೋಪಿ ಸ್ಪರ್ಧಿಸುತ್ತಿದ್ದಾರೆ. ಸಂತ್ರಸ್ತರು ಸಮಾಜದಲ್ಲಿ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ ಆದರೆ ಆರೋಪಿಗಳ ಕೈಯಲ್ಲಿ ನೂರಾರು ಅವಕಾಶಗಳಿದ್ದು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ ಎಂದು ಬಿ-ಟೌನ್ ನಟಿಯರು ಮತ್ತ ನೆಟ್ಟಿಗರು ಖಂಡಿಸಿದ್ದಾರೆ. ಬಿಬಿ ಮನೆಯಲ್ಲಿ ಸಾಜಿದ್ ಖಾನ್ ಇರುವುದಕ್ಕೆ ತನುಶ್ರೀ ಬೇಸರ ವ್ಯಕ್ತ ಪಡಿಸಿದ್ದಾರೆ.
'ನನಗೂ ಗಾಬರಿಯಾಗಿದೆ. ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಆರೂಪಿಗಳಿಗೆ ಅವಕಾಶ ಕೊಟ್ಟಿದ್ದಾರೆ ಈ ಕ್ರಮದ ಸಂಪೂರ್ಣ ಬೇಜವಾಬ್ದಾರಿ ಮತ್ತು ಸಾರ್ವಜನಿಕರ ಮೇಲೆ ಬೀರುವ ಪರಿಣಾಮದ ಬಗ್ಗೆ ನಾನು ಮೂಕನಾಗಿದ್ದೇನೆ. ನಾನು ಬಿಗ್ ಬಾಸ್ ಅನ್ನು ನೋಡುವುದಿಲ್ಲ ಮತ್ತು ಇದರ ನಂತರವೂ ನಾನು ನೋಡುವುದಿಲ್ಲ ಎಂದು ನಾನು ಭಾವಿಸುತ್ತೇನೆ.' ಎಂದು ತನುಶ್ರೀ ಹೇಳಿದ್ದಾರೆ.
ಏನಿದು ಸಾಜಿದ್ ಕೇಸ್:
'005ರಲ್ಲಿ ಸಾಜಿದ್ ಖಾನ್ ನನ್ನನ್ನು ಮನೆಗೆ ಕರೆಸಿ ಗುಪ್ತಾಂಗ ತೋರಿಸಿದ್ದ ಅಂಥ ವ್ಯಕ್ತಿಯನ್ನು ಬಿಗ್ ಬಾಸ್ಗೆ ಆಹ್ವಾನ ಮಾಡಿರುವುದು ತುಂಬಾ ಬೇಸರ ತಂದಿದೆ ಎಂದು ಹೇಳಿದ್ದಾರೆ. ಇನ್ನು ಮಾತು ಮುಂದುವರೆಸಿದ ಶೆರ್ಲಿನ್ 2005ರ ಘಟನೆಯನ್ನು ಮತ್ತೆ ನೆನಪಿಸಿಕೊಂಡರು. ಆಗಿನ್ನೂ ನನ್ನ ವೃತ್ತಿಜೀವನದ ಪ್ರಾರಂಭದ ದಿನಗಳು. ಕಥೆ ಹೇಳುತ್ತೀನಿ ಎಂದು ನನ್ನನ್ನು ಆತ ಮನೆಗೆ ಕರೆದಿದ್ದ. ಆಗ ಆತ ಲೈಂಗಿಕ ದುರ್ವತನೆ ಮಾಡಿದ. ಆತನ ಗುಪ್ತಾಂಗ ತೋರಿಸಿದ'2005ರಲ್ಲಿ ನನ್ನ ತಂದೆ ನಿಧನ ಹೊಂದಿದರು. ಆ ಸಮಯದಲ್ಲಿ ಸಾಜಿದ್ ಖಾನ್ ನನ್ನನ್ನು ಮನೆಗೆ ಕರೆದ. ಆತನ ಕೆಟ್ಟ ವರ್ತನೆ ಬಗ್ಗೆ ಆಗ ನನಗೆ ಗೊತಿರಲಿಲ್ಲ. ಆಗ ಸ್ಮಾರ್ಟ್ ಫೋನ್, ಇಂಟರ್ ನೆಟ್ ಇರ್ಲಿಲ್ಲ ಎಂದು ಹೇಳಿದರು. ನಾನು ದೊಡ್ಡ ಕನಸನ್ನು ಹೊತ್ತು ಆತನ ಮನೆಗೆ ಹೋದೆ. ಆದರೆ ಆತ ನನಗೆ ಗುಪ್ತಾಂಗ ತೋರಿಸಿದ, ಬಳಿಕ ಮುಟ್ಟಿ ಫೀಲ್ ಮಾಡುವಂತೆ ಕೇಳಿಕೊಂಡ. ರೇಟ್ ಎಷ್ಟು ಕೊಡ್ತಿಯಾ? ಎಂದು ಕೇಳಿ' ಎಂದು ಅಂತ ಸಾಜಿದ್ ಕಾಮ ಪುರಾಣ ಬಿಚ್ಚಿಟ್ಟರು ಶೆರ್ಲಿನ್ ಚೋಪ್ರಾ.
ವಿಷ ಹಾಕಿದ್ರು, ಕಾರಿನ ಬ್ರೇಕ್ ಫೇಲ್ ಮಾಡಿದ್ರು; ಕೊಲೆ ಪ್ರಯತ್ನದ ಬಗ್ಗೆ ಶಾಕಿಂಗ್ ವಿಚಾರ ಬಿಚ್ಚಿಟ್ಟ ತನುಶ್ರೀ ದತ್ತ
ಸಲ್ಮಾನ್ ಖಾನ್ ಅಭಿಪ್ರಾಯ:
ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಸಾಜಿದ್ ಖಾನ್ ಒಂದು ವಾರದೊಳಗೆ ಬಿಬಿ ಮನೆಯಿಂದ ಹೊರ ನಡೆಯಲಿದ್ದಾರೆ. ಪಬ್ಲಿಕ್ನಿಂದ ವಾಹಿನಿ ಮತ್ತು ರಿಯಲಿಟಿ ಶೋ ತಂಡ ಮೇಲೆ ಒತ್ತಡ ಏರಲಾಗಿದೆ. 'ಸಲ್ಮಾನ್ ಖಾನ್ ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತದೆ ಏಕೆಂದರೆ ಸಾಜಿದ್ ಖಾನ್ ಸಹೋದರಿ ಫರ್ಹಾನ್ ಖಾನ್ಗೆ ತುಂಬಾನೇ ಕ್ಲೋಸ್. ಆಕೆ ಸಹಾಯ ಕೇಳಿದಕ್ಕೆ ಸಲ್ಮಾನ್ ಅವಕಾಶ ಕೊಟ್ಟರು ಆದರೆ ಪಬ್ಲಿಕ್ನಿಂದ ಇಷ್ಟೊಂದು ನೆಗೆಟಿವ್ ರೆಸ್ಪಾನ್ಸ್ ಬರುತ್ತದೆ ಎಂದು ಗೊತ್ತಿರಲಿಲ್ಲ' ಎಂದು ಸಲ್ಮಾನ್ ಆಪ್ತರೊಬ್ಬರು ಹೇಳಿದ್ದಾರೆ.