ತೆರೆ ಮೇಲೆ ಬರಲಿದ್ದಾರೆ ಸಂದೀಪ್ ಉನ್ನಿಕೃಷ್ಣನ್ | ಮಹೇಶ್ ಬಾಬು ನಿರ್ಮಾಣದಲ್ಲಿ ತಯಾರಾಗುತ್ತಿದೆ ಮೇಜರ್ ಸಿನಿಮಾ | 2020 ಕ್ಕೆ ತೆರೆಗೆ ಬರಲಿದೆ ಮೇಜರ್ ಸಿನಿಮಾ
ಮುಂಬೈ (ಮಾ. 2): 26/11 ಮುಂಬೈ ದಾಳಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ದಾಳಿಯಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾಗಿದ್ದಾರೆ. ಇವರ ಕಥೆಯನ್ನಿಟ್ಟುಕೊಂಡು ಸಿನಿಮಾವೊಂದು ಬರಲಿದೆ.
ಸಿನಿಮಾ ಆಗಲಿದೆ ವೀರಪುತ್ರ ಅಭಿನಂದನ್ ಸಾಹಸಗಾಥೆ
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಪ್ರೊಡಕ್ಷನ್ ನಲ್ಲಿ ಈ ಚಿತ್ರ ಮೂಡಿ ಬರಲಿದೆ. ಚಿತ್ರಕ್ಕೆ ಮೇಜರ್ ಎಂದು ಹೆಸರಿಡಲಾಗಿದೆ.
ಖ್ಯಾತ ನಟ ಅದಿವಿ ಸೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಹಾಗೂ ಹಿಂದಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು 2020 ಕ್ಕೆ ತೆರೆಗೆ ಬರಲಿದೆ.
26/11 ಮುಂಬೈ ದಾಳಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ 14 ಜನರನ್ನು ರಕ್ಷಿಸಿದ್ದರು. ಗಾಯಗೊಂಡ ಕಮಾಂಡರ್ ಒಬ್ಬರನ್ನು ರಕ್ಷಿಸುವ ವೇಳೆ ಬುಲೆಟ್ ಇವರಿಗೆ ತಾಗಿ ಹುತಾತ್ಮರಾದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 2, 2019, 4:48 PM IST