ಪವರ್ ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್ ಬಹಳ ದಿನಗಳಿಂದ ಕಾಯ್ತಿದ್ದ ಹರಿಹರ ವೀರಮಲ್ಲು ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. 2 ನಿಮಿಷ 57 ಸೆಕೆಂಡ್‌ಗಳ ಟ್ರೈಲರ್‌ನಲ್ಲಿ ಪವನ್ ಲುಕ್, ಡೈಲಾಗ್‌ಗಳು ಸೂಪರ್.

ಪವರ್ ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್ ಬಹಳ ದಿನಗಳಿಂದ ಕಾಯ್ತಿದ್ದ ಹರಿಹರ ವೀರಮಲ್ಲು ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಸುಮಾರು ಐದು ವರ್ಷಗಳ ಕಾಲ ಚಿತ್ರೀಕರಣ ನಡೆದ ಈ ಚಿತ್ರ ಜುಲೈ 24 ರಂದು ಬಿಡುಗಡೆಯಾಗಲಿದೆ. ಕೃಷ್ ಜಾಗರ್ಲಮೂಡಿ, ಜ್ಯೋತಿ ಕೃಷ್ಣ ನಿರ್ದೇಶನದ ಈ ಚಿತ್ರವನ್ನು ಎ.ಎಂ. ರತ್ನಂ, ದಯಾಕರ್ ರಾವ್ ನಿರ್ಮಿಸಿದ್ದಾರೆ. ಪವನ್ ಕಲ್ಯಾಣ್ ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ.

Add Asianetnews Kannada as a Preferred SourcegooglePreferred

ಈ ಪಿರಿಯಾಡಿಕ್ ಆಕ್ಷನ್ ಡ್ರಾಮಾದಲ್ಲಿ ನಿಧಿ ಅಗರ್ವಾಲ್ ನಾಯಕಿ. ಔರಂಗಜೇಬ್ ಪಾತ್ರದಲ್ಲಿ ಬಾಬಿ ಡಿಯೋಲ್ ನಟಿಸಿದ್ದಾರೆ. ಜುಲೈ 3 ರಂದು ಟ್ರೈಲರ್ ಬಿಡುಗಡೆಯಾಗುವುದಾಗಿ ಚಿತ್ರತಂಡ ಘೋಷಿಸಿದಾಗಿನಿಂದ ಫ್ಯಾನ್ಸ್‌ಗಳಲ್ಲಿ ಕುತೂಹಲ ಹೆಚ್ಚಾಗಿತ್ತು. 2 ನಿಮಿಷ 57 ಸೆಕೆಂಡ್‌ಗಳ ಟ್ರೈಲರ್‌ನಲ್ಲಿ ಪವನ್ ಲುಕ್, ಡೈಲಾಗ್‌ಗಳು ಸೂಪರ್.

“ಹಿಂದೂವಾಗಿ ಬದುಕಬೇಕೆಂದರೆ ತೆರಿಗೆ ಕಟ್ಟಬೇಕಾದ ಕಾಲ.. ಈ ದೇಶದ ಶ್ರಮ ಬಾದ್‌ಶಾ ಪಾದಗಳ ಕೆಳಗೆ ನಲುಗುತ್ತಿರುವ ಕಾಲ.. ಒಬ್ಬ ವೀರನಿಗಾಗಿ ಪ್ರಕೃತಿಯೇ ಕಾಯುತ್ತಿರುವ ಸಮಯ” ಎಂಬ ವಾಯ್ಸ್ ಓವರ್‌ನೊಂದಿಗೆ ಟ್ರೈಲರ್ ಆರಂಭವಾಗುತ್ತದೆ. ಬಳಿಕ ಔರಂಗಜೇಬ್ ಪಾತ್ರದಲ್ಲಿ ಬಾಬಿ ಡಿಯೋಲ್‌ನ ಅಟ್ಟಹಾಸಗಳು, “ಈ ಭೂಮಿಯ ಮೇಲಿರುವುದು ಒಂದೇ ಕೊಹಿನೂರ್.. ಅದನ್ನು ಕಸಿದು ತರುವುದಕ್ಕೆ ಸಾಟಿ ಇಲ್ಲದಿರುವ ರಾಮಬಾಣ ಬೇಕು” ಎಂಬ ತನಿಕೆಲ್ಲ ಭರಣಿ ಡೈಲಾಗ್ ಬಳಿಕ ಪವನ್ ಪವರ್‌ಫುಲ್ ಎಂಟ್ರಿ ಇದೆ.

“ಇಲ್ಲಿಯವರೆಗೆ ಮೇಕೆಗಳನ್ನು ತಿನ್ನುವ ಹುಲಿಗಳನ್ನು ನೋಡಿರುತ್ತೀರಿ.. ಈಗ ಹುಲಿಗಳನ್ನು ಬೇಟೆಯಾಡುವ ಹೆಬ್ಬಲಿಯನ್ನು ನೋಡುತ್ತೀರಿ” ಎಂಬ ಪವನ್ ಡೈಲಾಗ್ ಟ್ರೈಲರ್‌ನ ಹೈಲೈಟ್. ಕೊನೆಯಲ್ಲಿ ಬಾಬಿ ಡಿಯೋಲ್, “ಆಂದಿ ಬಂದಾಯ್ತು” ಎಂದು ಪವನ್‌ರನ್ನು ತುಫಾನ್‌ಗೆ ಹೋಲಿಸುವುದು ಮತ್ತೊಂದು ಹೈಲೈಟ್. ಒಟ್ಟಾರೆಯಾಗಿ ಹರಿಹರ ವೀರಮಲ್ಲು ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಕೀರವಾಣಿ ಅವರ ಹಿನ್ನೆಲೆ ಸಂಗೀತ ಟ್ರೈಲರ್‌ಗೆ ಮತ್ತಷ್ಟು ಮೆರುಗು ನೀಡಿದೆ.

YouTube video player