Asianet Suvarna News Asianet Suvarna News

ಧನುಷ್​, ಸಿಂಬು ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್ಸ್​ಗೆ ಚಿತ್ರರಂಗದಿಂದಲೇ ಬ್ಯಾನ್​?

ಧನುಷ್​, ಸಿಂಬು ಸೇರಿದಂತೆ  ಕಾಲಿವುಡ್​ ಸೂಪರ್​ಸ್ಟಾರ್​ಗೆ ಚಿತ್ರರಂಗದಿಂದಲೇ ಬ್ಯಾನ್​! ಅಷ್ಟಕ್ಕೂ ಆಗಿದ್ದೇನು?
 

disciplinary measures against Vishal, Simbu, Dhanush, and Atharvaa suc
Author
First Published Sep 15, 2023, 6:20 PM IST

ಕಾಲಿವುಡ್‌ನ ನಾಲ್ವರು ಖ್ಯಾತ ಹೀರೋಗಳಿಗೆ ಬ್ಯಾನ್​ ಬಿಸಿ ತಟ್ಟಿದೆ. ಬಹು ಬೇಡಿಕೆಯ ಟಾಪ್​ಮೋಸ್ಟ್​ ಸ್ಥಾನದಲ್ಲಿರುವ ಧನುಷ್ (Dhanush), ವಿಶಾಲ್‌, ಸಿಂಬು ಮತ್ತು ಅಥರ್ವ ಅವರಿಗೆ ರೆಡ್ ಕಾರ್ಡ್ ನೀಡುವ ಮೂಲಕ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯು ಅಚ್ಚರಿಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದರ ಅರ್ಥ  ಯಾವುದೇ ನಿರ್ಮಾಪಕರು ಈ ಹೀರೋಗಳನ್ನು ಹಾಕಿಕೊಂಡು ಇನ್ನುಮುಂದೆ ಸಿನಿಮಾ ಮಾಡುವಂತಿಲ್ಲ! ಹೌದು. ಇಂಥದ್ದೊಂದು ಆಘಾತಕಾರಿ ನಿರ್ಧಾರವನ್ನು ಸಂಘ ತೆಗೆದುಕೊಂಡಿದೆ. ಕಳೆದ  13ರಂದು ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ನಿರ್ಧಾರದಿಂದಾಗಿ  ನಟರು  ನಿರ್ಮಾಪಕರ ಮಂಡಳಿ ಮುಂದಿನ ಸೂಚನೆ ನೀಡುವವರೆಗೂ ಯಾವುದೇ ನಿರ್ಮಾಣ ಸಂಸ್ಥೆಯು ಅವರೊಂದಿಗೆ ಸಿನಿಮಾಗಳನ್ನು ಮಾಡುವಂತಿಲ್ಲ. ಇನ್ನೊಂದರ್ಥದಲ್ಲಿ ಇವರನ್ನು ಬ್ಯಾನ್​ ಮಾಡಲಾಗಿದೆ ಎನ್ನುವುದು.

ಅಷ್ಟಕ್ಕೂ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ, ಈ ನಾಲ್ವರು ಕಲಾವಿದರು ನಿರ್ಮಾಪಕರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.  ಕೆಲವು ತಿಂಗಳ ಹಿಂದೆ ಚೆನ್ನೈನ ಅಣ್ಣಾಸಾಲೈನಲ್ಲಿ ನಡೆದ ನಿರ್ಮಾಪಕರ  ಹಾಗೂ ಕಲಾವಿದರ  ಸಂಘದ ಸಭೆಯಲ್ಲಿ ಅನೇಕ ನಿರ್ಮಾಪಕರು  ಈ ನಾಲ್ವರು ನಟರ ಮೇಲೆ ಆರೋಪ ಮಾಡಿದ್ದರು. ಇದರಿಂದ ಈ ನಿರ್ಧಾರ ಎನ್ನಲಾಗಿದೆ. ನಟ ಸಿಂಬು ಅವರ ಬಗ್ಗೆ ಹೇಳುವುದಾದರೆ, ಇವರು ನಿಗದಿತ ಸಮಯಕ್ಕೆ ಚಿತ್ರದ ಚಿತ್ರೀಕರಣಕ್ಕೆ ಬಾರದೆ ನಿರ್ಮಾಪಕರಿಗೆ ನಷ್ಟ ಉಂಟು ಮಾಡಿದ್ದಾರೆ ಎನ್ನುವ ಆರೋಪವಿದೆ. ನಿರ್ಮಾಪಕರ ಸಂಘದಿಂದ ನಟ ಸಿಂಬು ರೆಡ್ ಕಾರ್ಡ್ ಪಡೆದಿರುವುದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಅವರಿಗೆ ರೆಡ್ ಕಾರ್ಡ್ ನೀಡಲಾಗಿತ್ತು. ಆ ಕಾರಣಕ್ಕಾಗಿ ಅವರು ಕೆಲ ಸಮಯ ಸಿನಿಮಾಗಳಿಂದ ದೂರ ಉಳಿಯಬೇಕಾಯಿತು. ಇದೀಗ ಮತ್ತೊಮ್ಮೆ ಅವರಿಗೆ ರೆಡ್ ಕಾರ್ಡ್ ನೀಡಲಾಗಿದೆ.

ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ 'ಬೇಬಿ' ತಂಡಕ್ಕೆ ಡ್ರಗ್ಸ್​ ಕೇಸ್ ಸಂಕಷ್ಟ​: ಟಾಲಿವುಡ್​ ತಲ್ಲಣ!

ತೇನಾಂಡಾಲ್ ಫಿಲ್ಮ್ ಸಂಸ್ಥೆಯು ಧನುಷ್​ಗಾಗಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದೆ. ಒಂದು ತಿಂಗಳ ಕಾಲ ಶೂಟಿಂಗ್ ಕೂಡ ನಡೆದಿದೆ. ಕಾರಣಾಂತರಗಳಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಶೂಟಿಂಗ್ ಮಾಡುವಂತೆ ಧನುಷ್ ಅವರಿಗೆ ಮನವಿ ಮಾಡಲಾಗಿದೆ. ಆದರೆ, ಅವರು ಸ್ಪಂದಿಸುತ್ತಿಲ್ಲ ಎಂದು ದೂರಿನಲ್ಲಿದೆ. ಈ ಸಿನಿಮಾಗಾಗಿ ಸಂಸ್ಥೆಯು 20 ಕೋಟಿ ರೂಪಾಯಿಯನ್ನು ಧನುಷ್​ಗೆ ನೀಡಿದೆಯಂತೆ. ಈಚೆಗಷ್ಟೇ ಧನುಷ್​ ತಮ್ಮ 50ನೇ ಸಿನಿಮಾವನ್ನು ಘೋಷಿಸಿದ್ದು, ಅದಕ್ಕೆ ಅವರೇ ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. 

ನಟ ವಿಶಾಲ್ (Vishal) ಅವರು ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆ ಸಮಯದಲ್ಲಿ ಹಲವು ಆರೋಪಗಳನ್ನು ಎದುರಿಸಿದ್ದರು. ಹಾಲಿ ಇವರು,  ಕಲಾವಿದರ ಸಂಘದ ಕಾರ್ಯದರ್ಶಿಯಾಗಿದ್ದಾರೆ.  ಅವರು ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿದ್ದಾಗ ಹಣವನ್ನು ದುರ್ಬಳಕೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಅವರು ಬಹಿರಂಗಪಡಿಸಿಲ್ಲ ಎಂದು ಆರೋಪಿಸಲಾಗಿದೆ. ಆ ಕಾರಣಕ್ಕೆ ಅವರಿಗೆ ರೆಡ್ ಕಾರ್ಡ್ ನೀಡಲಾಗಿದೆ. ಇದರ ಮಧ್ಯೆಯೇ ವಿಶಾಲ್ ನಟನಯೆ ‘ಮಾರ್ಕ್ ಆ್ಯಂಟನಿ’ ಸಿನಿಮಾ ಸೆ.15ರಂದು ತೆರೆಗೆ ಬರುತ್ತಿದೆ.

ಮಾಜಿ ಹಿಂದೂ ಪತ್ನಿಯರ ಜೊತೆ ಆಮೀರ್​ ಸಂಬಂಧ ಹೇಗಿದೆ? ಮೌನ ಮುರಿದ ಕಿರಣ್​ ರಾವ್​
 

Follow Us:
Download App:
  • android
  • ios