Asianet Suvarna News Asianet Suvarna News

ಪುನೀತ್ PRK ಪ್ರೊಡಕ್ಷನ್‌ನ 'ಮ್ಯಾನ್ ಆಫ್ ದಿ ಮ್ಯಾಚ್' ಟ್ರೈಲರ್‌ಗೆ ಫ್ಯಾನ್ಸ್ ಫಿದಾ

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಪಿ ಆರ್ ಕೆ(PRK) ಪ್ರೊಡಕ್ಷನ್ಸ್‌ ನಿರ್ಮಾಣದ, ರಾಷ್ಟ್ರೀ ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯ ಪ್ರಕಾಶ್‌ ಸಾರಥ್ಯದಲ್ಲಿ ಮೂಡಿಬಂದಿರುವ ವಿಡಂಬನೆ ಲಘುಹಾಸ್ಯದ ನಿಮಾ ಮ್ಯಾನ್ ಆಫ್ ದಿ ಮ್ಯಾಚ್(Man Of The Match ). ನಟರಾಜ್‌ ಎಸ್‌ ಭಟ್‌, ಧರ್ಮಣ್ಣ ಕಡೂರು, ವೀಣಾ ಸುಂದರ್‌, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್ ಸೇರಿದಂತೆ ಅನೇಕರು ಮುಖ್ಯ ಮಾತ್ರದಲ್ಲಿ ನಟಿಸಿದ್ದಾರೆ.

 

Director Sathya Prakash man of the match trailer released
Author
Bengaluru, First Published May 2, 2022, 3:34 PM IST

ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಪಿ ಆರ್ ಕೆ(PRK) ಪ್ರೊಡಕ್ಷನ್ಸ್‌ ನಿರ್ಮಾಣದ, ರಾಷ್ಟ್ರೀ ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯ ಪ್ರಕಾಶ್‌ ಸಾರಥ್ಯದಲ್ಲಿ ಮೂಡಿಬಂದಿರುವ ವಿಡಂಬನೆ ಲಘುಹಾಸ್ಯದ ನಿಮಾ ಮ್ಯಾನ್ ಆಫ್ ದಿ ಮ್ಯಾಚ್(Man Of The Match ). ನಟರಾಜ್‌ ಎಸ್‌ ಭಟ್‌, ಧರ್ಮಣ್ಣ ಕಡೂರು, ವೀಣಾ ಸುಂದರ್‌, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್ ಸೇರಿದಂತೆ ಅನೇಕರು ಮುಖ್ಯ ಮಾತ್ರದಲ್ಲಿ ನಟಿಸಿದ್ದಾರೆ.

ಅತ್ಯಂತ ಕುತೂಹಲಕರ ಕನ್ನಡ ಕಾಮಿಡಿ-ವಿಡಂಬನೆ ಸಿನಿಮಾ ಮ್ಯಾನ್‌ ಆಫ್‌ ದಿ ಮ್ಯಾಚ್. ಈ ಸಿನಿಮಾದ ಟ್ರೇಲರ್ ಪ್ರೈಮ್ ವೀಡಿಯೋ ಬಿಡುಗಡೆ ಮಾಡುತ್ತಿದೆ. ವಿಡಂಬನೆಯ ಲಘುಹಾಸ್ಯವು ಮಾನವನ ಭಾವನೆಗಳು ಮತ್ತು ಸಾಮಾಜಿಕ ಸವಾಲುಗಳ ಆಧುನಿಕ ಕಾಲದ ಪ್ರತಿಫಲನವಾಗಿದೆ. ಇದು ನಟರಾಜ್ ಎಸ್‌ ಭಟ್‌ ಸಿನಿಮಾದಲ್ಲಿ ನಿರ್ದೇಶಕನ ಪಾತ್ರದ ಪಯಣವನ್ನು ಅನಾವರಣಗೊಳಿಸುತ್ತದೆ. ತನ್ನ ಮುಂಬರುವ ಮ್ಯಾನ್ ಆಫ್ ದಿ ಮ್ಯಾಚ್ ಎಂಬ ಸಿನಿಮಾಗೆ ಇವರು ಆಡಿಷನ್ ನಡೆಸುತ್ತಿರುತ್ತಾರೆ. ಜನರು ಪ್ರಾಜೆಕ್ಟ್‌ನ ಭಾಗವಾಗಲು ಒಪ್ಪಿದಾಗ, ನಟಿಸಲು ವಿಭಿನ್ನ ಸನ್ನಿವೇಶಗಳನ್ನು ನೀಡುತ್ತಾರೆ. ಆಗ, ಅವರ ಮಧ್ಯೆ ಸಂಘರ್ಷ ಶುರುವಾಗುತ್ತದೆ.

ಕುತೂಹಲವನ್ನು ಹೆಚ್ಚಿಸುವ ಟ್ರೇಲರ್, ಈ ವಿಶಿಷ್ಟ ಸಿನಿಮಾವನ್ನು ಹೇಗೆ ರೂಪಿಸಲಾಗಿದೆ ಮತ್ತು ಮೇಕಿಂಗ್ ಸಮಯದಲ್ಲಿ ನಿರ್ದೇಶಕರು ಎದುರಿಸಿದ ಸಮಸ್ಯೆಗಳ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ನೀಡುತ್ತದೆ. ಈ ಬಗ್ಗೆ ಮಾತನಾಡಿದ ನಿರ್ದೇಶಕ ಸತ್ಯ ಪ್ರಕಾಶ್, 'ಮ್ಯಾನ್‌ ಆಫ್‌ ದಿ ಮ್ಯಾಚ್ ಎಂಬುದು ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾ ಮತ್ತು ಅದು ಎಂದಿಗೂ ನನ್ನ ಹೃದಯಕ್ಕೆ ಸೀಮಿತವಾಗಿಯೇ ಇರುತ್ತದೆ. ನಾನು ಒಂದು ದಿನ ಪುನೀತ್‌ ಸರ್ ಜೊತೆಗೆ ಮಾತನಾಡುತ್ತಿದ್ದೆ. ಆಗ ಒಂದು ದಿನ ಮೊದಲ ಲಾಕ್‌ಡೌನ್‌ ವೇಳೆ, ಮ್ಯಾನ್ ಆಫ್ ದಿ ಮ್ಯಾಚ್ ಕಥೆಯನ್ನು ನಾನು ಹಂಚಿಕೊಂಡೆ. ಅವರಿಗೆ ತಕ್ಷಣ ಇಷ್ಟವಾಯಿತು. ಇದು ಒಂದು ಉತ್ತಮ ಐಡಿಯಾ ಎಂದು ಅವರು ಹೇಳಿದರು. ಅದೇ ಸಮಯದಲ್ಲಿ, ಇದನ್ನು ಜಾರಿಗೆ ತರುವುದು ಕಷ್ಟ. ಆದರೆ, ಇಂಥ ಹೊಸ ಹೆಜ್ಜೆಗಳನ್ನು ನಾವು ಇಡಬೇಕು ಮತ್ತು ಹೊಸ ತಲೆಮಾರಿನ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಅವರು ಇದನ್ನು ಬೆಂಬಲಿಸಲು ಒಪ್ಪಿದರು' ಎಂದು ನಿರ್ದೇಶಕ ಡಿ ಸತ್ಯ ಪ್ರಕಾಶ್ ಹೇಳಿದರು.

ನನ್ನ ತಮ್ಮ ಅಂತಲ್ಲ ಯಾರದೇ ಆದ್ರೂ ಫೋಟೋ ಕಿತ್ತಾಕಬಾರದು: ತಿರುಪತಿ ಘಟನೆಗೆ ಶಿವಣ್ಣ ರಿಯಾಕ್ಷನ್!

'ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ ಎಂದು ನಾನು ಭಾವಿಸಿದ್ದೇನೆ. ಇದರಲ್ಲಿ ಅದ್ಭುತ ಪಂಚಿಂಗ್ ಡೈಲಾಗ್‌ಗಳಿವೆ, ಆಕರ್ಷಕ ಕಥೆ ಮತ್ತು ಹಾಸ್ಯ ಇದೆ. ಅಲ್ಲದೆ, ಚಿಂತನೆಗೆ ವಿಷಯವೂ ಇದೆ. ಪ್ರೈಮ್ ವೀಡಿಯೋದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು ನನಗೆ ಖುಷಿ ನೀಡಿದೆ ಮತ್ತು 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ನಾನು ವೀಕ್ಷಕರನ್ನು ತಲುಪುತ್ತೇವೆ ಎಂಬುದು ಹೆಮ್ಮೆಯ ಸಂಗತಿ' ಎಂದಿದ್ದಾರೆ.

ಆಂಧ್ರದಲ್ಲಿ ಪುನೀತ್ ರಾಜ್‌ಕುಮಾರ್ ಫೋಟೋಗೆ ಅಪಮಾನ, ವಿಡಿಯೋ ವೈರಲ್!

ಇನ್ನು ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟರಾಜ್‌ ಎಸ್‌ ಭಟ್‌ ಮಾತನಾಡಿ, 'ಪಿ ಆರ್ ಕೆ ಪ್ರೊಡಕ್ಷನ್ಸ್‌ ಕಾರಣದಿಂದ ನಾನು ಈ ಸಿನಿಮಾದ ಭಾಗವಾಗಿದ್ದೇನೆ. ಇದು ವಿಶಿಷ್ಟ ಪರಿಕಲ್ಪನೆಯನ್ನು ಹೊಂದಿದೆ. ಅಲ್ಲದೆ, ಆಕರ್ಷಕ ಕಲಾವಿದರ ವರ್ಗ ಮತ್ತು ಪ್ರಶಸ್ತಿ ವಿಜೇತ ನಿರ್ದೇಶಕ ಡಿ ಸತ್ಯ ಪ್ರಕಾಶ್ ಇದರಲ್ಲಿದ್ದಾರೆ ಎಂಬ ಕಾರಣಕ್ಕೆ ನಾನು ಇದು ನನಗೆ ಕುತೂಹಲ ಮೂಡಿಸಿತು. ಈ ಸಿನಿಮಾ ಶೂಟಿಂಗ್ ಮಾಡುವ ಸಮಯದ ಅನುಭವ ವಿಶಿಷ್ಟವಾಗಿತ್ತು. ನನ್ನ ಪಾತ್ರ ಮತ್ತು ಕಥೆಗೆ ನಾನು ಬೇಗ ಹೊಂದಿಕೊಂಡೆ. ಪರ್ಫಾರ್ಮೆನ್ಸ್ ಮತ್ತು ಹೊಸ ದೃಶ್ಯದ ವಿಧಾನ ನನಗೆ ಸವಾಲಿನದಾಗಿತ್ತು. ಮ್ಯಾನ್ ಆಫ್‌ ದಿ ಮ್ಯಾಚ್ ತಯಾರಿಸುವ ಸಮಯದಲ್ಲಿ ನಾವು ಅನುಭವಿಸಿದ ಖುಷಿ ಪ್ರೇಕ್ಷಕರಿಗೂ ಅನುಭವಕ್ಕೆ ಬರುತ್ತದೆ ಮತ್ತು ಅವರು ಇದನ್ನು ಇಷ್ಟಪಡುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

Follow Us:
Download App:
  • android
  • ios