Asianet Suvarna News Asianet Suvarna News

ಸಿನಿ ತಾರೆಯರ ಬಹುದೊಡ್ಡ ರಹಸ್ಯ ಬಿಚ್ಚಿಟ್ಟ ಪ್ರಿಯಾಮಣಿ: ನನಗೇ ಶಾಕ್​ ಆಯಿತು ಎಂದ ನಟಿ

ಸಿನಿ ತಾರೆಯರ ಬಹುದೊಡ್ಡ ರಹಸ್ಯ ಬಿಚ್ಚಿಟ್ಟಿದ್ದಾರೆ ಬಹುಭಾಷಾ ನಟಿ ಪ್ರಿಯಾಮಣಿ. ಈ ವಿಷಯ ಕೇಳಿ ತಮಗೇ ಶಾಕ್​ ಆಯಿತು ಎಂದ ನಟಿ ಹೇಳಿದ್ದೇನು? 
 

Bollywood Stars Pay Paps For Gym  Airport Photos Priyamani reveals the truth suc
Author
First Published Feb 23, 2024, 5:55 PM IST

ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳ ಚಿತ್ರಗಳ ಜನಪ್ರಿಯ ನಾಯಕಿಯಾಗಿರುವ ನಟಿ ಪ್ರಿಯಾಮಣಿ. ಪ್ರಿಯಾಮಣಿ (Priyamani) ಅವರು 2003ರಲ್ಲಿ ತೆಲುಗು ಚಿತ್ರ ಇವರೇ ಆಟಗಾಡು ಮೂಲಕ ನಟನೆಗೆ ಪದಾರ್ಪಣೆ ಮಾಡಿದ ನಟಿ, ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ರಾಮ್ ಚಿತ್ರದಿಂದ ಸ್ಯಾಂಡಲ್​ವುಡ್​ ಸಿನಿಪಯಣ ಆರಂಭಿಸಿದವರು.  ತಮಿಳು ಚಿತ್ರ ರಂಗದ ಹೆಸರಾಂತ ನಿರ್ದೇಶಕ ಭರತ್ ರಾಜ್ ಅವರು ಸಿನಿಮಾರಂಗಕ್ಕೆ ಕರೆ ತಂದವರು. 2007ರ ತಮಿಳು ರೋಮ್ಯಾಂಟಿಕ್ (Romantic) ಸಿನಿಮಾ ಪರುತಿವೀರನ್‌ನಲ್ಲಿ ಮುತ್ತಜಗು ಎಂಬ ಹಳ್ಳಿ ಹುಡುಗಿಯ ಪಾತ್ರಕ್ಕಾಗಿ ಅವರು ವ್ಯಾಪಕ ಮೆಚ್ಚುಗೆ ಪಡೆದರು. ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ವಿಭಿನ್ನ ಭಾಷೆಯ ಚಲನಚಿತ್ರಗಳಲ್ಲಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2008ರಲ್ಲಿ  ಪ್ರಿಯಾಮಣಿ ಮಲಯಾಳಂ ಪ್ರಣಯ ತಿರಕ್ಕಾಥಾದಲ್ಲಿ ಮಾಳವಿಕಾ ಪಾತ್ರಕ್ಕಾಗಿ ಮತ್ತಷ್ಟು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು ಮತ್ತು ಅತ್ಯುತ್ತಮ ನಟಿ ಮಲಯಾಳಂನಲ್ಲಿ ಫಿಲ್ಮ್‌ಫೇರ್ (Filmfare) ಪ್ರಶಸ್ತಿಯನ್ನು ಗೆದ್ದರು. 

ತುಂಬಾ ಪ್ರತಿಭಾವಂತ ನಟಿ ಪ್ರಿಯಾಮಣಿ ತೆರೆಯ ಮೇಲೆ  ಪ್ರಮುಖ ನಟಿಯಾಗಿ, ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ ಮತ್ತು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಪ್ರಿಯಾಮಣಿಯವರು  'ರಾ ಟಾಕ್ಸ್ ವಿತ್ ಆರ್ಕೆ' ಸಂದರ್ಶನವೊಂದರಲ್ಲಿ ಬಾಲಿವುಡ್​ ನಟ-ನಟಿಯರ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾರೆ. ಸಾಮಾನ್ಯವಾಗಿ ಇನ್​ಸ್ಟಾಗ್ರಾಮ್​ ಸೇರಿದಂತೆ ಹಲವಾರು ಸೋಷಿಯಲ್​ ಮೀಡಿಯಾಗಳಲ್ಲಿ  ನಟ-ನಟಿಯರು ಹೋಗುತ್ತಿದ್ದಂತೆಯೇ ಅವರ ಹಿಂದೆ ಮುಂದೆ ಪಾಪರಾಜಿಗಳು ಸುಳಿಯುವುದು ಮಾಮೂಲು. ಮನೆಯಿಂದ ಹೊರಕ್ಕೆ ಬರುವುದು, ಒಳಕ್ಕೆ ಹೋಗುವುದು, ಇಲ್ಲವೇ ಹೆಚ್ಚಾಗಿ ವಿಮಾನ ನಿಲ್ದಾಣಗಳಲ್ಲಿ ಕಾಣಿಸಿಕೊಳ್ಳುವುದು, ನಿಲ್ದಾಣದಿಂದ ಹೊರಕ್ಕೆ ಬರುವುದು... ಇವೆಲ್ಲವೂ ವಿಡಿಯೋಗಳಲ್ಲಿ ದಾಖಲಾಗುತ್ತವೆ. ಇಂಥ ವಿಡಿಯೋ ನೋಡಿದಾಗ ಹಲವರಿಗೆ ನಿಜಕ್ಕೂ ಅಚ್ಚರಿಯಾಗುವುದು ಉಂಟು. ಇವರಿಗೆ ಇಂತಿಷ್ಟೇ ಸಮಯದಲ್ಲಿ ನಟ-ನಟಿಯರು ಹೊರಕ್ಕೆ ಬರುತ್ತಾರೆ, ಒಳಕ್ಕೆ ಹೋಗುತ್ತಾರೆ ಎಂದು ಹೇಗೆ ತಿಳಿಯುತ್ತದೆ ಎಂದೆಲ್ಲಾ ಅನ್ನಿಸುವುದು ಉಂಟು. ಇದರ ರಸಹ್ಯವನ್ನೇ ಇದೀಗ ಪ್ರಿಯಾಮಣಿ ಬಿಚ್ಚಿಟ್ಟಿದ್ದಾರೆ. 

ನನ್ನ ಗಂಡ ಐಸಿಸ್​ ಅಲ್ಲ, ಮಕ್ಕಳೇನು ಜಿಹಾದಿಗಳಾಗಲ್ಲ... ನಟಿ ಪ್ರಿಯಾಮಣಿ ಗರಂ ಗರಂ


ಬಾಲಿವುಡ್ ತಾರೆಯರು ಕ್ಲಿಕ್ ಆಗಲು ಪಾಪರಾಜಿಗಳಿಗೆ ಹಣ ನೀಡುತ್ತಾರೆ. ಇದೊಂದು ಟ್ರೆಂಡ್​ ಆಗಿ ಬೆಳೆದುಕೊಂಡಿದೆ ಎಂದು ಪ್ರಿಯಾಮಣಿ ಹೇಳಿದ್ದಾರೆ.  ಪಾಪರಾಜಿ ಏಜೆನ್ಸಿಗಳಿವೆ ಮತ್ತು ಎಷ್ಟು ಛಾಯಾಗ್ರಾಹಕರು ವಿಮಾನ ನಿಲ್ದಾಣ ಅಥವಾ ಜಿಮ್‌ಗೆ ಅಥವಾ ಎಲ್ಲಿ ಬೇಕಾದರೂ ಬರುತ್ತಾರೆ.  ಜಿಮ್, ರೆಸ್ಟಾರೆಂಟ್ ಅಥವಾ ಇನ್ನಾವುದೇ ಸ್ಥಳದಲ್ಲಿ ಇದನ್ನು 'ಸ್ಪಾಟೆಡ್' ಎಂದು ಕರೆಯಲಾಗುತ್ತದೆ.  ಸ್ಟಾರ್‌ಗಳು ಪಾಪರಾಜಿಗಳಿಗೆ ಇಂತಿಷ್ಟು ಹಣ ಎಂದು ನೀಡುತ್ತಾರೆ. ಇದೆ ಕಾರಣಕ್ಕೆ ಅವರು ಎಲ್ಲಿಗೆ ಹೋದರೂ ಕ್ಯಾಮೆರಾ ಫೋಕಸ್​  ಆಗಿರುತ್ತದೆ ಎಂದಿದ್ದಾರೆ. ಅಚ್ಚರಿಯ ವಿಷಯ ಎಂದರೆ, ನೋಡುಗರಿಗೆ ಮಾತ್ರ ಇದು ಎಲ್ಲವೂ ಸಡನ್​ ಎಂದು ಕಾಣಿಸುತ್ತದೆ. ಪಾಪರಾಜಿಗಳಿಗೆ ನಟ-ನಟಿಯರ ವಿಷ್ಯ ತಿಳಿಯುವುದು ಹೇಗೆ ಅನ್ನಿಸುತ್ತದೆ. ಆದರೆ ತಾವು ಸುದ್ದಿಯಲ್ಲಿ ಇರಲು ನಟರು ಏನು ಮಾಡುತ್ತಾರೆ ಎನ್ನುವ ರಹಸ್ಯವನ್ನು ಪ್ರಿಯಾಮಣಿ ಬಿಚ್ಚಿಟ್ಟಿದ್ದಾರೆ. ಪಾಪರಾಜಿಗಳ  ಏಜೆನ್ಸಿಗಳು ಅವಶ್ಯಕತೆಯ ಆಧಾರದ ಮೇಲೆ ವಿಧಿಸುವ ಬೆಲೆಗಳ ಪಟ್ಟಿಯನ್ನು ನೋಡಿ ನನಗೆ ಆಶ್ಚರ್ಯವಾಯಿತು ಎಂದಿದ್ದಾರೆ. 

ಇನ್ನು ಪ್ರಿಯಾಮಣಿ ಕುರಿತು ಹೇಳುವುದಾದರೆ, ಇವರು  ಮುಸ್ತಾಫಾ ರಾಜಾ ಅವರೊಂದಿಗೆ  ಮದ್ವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ ಬೇರೆ ಧರ್ಮದವರ ಜೊತೆ ಮದ್ವೆಯಾಗಿದ್ದಕ್ಕೆ ಸಕತ್​ ಟೀಕೆಗೆ ಒಳಗಾಗಿದ್ದರು. ಆಗ ಕಿಡಿಕಾರಿದ್ದ ನಟಿ,  ಇದರಲ್ಲಿ ತಪ್ಪೇನಿದೆ?  ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ, ಎಲ್ಲರೂ ಲವ್ ಜಿಹಾದ್ (Love Jihad) ಮಾಡ್ತಾರೆ ಅಂತಲ್ಲ. ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ ಎಂದಿದ್ದರು.  ಮುಸ್ಲಿಂರನ್ನು ಮದ್ವೆಯಾದ ಮಾತ್ರಕ್ಕೆ ಹಾಗೆ ಹೀಗೆ ಹೇಳುವುದನ್ನು ನಿಲ್ಲಿಸಿ.  ಇದು ನನ್ನ ಜೀವನ. ನನಗೆ ಯಾರು ಬೇಕೋ ಅವರೊಟ್ಟಿಗೆ ನನ್ನ ಮುಂದಿನ ಜೀವನ ಕಳೆಯುತ್ತೇನೆ ಎಂದಿದ್ದರು. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿಹಾದಿಗಳಾಗಿ ಹುಟ್ತಾರೆ, ಇದು ಲವ್‌ ಜಿಹಾದ್ ಅಂತೆಲ್ಲಾ ಅಂದರು. ಹೀಗೆ ಹೇಳಲು ನಿಮಗೆ ಹೇಗೆ ಮನಸ್ಸು ಬರುತ್ತದೆ? ನನ್ನ ಮಕ್ಕಳೇನೂ ಜಿಹಾದಿಗಳಾಗಿ ಹುಟ್ಟುವುದಿಲ್ಲ ಎಂದಿದ್ದರು. 
 

ಐಶ್ವರ್ಯ ರೈಯನ್ನು ಈ ಹಿಂದೆ ಪ್ಲಾಸ್ಟಿಕ್​ ಅಂತನೂ ಕರೆಯಲಾಗಿತ್ತು! ಹೀಗೆ ಅಂದೋರು ಯಾರು ಗೊತ್ತಾ?

Follow Us:
Download App:
  • android
  • ios