ಅಲ್ಲು ಅರ್ಜುನ್ ಅವರ ಮುಂಬರುವ ಸೈನ್ಸ್ ಫಿಕ್ಷನ್ ಚಿತ್ರ AA22xA6 5 ನಾಯಕಿಯರನ್ನು ಒಳಗೊಂಡಿದೆ, ಅದರಲ್ಲಿ 3 ಬಾಲಿವುಡ್ ನಟಿಯರಿದ್ದಾರೆ. ಟ್ರಿಪಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿರುವ ಅಲ್ಲು ಅರ್ಜುನ್, ಈ 700 ಕೋಟಿ ಬಜೆಟ್‌ನ ಚಿತ್ರದಲ್ಲಿ ಅನಿಮೇಟೆಡ್ ಪಾತ್ರವನ್ನೂ ನಿರ್ವಹಿಸಲಿದ್ದಾರೆ.

ಸೌತ್ ಸಿನಿಮಾದ ʼಸೂಪರ್‌ ಸ್ಟಾರ್ʼ ಅಲ್ಲು ಅರ್ಜುನ್ ತಮ್ಮ ಹೊಸ ಸಿನಿಮಾದ ಬಗ್ಗೆ ಸುದ್ದಿಯಲ್ಲಿದ್ದಾರೆ. ಈ ಸಿನಿಮಾಕ್ಕೆ ಸಂಬಂಧಿಸಿದ ಅಪ್‌ಡೇಟ್‌ಗಳು ಬರುತ್ತಲೇ ಇವೆ. ಚಿತ್ರದಲ್ಲಿ 1-2 ಅಲ್ಲ, ಐವರು ನಾಯಕಿಯರಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ 3 ಮಂದಿ ಬಾಲಿವುಡ್ ನಟಿಯರು. ಅಲ್ಲು ಅರ್ಜುನ್ ಸಿನಿಮಾ ಹೆಸರನ್ನು ಸದ್ಯಕ್ಕೆ AA22xA6 ಎಂದು ಇಡಲಾಗಿದೆ. ಮುಂದಿನ ದಿನಗಳಲ್ಲಿ ಅಧಿಕೃತ ಹೆಸರು ಇಡಲಾಗುವುದಂತೆ. ಇದು ಒಂದು ಸೈನ್ಸ್ ಫಿಕ್ಷನ್ ಟೈಮ್ ಟ್ರಾವೆಲ್ ಸಿನಿಮಾವಾಗಿದೆ.

AA22xA6 ದಲ್ಲಿ ಅಲ್ಲು ಅರ್ಜುನ್ ತ್ರಿಪಾತ್ರ

2024 ರಲ್ಲಿ ರಿಲೀಸ್‌ ಆದ ʼಪುಷ್ಪ 2ʼ ಸಿನಿಮಾದ ನಂತರ, ಅಲ್ಲು ಅರ್ಜುನ್ ಈಗ ತಮ್ಮ ಹೊಸ ಚಿತ್ರದಲ್ಲಿ ಕೆಲಸ ಆರಂಭಿಸಿದ್ದಾರೆ. ನಟ ಶಾರುಖ್ ಖಾನ್ ಅವರ 'ಜವಾನ್' ಚಿತ್ರದ ನಿರ್ದೇಶಕ ಅಟ್ಲಿ ಕುಮಾರ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. AA22xA6 ಚಿತ್ರದಲ್ಲಿ ಅಲ್ಲು ಅರ್ಜುನ್ ಟ್ರಿಪಲ್ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಒಂದು ಪಾತ್ರ ನಾಯಕನದ್ದಾದರೆ, ಇನ್ನೊಂದು ಖಳನಾಯಕನದ್ದು. ಮೂರನೇ ಪಾತ್ರ ಅನಿಮೇಟೆಡ್ ಆಗಿರಲಿದೆ. ಈ ಚಿತ್ರಕ್ಕಾಗಿ ಅಟ್ಲಿ ಕುಮಾರ್ ಅಂತರರಾಷ್ಟ್ರೀಯ VFX ತಜ್ಞರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಕೂಡ ತಮ್ಮ ಪಾತ್ರಕ್ಕಾಗಿ ಶ್ರಮವಹಿಸುತ್ತಿದ್ದಾರೆ. ಇದಕ್ಕಾಗಿ ಅವರ ಗೆಟಪ್‌ ಕೂಡ ಬದಲಾಗಿದೆ. 

ಅಲ್ಲು ಅರ್ಜುನ್ AA22xA6 ದಲ್ಲಿ 5 ನಾಯಕಿಯರು

ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾ ಕೇವಲ ಸಾಯಿನ್ಸ್‌ ಫಿಕ್ಷನ್‌ ಅಲ್ಲವೇ ಅಲ್ಲಮ ಇದರಲ್ಲಿ 5 ನಾಯಕಿಯರಿದ್ದಾರೆ. ದೀಪಿಕಾ ಪಡುಕೋಣೆ, ಜಾಹ್ನವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಹೆಸರುಗಳು ಬಹುತೇಕ ಫೈನಲ್ ಆಗಿವೆ ಎನ್ನಲಾಗಿದೆ. ʼಕಿಂಗ್‌ಡಮ್ʼ ನಟಿ ಭಾಗ್ಯಶ್ರೀ ಬೋರ್ಸೆ ಕೂಡ ಚಿತ್ರದಲ್ಲಿ ಇರಬಹುದು. ಇವರ ಜೊತೆಗೆ ಇನ್ನೊಬ್ಬ ನಾಯಕಿ ಇರಲಿದ್ದು, ಆಕೆಯ ಹೆಸರು ಇನ್ನೂ ಬಹಿರಂಗವಾಗಿಲ್ಲ. ಇದು ಯಾವುದಾದರೂ ಪಾಪ್ ಸ್ಟಾರ್ ಅಥವಾ ಹಾಲಿವುಡ್ ನಟಿ ಆಗಿರಬಹುದು.

700 ಕೋಟಿ ಈ ಸಿನಿಮಾ ಬಜೆಟ್

ಅಲ್ಲು ಅರ್ಜುನ್ ಅವರ AA22xA6 ಚಿತ್ರದ ಬಜೆಟ್ 700 ಕೋಟಿ ರೂ. ಇದು ಟೈಮ್ ಟ್ರಾವೆಲ್ ಆಧಾರಿತ ಸೈನ್ಸ್ ಫಿಕ್ಷನ್ ಚಿತ್ರ. ಹಾಲಿವುಡ್ ಚಿತ್ರಗಳಂತೆ ಇದರ ದೃಶ್ಯಗಳು ಅದ್ಭುತವಾಗಿರುತ್ತವೆ. ಈ ವರ್ಷ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ ಮತ್ತು ನಿರ್ಮಾಪಕರು 2026 ರಲ್ಲಿ ಬಿಡುಗಡೆ ಮಾಡಬಹುದು.

‌ಈ ಹಿಂದಿನ ಸಿನಿಮಾದಲ್ಲಿ ಪಕ್ಕಾ ಹಳ್ಳಿ ಭಾಷೆಯ ಮಾಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್ ಈ ಬಾರಿ ಯಾವ ರೀತಿಯ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ. ʼಪುಷ್ಪʼ ಸಿನಿಮಾ ಇವರಿಗೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ತಂದುಕೊಟ್ಟರೂ ಕೂಡ, ದೊಡ್ಡ ಮಟ್ಟಲ್ಲಿ ಹೆಸರು ತಂದರೂ ಕೂಡ ಸಾಕಷ್ಟು ಕಾಂಟ್ರವರ್ಸಿ ಸೃಷ್ಟಿ ಮಾಡಿತ್ತು. ಥಿಯೇಟರ್‌ನಲ್ಲಿ ಅಲ್ಲು ಅರ್ಜುನ್‌ ನೋಡಬೇಕು ಎಂದು ಮಹಿಳೆಯೋರ್ವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಇದಕ್ಕಾಗಿ ಅಲ್ಲು ಅರ್ಜುನ ಅವರು ಪೊಲೀಸ್‌ ಠಾಣೆಗೆ ಹೋಗಬೇಕಾಗಿ ಬಂತು. ಒಂದು ದಿನ ಅವರು ಠಾಣೆಯಲ್ಲಿದ್ದರು. ಆಮೇಲೆ ಮನೆಗೆ ಬಂದಬಳಿಕ ಇಡೀ ಕುಟುಂಬ ಅವರಿಗೆ ಖುಷಿಯಿಂದ ಬರಮಾಡಿಕೊಂಡಿತ್ತು. ಅಷ್ಟೇ ಅಲ್ಲದೆ ಈ ಸಿನಿಮಾಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ. ಒಟ್ಟಿನಲ್ಲಿ ʼಪುಷ್ಪʼ ಸಿನಿಮಾ ಅವರಿಗೆ ಎಂದಿಗೂ ನೆನಪುಳಿಯುವಂಥಹ ಸಿನಿಮಾ ಆಗಿದೆ. ಅದೇನೇ ಇರಲಿ ಅಲ್ಲು ಅರ್ಜುನ್‌ ಮುಂದೆ ಹೇಗೆ ಸಿನಿಮಾ ಮಾಡ್ತಾರೆ ಎಂದು ಅಭಿಮಾನಿಗಳು ಕಾತುರದಲ್ಲಿದ್ದಾರೆ.