Asianet Suvarna News Asianet Suvarna News

ಕಾನ್ ಫೆಸ್ಟಿವಲ್‌ ಮುಗಿಸಿ ತವರಿಗೆ ಮರಳಿದ ಐಶ್ವರ್ಯಾ ರೈ; ಅಭಿಮಾನಿಗಳ ಹೃದಯ ಗೆದ್ದ ಆರಾಧ್ಯಾ ವರ್ತನೆ

ಕಾನ್ ಫೆಸ್ಟಿವಲ್‌ ಮುಗಿಸಿ ಐಶ್ವರ್ಯಾ ರೈ ತವರಿಗೆ ಮರಳಿದ್ದಾರೆ. ಆರಾಧ್ಯಾ ಬಚ್ಚನ್ ವರ್ತನೆ ಅಭಿಮಾನಿಗಳ ಹೃದಯ ಗೆದ್ದಿದೆ.  

Aaradhya Bachchan gesture for the paps wins Fans sgk
Author
First Published May 20, 2023, 11:00 AM IST

ಮಾಜಿ ವಿಶ್ವ ಸುಂದರಿ, ಬಾಲಿವುಡ್ ಸ್ಟಾರ್ ಐಶ್ವರ್ಯಾ ರೈ ಬಚ್ಚನ್ ಪ್ರತಿಷ್ಠಿತ ಕಾನ್ ಫೆಸ್ಟಿವಲ್ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದಾರೆ. ಕಾನ್ 2023 ಫಿಲ್ಮ್ ಫೆಸ್ಟಿವಲ್‌‌ನ ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದರು. ಉದ್ದವಾದ ಬ್ಲ್ಯಾಕ್ ಅಂಡ್ ಸಿಲ್ವರ್ ಗೌನ್‌ನಲ್ಲಿ ಮಿಂಚುವ ಮೂಲಕ ಐಶ್ವರ್ಯಾ ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದ್ದರು. ಇದೀಗ ಕಾನ್ ಫೆಸ್ಟಿವಲ್ ಮುಗಿಸಿ ಐಶ್ವರ್ಯಾ ಭಾರತಕ್ಕೆ ಹಿಂದಿರುಗಿದ್ದಾರೆ. ಐಶ್ವರ್ಯಾ ಮಗಳು ಆರಾಧ್ಯ ಜೊತೆ ಕಾನ್ ಫೆಸ್ಟಿವಲ್‌ಗೆ ತೆರಳಿದ್ದರು. ಇಬ್ಬರೂ ಸದಾ ಜೊತೆಯಲ್ಲೇ ಇರುತ್ತಾರೆ. ಈ ಬಾರಿಯ ಕಾನ್‌ಗೂ ಐಶ್ವರ್ಯಾ ಮಗಳ ಜೊತೆ ತೆರಳಿದ್ದರು. 

ಆರಾಧ್ಯಾ ಮತ್ತು ಐಶ್ವರ್ಯಾ ಇಬ್ಬರೂ ಮುಂಬೈ ಏರ್ಪೋರ್ಟ್‌ನಲ್ಲಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ. ಏರ್ಪೋರ್ಟ್‌ನಿಂದ ಹೊರ ಬರುತ್ತಿದ್ದಂತೆ ಐಶ್ವರ್ಯಾ ಪುತ್ರಿ ಆರಾಧ್ಯಾ ಪಾಪರಾಜಿಗಳಿಗೆ ಕೈ ಮುಗಿಯುತ್ತಾ ಹೊರ ಬಂದರು. ಎರಡೂ ಕೈ ಜೋಡಿಸಿ ನಮಸ್ತೆ ಎನ್ನುತ್ತಾ ಹೊರ ಬಂದ ಆರಾಧ್ಯಾ ವರ್ತನೆ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಕ್ಯೂಟ್ ವರ್ತನೆ ಅಭಿಮಾನಿಗಳ ಹೃದಯ ಗೆದ್ದಿದೆ. ಚಿಕ್ಕ ವಯಸ್ಸಿಗೆ ಎಷ್ಟು ಬುದ್ದಿ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆರಾಧ್ಯಾ ನೀಲಿ ಬಣ್ಣದ ಡೆನಿಮ್ ಮತ್ತು ಕಪ್ಪು ಟಾಪ್ ಧರಿಸಿದ್ದಾರೆ. ಪೋಷಕರ ಪಾಲನೆ ಇದು ಎಂದು ಹೇಳುತ್ತಿದ್ದಾರೆ. 

ಐಶ್ವರ್ಯಾ ಮತ್ತು ಆರಾಧ್ಯಾ ಯಾವಾಗಲೂ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಯಾವಾಗಲೂ ಮಗಳ ಕೈ ಹಿಡಿದೇ ಇರುತ್ತಾರೆ ಐಶ್ವರ್ಯಾ ರೈ. ಹಾಗಾಗಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದು ಇದೆ. ಯಾರು ಏನೇ ಹೇಳಿದರೂ ಐಶ್ವರ್ಯಾ ಮಾತ್ರ ಈಗಲೂ ಆರಾಧ್ಯಾ ಕೈ ಹಿಡಿದೇ ಇರುತ್ತಾರೆ. 

ಕಾನ್ ಫೆಸ್ಟಿವಲ್‌ಗೆ ಹೊರಟ ಐಶ್ವರ್ಯಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಉದ್ದವಾದ ಕಪ್ಪು ಬಣ್ಣದ ಡ್ರೆಸ್ ಧರಿಸಿದ್ದ ಐಶ್ವರ್ಯಾ ಟ್ರೋಲಿಗರಿಗೆ ಆಹಾರವಾಗಿದ್ದರು. ಇದೆಂತ ಡ್ರೆಸ್ ಎಂದು ಕಾಲೆಳೆದಿದ್ದರು. ಯಾರು ಎಷ್ಟೇ ಟ್ರೋಲ್ ಮಾಡಿದರೂ, ಕಾಲೆಳೆದರೂ ಐಶ್ವರ್ಯಾ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆದರೆ ಅಭಿಷೇಕ್ ಬಚ್ಚನ್ ಸೈಲೆಂಟ್ ಆಗಿ ಇರುವುದಿಲ್ಲ. ಟ್ರೋಲ್‌ಗಳಿಗೆ ಸರಿಯಾಗಿ ತಿರುಗೇಟು ನೀಡುತ್ತಾರೆ. ಅನೇಕ ಬಾರಿ ಟ್ರೋಲ್‌ಗಳಿಗೆ ತಿರುಗೇಟು ನೀಡಿ ಸುದ್ದಿಯಾಗಿದ್ದರು. ಪತ್ನಿ ಮತ್ತು ಮಗಳ ಬಗ್ಗೆ ಕಾಲೆಳೆದರೂ ಅಭಿಷೇಕ್ ಬಚ್ಚನ್ ಸರಿಯಾಗಿ ತಿರುಗೇಟು ಮಾಡುತ್ತಾರೆ. 

ಐಶ್ವರ್ಯಾ ಕಾಸ್ಟ್ಯೂಮ್ ಸಹಾಯಕರಿಗೆ 'ಗುಲಾಮರು' ಎಂದು ಅಗ್ನಿಹೋತ್ರಿ ಕಿಡಿ; ನಿರ್ದೇಶಕರ ವಿರುದ್ಧ ಫ್ಯಾನ್ಸ್ ಗರಂ

ಐಶ್ವರ್ಯಾ ರೈ ಕಾಸ್ಟ್ಯೂಮ್‌ ಸಹಾಯಕರನ್ನು ಗುಲಾಮರು ಎಂದ ಅಗ್ನಿಹೋತ್ರಿ 

ಐಶ್ವರ್ಯಾ ಅವರ ರೆಡ್ ಕಾರ್ಪೆಟ್ ವಾಕ್ ಅನ್ನು ಬಾಲಿವುಡ್ ಖ್ಯಾತ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಅಣಕಿಸಿದ್ದಾರೆ. ಸಾಮಾನ್ಯವಾಗಿ ಉದ್ದವಾದ ಗೌನ್ ಹಾಕಿದ್ರೆ ವಾಕ್ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ಕಾಸ್ಟ್ಯೂಮ್ ಡಿಸೈನರ್ ಪಕ್ಕದಲ್ಲೇ ಇದ್ದು ಸಹಾಯ ಮಾಡುತ್ತಾರೆ. ಇದನ್ನು ನೋಡಿ ವಿವೇಕ್ ಅಗ್ನಿಹೋತ್ರಿ ಗುಲಾಮರು ಎಂದು ಹೇಳಿದ್ದಾರೆ. 

ಐಶ್ವರ್ಯಾ ರೈಯಿಂದ ಪ್ರಿಯಾಂಕಾ ಚೋಪ್ರಾವರೆಗೆ: ಬಣ್ಣ ಬಣ್ಣದ ಲಿಪ್ಸ್ಟಿಕ್‌ ಹಾಕಿ ಟ್ರೋಲ್ ಆದ ನಟಿಯರು

ಐಶ್ವರ್ಯಾ ರೈ ಅವರ ಫೋಟೋ ಶೇರ್ ಮಾಡಿ ಅಗ್ನಿಹೋತ್ರಿ, 'ನೀವು ಕಾಸ್ಟ್ಯೂಮ್ ಗುಲಾಮರು ಎನ್ನುವ ಪದ ಕೇಳಿದ್ದೀರಾ? ಅದರಲ್ಲೂ ಹೆಚ್ಚಾಗಿ ಹುಡುಗಿಯರು. ನೀವು ಈಗ ಅವರನ್ನು ಭಾರತದಲ್ಲಿಯೂ ಸಹ ಪ್ರತಿಯೊಬ್ಬ ಮಹಿಳಾ ಸೆಲೆಬ್ರಿಟಿಗಳೊಂದಿಗೆ ನೋಡಬಹುದು. ಇಂತಹ ಅಹಿತಕರ ಫ್ಯಾಷನ್‌ಗಾಗಿ ನಾವು ಏಕೆ ಮೂರ್ಖರಾಗುತ್ತಿದ್ದೇವೆ ಮತ್ತು ದಬ್ಬಾಳಿಕೆ ಮಾಡುತ್ತಿದ್ದೇವೆ?' ಎಂದು ಅಗ್ನಿಹೋತ್ರಿ ಪ್ರಶ್ನೆ ಮಾಡಿದ್ದರು.    
 

Follow Us:
Download App:
  • android
  • ios