userpic
user icon

ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ನೇಮಕಾತಿ 2025: ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು

NIA Recruitment 2025 Apply Offline for 98 Inspector post gow
NIA Recruitment

Synopsis

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 98 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜೂನ್ 7, 2025 ಕೊನೆಯ ದಿನ.

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಲ್ಲಿ ಖಾಲಿ ಇರುವ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ. 

ಹುದ್ದೆಯ ಹೆಸರು: ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್
ಒಟ್ಟು ಹುದ್ದೆಗಳು: 98 
ವಿದ್ಯಾರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು.
ಅರ್ಜಿಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

ವೇತನ ಶ್ರೇಣಿ: ರಾಷ್ಟ್ರೀಯ ತನಿಖಾ ಸಂಸ್ಥೆ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಮಾಸಿಕ 29,200-1,42,400 ವೇತನ ನಿಗದಿಪಡಿಸಲಾಗಿದೆ.
 
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿಸಲ್ಲಿಸುವ ವಿಧಾನ: ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆ ಮತ್ತು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ‌‌ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಅಥವಾ ಮೊದಲು ಕಳುಹಿಸಿ.‌‌

ವಿಳಾಸ: BSP (Adm) NIA HQ, CGO ಕಾಂಪ್ಲೆಕ್ಸ್ ಎದುರು ಲೋಧಿ ರಸ್ತೆ ನವದೆಹಲಿ-110003, 
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಏ.25, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂ.07,2025

ಏ.22ರ ಭೀಕರ ಪಹಲ್ಗಾಂ ನರಮೇಧದ ಬಳಿಕ ಬಿಲ ಸೇರಿರುವ ಉಗ್ರರ ಹುಡುಕಾಟಕ್ಕೆ ಭದ್ರತಾ ಪಡೆಗಳು ಭಾರೀ ಕಾರ್ಯಾಚರಣೆ ಮುಂದುವರೆಸಿವೆ. ಈ ನಡುವೆ ಘಟನೆ ಬಳಿಕ ಪರಾರಿಯಾಗಿರುವ ಉಗ್ರರು, ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳಿಗೆ ಖ್ಯಾತಿ ಹೊಂದಿರುವ ದಕ್ಷಿಣದ ಕಾಶ್ಮೀರದಲ್ಲೇ ಅಡಗಿರುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿಯನ್ನು ಕಲೆ ಹಾಕುವಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯಶಸ್ವಿಯಾಗಿದೆ.

ದಾಳಿಯ ಬಳಿಕ ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸುವುದು ಖಚಿತವಿದ್ದ ಕಾರಣ, ತಾವು ಅಡಗಿರುವ ಸ್ಥಳದಲ್ಲೇ ಸುದೀರ್ಘ ಅವಧಿಗೆ ಬೇಕಾದ ಆಹಾರ ವ್ಯವಸ್ಥೆಗಳನ್ನು ಅವರು ಮಾಡಿಕೊಂಡಿದ್ದಾರೆ. ದಾಳಿ ವೇಳೆ ಕೇವಲ ಮೂವರು ಉಗ್ರರು ಕಾಣಿಸಿಕೊಂಡಿದ್ದರಾದರೂ, ಅವರಿಗೆ ಬೆನ್ನೆಲುಬಾಗಿ ಇನ್ನಷ್ಟು ಜನ ಇದ್ದಿರುವ ಸಾಧ್ಯತೆಯೂ ಹೆಚ್ಚಿದೆ ಎಂದು ಎನ್‌ಐಎ ಮೂಲಗಳು ಹೇಳಿವೆ.

ಅರು ಕಣಿವೆ, ಅಮ್ಯೂಸ್‌ಮೆಂಟ್‌ ಪಾರ್ಕ್, ಬೆಟಾಬ್‌ ಕಣಿವೆ ದಾಳಿಗೂ ಸಂಚು
ಪಹಲ್ಗಾಂನ ಬೈಸರನ್ ಪ್ರದೇಶದಲ್ಲಿ ದಾಳಿಗೂ ಮುನ್ನ ಭಯೋತ್ಪಾದಕರು 2 ದಿನಗಳ ಹಿಂದೆ ಬೈಸರನ್ ಕಣಿವೆ ಜೊತೆಗೆ ಇನ್ನು ಮೂರು ಸ್ಥಳಗಳ ದಾಳಿಗೆ ಸಂಚು ರೂಪಿಸಿದ್ದರು. ಆದರೆ ಅದು ವಿಫಲವಾಗಿತ್ತು ಎನ್ನುವುದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ.

ಪಹಲ್ಗಾಂ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕೈಗೊಂಡಿದ್ದು, ಈ ವೇಳೆ ಹಲವು ಸ್ಫೋಟಕ ಸತ್ಯಗಳು ಬಯಲಾಗಿವೆ. ಮೂಲಗಳ ಪ್ರಕಾರ, ಭಯೋತ್ಪಾದಕರು ಬೈಸರನ್‌ ಕಣಿವೆ ಜೊತೆಗೆ ಅರು ಕಣಿವೆ, ಅಮ್ಯೂಸ್‌ಮೆಂಟ್‌ ಪಾರ್ಕ್ ಮತ್ತು ಬೇತಾಬ್‌ ಕಣಿವೆಯಲ್ಲಿಯೂ ದಾಳಿಗೆ ಸಂಚು ರೂಪಿಸಿದ್ದರು. ಆದರೆ ಆ ಸ್ಥಳಗಳಲ್ಲಿ ಭದ್ರತೆಯಿದ್ದ ಕಾರಣಕ್ಕೆ ಅವರ ಪ್ಲ್ಯಾನ್‌ ವಿಫಲಗೊಂಡಿತ್ತು. ಜೊತೆಗೆ ದಾಳಿಗೂ ಎರಡು ದಿನಗಳ ಮೊದಲೇ ಭಯೋತ್ಪಾದಕರು ಬೈಸರನ್‌ ಕಣಿವೆಯಲ್ಲಿದ್ದರು. ಸ್ಥಳ್‍ಗಳ ಹುಡುಕಾಟಕ್ಕೆ ಇವರಿಗೆ ನಾಲ್ವರು ಭೂಗತ ಕಾರ್ಮಿಕರು ನೆರವು ನೀಡಿದ್ದರು ಎನ್ನುವುದು ಬಯಲಾಗಿದೆ. ತನಿಖೆ ಭಾಗವಾಗಿ ಇದುವರೆಗೆ 20 ಭೂಗತ ಕಾರ್ಮಿಕರನ್ನು ಪತ್ತೆಹಚ್ಚಿದ್ದು ಕೆಲವರನ್ನು ಬಂಧಿಸಲಾಗಿದೆ. ಜೊತೆಗೆ 186 ಕಾರ್ಮಿಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

Download App

Latest Videos