ನೋಟ್ ಬ್ಯಾನ್: ಸಿಂಗ್ ಮುಂದೆ ಕೈಕಟ್ಟಿ ನಿಂತ ಉರ್ಜಿತ್!
ಸಂಸತ್ ಸಮಿತಿ ಮುಂದೆ ಹಾಜರಾದ ಆರ್ಬಿಐ ಗರ್ವನರ್! ನೋಟು ನಿಷೇಧ, ಎನ್ಪಿಎ ಕುರಿತಂತೆ ವಿವರಣೆ ನೀಡಿದ ಉರ್ಜಿತ್ ಪಟೇಲ್! ಕೇಂದ್ರ-ಆರ್ಬಿಐ ತಿಕ್ಕಾಟದ ಬಳಿಕ ಸಂಸತ್ ಸಮಿತಿ ಮುಂದೆ ಉರ್ಜಿತ್! ಡಾ. ಸಿಂಗ್ ಸದಸ್ಯ , ವೀರಪ್ಪ ಮೊಯ್ಲಿ ಅಧ್ಯಕ್ಷರಾಗಿರುವ ಸಮಿತಿ
ನವದೆಹಲಿ(ನ.27): ನೋಟು ನಿಷೇಧ, ಎನ್ಪಿಎ ಕುರಿತಂತೆ ವಿವರಣೆ ನೀಡಲು ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್, ಸಂಸತ್ ಸಮಿತಿ ಎದುರು ಹಾಜರಾಗಿದ್ದಾರೆ.
ನ.12 ರಂದೇ ಉರ್ಜಿತ್ ಪಟೇಲ್ ಸಂಸತ್ ಸಮಿತಿ ಎದುರು ಹಾಜರಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ-ಆರ್ಬಿಐ ನೊಂದಿಗಿನ ತಿಕ್ಕಾಟದ ನಂತರ ಇಂದು ಸಂಸತ್ ಸಮಿತಿ ಎದುರು ಅವರು ಹಾಜರಾಗಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಈ ಸಮಿತಿಯ ಸದಸ್ಯರಾಗಿದ್ದು, ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.