ನ್ಯೂಯಾರ್ಕ್‌ನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಜಿರಳೆ ಇದ್ದಿದ್ದು ಹೇಗೆ ಮತ್ತು ಆನ್‌ಬೋರ್ಡ್ ಸುರಕ್ಷತಾ ಸಾಧನಗಳಿಲ್ಲದಿರುವುದು ಹೇಗೆ ಎಂದೂ ಸೋಮವಾರ ಅಧಿಕಾರಿ ಈ ಬಗ್ಗೆ ವಿಮಾನಯಾನ ಸಂಸ್ಥೆಯನ್ನು ವಿಚಾರಿಸಿದ್ದಾರೆ.

ನವದೆಹಲಿ (ಮಾರ್ಚ್‌ 21, 2023): ಏರ್‌ ಇಂಡಿಯಾ ವಿರುದ್ಧ ಕೆಲ ತಿಂಗಳುಗಳಿಂದ ನಾನಾ ಆರೋಪಗಳು ಕೇಳಿಬರುತ್ತಲೇ ಇವೆ. ಅಲ್ಲದೆ, ಆ ಸಂಸ್ಥೆಯ ವಿಮಾನಗಳಲ್ಲಿ ಹಲವು ವಿವಾದಾತ್ಮಕ ಘಟನೆಗಳು ನಡೆಯುತ್ತಿವೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ವಿಶ್ವಸಂಸ್ಥೆಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ಏರ್‌ ಇಂಡಿಯಾ ವಿಮಾನದ ಕೆಟ್ಟ ಸೇವೆಯನ್ನು ಟೀಕಿಸಿದ್ದಾರೆ. ಕಳೆದ ವಾರ, ನ್ಯೂಯಾರ್ಕ್‌ನಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ಅವರು ಏರ್‌ ಇಂಡಿಯಾ ವಿಮಾನದಲ್ಲಿ ಕಂಡುಬಂದ ಚಿತ್ರಣವನ್ನು ಟ್ವೀಟ್‌ ಮಾಡಿದ್ದು, ಇದಕ್ಕೆ ಸಾಕ್ಷಿಗೆ ಫೋಟೋಗಳನ್ನೂ ಅಪ್ಲೋಡ್‌ ಮಾಡಿದ್ದಾರೆ.

ನ್ಯೂಯಾರ್ಕ್‌ನಿಂದ ನವದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿಶ್ವಸಂಸ್ಥೆಯ ರಾಜತಾಂತ್ರಿಕ ಅಧಿಕಾರಿ ಏರ್‌ ಇಂಡಿಯಾ ವಿಮಾನದಲ್ಲಿ ಜಿರಳೆಗಳು ಇರುವ ಬಗ್ಗೆ ಹಾಗೂ ಮುರಿದ ಸೀಟು ಮತ್ತು ವಿಮಾನದಲ್ಲಿ "ಮನರಂಜನೆ/ಕಾಲ್ ಬಟನ್‌ಗಳು/ ರೀಡಿಂಗ್ ಲೈಟ್‌ಗಳು" ಇಲ್ಲದಿರುವ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ್ದು, ಈ ಸಂಬಂಧ ಟ್ವೀಟ್‌ ಮಾಡಿದ್ದಾರೆ. "ಯುಎನ್ ರಾಜತಾಂತ್ರಿಕನಾಗಿ, ನಾನು ವಿಶ್ವಾದ್ಯಂತ ವಿಮಾನಗಳಲ್ಲಿ ಪ್ರಯಾಣಿಸಿದ್ದೇನೆ, ಆದರೆ ಏರ್ ಇಂಡಿಯಾ 102 ಜೆಎಫ್‌ಕೆ ದೆಹಲಿಗೆ ಬರುತ್ತಿದ್ದ ವಿಮಾನ ನನ್ನ ಕೆಟ್ಟ ಹಾರಾಟದ ಅನುಭವ: ಮುರಿದ ಆಸನಗಳು, ಮನರಂಜನೆ/ಕಾಲ್ ಬಟನ್‌ಗಳು/ರೀಡಿಂಗ್‌ ಲೈಟ್‌ಗಳಿಲ್ಲ ಮತ್ತು ಜಿರಳೆಗಳಿದ್ದವು. ಗ್ರಾಹಕರ ಆರೈಕೆಯನ್ನು ಕಡೆಗಣಿಸಿ ಪಾಯ್ಸನ್‌ ಸ್ಪ್ರೇ ಮಾಡಲಾಗಿತ್ತು’’ ಎಂದೂ ರಾಜತಾಂತ್ರಿಕ ಅಧಿಕಾರಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ: ಮುಂಬೈಗೆ ಬರ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯಿಂದ ಧೂಮಪಾನ: ಸಿಕ್ಕಿಬಿದ್ದ ಬಳಿಕ ಹುಚ್ಚು ಹುಚ್ಚಾಗಿ ಆಡ್ದ..!

Scroll to load tweet…

ಅಲ್ಲದೆ, ನ್ಯೂಯಾರ್ಕ್‌ನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಜಿರಳೆ ಇದ್ದಿದ್ದು ಹೇಗೆ ಮತ್ತು ಆನ್‌ಬೋರ್ಡ್ ಸುರಕ್ಷತಾ ಸಾಧನಗಳಿಲ್ಲದಿರುವುದು ಹೇಗೆ ಎಂದೂ ಸೋಮವಾರ ಅಧಿಕಾರಿ ಈ ಬಗ್ಗೆ ವಿಮಾನಯಾನ ಸಂಸ್ಥೆಯನ್ನು ವಿಚಾರಿಸಿದ್ದಾರೆ. ‘’ನ್ಯೂಯಾರ್ಕ್‌ನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ ಜಿರಳೆಗಳಿಂದ ಹೇಗೆ ಮುತ್ತಿಕೊಂಡಿವೆ ಮತ್ತು ಕಾರ್ಯಾಚರಣೆಯಲ್ಲದ ಗುಣಮಟ್ಟದ ಆನ್‌ಬೋರ್ಡ್ ಸುರಕ್ಷತಾ ಸಾಧನಗಳನ್ನು ಹೇಗೆ ಹೊಂದಿವೆ ಎಂಬುದರ ಕುರಿತು ಯಾವುದೇ ಆಲೋಚನೆಗಳು ಮತ್ತು ಕಾಮೆಂಟ್‌ಗಳು?" ಎಂದು ರಾಜತಾಂತ್ರಿಕರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್‌ ವೈರಲ್‌ ಆಗ್ತಿದ್ದಂತೆ, ರಾಜತಾಂತ್ರಿಕ ಅಧಿಕಾರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುವ ಮೂಲಕ ಏರ್‌ ಇಂಡಿಯಾ ಟ್ವೀಟ್‌ಗೆ ಉತ್ತರಿಸುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ.

ಇದೇ ರೀತಿ, 2019 ರಲ್ಲಿ, ಪ್ರಯಾಣಿಕರೊಬ್ಬರು ಭೋಪಾಲ್-ಮುಂಬೈ ವಿಮಾನದಲ್ಲಿ ಬಡಿಸಿದ ಆಹಾರದಲ್ಲಿ ಜಿರಳೆಯನ್ನು ಕಂಡುಕೊಂಡರು. ಏರ್ ಇಂಡಿಯಾ ಇದಕ್ಕಾಗಿ ಕ್ಷಮೆಯಾಚಿಸಿತ್ತು ಮತ್ತು ಏರ್‌ಲೈನ್ "ಆಂತರಿಕವಾಗಿ ಸರಿಪಡಿಸುವ ಕ್ರಮ" ಪ್ರಾರಂಭಿಸಿದೆ ಎಂದು ಹೇಳಿತ್ತು. ವಿಮಾನಗಳಲ್ಲಿ ಪ್ರಯಾಣಿಕರಿಂದ ಅಶಿಸ್ತಿನ ವರ್ತನೆಯ ಅಪಘಾತಗಳು ಹೆಚ್ಚಾಗುವುದರೊಂದಿಗೆ, ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಸಂಘಟಿತ ಉದ್ಯಮದ ಪ್ರಯತ್ನವು ಮಾತ್ರ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ಹೇಳಿದ್ದರು.

ಇದನ್ನೂ ಓದಿ: ಏರ್‌ ಇಂಡಿಯಾದ ಮೀಸೆ ಮಹಾರಾಜರಿಗೆ ಬರಲಿದ್ದಾಳೆ ಜೋಡಿ: ಲೋಗೋದಲ್ಲಿ ಶೀಘ್ರ ಮಹಿಳೆ ಚಿತ್ರ..!

“[ಪ್ರಯಾಣಿಕರ] ನಡವಳಿಕೆಯು ಯಾವಾಗಲೂ ಸಾರ್ವಜನಿಕ ಪರಿಸರದಲ್ಲಿ ನಿರೀಕ್ಷಿಸುವಂತೆ ಇರದಿರುವುದು ದುರದೃಷ್ಟಕರ. ಉದ್ಯಮವಾಗಿ, ನಾವು ಮುಂದೆ ಹೆಜ್ಜೆ ಇಡಬೇಕು ಮತ್ತು ಯಾವುದು ಸ್ವೀಕಾರಾರ್ಹ ಹಾಗೂ ಯಾವುದು ಸ್ವೀಕಾರಾರ್ಹವಲ್ಲ ಎಂದು ಹೇಳಬೇಕು’’ ಎಂದೂ ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಹೇಳಿದ್ದರು. 

ಇದನ್ನೂ ಓದಿ: 300 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್‌ನಲ್ಲಿ ತುರ್ತು ಭೂಸ್ಪರ್ಶ