ದೇಶಕ್ಕೆ ಸಹಸ್ರಾರು ಕೋಟಿ ಉಳಿಸಿದ ಮಂಗಳೂರು| ಉಡುಪಿಯ ಪಾದೂರಿನಿಂದಲೂ ಕೊಡುಗೆ

ನವದೆಹಲಿ(ಜೂ.04): ಕರ್ನಾಟಕದ ಮಂಗಳೂರು, ಉಡುಪಿ ಜಿಲ್ಲೆಯ ಪಾದೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಭೂಗತ ತೈಲ ಸಂಗ್ರಾಹಾರಗಳಿಂದ ದೇಶಕ್ಕೆ ಬರೋಬ್ಬರಿ 5000 ಕೋಟಿ ರು. ವಿದೇಶಿ ವಿನಿಮಯ ಉಳಿತಾಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಗತ್ತಿನಲ್ಲಿ ತೈಲ ಬೆಲೆ ಕುಸಿತ; ಭಾರತಕ್ಕೆ ಲಾಭವಿದೆಯೇ?

53 ಲಕ್ಷ ಟನ್‌ನಷ್ಟುತುರ್ತು ಇಂಧನ ಸಂಗ್ರಹಕ್ಕೆ ಈ ಮೂರೂ ಕಡೆ ಪೆಟ್ರೋಲಿಯಂ ಸಚಿವಾಲಯ ಭೂಗತ ಸಂಗ್ರಹಾಗಾರ ಹೊಂದಿದೆ. ಏಪ್ರಿಲ್‌ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 2 ದಶಕಗಳ ಕನಿಷ್ಠ ಮಟ್ಟಕ್ಕೆ ಕುಸಿದಾಗ ಕೇಂದ್ರ ಸರ್ಕಾರ ಅಗ್ಗದ ಬೆಲೆಗೆ ತೈಲ ಖರೀದಿಸಿ ಈ ತೈಲ ಸಂಗ್ರಹಾಗಾರಗಳಿಗೆ ತುಂಬಿದೆ. ಆ ವೇಳೆ ಮಂಗಳೂರು ಹಾಗೂ ಪಾದೂರಿನ ಸಂಗ್ರಾಹಾಗಾರಗಳು ಅರ್ಧದಷ್ಟುಖಾಲಿ ಇದ್ದವು. ವಿಶಾಖಪಟ್ಟಣದಲ್ಲಿ ಕೆಲವೇ ಪ್ರಮಾಣದ ಸಂಗ್ರಹಕ್ಕೆ ಜಾಗವಿತ್ತು. ಕೇಂದ್ರ ಸರ್ಕಾರದ ಆ ನಿರ್ಧಾರದಿಂದಾಗಿ 5000 ಕೋಟಿ ರು. ನಷ್ಟುವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಟ್ವೀಟ್‌ ಮಾಡಿದೆ.

ಮಂಗಳೂರು, ಪಾದೂರು, ವಿಶಾಖಪಟ್ಟಣ ಪೈಕಿ ಪಾದೂರು ಘಟಕವೇ ದೊಡ್ಡದು. ಈ ಮೂರೂ ಘಟಕಗಳಲ್ಲಿ 53 ದಶಲಕ್ಷ ಟನ್‌ ತೈಲ ಸಂಗ್ರಹಿಸಬಹುದು. 9.5 ದಿನ ದೇಶದ ಬೇಡಿಕೆ ಈಡೇರಿಸಬಲ್ಲದು.