Published : Aug 15, 2026, 07:28 AM ISTUpdated : Aug 15, 2026, 11:32 PM IST

State News Live: ಶಿಕ್ಷಕರ ನೇಮಕಾತಿ - ವಯೋಮಿತಿ ಸಡಿಲಿಕೆ, ಗಣಿತ ಮತ್ತು ವಿವಿಧ ಭಾಷಾ ಅಭ್ಯರ್ಥಿಗಳಿಗೆ ಅವಕಾಶಕ್ಕೆ ಆಗ್ರಹ

ಸಾರಾಂಶ

ಬೆಂಗಳೂರು (ಆ.15):ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮಾನದಂಡ ಉಲ್ಲಂಘಿಸಿ ಪಡೆಯಲಾಗಿರುವ ಬಿಪಿಎಲ್ ಪಡಿತರ ಚೀಟಿ ಗಳ ರದ್ದು ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಮಾನದಂಡ ಉಲ್ಲಂಘಿಸಿ ಪಡೆದಿರುವ 7.65 ಲಕ್ಷ ಪಡಿತರ ಚೀಟಿಗಳನ್ನು ಶಂಕಾಸ್ಪದ ಪಟ್ಟಿಗೆ ಸೇರಿಸಿ ರಾಜ್ಯಕ್ಕೆ ಕಳುಹಿಸಿತ್ತು. ಹಣದುಬ್ಬರ ಹಿನ್ನಲೆ ಹಳೇ ನಿಯಮ ಪಾಲನೆ ಕಷ್ಟ ಎಂದು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವುದಾಗಿ ರಿಜ್ವಾನ್‌ ಆರ್ಷದ್‌ ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

11:32 PM (IST) Aug 15

ಶಿಕ್ಷಕರ ನೇಮಕಾತಿ - ವಯೋಮಿತಿ ಸಡಿಲಿಕೆ, ಗಣಿತ ಮತ್ತು ವಿವಿಧ ಭಾಷಾ ಅಭ್ಯರ್ಥಿಗಳಿಗೆ ಅವಕಾಶಕ್ಕೆ ಆಗ್ರಹ

ಕರ್ನಾಟಕ ಶಿಕ್ಷಕರ ನೇಮಕಾತಿ 2026ರಲ್ಲಿ ವಯೋಮಿತಿ ಸಡಿಲಿಕೆ, ಗಣಿತ ಶಿಕ್ಷಕರ ಖಾಲಿ ಹುದ್ದೆಗಳ ಸೇರ್ಪಡೆ ಹಾಗೂ ಭಾಷಾ ವೈವಿಧ್ಯತೆಯ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವಂತೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಆಗ್ರಹಿಸಿದೆ.

Read Full Story

11:28 PM (IST) Aug 15

ಆಪ್ ಕೀ ಅದಾಲತ್‌ನಲ್ಲಿ ರಜತ್‌ಗೆ ಕೌಂಟರ್ ಕೊಟ್ಟ ಯಶ್; ಕನ್ನಡಿಗನ ಮಾತಿಗೆ ಇಡೀ ವಿಶ್ವವೇ ಪಿದಾ! ವೈರಲ್‌ ಆದ ರಾಕಿಭಾಯ್ ಆ ಒಂದು ಡೈಲಾಗ್!

'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ 'ಟಾಕ್ಸಿಕ್' ಸಿನಿಮಾ ಕುರಿತ ಪ್ರಶ್ನೆಗಳಿಗೆ ರಾಕಿಂಗ್ ಸ್ಟಾರ್ ಯಶ್ ಖಡಕ್ ಉತ್ತರ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ರಜತ್‌ ಅವರು ಯಶ್‌ಗೆ ‘ಟಾಕ್ಸಿಕ್’ ಸಿನಿಮಾದಲ್ಲಿನ ಒಂದು ದೃಶ್ಯದ ಕುರಿತು ನಕಾರಾತ್ಮಕ ಕಾಮೆಂಟ್‌ ಬಂದಿದೆ ಎಂದು ಹೇಳಲು ಮುಂದಾದರು. ಆಗ ಯಶ್‌ ಹೇಳಿದ ಮಾತೊಂದು ಈಗ ವೈರಲ್‌ ಆಗಿದೆ.

Read Full Story

11:08 PM (IST) Aug 15

ಮಂಗಳೂರು KFC ಮಳಿಗೆ, ಮೈಸೂರಿನ ಹೋಟೆಲ್‌ಗಳ ಮೇಲೆ ಆಹಾರ ಇಲಾಖೆ ದಾಳಿ! ಕೊಳೆತ ಮಾಂಸ ಪತ್ತೆ

ಮಂಗಳೂರು ಮತ್ತು ಮೈಸೂರಿನ ಕೆಎಫ್‌ಸಿ ಹಾಗೂ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು, ದೊಡ್ಡ ಪ್ರಮಾಣದ ಕೊಳೆತ ಮತ್ತು ಅವಧಿ ಮುಗಿದ ಮಾಂಸವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಳಿಗೆಗಳ ಗೋಡೌನ್ ಸೀಜ್ ಮಾಡಲಾಗಿದ್ದು, ಆಹಾರದ ಮಾದರಿಗಳನ್ನು ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Read Full Story

10:46 PM (IST) Aug 15

IAS - ಭ್ರಷ್ಟ ವ್ಯವಸ್ಥೆ ನಿದ್ದೆಗೆಡಿಸಿದ ಭಾರತದ ಆ ಐರನ್ ಐಎಎಸ್' ಆಫೀಸರ್ಸ್; ಈ ಲಿಸ್ಟ್‌ನಲ್ಲಿದೆ ಒಂದು ಕನ್ನಡದ ಕಲಿ!

ಭ್ರಷ್ಟಾಚಾರದಂತಹ ಸವಾಲುಗಳ ನಡುವೆಯೂ ಸಾರ್ವಜನಿಕ ಹಿತಾಸಕ್ತಿಗಾಗಿ ಹೋರಾಡಿದ ಎಂಟು ಪ್ರಾಮಾಣಿಕ ಐಎಎಸ್ ಅಧಿಕಾರಿಗಳ ಸ್ಪೂರ್ತಿದಾಯಕ ಕಥೆಯಿದು. ಇದರಲ್ಲಿದ್ದಾರೆ ಒಬ್ಬ ಕನ್ನಡದ ಕಲಿ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ

Read Full Story

09:58 PM (IST) Aug 15

ಚಾಮರಾಜನಗರ ಶೂಟೌಟ್‌ - ಅರಣ್ಯಾಧಿಕಾರಿ ವಿರುದ್ಧFIR.. ಪ್ರಕರಣದ ಸತ್ಯ ಬಿಚ್ಚಿಟ್ಟ ಐಜಿಪಿ ಬೋರಲಿಂಗಯ್ಯ..!

ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತರು ಕಳೆದುಹೋದ ಹಸುಗಳನ್ನು ಹುಡುಕಲು ಹೋಗಿದ್ದರು ಎಂದು ಕುಟುಂಬಸ್ಥರು ದೂರು ನೀಡಿದ್ದರೆ ಅವರು ಪ್ರಾಣಿ ಬೇಟೆಗೆ ಬಂದು ನಮ್ಮ ಮೇಲೆಯೇ ಮೊದಲು ದಾಳಿ ನಡೆಸಿದ್ದರೆಂದು ಅರಣ್ಯ ಸಿಬ್ಬಂದಿ ಆರೋಪಿಸಿದ್ದಾರೆ.

Read Full Story

09:32 PM (IST) Aug 15

700 ಅಭಿಮಾನಿಗಳಿಗೆ ಯಶ್ ಯಾಕೆ ಪ್ರತ್ಯೇಕ ಸೆಲ್ಫಿ ಕೊಟ್ಟರು? ಕಾರಣ ಕೇಳಿದ್ರೆ ಮನಸ್ಸು ಕರಗುತ್ತೆ!

Yash 700 Fans Selfie: ಸಂದರ್ಶನವೊಂದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಒಂದೇ ಕಾರ್ಯಕ್ರಮದಲ್ಲಿ ಸುಮಾರು 700 ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಸೆಲ್ಫಿ ನೀಡಿದ ಬಗ್ಗೆ ಪ್ರಶ್ನೆ ಕೇಳಲಾಗಿದೆ.

Read Full Story

09:11 PM (IST) Aug 15

ಎಲ್ಲವೂ ರಾಯರ ಪವಾಡ - ಸಾವಿನ ದವಡೆಯಿಂದ ಪಾರಾದ MBBS ವಿದ್ಯಾರ್ಥಿನಿ! ವೀಲ್ ಚೇರ್‍‌ನಿಂದ ಎದ್ದು ಓಡಾಡಿದ್ದು ಹೇಗೆ?

ಅಪರೂಪದ ಕಾಯಿಲೆಯಿಂದ ವೀಲ್ ಚೇರ್ ಗೆ ಸೀಮಿತವಾಗಿದ್ದ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿನಿ ನಿವೇದಿತಾ, ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ ಪವಾಡಸದೃಶವಾಗಿ ಗುಣಮುಖರಾಗಿದ್ದಾರೆ. ವೈದ್ಯಕೀಯ ವಿಜ್ಞಾನವೇ ಕೈಚೆಲ್ಲಿದ್ದ ಈ ಕಾಯಿಲೆಯು ರಾಯರ ಮಂತ್ರಾಕ್ಷತೆಯ ಮಹಿಮೆಯಿಂದ ಕೇವಲ ಮೂರೇ ವಾರಗಳಲ್ಲಿ ವಾಸಿಯಾಗಿದ್ದು, ಯುವತಿ ಈಗ ಮೊದಲಿನಂತೆ ಓಡಾಡುತ್ತಿದ್ದಾಳೆ.

Read Full Story

08:56 PM (IST) Aug 15

Post office Scheme - ಇಂಡಿಯನ್‌ ಪೋಸ್ಟ್‌ನಿಂದ ಗುಡ್‌ ನ್ಯೂಸ್; ಉಳಿತಾಯ ಖಾತೆದಾರರಿಗೆ ಸಿಗಲಿದೆ ಈ ಹೆಚ್ಚುವರಿ ಸೌಲಭ್ಯ!

ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಅಂಚೆ ಜೀವ ವಿಮೆ (RPLI) ಯೋಜನೆಯ ಅರ್ಹತಾ ನಿಯಮಗಳನ್ನು ಬದಲಾಯಿಸಿದೆ. ಈ ಹೊಸ ನಿಯಮದ ಪ್ರಕಾರ, ಯಾವುದೇ ಪರಿಶಿಷ್ಟ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವವರು ಸಹ ಈ ವಿಮಾ ಯೋಜನೆಯನ್ನು ಪಡೆಯಬಹುದು. ಈ ಬದಲಾವಣೆಯು ಹೆಚ್ಚು ಜನರಿಗೆ ಕೈಗೆಟುಕುವ ದರದಲ್ಲಿ ಜೀವ ವಿಮಾ ರಕ್ಷಣೆ ಒದಗಿಸುವ ಗುರಿ ಹೊಂದಿದೆ.
Read Full Story

08:12 PM (IST) Aug 15

ನಾಯಿಗಳು ಟೈರ್, ಕಂಬ, ಗೋಡೆ ಮೇಲೆಯೇ ಮೂತ್ರ ಮಾಡೋದು ಯಾಕೆ? ಇಲ್ಲಿದೆ ಅಸಲಿ ಕಾರಣ

ಸುತ್ತಮುತ್ತ ಸಾಕಷ್ಟು ಖಾಲಿ ಜಾಗವಿದ್ದರೂ ನಾಯಿಗಳು ಬಂದು ವಾಹನದ ಟೈರ್, ವಿದ್ಯುತ್ ಕಂಬ, ಗೋಡೆ ಅಥವಾ ಮರದಂತಹ ಲಂಬವಾದ ಜಾಗಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡುವುದನ್ನು ಗಮನಿಸಿರಬಹುದು.

Read Full Story

08:10 PM (IST) Aug 15

ಜ್ಯೇಷ್ಠವರ್ಧನ್ ಗ್ರಾಂಡ್ ಎಂಟ್ರಿ.. ವಿಷ್ಣುವರ್ಧನ್ ಮೊಮ್ಮಗ, ಅನಿರುದ್ದ್ ಮಗನ ಸಿನಿಮಾ ಶೀಘ್ರದಲ್ಲೇ ಶುರು!

'ಹೆಚ್ಚಿನ ಮನೆಗಳಲ್ಲಿ ನನ್ನ ವಯಸ್ಸಿನ ಹುಡುಗರಿಗೆ 'ಓದು' ಎಂದು ಹೇಳಿದರೆ, ನಮ್ಮ ಮನೆಯಲ್ಲಿ ಮಾತ್ರ 'ಸಿನಿಮಾ ನೋಡು' ಎಂದು ಪ್ರೋತ್ಸಾಹಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಮನೆಯೇ ನನ್ನ ಮೊದಲ ಪಾಠಶಾಲೆ' ಎಂದಿದ್ದಾರೆ ಜ್ಯೇಷ್ಠವರ್ಧನ್. ಸದ್ಯದಲ್ಲೇ ಸಿನಿಮಾ ಶುರುವಾಗಲಿದೆ.

Read Full Story

08:06 PM (IST) Aug 15

Personal Loan - ಲೋನ್ ಬೇಗ ಕ್ಲೋಸ್ ಮಾಡುವ ಪ್ಲಾನ್ ಇದೆಯಾ? ಹಾಗಾದ್ರೆ ಈ ವಿಚಾರ ಮಿಸ್ ಮಾಡ್ಬೇಡಿ!

ಪರ್ಸನಲ್ ಲೋನ್‌ ಅನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ತೀರಿಸುವುದರಿಂದ ಬಡ್ಡಿ ಉಳಿತಾಯವಾಗಬಹುದು, ಆದರೆ ಇದು ಕ್ರೆಡಿಟ್ ಸ್ಕೋರ್ ಅನ್ನು ತಕ್ಷಣವೇ ಹೆಚ್ಚಿಸುವುದಿಲ್ಲ. ಸಾಲವನ್ನು ಪೂರ್ವಪಾವತಿ ಮಾಡುವ ಮುನ್ನ, ಪೂರ್ವಪಾವತಿ ಶುಲ್ಕ, ತುರ್ತು ನಿಧಿಯ ಲಭ್ಯತೆ ಮತ್ತು ನಿಮ್ಮ ಕ್ರೆಡಿಟ್ ಇತಿಹಾಸದ ಮೇಲೆ ಆಗುವ ಪರಿಣಾಮಗಳನ್ನು ಪರಿಗಣಿಸುವುದು ಅತ್ಯಗತ್ಯ.
Read Full Story

07:47 PM (IST) Aug 15

‘Disney Queen’ ರೀತಿ ಕಾಣ್ತಾರೆ - ‘ಟಾಕ್ಸಿಕ್’ನಲ್ಲಿ ಈ ನಟಿಯ ಸೌಂದರ್ಯಕ್ಕೆ ಯಶ್ ಫುಲ್ ಫಿದಾ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿತ್ರದ ತಾರಾಗಣದ ಹೇಳಿಕೆಗಳು ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಿವೆ.

Read Full Story

06:50 PM (IST) Aug 15

‘ಟಾಕ್ಸಿಕ್’ನಲ್ಲಿ ಮೆಲ್ಲಿಸಾ ಪಾತ್ರವೇ ವಿಭಿನ್ನ - ಯಶ್ ಜೊತೆ ನಟಿಸಿದ ಅನುಭವದ ಬಗ್ಗೆ ರುಕ್ಮಿಣಿ ವಸಂತ್ ಮಾತು

ಮುಂಬೈನಲ್ಲಿ ನಡೆದ ಚಿತ್ರದ ಮ್ಯೂಸಿಕ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ರುಕ್ಮಿಣಿ ವಸಂತ್, ‘ಟಾಕ್ಸಿಕ್’ ತಮ್ಮ ವೃತ್ತಿಜೀವನದ ಅತ್ಯಂತ ವಿಭಿನ್ನ ಸಿನಿಮಾಗಳಲ್ಲಿ ಒಂದು ಎಂದು ಹೇಳಿದ್ದಾರೆ.

Read Full Story

06:44 PM (IST) Aug 15

ಕುಮಟಾದಲ್ಲಿ ಶೂಟಿಂಗ್.. ಮತ್ತೆ ಕನ್ನಡಕ್ಕೆ ಬಂದ ʻಕೆಜಿಎಫ್‌ʼ ನಟಿ ಶ್ರೀನಿಧಿ ಶೆಟ್ಟಿ; ಹೀರೋ ಯಾರು? ಯಾವ ಸಿನಿಮಾ?

ಕೇವಲ ಕನ್ನಡ ಮಾತ್ರವಲ್ಲ, ತೆಲುಗಿನಲ್ಲೂ ಶ್ರೀನಿಧಿ ಶೆಟ್ಟಿ ಹವಾ ಜೋರಾಗಿದೆ. ತೆಲುಗಿನ ‘ವಿಕ್ಟರಿ’ ವೆಂಕಟೇಶ್ ನಟನೆಯ ‘ಆದರ್ಶ ಕುಟುಂಬಂ’ ಸಿನಿಮಾದಲ್ಲಿ ಶ್ರೀನಿಧಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 2 ರಂದು ಈ ಚಿತ್ರ ತೆರೆಗೆ ಬರಲಿದೆ. ಇದರ ನಡುವೆಯೇ ಕನ್ನಡಕ್ಕೆ ಮರಳಿದ್ದಾರೆ ಶ್ರೀನಿಧಿ ಶೆಟ್ಟಿ!

Read Full Story

06:18 PM (IST) Aug 15

Cricket - ಮ್ಯಾಚ್ ನಡೆಯುವಾಗಲೇ ಫೋನ್‌ನಲ್ಲಿ ಗರ್ಲ್‌ಫ್ರೆಂಡ್ ಜೊತೆ ಮಾತು; 26 ವರ್ಷದ ಸ್ಟಾರ್ ಕ್ರಿಕೆಟರ್‌ಗೆ ಬಿಬಿಸಿಐ ಶಾಕ್!

ತಮಿಳುನಾಡು ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ನಿಷೇಧಿತ ಪ್ರದೇಶದಲ್ಲಿ ಮೊಬೈಲ್ ಬಳಸಿ ಗೆಳತಿಗೆ ಸಂದೇಶ ಕಳುಹಿಸಿದ್ದಕ್ಕಾಗಿ 26 ವರ್ಷದ ಆಲ್‌ರೌಂಡರ್‌ಗೆ ಬಿಸಿಸಿಐ 1 ಲಕ್ಷ ರೂ. ದಂಡ ವಿಧಿಸಿದೆ. ಭ್ರಷ್ಟಾಚಾರದ ಉದ್ದೇಶ ಇಲ್ಲದಿರುವುದರಿಂದ, ಆರಂಭದಲ್ಲಿ ಪರಿಗಣಿಸಲಾಗಿದ್ದ ನಿಷೇಧದ ಬದಲು ದಂಡದ ಶಿಕ್ಷೆ ವಿಧಿಸಿ ಎಚ್ಚರಿಕೆ ನೀಡಲಾಗಿದೆ.
Read Full Story

06:15 PM (IST) Aug 15

ಜಮೀರ್, ನಾಗೇಂದ್ರರನ್ನು ಸಂಪುಟದಿಂದ ಕೈಬಿಡಿ - ಸರ್ಕಾರಕ್ಕೆ ಜನಾರ್ದನ ರೆಡ್ಡಿ ಎಚ್ಚರಿಕೆ ಕೊಟ್ಟಿದ್ಯಾಕೆ?

ಅಭಿವೃದ್ಧಿಗೆ ಮೀಸಲಾದ ಹಣ ದುರುಪಯೋಗ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾಗಿರುವ ವಿಚಾರ ಮುಂದಿಟ್ಟುಕೊಂಡು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Read Full Story

06:07 PM (IST) Aug 15

ಧರೆಯ ದೊರೆ ಯಶ್ ಹೇಳಲಿದ್ದಾರೆ 'ಅಜ್ಜಿಯ ಕಥೆ'.. ರಾಕಿಂಗ್ ಸ್ಟಾರ್ ಆ 'ಫೇರಿ ಟೇಲ್'ನಲ್ಲಿ ಏನೆಲ್ಲಾ ಇದೆ?

'ಇರುವುದನ್ನೆಲ್ಲಾ ಅತ್ಯಂತ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ. ಪ್ರತಿಯೊಂದು ಫ್ರೇಮ್ ಕೂಡ ಒಂದು ಕಥೆ ಹೇಳುತ್ತದೆ. ಸಿನಿಮಾದ ಒಂದು ತುಣುಕನ್ನು ನೋಡಿ ಇಡೀ ಸಿನಿಮಾವನ್ನು ಜಡ್ಜ್ ಮಾಡುವುದು ತಪ್ಪು' ಎಂದಿದ್ದಾರೆ ಯಶ್. ಟಾಕ್ಸಿಕ್‌ನಲ್ಲಿ ಹೇಳಿರುವ ಅಜ್ಜಿಯ ಕಥೆ ಏನು ಹಾಗಿದ್ರೆ..?

Read Full Story

06:03 PM (IST) Aug 15

ಶ್ರಾವಣ ಶನಿವಾರ ಅಂಜನಾದ್ರಿಯಲ್ಲಿ ಭಕ್ತಸಾಗರ - ತ್ರಿವರ್ಣ ಹೂಗಳಿಂದ ಕಂಗೊಳಿಸಿದ ಆಂಜನೇಯ

Anjanadri: ಶ್ರಾವಣ ಮಾಸದ ಮೊದಲ ಶನಿವಾರ ಹಾಗೂ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಭಕ್ತರ ದಂಡೇ ಹರಿದುಬಂದಿದೆ. ಹನುಮಂತನ ಜನ್ಮಸ್ಥಳವೆಂದು ನಂಬಲಾಗುವ ಅಂಜನಾದ್ರಿ ಬೆಟ್ಟದ..

Read Full Story

05:54 PM (IST) Aug 15

ಪವಿತ್ರ ಗೌಡ ಸ್ಥಳಾಂತರ, ದರ್ಶನ್‌ಗೂ ಬಿಗಿ ಹಿಡಿದ ಜೈಲು ಅಧಿಕಾರಿಗಳು.. ಇಷ್ಟಕ್ಕೆಲ್ಲ ಕಾರಣ ಪ್ರಜ್ವಲ್‌ ರೇವಣ್ಣ

ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಭದ್ರತೆಯನ್ನು ತೀವ್ರಗೊಳಿಸಿ ಹೈಪ್ರೊಫೈಲ್ ಕೈದಿಗಳ ಮೇಲೆ ಬಿಗಿ ಕಣ್ಗಾವಲು ಇಡಲಾಗಿದೆ. ಹೊಸ ನಿಯಮಗಳ ಭಾಗವಾಗಿ, ನಟ ದರ್ಶನ್ ಅವರ ಬ್ಯಾರಕ್ ಸುತ್ತ ಸಿಸಿಟಿವಿ ಕಣ್ಗಾವಲು ಹೆಚ್ಚಿಸಲಾಗಿದ್ದು, ಸಹ-ಆರೋಪಿ ಪವಿತ್ರಾಗೌಡ ಅವರನ್ನು 16 ಕೈದಿಗಳಿರುವ ದೊಡ್ಡ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ.

Read Full Story

05:50 PM (IST) Aug 15

Viral - ಅದೃಷ್ಟಕ್ಕೆ ಕಣ್ಣಿಲ್ಲ, ಸಮಯಕ್ಕೆ ಮಿತಿಯಿಲ್ಲ; ಸತತ ಸೋಲುಗಳ ನಂತರ ಹೊಡೆಯಿತು 13 ಸಾವಿರ ಕೋಟಿ ರೂ.,ಗಳ ಜಾಕ್‌ಪಾಟ್!

ಅಮೆರಿಕದ ಇಲಿನಾಯ್ಸ್ ನಿವಾಸಿಯೊಬ್ಬರು ಸತತ 44 ಸೋಲುಗಳ ನಂತರ 13,357 ಕೋಟಿ ರೂಪಾಯಿಗಳ ಬೃಹತ್ ಲಾಟರಿ ಜಾಕ್‌ಪಾಟ್ ಗೆದ್ದಿದ್ದಾರೆ. 45ನೇ ಪ್ರಯತ್ನದಲ್ಲಿ ಈ ಅದೃಷ್ಟ ಒಲಿದಿದ್ದು, ವಿಜೇತರಿಗೆ ಹಣ ಪಡೆಯಲು ಎರಡು ಆಯ್ಕೆಗಳನ್ನು ನೀಡಲಾಗಿದೆ.
Read Full Story

05:41 PM (IST) Aug 15

‘ಜೈ ಹನುಮಾನ್’ನಲ್ಲಿ ಶ್ರೀರಾಮ ಯಾರು? ರಿಷಬ್ ಶೆಟ್ಟಿ ಹನುಮಂತನಾದ ಬೆನ್ನಲ್ಲೇ ಹೆಚ್ಚಿದ ಕುತೂಹಲ!

Jai Hanuman Rishab Shetty: ‘ಹನು-ಮಾನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ ಬಳಿಕ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಸಿನಿಮಾಟಿಕ್ ಯೂನಿವರ್ಸ್‌ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ.

Read Full Story

05:40 PM (IST) Aug 15

ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ ನಿಂದ ಉದ್ಯೋಗದ ಕರೆ - 39 ಹುದ್ದೆಗಳಿಗೆ ಭರ್ಜರಿ ನೇಮಕಾತಿ

ಇಂಡಿಯನ್ ರೇರ್ ಅರ್ಥ್ಸ್ ಲಿಮಿಟೆಡ್ (IREL) ತನ್ನ ತಮಿಳುನಾಡಿನ ಕನ್ಯಾಕುಮಾರಿ ಘಟಕದಲ್ಲಿ 39 ಅಪ್ರೆಂಟಿಸ್ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ITI, ಡಿಪ್ಲೊಮಾ, ಮತ್ತು B.E/B.Tech ಪದವೀಧರರು ಈ ಹುದ್ದೆಗಳಿಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯು ಟ್ರೇಡ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ನಡೆಯಲಿದೆ. ಆಯ್ಕೆಯು ಟ್ರೇಡ್ ಟೆಸ್ಟ್ ಮತ್ತು ನೇರ ಸಂದರ್ಶನದ ಮೂಲಕ ನಡೆಯಲಿದೆ.

Read Full Story

05:24 PM (IST) Aug 15

ಕರ್ನಾಟಕ ಹೈಕೋರ್ಟ್ SDA ನೇಮಕಾತಿ 2026 - ಉದ್ಯೋಗ ಗಿಟ್ಟಿದ್ರೆ ₹81 ಸಾವಿರ ರೂ ವೇತನ ಪಡೆಯುವ ಅರ್ಹತೆ

ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ 20 ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಮಾಸಿಕ ₹25,500 ರಿಂದ ₹81,100 ವೇತನ ಶ್ರೇಣಿ ಇರಲಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 11, 2026 ಕೊನೆಯ ದಿನಾಂಕವಾಗಿದೆ.

Read Full Story

05:19 PM (IST) Aug 15

‘ಕಿಯಾರಾಗೆ ಕಿಸ್ ಕೂಡ ಮಾಡಿಲ್ಲ’ - ‘ತಬಾಹಿ’ ವಿವಾದದ ಬಗ್ಗೆ ಯಶ್ ಖಡಕ್ ಮಾತು

‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ಚಿತ್ರದ ‘ತಬಾಹಿ’ ಹಾಡು ಹೊರಬಂದ ಬಳಿಕವಂತೂ ಹಾಡಿನ ದೃಶ್ಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಜೋರಾಗಿದೆ.

Read Full Story

05:01 PM (IST) Aug 15

Charge Sheet 03-08 Review - ಕೊಲೆ ಪ್ರಕರಣದ ರೋಚಕ ತನಿಖೆ; ‘ಚಾರ್ಜ್ ಶೀಟ್‌’ ಸಿನಿಮಾ ನೋಡಬೇಕಾ?

Charge Sheet 03-08 Review: ಪ್ರೀತಿ- ಪ್ರೇಮ, ಕೊಲೆ, ಪೊಲೀಸು ಮತ್ತು ತನಿಖೆ ಇದಿಷ್ಟೇ ಅಂಶಗಳ ಸುತ್ತಾ ಸಾಗುವ ಸಿನಿಮಾ ‘ಚಾರ್ಜ್ ಶೀಟ್‌ 03-08’. ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌.ಕೆ.ಉಮೇಶ್‌ ವೃತ್ತಿ ಅನುಭವದ ಕಥನ.

Read Full Story

04:49 PM (IST) Aug 15

Yash - ಆಪ್‌ ಕೀ ಅದಾಲತ್‌ನಲ್ಲಿ ಟಾಕ್ಸಿಕ್‌ ಕುರಿತು ಬಿಗ್‌ ಹಿಂಟ್ ಕೊಟ್ಟ ಯಶ್‌; ಜೆನ್‌-ಜಿ ಪ್ರಶ್ನೆಗೆ ಕ್ಲಾರಿಟಿ ಕೊಟ್ಟ ರಾಕಿಂಗ್‌ ಸ್ಟಾರ್!

'ಆಪ್‌ ಕೀ ಅದಾಲತ್' ಕಾರ್ಯಕ್ರಮದಲ್ಲಿ, ನಟ ಯಶ್ ತಮ್ಮ 'ಟಾಕ್ಸಿಕ್' ಸಿನಿಮಾದ ಕುರಿತಾದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಚಿತ್ರವು ಅಶ್ಲೀಲತೆ ಅಥವಾ ಗ್ಯಾಂಗ್‌ಸ್ಟಾರ್ ಸಂಸ್ಕೃತಿಯನ್ನು ವೈಭವೀಕರಿಸುವುದಿಲ್ಲ, ಬದಲಿಗೆ ಇಂದಿನ ಜೆನ್-ಜಿ ಪೀಳಿಗೆಯ ಸಮಸ್ಯೆಗಳು ಮತ್ತು ಅವರ ಆಲೋಚನೆಗಳಿಗೆ ಕನ್ನಡಿ ಹಿಡಿಯುವ ಕಲಾತ್ಮಕ ಪ್ರಯತ್ನ ಎಂದು ಅವರು ವಿವರಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

04:39 PM (IST) Aug 15

ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಸಮಸ್ಯೆ ಇಲ್ಲ - ಬಿಜೆಪಿ ಆರೋಪಕ್ಕೆ ಸಚಿವ ನರೇಂದ್ರಸ್ವಾಮಿ ತಿರುಗೇಟು

RSS Karnataka: ನಮ್ಮ ಗೃಹಮಂತ್ರಿಯವರು ಹೇಳುವುದರಲ್ಲಿ ಅಸಂವಿಧಾನಿಕ ಅಂತ ಏನಿದೆ. ಕಾನೂನು ಬಾಹಿರವಾದ ವಿಚಾರವನ್ನೇನಾದರೂ ಮುಂದಿಟ್ಟಿದ್ದಾರಾ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಪ್ರಶ್ನಿಸಿದರು.

Read Full Story

04:27 PM (IST) Aug 15

‘ಮೇಕೆದಾಟು ಸರಿಯಾದ ಪರಿಹಾರ’ - ಕಾವೇರಿ ವಿವಾದದ ನಡುವೆ ಸಚಿವ ನರೇಂದ್ರಸ್ವಾಮಿ ಹೇಳಿಕೆ

ಭಾರತ ಒಂದು ಒಕ್ಕೂಟದ ರಾಷ್ಟ್ರ, ಎಲ್ಲಾ ರಾಜ್ಯಗಳು ಎಲ್ಲ ಪರಿಸ್ಥಿತಿಯನ್ನು ಹಂಚಿಕೊಳ್ಳಬೇಕಾಗಿದೆ. ಈಗ ಸಿಡಬ್ಲ್ಯೂಆರ್ ಸಿ ಮತ್ತು ಸಿಡಬ್ಲ್ಯೂಎಂಎ ನೀಡಿರುವ ಆದೇಶವನ್ನು ನಾವು ಪಾಲಿಸಬೇಕಲ್ವಾ. ಅದರ ನಡುವೆ..

Read Full Story

04:22 PM (IST) Aug 15

ದೇಶಭಕ್ತಿಯನ್ನ ಹೀಗೂ ತೋರಿಸಬಹುದು.. ಬಾಗಲಕೋಟೆಯಲ್ಲಿ ಕ್ಷೌರಿಕನಿಂದ ಸತತ 21 ವರ್ಷಗಳಿಂದ ನಿರಂತರ ಸೇವೆ

ಬಾಗಲಕೋಟೆ ಜಿಲ್ಲೆಯ ಸೂಳೇಭಾವಿಯ ಮುತ್ತಪ್ಪ ಹಡಪದ ಎಂಬುವವರು ಕಳೆದ 21 ವರ್ಷಗಳಿಂದ ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಉಚಿತವಾಗಿ ಕ್ಷೌರ ಸೇವೆ ನೀಡುವ ಮೂಲಕ ದೇಶಭಕ್ತಿ ಮೆರೆಯುತ್ತಿದ್ದಾರೆ. ಪ್ರಮುಖವಾಗಿ ಗ್ರಾಮದ ಹಿರಿಯರು, ಅಶಕ್ತರು ಹಾಗೂ ವಿಕಲಚೇತನರಿಗೆ ಯಾವುದೇ ಶುಲ್ಕವಿಲ್ಲದೆ ಅಕ್ಕರೆಯಿಂದ ಸೇವೆ ಒದಗಿಸುತ್ತಿರುವ ಮುತ್ತಪ್ಪ ಅವರ ಈ ವಿಶಿಷ್ಟ ದೇಶಪ್ರೇಮಕ್ಕೆ ಇಡೀ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Read Full Story

04:20 PM (IST) Aug 15

​"ಅವರು ಕುಣಿದು ಕುಪ್ಪಳಿಸ್ತಾರೆ, ನಾನ್ ಮಲಗಿ ಕಣ್ಣೀರು ಹಾಕ್ತೀನಿ!" ನೆರೆಮನೆಯ ಪಾರ್ಟಿ ನೋಡಿ ಟೆಕ್ಕಿಗೆ ಶುರುವಾಯ್ತು..

ಬೆಂಗಳೂರಿನ 25 ವರ್ಷದ ಟೆಕ್ ಉದ್ಯೋಗಿಯೊಬ್ಬರು ವಾರಾಂತ್ಯದಲ್ಲಿ ಅನುಭವಿಸುವ ತೀವ್ರ ಒಂಟಿತನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪಕ್ಕದ ಮನೆಯವರಿಂದ ಕೇಳಿಬರುವ ಪಾರ್ಟಿಯ ಸದ್ದು ಅವರಿಗೆ ಸಂತೋಷದ ಬದಲು, ಸ್ನೇಹಿತರಿಲ್ಲದ ಕೊರಗನ್ನು ಹೆಚ್ಚಿಸುತ್ತಿದೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Read Full Story

04:12 PM (IST) Aug 15

Bengaluru Metro - ಜಸ್ಟ್ ಒಂದು ವರ್ಷ, 3.8 ಕೋಟಿಗೂ ಅಧಿಕ ಪ್ರಯಾಣಿಕರು; ನಮ್ಮ ಮೆಟ್ರೋ ಮತ್ತೊಂದು ದಾಖಲೆ!

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ 19 ಕಿ.ಮೀ. ಉದ್ದದ ಹಳದಿ ಮಾರ್ಗವು ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮೆಟ್ರೋ ನಿಲ್ದಾಣದಿಂದಲೇ ನೇರ ಆಫೀಸ್‌ಗೆ ತಲುಪಲು ಲಾಸ್ಟ್ ಮೈಲ್ ಕನೆಕ್ಟಿವಿಟಿಗಾಗಿ ಬಿಎಂಟಿಸಿಯೊಂದಿಗೆ ಸೇರಿ 28 ಫೀಡರ್ ಬಸ್‌ಗಳನ್ನು ಕೂಡ ರಸ್ತೆಗೆ ಇಳಿಸಿದೆ.

Read Full Story

03:50 PM (IST) Aug 15

ಸೋಮಾವತಿ ನದಿಗೆ ಉರುಳಿದ ಕಾರು; ಬೆಂಗಳೂರಿನ ಪ್ರವಾಸಿ ದಂಪತಿ ಬದುಕಿದ್ದೇ ದೊಡ್ಡದು..

ಚಿಕ್ಕಮಗಳೂರಿನ ಕಳಸದಲ್ಲಿ ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಬೆಂಗಳೂರು ಮೂಲದ ಪ್ರವಾಸಿ ದಂಪತಿಯ ಕಾರು ಸೋಮಾವತಿ ನದಿಗೆ ಬಿದ್ದು, ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನದಿಯಲ್ಲಿದ್ದ ಬೃಹತ್ ಬಂಡೆಯೊಂದು ಕಾರಿಗೆ ಅಡ್ಡ ಸಿಕ್ಕಿದ್ದರಿಂದ ಅದು ನೀರಿನ ರಭಸಕ್ಕೆ ಕೊಚ್ಚಿ ಹೋಗದೆ ಬದುಕುಳಿದಿದ್ದು, ಸ್ಥಳೀಯರು ತಕ್ಷಣವೇ ದಂಪತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Read Full Story

02:42 PM (IST) Aug 15

ಅಡೆತಡೆ, ದ್ರೋಹ ಮೆಟ್ಟಿ ನಿಂತು ಅಮೆರಿಕನ್ ಪೌರತ್ವ ಪಡೆದ ಕನ್ನಡಿಗ - ಟೆಕ್ ಉದ್ಯಮಿ ಸೈಮನ್ ಶೆಟ್ಟಿ ಸ್ಪೂರ್ತಿದಾಯಕ ಕಥೆ

ಕರ್ನಾಟಕದ ಟೆಕ್ ಉದ್ಯಮಿ ಸೈಮನ್ ಶೆಟ್ಟಿ ಅವರು ಸಾಲ, ವೀಸಾ ಸಮಸ್ಯೆಗಳು ಮತ್ತು ವೈಯಕ್ತಿಕ ದ್ರೋಹದಂತಹ ಅನೇಕ ಅಡೆತಡೆಗಳನ್ನು ದಾಟಿ ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ. ತಮ್ಮ ಕಠಿಣ ಹೋರಾಟದ ಕಥೆಯನ್ನು ಹಂಚಿಕೊಂಡ ಅವರು, ಸಂಕಷ್ಟದಲ್ಲಿರುವ ಇತರ ವಲಸಿಗರಿಗೆ ಸ್ಫೂರ್ತಿ ತುಂಬಿ, ಅವರ ಪರವಾಗಿ ಧ್ವನಿ ಎತ್ತುವುದಾಗಿ ಹೇಳಿದ್ದಾರೆ.
Read Full Story

02:19 PM (IST) Aug 15

Shivamogga - 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!

ಜೀವಾವಧಿ ಶಿಕ್ಷೆ ಮುಗಿಸಿ ಜೈಲಿನಿಂದ ಬಿಡುಗಡೆಯಾಗಿದ್ದ ತಂದೆಯನ್ನು ಮಗನೇ ಕೊಲೆ ಮಾಡಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ತಂದೆಯ ಕಿರುಕುಳಕ್ಕೆ ಬೇಸತ್ತು ಮಗ ಕೃತ್ಯ ಎಸಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Read Full Story

01:27 PM (IST) Aug 15

ಐಬಿ ಅಧಿಕಾರಿ ಕೊಂದವನ ಪರ ಪೋಸ್ಟ್‌, ಸ್ವಾತಂತ್ರ್ಯ ದಿನವೇ ದೇಶದ್ರೋಹಿಯ ಪರ ನಿಂತ ನಟ ಕಿಶೋರ್‌

ಸ್ವಾತಂತ್ರ್ಯ ದಿನಾಚರಣೆಯಂದು ನಟ ಕಿಶೋರ್, ಜೈಲಿನಲ್ಲಿರುವ ಎಂಟು ಮುಸ್ಲಿಮರ ಪಟ್ಟಿಯನ್ನು ಹಂಚಿಕೊಂಡು ವಿವಾದ ಸೃಷ್ಟಿಸಿದ್ದಾರೆ. ಈ ಪಟ್ಟಿಯಲ್ಲಿ ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಯ ದೋಷಿ ತಾಹಿರ್ ಹುಸೇನ್ ಹೆಸರಿದ್ದು, ಕೊಲೆಗಾರನ ಪರ ನಿಂತಿದ್ದಕ್ಕೆ ಕಿಶೋರ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Read Full Story

01:26 PM (IST) Aug 15

'ಇದಕ್ಕೇ ಭಂಡರು ಅಂತಾರೆ..' ಆರ್‌ಎಸ್‌ಎಸ್‌ ಮುಂದೆಯೂ ನೋಂದಣಿ ಆಗೋಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಕಾಶಪ್ಪನವರ್ ಕಿಡಿ

ಆರ್‌ಎಸ್‌ಎಸ್‌ ನೋಂದಣಿಯಾಗುವುದಿಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರು ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್‌ ಅನ್ನು 'ಭಂಡರು' ಎಂದು ಕರೆದ ಅವರು, ಕಳ್ಳ ದುಡ್ಡನ್ನು ರಕ್ಷಿಸಿಕೊಳ್ಳಲು ನೋಂದಣಿ ಮಾಡಿಸುತ್ತಿಲ್ಲ ಎಂದು ಆರೋಪಿಸಿದರು.

Read Full Story

12:58 PM (IST) Aug 15

Madhu Bangarappa - ನೀಟ್ ಪರೀಕ್ಷೆಯಿಂದ ಮಕ್ಕಳ ಭವಿಷ್ಯ ಹಾಳು; ರದ್ದು ಮಾಡಿದ್ರೆ ಒಳ್ಳೇದು ಎಂದ ಶಿಕ್ಷಣ ಸಚಿವ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ನೀಟ್ ಪರೀಕ್ಷೆಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ. ಇದರೊಂದಿಗೆ, ಶರಾವತಿ ಸಂತ್ರಸ್ತರಿಗೆ ಶೀಘ್ರ ಪರಿಹಾರದ ಭರವಸೆ ನೀಡಿದ್ದು, ಶಾಲಾ ಶಿಕ್ಷಣದಲ್ಲಿ ಎಐ ತಂತ್ರಜ್ಞಾನ ಅಳವಡಿಸುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
Read Full Story

12:34 PM (IST) Aug 15

ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಹರಿದ ಕಾವೇರಿ ನೀರು; ಸ್ವಾತಂತ್ರ್ಯ ದಿನಾಚರಣೆ ದಿನವೇ ರೈತರ ಪ್ರತಿಭಟನೆ

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರ್ಕಾರದ ಕ್ರಮವನ್ನು ವಿರೋಧಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರವು ರಹಸ್ಯವಾಗಿ ನೀರು ಬಿಡುಗಡೆ ಮಾಡಿ, ಅಧಿಕೃತ ಅಂಕಿಅಂಶಗಳನ್ನು ಮುಚ್ಚಿಡುತ್ತಿದೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

12:32 PM (IST) Aug 15

ಚಾಮರಾಜನಗರ ಎನ್‌ಕೌಂಟರ್ - ಅವರು ಬೇಟೆಗಾರರಲ್ಲ ರೈತರು, ಕಾರಣ ತಿಳಿಯದೆ ಮೃತದೇಹ ಸ್ವೀಕರಿಸಲ್ಲ! ಮಾವಂದಿರ ಸಾವಿಗೆ ಸಂಬಂಧಿ ಕಣ್ಣೀರು

ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆಯು ಇವರನ್ನು ಬೇಟೆಗಾರರೆಂದು ಹೇಳಿದರೆ, ಮೃತರ ಕುಟುಂಬಸ್ಥರು ಇವರು ಅಮಾಯಕ ರೈತರೆಂದು ವಾದಿಸುತ್ತಿದ್ದಾರೆ. ಈ ಘಟನೆಯು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಸಂಬಂಧಿಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
Read Full Story

12:16 PM (IST) Aug 15

ಬೆಲ್ಲದ ರಮ್‌ 'ಹುಲಿ' ತಯಾರಿಸಿದ್ದ ಡಿಸ್ಟಲ್ಲರಿಯಿಂದ ಈಗ ಭತ್ತದ ವಿಸ್ಕಿ, ಬೆಲೆ ಎಷ್ಟು?

ಕೊಡಗಿನ ಪಾನೀಯವಾದ 'ಭತ್ತದ ಸಾರಾಯಿ' ಈಗ 'ಹುಲಿ ರೈಸ್ ಮಾಲ್ಟ್ ವಿಸ್ಕಿ' ಎಂಬ ಪ್ರೀಮಿಯಂ ರೂಪದಲ್ಲಿ ಮಾರುಕಟ್ಟೆಗೆ ಬಂದಿದೆ. ಅರುಣ್ ಅರಸ್ ಅವರು 100% ಮಾಲ್ಟೆಡ್ ಭತ್ತದಿಂದ ತಯಾರಿಸಿದ ಈ ವಿಸ್ಕಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ಲಭ್ಯವಿದ್ದು, ತನ್ನ ವಿಶಿಷ್ಟ ತಯಾರಿಕಾ ವಿಧಾನದಿಂದ ಗಮನ ಸೆಳೆದಿದೆ.

Read Full Story

More Trending News