LIVE NOW
Published : Aug 15, 2026, 07:28 AM ISTUpdated : Aug 15, 2026, 09:31 AM IST

State News Live: ಮೆಜೆಸ್ಟಿಕ್‌ನಿಂದ 25 km ದೂರದ ಸರ್ಕಾರಿ ಭೂಮಿ ಖಾಸಗಿ‌ ಸಂಸ್ಥೆಗೆ 99 ವರ್ಷ ಲೀಸ್‌?

ಸಾರಾಂಶ

ಬೆಂಗಳೂರು (ಆ.15):ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಮಾನದಂಡ ಉಲ್ಲಂಘಿಸಿ ಪಡೆಯಲಾಗಿರುವ ಬಿಪಿಎಲ್ ಪಡಿತರ ಚೀಟಿ ಗಳ ರದ್ದು ಪ್ರಕ್ರಿಯೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಮಾನದಂಡ ಉಲ್ಲಂಘಿಸಿ ಪಡೆದಿರುವ 7.65 ಲಕ್ಷ ಪಡಿತರ ಚೀಟಿಗಳನ್ನು ಶಂಕಾಸ್ಪದ ಪಟ್ಟಿಗೆ ಸೇರಿಸಿ ರಾಜ್ಯಕ್ಕೆ ಕಳುಹಿಸಿತ್ತು. ಹಣದುಬ್ಬರ ಹಿನ್ನಲೆ ಹಳೇ ನಿಯಮ ಪಾಲನೆ ಕಷ್ಟ ಎಂದು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವುದಾಗಿ ರಿಜ್ವಾನ್‌ ಆರ್ಷದ್‌ ಹೇಳಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

09:31 AM (IST) Aug 15

ಮೆಜೆಸ್ಟಿಕ್‌ನಿಂದ 25 km ದೂರದ ಸರ್ಕಾರಿ ಭೂಮಿ ಖಾಸಗಿ‌ ಸಂಸ್ಥೆಗೆ 99 ವರ್ಷ ಲೀಸ್‌?

Bengaluru: 5 ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ಸಂಸ್ಥೆಗೆ 99 ವರ್ಷಗಳ ಕಾಲ ಲೀಸ್ ನೀಡಲು ಮುಂದಾಗಿದ್ದಾರೆನ್ನಲಾದ PDO ಅವರನ್ನು ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಈ ಒಪ್ಪಂದದ ಬಗ್ಗೆ ತಮಗಾಗಲಿ, ಸದಸ್ಯರಿಗಾಗಲಿ ಮಾಹಿತಿ ಇರಲಿಲ್ಲ ಎಂದು ಗ್ರಾಪಂ ಅಧ್ಯಕ್ಷೆ ಸ್ಪಷ್ಟಪಡಿಸಿದ್ದು, ವಿವಾದದ ಬಳಿಕ ಸದರಿ ಮನವಿಯನ್ನು ತಿರಸ್ಕರಿಸಲಾಗಿದೆ.

Read Full Story

09:08 AM (IST) Aug 15

ಉಂಡಿ ತಿಂದು ಜೋಕಾಲಿ ಜೀಕಿದ ಮಹಿಳೆಯರು; ಜಾನಪದ ಸಂಶೋಧನಾ ಸಂಸ್ಥೆಯಿಂದ ಹಬ್ಬದ ಸಂಭ್ರಮ

ಧಾರವಾಡದ ಜಾನಪದ ಸಂಶೋಧನಾ ಸಂಸ್ಥೆಯು ಯುವ ಪೀಳಿಗೆಗೆ ಹಬ್ಬಗಳ ಮಹತ್ವ ತಿಳಿಸಲು ನಾಗರ ಪಂಚಮಿಯ ಅಂಗವಾಗಿ 'ಉಂಡಿ ಹಬ್ಬ'ವನ್ನು ಸಡಗರದಿಂದ ಆಚರಿಸಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಬಗೆಬಗೆಯ ಉಂಡಿಗಳನ್ನು ತಂದು, ನಾಗರ ಮೂರ್ತಿಗೆ ಪೂಜೆ ಸಲ್ಲಿಸಿ, ಸಾಂಪ್ರದಾಯಿಕ ಗೀತೆ ಮತ್ತು ಆಟಗಳೊಂದಿಗೆ ಸಂಭ್ರಮಿಸಿದರು.
Read Full Story

08:55 AM (IST) Aug 15

ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್‌ಗೆ ಬಿಗ್‌ ಶಾಕ್; 2110 ಕೋಟಿ ರಹಸ್ಯ

ಶಿವಂ ಅಸೋಸಿಯೇಟ್ ಕಂಪೆನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್‌ನನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ. ಸಾರ್ವಜನಿಕರಿಂದ ಅಸಾಮಾನ್ಯ ಆದಾಯದ ಭರವಸೆ ನೀಡಿ ಸುಮಾರು 2,110.97 ಕೋಟಿ ರೂ. ಸಂಗ್ರಹಿಸಿದ ಆರೋಪದ ಮೇಲೆ ಈ ಬಂಧನ ನಡೆದಿದೆ.

Read Full Story

07:32 AM (IST) Aug 15

BPL Card: ಬಿಪಿಎಲ್‌ ಕಾರ್ಡ್‌ ರದ್ದತಿಗೆ ತಾತ್ಕಾಲಿಕ ಸ್ಥಗಿತ! ಆಹಾರ ಸಚಿವ ರಿಜ್ವಾನ್ ಅರ್ಷದ್‌ ಮಹತ್ವದ ಘೋಷಣೆ!

ಕೇಂದ್ರ ಸರ್ಕಾರದಿಂದ ಶಂಕಾಸ್ಪದ ಪಟ್ಟಿಗೆ ಸೇರಿದ್ದ 7.65 ಲಕ್ಷ ಬಿಪಿಎಲ್ ಕಾರ್ಡ್‌ಗಳ ಪೈಕಿ 3.50 ಲಕ್ಷ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. ಜನರ ಹಿತದೃಷ್ಟಿಯಿಂದ ಉಳಿದ ಪಡಿತರ ಚೀಟಿಗಳ ಪರಿಷ್ಕರಣೆ ಕಾರ್ಯ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

 

Read Full Story

07:31 AM (IST) Aug 15

Freedom Habba: ಮಕ್ಕಳೇ ಪಾಸ್ ಎಂದಿದ್ದ ಸಚಿವ ಬೈರೇಗೌಡ, ಈಗ ಪ್ರವೇಶಕ್ಕೆ ಕ್ಯೂಆರ್ ಕೋಡ್ ಕಡ್ಡಾಯ! ಜನಾಕ್ರೋಶ

ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಧಾನಸೌಧದ ಮುಂದೆ ಆಯೋಜಿಸಿರುವ 'ಫ್ರೀಡಂ ಹಬ್ಬ' ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾನ್ಯರಿಗೂ ಪ್ರವೇಶವಿದೆ ಎಂದು ಸಚಿವರು ಹೇಳಿದ್ದರೂ, ಕಡ್ಡಾಯ ಕ್ಯೂಆರ್ ಕೋಡ್ ನೋಂದಣಿ ವಿಫಲವಾದ ಕಾರಣ ಶ್ರೀಸಾಮಾನ್ಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

 

Read Full Story

07:31 AM (IST) Aug 15

2028ಕ್ಕೆ ಪುಟ್ಬಾಲ್‌ ಅಲ್ಲ, ಚೆಸ್‌ ಆಡುತ್ತೇನೆ: ಎಲೆಕ್ಷನ್‌ ಎದುರಿಸುವುದು ನನಗೆ ಗೊತ್ತಿದೆ ಎಂದ ಸಿಎಂ ಡಿಕೆಶಿ!

2028ರ ಚುನಾವಣೆಯನ್ನು ಹೇಗೆ ಎದುರಿಸಬೇಕೆಂದು ತಮಗೆ ತಿಳಿದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ತಾವು ಫುಟ್ಬಾಲ್ ಆಡುವವನಲ್ಲ, ಬದಲಿಗೆ ಚೆಸ್ ಆಡುವವನು ಎಂದ ಅವರು, ಸಿದ್ದರಾಮಯ್ಯನವರೊಂದಿಗೆ ಸೇರಿ 136 ಸ್ಥಾನಗಳನ್ನು ಗೆದ್ದು ಸಾಬೀತುಪಡಿಸಿದ್ದೇನೆ ಎಂದ ಸಿಎಂ.

 

Read Full Story

07:30 AM (IST) Aug 15

Mohammed Nalapad Wedding: ಕೊಡಗಿನಲ್ಲಿ ಮೊಹಮ್ಮದ್ ನಲಪಾಡ್ ಎರಡನೇ ಮದುವೆ; ಕಾಂಗ್ರೆಸ್ ನಾಯಕನ ಪುತ್ರಿ ಜೊತೆ ಅದ್ದೂರಿ ನಿಕಾಹ್‌!

ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಅವರು ಕೊಡಗಿನ ಪ್ರತಿಷ್ಠಿತ ರೆಸಾರ್ಟ್‌ನಲ್ಲಿ ಎರಡನೇ ವಿವಾಹವಾಗಲಿದ್ದಾರೆ. ಆಗಸ್ಟ್‌ 16ರಿಂದ 20ರವರೆಗೆ ನಡೆಯಲಿದೆ. ಮದುವೆ ದಿನಾಂಕ, ಸ್ಥಳ ಹಾಗೂ ಗಣ್ಯರ ಪಟ್ಟಿ ಇಲ್ಲಿದೆ!

 

Read Full Story

07:30 AM (IST) Aug 15

Siddaramaiah: ವಿಧಾನಸಭೆ ಕಲಾಪಕ್ಕೆ ಬಂದು ಕೊನೆ ಸಾಲಲ್ಲಿ ಕುಳಿತ ಮಾಜಿ ಸಿಎಂ; ಸಿದ್ದರಾಮಯ್ಯರ ಪಕ್ಕ ಬಂದು ಕುಳಿತ ವಿಜಯೇಂದ್ರ

ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಅಧಿವೇಶನಕ್ಕೆ ಹಾಜರಾದ ಮಾಜಿ ಸಿಎಂ ಸಿದ್ದರಾಮಯ್ಯ, ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಕುಳಿತು ಗಮನ ಸೆಳೆದರು. ಈ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ಶಾಸಕರು ಮತ್ತು ಸಚಿವರು ಆತ್ಮೀಯವಾಗಿ ಮಾತನಾಡಿಸಿದರು.

 

Read Full Story

More Trending News