LIVE NOW
Published : Jul 03, 2026, 07:20 AM ISTUpdated : Jul 03, 2026, 10:28 AM IST

State News Live: ಬೆಂಗಳೂರು - ಫುಟ್ ಪಾತ್ ಒತ್ತುವರಿ ವಿರುದ್ಧ ಸಾರ್ವಜನಿಕರ ಆಕ್ರೋಶ, ಪಾದಚಾರಿಗಳು vs ವ್ಯಾಪಾರಿಗಳ ನಡುವೆ ಜಟಾಪಟಿ!

ಸಾರಾಂಶ

ಬೆಂಗಳೂರು (ಜು.3): 'ತೀವ್ರ ಜಲಕ್ಷಾಮದ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀರು, ವಿದ್ಯುತ್ ಅಭಾವ ಸೃಷ್ಟಿಯಾಗಲಿದೆ. ರಾಜ್ಯಾದ್ಯಂತ ಬಹುತೇಕ ಜಲಾಶಯಗಳ ಒಳಹರಿವು ಶೂನ್ಯಕ್ಕೆ ಇಳಿದಿದ್ದು, ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ' ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಎಲ್‌ನಿನೊ ಪರಿ ಣಾಮದಿಂದ ಉಂಟಾಗಲಿರುವ ಬರದ ಸ್ಥಿತಿ ಹಾಗೂ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

GBA Safe Footpath

10:28 AM (IST) Jul 03

ಬೆಂಗಳೂರು - ಫುಟ್ ಪಾತ್ ಒತ್ತುವರಿ ವಿರುದ್ಧ ಸಾರ್ವಜನಿಕರ ಆಕ್ರೋಶ, ಪಾದಚಾರಿಗಳು vs ವ್ಯಾಪಾರಿಗಳ ನಡುವೆ ಜಟಾಪಟಿ!

ಬೆಂಗಳೂರಿನಲ್ಲಿ 'ಸೇಫ್ ಫುಟ್‌ಪಾತ್' ಕಾರ್ಯಾಚರಣೆ ಆರಂಭವಾಗಿದ್ದು, ಗಾಂಧಿ ಬಜಾರ್‌ನಲ್ಲಿ ಫುಟ್‌ಪಾತ್ ಒತ್ತುವರಿ ವಿಚಾರವಾಗಿ ಪಾದಚಾರಿಗಳು ಮತ್ತು ಬೀದಿ ವ್ಯಾಪಾರಿಗಳ ನಡುವೆ ತೀವ್ರ ಜಟಾಪಟಿ ನಡೆದಿದೆ. ಓಡಾಡಲು ದಾರಿ ಬಿಡುವಂತೆ ಸಾರ್ವಜನಿಕರು ಪಟ್ಟು ಹಿಡಿದರೆ, ವ್ಯಾಪಾರಿಗಳು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ. ಈ ಮಧ್ಯೆ, ಜಿಬಿಎ ಅಧಿಕಾರಿಗಳು ಹೋಟೆಲ್ ಮುಂದಿದ್ದ ಅಕ್ರಮ ಕಟ್ಟೆಯನ್ನು ತೆರವುಗೊಳಿಸಿದ್ದಾರೆ.
Read Full Story

10:23 AM (IST) Jul 03

Amruthadhaare Serial - ದೇವಸ್ಥಾನದಲ್ಲಿ ಭಿಕ್ಷೆ ಬೇಡಾಯ್ತು; ಹುಟ್ಟೋ ಚಾಳಿ ಘಟ್ಟ ಹತ್ತಿದ್ರೂ ಹೋಗಲ್ಲ; ಥೂ..

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಶಾಕುಂತಲಾ ಮಾಡಿದ ಕೆಲಸ ನೋಡಿ ವೀಕ್ಷಕರು ಕಂಗಾಲಾಗಿದ್ದಾರೆ. ಶಕುಂತಲಾ ಮತ್ತೆ ತನ್ನ ಬುದ್ಧಿಯನ್ನು ಬಿಡದಿರೋದನ್ನು ನೋಡಿ ಏನಿದು ಹೀಗೆ ಆಗ್ತಿದೆಯಲ್ಲಾ ಎಂದು ಬೇಸರ ಮಾಡಿಕೊಂಡಿದ್ದಾರೆ.

 

Read Full Story

10:14 AM (IST) Jul 03

ತಮ್ಮ ಅಜ್ಜಿಯನ್ನೇ ಕೊಚ್ಚಿ ಕೊಂದ ಮೊಮ್ಮಗನ ಕಾಲಿಗೆ ಶಿವಮೊಗ್ಗ ಪೊಲೀಸರ ಗುಂಡೇಟು! ಎಸ್ಕೇಪ್ ಆಗಲು ಯತ್ನಿಸಿದ್ದ ಕೊಲೆ ಆರೋಪಿ

ಶಿವಮೊಗ್ಗದಲ್ಲಿ ತನ್ನ ಅಜ್ಜಿಯನ್ನು ಹತ್ಯೆಗೈದಿದ್ದ ಮೊಮ್ಮಗ ಕಿಶೋರ್, ಬಂಧಿಸಲು ಬಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಆತನನ್ನು ಬಂಧಿಸಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

09:59 AM (IST) Jul 03

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕೈ ಕೊಟ್ಟ ಮಳೆ - ಬಿತ್ತನೆಗೆ ರೈತರ ಹಿಂದೇಟು

ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೆ, ಶೇ.59ರಷ್ಟು ಕೊರತೆ ಉಂಟಾಗಿದೆ. ಇದರಿಂದಾಗಿ ಭತ್ತ, ಮೆಕ್ಕೆಜೋಳದಂತಹ ಪ್ರಮುಖ ಬೆಳೆಗಳ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಕೃಷಿ ಚಟುವಟಿಕೆಗಳು ಸಂಕಷ್ಟದಲ್ಲಿವೆ.
Read Full Story

09:52 AM (IST) Jul 03

ಮಂತ್ರಾಲಯದಲ್ಲಿ 100 ಎಕರೆಯಲ್ಲಿ ಜಲಾಶಯ, ಯೋಜನೆಗೆ ಕೈಜೋಡಿಸಿದ HAL

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠವು, ಪೀಠಾಧ್ಯಕ್ಷ ಸುಬುದೇಂದ್ರ ತೀರ್ಥರ ನೇತೃತ್ವದಲ್ಲಿ ಹಲವು ಜನಪರ ಯೋಜನೆಗಳಿಗೆ ಸಂಕಲ್ಪ ಮಾಡಿದೆ. ಕ್ಷೇತ್ರದ ನೀರಿನ ಬವಣೆ ನೀಗಿಸಲು 100 ಎಕರೆ ಜಾಗದಲ್ಲಿ ಬೃಹತ್ ಜಲಾಶಯ ನಿರ್ಮಾಣ ಹಾಗೂ 300 ಎಕರೆಯಲ್ಲಿ ಡೀಮ್ಡ್ ವಿಶ್ವವಿದ್ಯಾಲಯ ಸ್ಥಾಪನೆ ಪ್ರಮುಖ ಯೋಜನೆಗಳಾಗಿವೆ.
Read Full Story

09:30 AM (IST) Jul 03

ಬೆಂಗಳೂರು ನಗರದಲ್ಲಿ ಮತ್ತಷ್ಟು ಕಡೆ ಫುಟ್‌ಪಾತ್‌ ಅತಿಕ್ರಮಣ ತೆರವು

ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಎರಡನೇ ದಿನವೂ ಮುಂದುವರಿದಿದ್ದು, ಕೋರಮಂಗಲ, ಜಯನಗರ ಸೇರಿದಂತೆ ಹಲವೆಡೆ ಜೆಸಿಬಿ ಬಳಸಿ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುವುದು ಎಂದು ಸರ್ಕಾರ ಹೇಳಿದೆ.

Read Full Story

09:03 AM (IST) Jul 03

Mekedatu project - '1 ಇಟ್ಟಿಗೆ ಹಾಕಲೂ ಬಿಡೋಲ್ಲ..' ಮೇಕೆದಾಟು ಯೋಜನೆ, ಕರ್ನಾಟಕ ಸರ್ಕಾರಕ್ಕೆ ತಮಿಳ ನಾಡು ಕಾಂಗ್ರೆಸ್ ಎಚ್ಚರಿಕೆ!

ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಕಾಂಗ್ರೆಸ್ ಘಟಕವೇ ತಿರುಗಿಬಿದ್ದಿದೆ. ತಮಿಳುನಾಡಿನ ಅನುಮತಿಯಿಲ್ಲದೆ ಒಂದೇ ಒಂದು ಇಟ್ಟಿಗೆಯನ್ನೂ ಹಾಕಲು ಬಿಡುವುದಿಲ್ಲವೆಂದು ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷ ಮಾಣಿಕ್ಯಂ ಟ್ಯಾಗೋರ್ ಎಚ್ಚರಿಕೆ ನೀಡಿದ್ದಾರೆ.

Read Full Story

08:48 AM (IST) Jul 03

ಮಂಡ್ಯ - ನಡುರಸ್ತೆಯಲ್ಲೇ ಲಾರಿ ಚಾಲಕನ ಮೇಲೆ ಪ್ರಭಾವಿಯ ಪುತ್ರ ಮತ್ತು ಗ್ಯಾಂಗ್‌ನಿಂದ ಗುಂಡಿನ ದಾಳಿ, ದರೋಡೆ ಯತ್ನ!

ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, ಪ್ರಭಾವಿ ಉದ್ಯಮಿಯೊಬ್ಬನ ಪುತ್ರ ಮತ್ತು ಆತನ ಗ್ಯಾಂಗ್ ಔಷಧ ಸಾಗಿಸುತ್ತಿದ್ದ ಕಂಟೇನರ್ ಲಾರಿ ಚಾಲಕನ ಮೇಲೆ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ್ದಾರೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಅಕ್ರಮ ಗನ್ ಬಳಸಿದ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
Read Full Story

08:30 AM (IST) Jul 03

ಸಂಪುಟ ವಿಸ್ತರಣೆ - 5ಕ್ಕೆ ಸಿಎಂ ಡಿಕೆ ಶಿವಕುಮಾರ್‌, ಸಿದ್ದರಾಮಯ್ಯ ದೆಹಲಿಗೆ

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರು ಜು.5ರಂದು ದೆಹಲಿಗೆ ತೆರಳುವ ಸಾಧ್ಯತೆಯಿದೆ. ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿದ ನಂತರ, ಜು.10 ರಿಂದ 12ರೊಳಗೆ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿದೆ.

Read Full Story

08:08 AM (IST) Jul 03

ರಾಜ್ಯದ ಎಲ್ಲ ಶಾಲಾ ಆಡಳಿತ ಮಂಡಳಿವರೇ ಗಮನಿಸಿ - ಮಗುವಿನ ರಕ್ಷಣೆ ಯಾರದ್ದು? ಹೈಕೋರ್ಟ್ ಮಹತ್ವದ ಅಭಿಪ್ರಾಯ! ಏನಿದು ಪ್ರಕರಣ?

ಶಾಲಾ ಬಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಕಣ್ಣು ಕಳೆದುಕೊಂಡ ಪ್ರಕರಣದಲ್ಲಿ, ಮಗು ಬಸ್ ಹತ್ತಿದಾಗಿನಿಂದ ಮನೆಗೆ ಸುರಕ್ಷಿತವಾಗಿ ತಲುಪುವವರೆಗೂ ಶಾಲಾ ಆಡಳಿತ ಮಂಡಳಿಯೇ ಜವಾಬ್ದಾರಿ ಎಂದು ಕೋರ್ಟ್ ಸ್ಪಷ್ಟಪನೆ. ಮದ್ದೂರಿನ ದಿವ್ಯಜ್ಯೋತಿ ಶಾಲೆ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.

Read Full Story

07:42 AM (IST) Jul 03

ಡ್ಯಾಂ ತುಂಬುವವರೆಗೆ ಯಾವ ರೈತರೂ ಬೆಳೆಹಾಕಲೇಬೇಡಿ - ರಾಜ್ಯದ ರೈತರಿಗೆ ಸಿಎಂ ಕಿವಿಮಾತು

ಜೂನ್ ತಿಂಗಳು ಕಳೆದರೂ ಈ ಬಾರಿ ರಾಜ್ಯಾದ್ಯಂತ ಮಳೆ ಕೊರತೆ ಹಿನ್ನೆಲೆ ಕೃಷಿ ಚಟುವಟಿಕೆ ಇಲ್ಲದೆ ರೈತರು ಆತಂಕದಲ್ಲಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದ 'ಡ್ಯಾಂ ತುಂಬುವವರೆಗೆ ಯಾವ ರೈತರೂ ಬೆಳೆಹಾಕಲೇಬೇಬಾರದು ಎಂದು ರಾಜ್ಯದ ರೈತರಿಗೆ ಸಿಎಂ ಕಿವಿಮಾತು ಹೇಳಿದ್ದಾರೆ.

Read Full Story

07:21 AM (IST) Jul 03

ವಿಶೇಷ ಚೇತನರಿಗೆ ಬಂಪರ್ ಕೊಡುಗೆ: KIADB ಸೈಟ್‌ ದರದಲ್ಲಿ 20 ಲಕ್ಷವರೆಗೆ ರಿಯಾಯ್ತಿ! ಸಿಎಂ ಡಿಕೆ ಶಿವಕುಮಾರ್ ಮಹತ್ವ ನಿರ್ಧಾರ

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೆಐಎಡಿಬಿ ಕೈಗಾರಿಕಾ ನಿವೇಶನ ಹಂಚಿಕೆಯಲ್ಲಿ ಅಂಗವಿಕಲರಿಗೆ ಭೂಮಿ ಮೌಲ್ಯದ ಶೇ.10 ಅಥವಾ ಗರಿಷ್ಠ 20 ಲಕ್ಷ ರೂ. ರಿಯಾಯಿತಿ ನೀಡಲು ಅನುಮೋದನೆ ನೀಡಲಾಗಿದೆ.

 

Read Full Story

07:21 AM (IST) Jul 03

ಭೂ ವ್ಯಾಜ್ಯದ ಠೇವಣಿ ಹಣ ಬಿಡುಗಡೆಗೆ ಲಂಚ; ಕೇಂದ್ರ ಸರ್ಕಾರಿ ನೌಕರ ಲೋಕಾಯುಕ್ತ ಬಲೆಗೆ, ಬಂಧನ ವೇಳೆ ಹೈಡ್ರಾಮ!

ಭೂ ವ್ಯಾಜ್ಯ ಪ್ರಕರಣದ ಠೇವಣಿ ಹಣ ಬಿಡುಗಡೆ ಮಾಡಲು ₹13 ಸಾವಿರ ಲಂಚ ಸ್ವೀಕರಿಸುತ್ತಿದ್ದ ಮಹಾಲೆಕ್ಕ ಪರಿಶೋಧಕ ಕಚೇರಿಯ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಇದು ಕೇಂದ್ರ ಸರ್ಕಾರಿ ಕಚೇರಿಯಲ್ಲೇ ಸಿಬ್ಬಂದಿಯನ್ನು ಲೋಕಾಯುಕ್ತರು ಬಂಧಿಸಿದ ಮೊದಲ ಪ್ರಕರಣವಾಗಿದೆ.

 

Read Full Story

07:21 AM (IST) Jul 03

Prajaseve: ಇನ್ನು ಕಚೇರಿ ಸುತ್ತಾಟ ಬೇಡ, ಮನೆ ಬಾಗಿಲಿಗೇ ಬರಲಿದ್ದಾರೆ ಸಚಿವರು, ಡಿಕೆಶಿ ಸರ್ಕಾರ ಹೊಸ 'ಪ್ರಜಾಸೇವೆ' ಆರಂಭ! ಯಾವಾಗ ಬರ್ತಾರೆ?

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 'ಪ್ರಜಾಸೇವೆ' ಅಭಿಯಾನದ ಅಡಿಯಲ್ಲಿ, ಜಿಲ್ಲಾ ಸಚಿವರು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಬೇಕು. ಜನರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರವೇ ಅವರ ಮನೆ ಬಾಗಿಲಿಗೆ ಹೋಗುವ ಈ ಯೋಜನೆಗಾಗಿ ಪ್ರತ್ಯೇಕ ಸಚಿವಾಲ ಸಹ ರಚಿಸಿದೆ

 

Read Full Story

More Trending News