ಬೆಂಗಳೂರು (ಜು.3): 'ತೀವ್ರ ಜಲಕ್ಷಾಮದ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀರು, ವಿದ್ಯುತ್ ಅಭಾವ ಸೃಷ್ಟಿಯಾಗಲಿದೆ. ರಾಜ್ಯಾದ್ಯಂತ ಬಹುತೇಕ ಜಲಾಶಯಗಳ ಒಳಹರಿವು ಶೂನ್ಯಕ್ಕೆ ಇಳಿದಿದ್ದು, ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ' ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಎಲ್ನಿನೊ ಪರಿ ಣಾಮದಿಂದ ಉಂಟಾಗಲಿರುವ ಬರದ ಸ್ಥಿತಿ ಹಾಗೂ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.

10:49 PM (IST) Jul 03
Ancient Egyptian Honey: ಆದಿಮಾನವರು ಜೇನುತುಪ್ಪವನ್ನು ಕೇವಲ ಆಹಾರವಾಗಿ ನೋಡಲಿಲ್ಲ. ಸುಮಾರು 10,000 ವರ್ಷಗಳ ಹಿಂದೆ ಸ್ಪೇನ್ನ ಗುಹಾ ವರ್ಣಚಿತ್ರಗಳಲ್ಲಿ, ಮನುಷ್ಯರು ಜೇನು ಬೇಟೆಯಾಡುವ ದೃಶ್ಯಗಳಿವೆ.
10:30 PM (IST) Jul 03
ನೀವು ಮಾರ್ಕೆಟ್ನಲ್ಲಿ ನೋಡಿರಬಹುದು ಸೇಬು, ದ್ರಾಕ್ಷಿ, ಆರಂಜ್, ಪೇರಲದಂತಹ ಹಣ್ಣುಗಳು ಸಾಮಾನ್ಯವಾಗಿ ದುಂಡಾಗಿರುತ್ತವೆ. ಆದರೆ ಬಾಳೆಹಣ್ಣು ಮಾತ್ರ ಯಾವಾಗಲೂ ಬಾಗಿದ ಆಕಾರದಲ್ಲೇ ಕಾಣಿಸುತ್ತದೆ. ಇದು ಪ್ರಕೃತಿಯ ವಿಶೇಷತೆ ಮಾತ್ರವಲ್ಲ, ಅದರ ಹಿಂದೆ ಒಂದು ಕುತೂಹಲಕಾರಿ ವಿಜ್ಞಾನದ ಕಾರಣವೂ ಇದೆ ಅದೇನು?
09:58 PM (IST) Jul 03
ಚಹಾದ ಜೊತೆ ಬಜ್ಜಿ, ವಡೆ ತಿನ್ನುವುದು ಹಲವರ ಸಾಮಾನ್ಯ ಅಭ್ಯಾಸ. ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಇದರಿಂದಾಗುವ ಸಮಸ್ಯೆಗಳು ಮತ್ತು ಆರೋಗ್ಯಕರ ಪರ್ಯಾಯಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.
09:18 PM (IST) Jul 03
DK Shivakumar: ಹಿಂದಿನ ವರ್ಷಕ್ಕೆ ಹೋಲಿಸಿದರೆ ಸದ್ಯ ನಮ್ಮಲ್ಲಿ ವಿದ್ಯುತ್ ಸಂಗ್ರಹಣಾ ಸ್ಥಿತಿ ಸುಸ್ಥಿತಿಯಲ್ಲಿದೆ. ಹಿಂದಿನ ಮೂರು ವರ್ಷ ವಿದ್ಯುತ್ ಕಡಿತ ಇಲ್ಲದೆ ನಿರ್ವಹಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
08:54 PM (IST) Jul 03
ಸಣ್ಣದೊಂದು ಕಬ್ಬಿಣದ ಮೊಳೆ ನೀರಿನಲ್ಲಿ ಮುಳುಗುತ್ತದೆ, ಆದರೆ ಲಕ್ಷಾಂತರ ಟನ್ ತೂಕದ ಹಡಗು ಹೇಗೆ ತೇಲುತ್ತದೆ? ನೀವು ಎಂದಾದರೂ ಯೋಚಿಸಿದ್ದೀರಾ? ಹಡಗುಗಳು ಸಮುದ್ರದಲ್ಲಿ ತೇಲುವುದರ ಹಿಂದಿನ 'ರಹಸ್ಯ' ಏನು ಎಂದು ಇಲ್ಲಿ ನೋಡೋಣ.
08:18 PM (IST) Jul 03
ಸಂದರ್ಶನ ಬಳಿಕ ಕೈತುಂಬ ಸ್ಯಾಲರಿ ಉದ್ಯೋಗ ಆಫರ್ ಮಾಡಿದ್ದರೆ. ಆದರೆ ಬೆಂಗಳೂರಿಗ ಈ ಆಫರ್ ಅಲ್ಲೆ ತಿರಸ್ಕರಿಸಿ ಹೊರನಡೆದಿದ್ದಾರೆ. ಇದೀಗ ಉದ್ಯಮಿಯಾಗಿ ಬೆಳೆದಿರುವ ಈ ಅಭ್ಯರ್ಥಿ ಉದ್ಯೋಗ ತಿರಸ್ಕರಿಸಿದ ಹಿಂದಿನ ಕ್ಷಮೆ ಘಟನೆ ವಿವರಿಸಿದ್ದಾರೆ.
07:54 PM (IST) Jul 03
ಸೌತ್ ಸೂಪರ್ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'Toxic' ರಿಲೀಸ್ಗೂ ಮೊದಲೇ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಕಥೆಯ ಜೊತೆಗೆ, ಇದರಲ್ಲಿರುವ ದೊಡ್ಡ ತಾರಾಬಳಗ ಕೂಡ ಜನರ ಗಮನ ಸೆಳೆಯುತ್ತಿದೆ.
07:36 PM (IST) Jul 03
ವಿಚ್ಛೇದನದ ಬಳಿಕವೂ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ತಮ್ಮ ಇಬ್ಬರು ಮಕ್ಕಳಿಗಾಗಿ ಸ್ನೇಹಪೂರ್ವಕ ಸಂಬಂಧ ಮುಂದುವರಿಸುತ್ತಿದ್ದಾರೆ. ಕುಟುಂಬದ ಕಾರ್ಯಕ್ರಮಗಳಲ್ಲಿ, ಮಕ್ಕಳ ಜೊತೆಗಿನ ಪ್ರವಾಸಗಳಲ್ಲಿ ಹಾಗೂ ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಇಬ್ಬರೂ ಕೂಡ, ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
07:27 PM (IST) Jul 03
ಆಟೋ ಚಾಲಕನ ಅತೀ ದೊಡ್ಡ ಕನಸನ್ನು ಬೆಂಗಳೂರು ಉದ್ಯಮಿ ಪೂರೈಸಿದ್ದಾರೆ. ತನ್ನ ಲ್ಯಾಂಬೋರ್ಗಿನಿ ಕಾರನ್ನು ಆಠಾ ಚಾಲಕನಿಗೆ ಡ್ರೈವ್ ಮಾಡಲು ನೀಡಿ, ಆಟೋ ರಿಕ್ಷಾವನ್ನು ತಾನು ಚಲಾಯಿಸಿದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
07:12 PM (IST) Jul 03
ಇಂದು ನಡೆದ (03 July 2026) ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ವೈಶಾಖ್ ಜೆ ಗೌಡ, ನಟರಾದ ಶಿವರಾಜ್ಕುಮಾರ್, ಡಾಲಿ ಧನಂಜಯ್, ಪ್ರಿಯಾಂಕಾ ಮೋಹನ್ ಹಾಗೂ ಅದಿತಿ ಬಾಲನ್ ಸೇರಿದಂತೆ, ಇಡೀ ಚಿತ್ರತಂಡ ಭಾಗಿಯಾಗಿ ಹಲವು ಸಂಗತಿಗಳನ್ನು ಹಂಚಿಕೊಂಡಿದೆ.
07:05 PM (IST) Jul 03
ನಿಮಗೆ ಶಿಕ್ಷೆ ಕೊಡುವಂತೆ ಸರ್ಕಾರಕ್ಕೆ ಬರೆಯುತ್ತೇನೆಂದು ಗರಂ ಆದರು. ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಕೆ ಎನ್ ಫಣೀಂದ್ರ ತರಾಟೆಗೆ ತೆಗೆದುಕೊಂಡರು.
06:12 PM (IST) Jul 03
ಪ್ರತಿ ವರ್ಷ 'ಬಿಗ್ ಬಾಸ್ ಕನ್ನಡ' ಹೊಸ ಸೀಸನ್ ಘೋಷಣೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಮೇಘಾ ಶೆಟ್ಟಿ ಹೆಸರು ಚರ್ಚೆಗೆ ಬರುತ್ತದೆ. ಆದರೆ ಇದುವರೆಗೆ ಅವರು ಒಂದೇ ಒಂದು ಸೀಸನ್ನಲ್ಲೂ ಭಾಗವಹಿಸಿಲ್ಲ.
05:50 PM (IST) Jul 03
ಭಾರತದ ಇಂಗ್ಲೆಂಡ್ ಪ್ರವಾಸವು ತಂಡದ ಆಯ್ಕೆಯ ವಿವಾದದಿಂದ ಕೂಡಿದೆ. ಉತ್ತಮ ಫಾರ್ಮ್ನಲ್ಲಿರುವ ವೈಭವ್ ಸೂರ್ಯವಂಶಿಯನ್ನು ಮೊದಲ ಪಂದ್ಯದಲ್ಲಿ ಆಡಿಸದ ಕೋಚ್ ಗಂಭೀರ್ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದ್ದಷ್ಟೇ ಅಲ್ಲ ಆ ಕಾರಣಕ್ಕೂ ವೈಭವ್ಗೆ ಸಿಕ್ಕಂತಾಗಿದೆ ಗ್ರೀನ್ ಸಿಗ್ನಲ್.
05:46 PM (IST) Jul 03
ನವಲಿ ಬಳಿ ಸಮತೋಲನ ಜಲಾಶಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾಗಿರುವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
05:37 PM (IST) Jul 03
ಅನೇಕರು ತಮ್ಮ ಹಳೆಯ ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಮರೆತಿರುತ್ತಾರೆ. 10 ವರ್ಷಗಳಿಗಿಂತ ಹೆಚ್ಚು ಕಾಲ ಕ್ಲೈಮ್ ಮಾಡದ ಠೇವಣಿಗಳನ್ನು ಮರಳಿ ಪಡೆಯಲು RBI UDGAM ಪೋರ್ಟಲ್ ಮತ್ತು ಸರಳ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
05:19 PM (IST) Jul 03
KM Chaithanya: 'ಬಲರಾಮನ ದಿನಗಳು' ಸಿನಿಮಾ, ಕೆ.ಎಂ. ಚೈತನ್ಯ ಅವರ ಜನಪ್ರಿಯ 'ಆ ದಿನಗಳು' ಚಿತ್ರದ ಮುಂದುವರಿದ ಭಾಗವಲ್ಲ. ಆದರೆ ಅದೇ ಕಾಲಘಟ್ಟದ ಮತ್ತೊಂದು ಕಥೆಯನ್ನು ಹೇಳುವ ಪ್ರಯತ್ನವಾಗಿದೆ.
04:52 PM (IST) Jul 03
Bengaluru rent: ಬೆಂಗಳೂರಿನಲ್ಲಿ ಅಥವಾ ಸಿಟಿಯಲ್ಲಿ ವಾಸ ಮಾಡುವಾಗ ಬಾಡಿಗೆ ಕೊಡಬೇಕು, ಊಟ ತಿಂಡಿಗೆ ಹಣ ಕೊಡಬೇಕು ಎಂದೆಲ್ಲ ಯೋಚನೆ ಮಾಡ್ತೀವಿ. ಆದರೆ ಇದು ಹೊರೆ ಅಲ್ಲ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಹೇಳಿದ್ದಾರೆ.
04:51 PM (IST) Jul 03
Vijayalakshmi Instagram Post: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹೊಸ ಪೋಸ್ಟ್ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
04:32 PM (IST) Jul 03
ರಾಮ ಮಂದಿರ ಚಂದಾ ವಂಚನೆಗೆ ಸಂಬಂಧಿಸಿದಂತೆ ಆರ್ಎಸ್ಎಸ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದೇನು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
04:29 PM (IST) Jul 03
Bhadra Dam: ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸಲು ಸರ್ಕಾರದ ಆದೇಶವಾಗಿರುವ ಹಿನ್ನಲೆಯಲ್ಲಿ ಅಚ್ಚುಕಟ್ಟು ಭಾಗದ ಎಲ್ಲಾ ರೈತರು ಇಲಾಖೆಯೊಂದಿಗೆ ಸಹಕರಿಸಬೇಕು.
04:20 PM (IST) Jul 03
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂಬೈನಲ್ಲಿರುವ ತಮ್ಮ ಎರಡು ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು 12.38 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸುಮಾರು 9 ವರ್ಷಗಳ ಹಿಂದೆ ಖರೀದಿಸಿದ್ದ ಈ ಆಸ್ತಿಯಿಂದ ಅವರಿಗೆ ಶೇ. 38 ರಷ್ಟು ಲಾಭ ಬಂದಿದೆ.
04:17 PM (IST) Jul 03
ಟಾಕ್ಸಿಕ್’ ಹಾಲಿವುಡ್ ಪ್ರೇಕ್ಷಕರನ್ನು ಮನಸ್ಸಲ್ಲಿಟ್ಟುಕೊಂಡು ನಿರ್ಮಾಣವಾದ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ. ಟ್ಯಾಗ್ಲೈನ್ನಲ್ಲೇ ಇದು ವಯಸ್ಕರಿಗಾಗಿ ತಯಾರಾಗಿರುವ ಚಿತ್ರ ಎಂಬ ಸೂಚನೆ ಇದೆ.
04:05 PM (IST) Jul 03
Mokshitha Pai Jagaddhatri Kannada Serial: ಖಾಸಗಿ ವಾಹಿನಿಯಲ್ಲಿ ‘ಜಗದ್ದಾತ್ರಿ’ ಧಾರಾವಾಹಿ ಪ್ರಸಾರ ಆಗಲಿದೆ. ಮೋಕ್ಷಿತಾ ಪೈ, ವಿಜಯ್ ಸೂರ್ಯ ನಟನೆಯ ಈ ಸೀರಿಯಲ್ಗೋಸ್ಕರ ಇನ್ನೊಂದು ಧಾರಾವಾಹಿ ಅಂತ್ಯ ಆಗಲಿದೆ. ಹಾಗಾದರೆ ಯಾವ ಧಾರಾವಾಹಿ ಮುಗಿಯಲಿದೆ?
03:31 PM (IST) Jul 03
ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಎದುರಿಸುತ್ತಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. 2012ರಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ಅನ್ವಯ, ಈಶ್ವರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
03:29 PM (IST) Jul 03
03:10 PM (IST) Jul 03
ಯಾವುದೇ ಒಬ್ಬ ನಟನಿಗೆ ಅಭಿಮಾನಿಗಳು ಆಸ್ತಿ. ಆದರೆ ಆ ಆಸ್ತಿಯೇ ಅತಿರೇಕಕ್ಕೆ ಹೋದಾಗ ಅದು ಆ ನಟನ ಜೀವನವನ್ನೇ ಭಸ್ಮ ಮಾಡುವ ಜ್ವಾಲೆಯಾಗುತ್ತೆ ಅನ್ನೋದಕ್ಕೆ ಈ ಇಡೀ ಪ್ರಕರಣವೇ ಒಂದು ಸಾಕ್ಷಿ. ಸದ್ಯ ಈ ಅಭಿಮಾನಿಗಳ ಅವಾಂತರವೇ ಎಲ್ಲಿ ಮುಳುವಾಗುತ್ತೋ ಅಂತ ಸ್ವತಃ ದರ್ಶನ್ಗೇ ಟೆನ್ಷನ್ ಶುರುವಾಗಿದೆ ಎನ್ನಲಾಗ್ತಿದೆ.
02:30 PM (IST) Jul 03
02:28 PM (IST) Jul 03
ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆ ವೇಳೆ ಅಭ್ಯರ್ಥಿ ಮೃತಪಟ್ಟರೆ, ಸಂತ್ರಸ್ತರ ಕುಟುಂಬಕ್ಕೆ ಪರಿಹಾರವನ್ನು ಹೇಗೆ ಪಡೆಯಬಹುದು? ಮಿತಿಗಳೇನಿವೆ? ಹಾಗೂ ಅದನ್ನು ಪಡೆಯಲು ಇರುವ ಮಾರ್ಗಗಳ ಕುರಿತಾಗಿ ಸಂಪೂರ್ಣ ವಿವರ ಇಲ್ಲಿದೆ.
02:13 PM (IST) Jul 03
01:55 PM (IST) Jul 03
GBA clears footpath encroachments: ಸುಪ್ರೀಂ ಕೋರ್ಟ್ ಆದೇಶದಂತೆ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಇಂದು ಬನಶಂಕರಿ ದೇವಸ್ಥಾನದ ಮುಂಭಾಗದದಲ್ಲಿದ್ದ ನಂದಿನಿ ಪಾರ್ಲರ್ ತೆರವುಗೊಳಿಸುವ ವೇಳೆ ಹೈಡ್ರಾಮಾ ನಡೆದಿದೆ.
12:53 PM (IST) Jul 03
ಸಚಿವ ಶರಣಪ್ರಕಾಶ್ ಪಾಟೀಲ್ ಅವರು, ಅಯೋಧ್ಯೆ ರಾಮ ಮಂದಿರದ ಹಣವನ್ನು ಲೂಟಿ ಮಾಡುವ ಮೂಲಕ ಬಿಜೆಪಿ ಸರ್ಕಾರವು ಮೊಹಮ್ಮದ್ ಘಜ್ನಿಯಂತೆ ವರ್ತಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು ಎಂದಿದ್ದಾರೆ.
12:52 PM (IST) Jul 03
ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಎಸ್ಐಆರ್ ಪ್ರಕ್ರಿಯೆ ಕುರಿತು ಬಿಜೆಪಿ-ಜೆಡಿಎಸ್ ವಿರುದ್ಧ ಕಿಡಿಕಾರಿದ್ದು, ಮತದಾನದ ಹಕ್ಕನ್ನು ಕಸಿಯಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿದ್ದಾರೆ. ಆಯೋಗವು ನಿಯಮ ಉಲ್ಲಂಘಿಸಿದರೆ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
12:46 PM (IST) Jul 03
12:30 PM (IST) Jul 03
ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಬಿಎಲ್ಓಗಳು ಮಸೀದಿಯಲ್ಲೇ ಮತಪಟ್ಟಿ ಪರಿಷ್ಕರಣೆ ನಡೆಸಿದ್ದಾರೆ. ಮನೆ ಮನೆಗೆ ತೆರಳುವ ಬದಲು ಒಂದೇ ಕಡೆ ಜನರನ್ನು ಸೇರಿಸಿ ಮಾಹಿತಿ ಸಂಗ್ರಹಿಸುತ್ತಿದ್ದ ಈ ಕ್ರಮಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
11:57 AM (IST) Jul 03
ತೀವ್ರ ಬಿಸಿಲಿನಿಂದ ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 5,000 ಕ್ಯೂಸೇಕ್ ನೀರು ಹರಿದು ಬಂದಿದೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಕೃಷಿ ಹಾಗೂ ಕುಡಿಯುವ ನೀರಿನ ಭರವಸೆ ಮೂಡಿಸಿದೆ.
11:37 AM (IST) Jul 03
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ವಿಜ್ಞಾನಿಗಳು ಬಾಯಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಅಲ್ಟ್ರಾಸೌಂಡ್ ತರಂಗಗಳನ್ನು ಬಳಸಿ, ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ಕೇವಲ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವ ಹೊಸ ತಂತ್ರವನ್ನು ಅವರು ಕಂಡುಹಿಡಿದಿದ್ದಾರೆ.
11:28 AM (IST) Jul 03
ಮಂಡ್ಯ: ಸಂವಿಧಾನದ ಹಕ್ಕು-ಬಾಧ್ಯತೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ವಕೀಲರ ಸಂಘ ವಿನೂತನ ರೀತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಂವಿಧಾನ ಭವನದ ತ್ರೀ-ಡಿ ಮಾದರಿ ಇದೀಗ ಸರ್ಕಾರದಿಂದ ಅಂತಿಮಗೊಂಡಿದೆ.
11:20 AM (IST) Jul 03
ಸ್ಟಾರ್ ಕ್ರಿಕೆಟಿಗನೊಬ್ಬ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಿಂದಾಗಿ, ಅವರ ಕ್ರಿಕೆಟ್ ವೃತ್ತಿಜೀವನ ಅಂತ್ಯಗೊಂಡಿದ್ದು, ದೀರ್ಘಾವಧಿಯ ಜೈಲು ಶಿಕ್ಷೆ ಎದುರಿಸಲಿದ್ದಾರೆ ಎನ್ನಲಾಗಿದೆ.
11:15 AM (IST) Jul 03
ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ಆರ್ಸಿಬಿ ಹ್ಯಾಟ್ರಿಕ್ ಕನಸು ಕಾಣ್ತಿದೆ. ಅದಕ್ಕೆ ಈಗಿನಿಂದಲೇ ತೆರೆಮರೆಯಲ್ಲಿ ಸಿದ್ಧತೆ ನಡೆಸ್ತಿದ್ದು, ಮುಂದೆ ಎದುರಾಗುವ ಹರಾಜಿನ ಮೇಲೆ ಕಣ್ಣಿಟ್ಟಿದೆ. ಅದರ ಮುಂದುವರಿದ ಭಾಗವಾಗಿ ಮೂವರು ಆಟಗಾರರಿಗೆ ಕೊಕ್ ನೀಡಲು ಮುಂದಾಗಿದೆ ಎನ್ನಲಾಗ್ತಿದೆ.
11:00 AM (IST) Jul 03