- Home
- Sports
- Cricket
- ಎರಡನೇ ಪಂದ್ಯದಲ್ಲಿ ಕ್ರೀಸ್ಗಿಳಿಯಲು ವೈಭವ್ಗೆ ಸಿಕ್ತಾ ಗ್ರೀನ್ ಸಿಗ್ನಲ್? ಆದರೆ ಗಂಭೀರ ಲೆಕ್ಕಾಚಾರವೇನು?
ಎರಡನೇ ಪಂದ್ಯದಲ್ಲಿ ಕ್ರೀಸ್ಗಿಳಿಯಲು ವೈಭವ್ಗೆ ಸಿಕ್ತಾ ಗ್ರೀನ್ ಸಿಗ್ನಲ್? ಆದರೆ ಗಂಭೀರ ಲೆಕ್ಕಾಚಾರವೇನು?
ಭಾರತದ ಇಂಗ್ಲೆಂಡ್ ಪ್ರವಾಸವು ತಂಡದ ಆಯ್ಕೆಯ ವಿವಾದದಿಂದ ಕೂಡಿದೆ. ಉತ್ತಮ ಫಾರ್ಮ್ನಲ್ಲಿರುವ ವೈಭವ್ ಸೂರ್ಯವಂಶಿಯನ್ನು ಮೊದಲ ಪಂದ್ಯದಲ್ಲಿ ಆಡಿಸದ ಕೋಚ್ ಗಂಭೀರ್ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದ್ದಷ್ಟೇ ಅಲ್ಲ ಆ ಕಾರಣಕ್ಕೂ ವೈಭವ್ಗೆ ಸಿಕ್ಕಂತಾಗಿದೆ ಗ್ರೀನ್ ಸಿಗ್ನಲ್.

ವಿವಾದಿಂದ ಕೂಡಿದ ಇಂಗ್ಲೆಂಡ್ ಪ್ರವಾಸ!
ಭಾರತದ ಇಂಗ್ಲೆಂಡ್ ಪ್ರವಾಸ ವಿವಾದದಿಂದಲೇ ಕೂಡಿದೆ. ಇದಕ್ಕಿಂತ ಹಿಂದೆ ಹೋಗಿ ನೋಡುವುದಾದರೆ,ಕೆಲ ನಿರ್ಧಾರಗಳಿಂದ ಐರ್ಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿತು. ಆದ್ದರಿಂದ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಕ್ರಮಾಂಕ್ಕೆ ಕಳುಹಿಸಿದ ನಿರ್ಧಾರ ಕ್ರಿಕೆಟ್ ವಿಶ್ಲೇಷಕರನ್ನು ಮಾತ್ರವಲ್ಲದೇ ಕ್ರಿಕೆಟ್ ಅಭಿಮಾನಿಗಳಲ್ಲೂ ತೀವ್ರತರ ಆಕ್ರೋಶವನ್ನು ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ 2ನೇ ಪಂದ್ಯದಲ್ಲಿ ಆಡಲೂ ಎಷ್ಟು ಚಾನ್ಸ್ ಇದೆ? ಕೋಚ್ ಗಂಭೀರ ಲೆಕ್ಕಾಚಾರ ಏನು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.
ಮೊದಲ ಪಂದ್ಯದಲ್ಲಿ ಬೆಂಚ್ ಕಾದ ಪ್ರತಿಭೆಗಳು!
2 ಬಾರಿ ವಿಶ್ವಕಪ್ ಗೆಲುವಿನ ಭಾಗವಾಗಿದ್ದ ಅಕ್ಷರ ಪಟೇಲ್ ಹಾಗೂ ಟಿ-20 ಪಾರ್ಮಾಟ್ನಲ್ಲಿ ಬೆಸ್ಟ್ ಫಾರ್ಮ್ನಲ್ಲಿರುವ ವೈಭವ್ ಸೂರ್ಯವಂಶಿ ಹಾಗೂ ಮೊದಲ ಪಂದ್ಯದಲ್ಲಿ ಬೆಂಚ ಕಾದರು. ಆದರೆ ಇವರನ್ನು ಯಾರಿಗೋಸ್ಕರ್ ಕೈ ಬಿಟ್ಟಿದ್ದರೂ ಅವರು ಶೂನ್ಯಕ್ಕೆ ಪೆವೆಲಿಯನ್ಗೆ ಸೇರಿದರು. ಆದ್ದರಿಂದ ಗಂಭೀರ್ ವಿಚಾರದಲ್ಲಿ ಕೆಲ ಪ್ರಶ್ನೆಗಳು ಎದ್ದಿದ್ದಂತು ನಿಜ. ಆದ್ದರಿಂದ ಅಭಿಮಾನಿಗಳೊಂದಿಗೆ, ಹಿರಿಯ ಕ್ರಿಕೆಟಿಗರು ವೈಭವ ಮೈದಾನಕ್ಕಿಳಿಯುವುದನ್ನು ಎದುರು ನೋಡುತ್ತಿದ್ದಾನೆ.
ಪಿಚ್ಚರ್ ಕ್ಲಿಯರ್ ಇದೆ!
ಹೌದು ಈಗ ಭಾರತದ ತಂಡದ ಮುಂದೆ ಕ್ಲಿಯರ್ ಪಿಕ್ಚರ್ ಇದೆ. ಅದೆನೆಂದರೆ, ಈಗ ವೈಭವನನ್ನು ಮೈದಾನಕ್ಕಿಳಿಸುವ ಸಮಯ ಸನಿಹವಿದೆ ಎಂದು ಹೇಳಲಾಗುತ್ತದೆ. ಅಭಿಷೇಕ, ಕಿಶನ್, ಸಂಜು ಇವರಲ್ಲಿ ಒಬ್ಬರನ್ನು ಕೂರಿಸಿ ವೈಭವ್ ಅವರನ್ನು ಕನಕ್ಕಿಳಿಸಬೇಕು. ಕಳೆದೆರಡು ಮ್ಯಾಚ್ನಲ್ಲಿ ಅಭಿಷೇಕ ಶರ್ಮಾ ನಿರಸವಲ್ಲ, ಉತ್ತಮ ಪ್ರದರ್ಶನ ತೋರಿದ್ದಾರೆ.
ಮುಂದಿನ ದಾರಿ ಏನು?
ಈಗ ಇರುವ ದಾರಿ ಎಂದರೆ, ಈಶಾನ್ ಕಿಶನ್ ಅಥವಾ ಸಂಜು ಸ್ಯಾಮ್ಸ್ನ್ ಇವರಿಬ್ಬರಲ್ಲಿ ಒಬ್ಬರನ್ನು ಹೊರ ಕೂರಿಸಿ, ವೈಭವನನ್ನು ಕನಕ್ಕಿಳಿಸಬೇಕಾಗುತ್ತದೆ. ಆದರೆ ಅನುಭವಿ ಆಟಗಾರರನ್ನು ಕೂಡಿಸಿ, ವೈಭವನ್ನು ತಂಡಕ್ಕೆ ತೆಗೆದುಕೊಳ್ಳುವುದರ ಬದಲಾಗಿ, ವಿಶ್ರಾಂತಿ ನೀಡಿ ವೈಭವ್ನನ್ನು ಕ್ರೀಸ್ಗೆ ಇಳಿಸಬೇಕು ಎನ್ನುವುದು ಕ್ರಿಕೆಟ್ ವಿಶ್ಲೇಷಕರ ಮಾತಾಗಿದೆ.
ನಡೆದಿದೆಯಾ ಯಾವುದಾದರೂ ಲಾಭಿ!
ಈಗಾಗಲೇ ವೈಭವನನ್ನು ಕ್ರೀಸ್ಗಿಳಿಸದ ಕಾರಣ ಹಲವಾರು ವಿಷಯಗಳ ಉಹಾಪೋಹುಗಳು ನಡೆದಿವೆ. ಅಲ್ಲದೇ ಕೆಲವರು ಸಚಿನ ಅವರು 1 ವರ್ಷ ಬೆಂಚ ಕಾದಿದ್ದಾರೆ ಎಂದು ವೈಭವ್ ವಿರುದ್ಧ ನಡೆದ ರಾಜಕೀಯ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ಮುಂಬೈ ಕ್ರಿಕೆಟ್ ಚಿಂತಕರ ಛಾವಡಿಯಲ್ಲಿ ವೈಭವ್ ಸದ್ಯಕ್ಕೆ ಮೈದಾನಕ್ಕೆ ಇಳಿದಿದ್ದೆ ಆದರೆ, ಸಚಿನ್ ದಾಖಲೆಯನ್ನು ಉಡೀಸ್ ಮಾಡುವ ಸಾಧ್ಯತೆ ಇದೆ. ಆದ್ದರಿಂದಲೂ ಬೆಂಚ್ನಲ್ಲಿ ಕೂರಿಸಿದ್ದಾರೆ ಎನ್ನುವ ಮಾತು ಹರಿದಾಡುತ್ತಿವೆ.
ಏನು ಹೇಳುತ್ತೆ ಗಂಭೀರ್ ಲೆಕ್ಕಾಚಾರ?
ಇದರ ನಡುವೆ, ಹಿರಿಯ ಅನುಭವಿಗಳು ಕೂರಿಸಿ, ವೈಭವ್ ಅವರನ್ನು ಕ್ರೀಸ್ಗೆ ಇಳಿಸುವುದು ಸವಾಲಿನಿಂದ ಕೂಡಿದರೂ, ಆಡಿಸಲೇ ಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಎಲ್ಲರ ಕಣ್ಣು ಎರಡನೇ ಪಂದ್ಯದ ಮೇಲೆ ನೆಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

