MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಹೇಳೋರಿಲ್ಲ, ಕೇಳೋರಿಲ್ಲ..ರಾಮನಗರದ ಕಲ್ಯಾಣಮಂಟಪದ ಬಳಿಕ ಬೆಂಗಳೂರಿನ ಮಸೀದಿಯಲ್ಲಿ SIR

ಹೇಳೋರಿಲ್ಲ, ಕೇಳೋರಿಲ್ಲ..ರಾಮನಗರದ ಕಲ್ಯಾಣಮಂಟಪದ ಬಳಿಕ ಬೆಂಗಳೂರಿನ ಮಸೀದಿಯಲ್ಲಿ SIR

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ, ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಬಿಎಲ್‌ಓಗಳು ಮಸೀದಿಯಲ್ಲೇ ಮತಪಟ್ಟಿ ಪರಿಷ್ಕರಣೆ ನಡೆಸಿದ್ದಾರೆ. ಮನೆ ಮನೆಗೆ ತೆರಳುವ ಬದಲು ಒಂದೇ ಕಡೆ ಜನರನ್ನು ಸೇರಿಸಿ ಮಾಹಿತಿ ಸಂಗ್ರಹಿಸುತ್ತಿದ್ದ ಈ ಕ್ರಮಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

2 Min read
Author : Santosh Naik
Published : Jul 03 2026, 12:30 PM IST
Share this Photo Gallery
  • FB
  • TW
  • Linkdin
  • Whatsapp
16
ಮಸೀದಿಯಲ್ಲೇ ಮತಪಟ್ಟಿ ಪರಿಷ್ಕರಣೆ; ಚುನಾವಣಾ ಆಯೋಗದ ನಿಯಮಗಳು ಗಾಳಿಗೆ!
Image Credit : X

ಮಸೀದಿಯಲ್ಲೇ ಮತಪಟ್ಟಿ ಪರಿಷ್ಕರಣೆ; ಚುನಾವಣಾ ಆಯೋಗದ ನಿಯಮಗಳು ಗಾಳಿಗೆ!

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಚುನಾವಣಾ ಆಯೋಗದ ನಿಯಮಾವಳಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಬಿಎಲ್‌ಓಗಳು (BLO) ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಪರಿಶೀಲಿಸಬೇಕಾದ ಜವಾಬ್ದಾರಿ ಮರೆತು, ಮಸೀದಿ ಹಾಗೂ ಖಾಸಗಿ ಕಚೇರಿಯೊಂದರಲ್ಲೇ ವಿಶೇಷ ಮತಪಟ್ಟಿ ಪರಿಷ್ಕರಣೆ (SIR - Special Summary Revision) ಪ್ರಕ್ರಿಯೆ ನಡೆಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಟೇಬಲ್ ಹಾಕಿ SIR ಪ್ರಕ್ರಿಯೆ; ಮಸೀದಿ ಮುಂದೆ ಜಮಾಯಿಸಿದ ಜನಸ್ತೋಮ
Image Credit : X

ಟೇಬಲ್ ಹಾಕಿ SIR ಪ್ರಕ್ರಿಯೆ; ಮಸೀದಿ ಮುಂದೆ ಜಮಾಯಿಸಿದ ಜನಸ್ತೋಮ

ಖಾಸಗಿ ಕಚೇರಿ ಹಾಗೂ ಮಸೀದಿಯ ಮುಂಭಾಗದಲ್ಲೇ ಟೇಬಲ್‌ಗಳನ್ನು ಹಾಕಿಕೊಂಡ ಬಿಎಲ್‌ಓಗಳು ಮತಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಮುಂದಾಗಿದ್ದಾರೆ. ಮಸೀದಿಯ ಆವರಣದಲ್ಲೇ ಇಂತಹ ಪ್ರಕ್ರಿಯೆ ನಡೆಯುತ್ತಿರುವುದು ತಿಳಿಯುತ್ತಿದ್ದಂತೆ, ಇಡೀ ಏರಿಯಾದ ಜನರು ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಜಮಾವಣೆಯಾಗಿದ್ದಾರೆ.

Related Articles

Related image1
ಮನೆಯಲ್ಲೇ ಕುಳಿತು SIR ಫಾರ್ಮ್​ ತುಂಬೋದು ಹೇಗೆ? ಮತದಾರರ ಪರಿಷ್ಕರಣೆಯ ಹಂತ ಹಂತದ ಮಾಹಿತಿ
Related image2
SIR: ರಾಮನಗರ ಅಷ್ಟೇ ಅಲ್ಲ, ಕುಣಿಗಲ್‌, ತೀರ್ಥಹಳ್ಳಿ, ಬೆಂಗಳೂರಲ್ಲೂ ಅರ್ಜಿ ಸಾಮೂಹಿಕ ಭರ್ತಿ!
36
ಬಿಟಿಎಂ ಲೇಔಟ್‌ನಲ್ಲಿ ರೂಲ್ಸ್ ಬ್ರೇಕ್ ಮಾಡಿದ ಬಿಎಲ್‌ಓಗಳು!
Image Credit : X

ಬಿಟಿಎಂ ಲೇಔಟ್‌ನಲ್ಲಿ ರೂಲ್ಸ್ ಬ್ರೇಕ್ ಮಾಡಿದ ಬಿಎಲ್‌ಓಗಳು!

ಚುನಾವಣಾ ಆಯೋಗದ ಕಟ್ಟುನಿಟ್ಟಿನ ಮಾರ್ಗಸೂಚಿಗಳ ಪ್ರಕಾರ, ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಅಧಿಕಾರಿಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋಗಿ ಭೌತಿಕವಾಗಿ ಪರಿಶೀಲನೆ ನಡೆಸಬೇಕು. ಆದರೆ ಬಿಟಿಎಂ ಲೇಔಟ್ ವ್ಯಾಪ್ತಿಯಲ್ಲಿ ಈ ನಿಯಮವನ್ನು ಸಂಪೂರ್ಣವಾಗಿ ಬ್ರೇಕ್ ಮಾಡಲಾಗಿದ್ದು, ಸ್ಥಳೀಯ ಜನರನ್ನು ಒಂದೇ ಸೂರಿನಡಿ ಸೇರಿಸಿ ಮಾಹಿತಿ ಸಂಗ್ರಹಿಸುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

46
ಎರಡು ದಿನಗಳ ಹಿಂದೆ ನಡೆದ ಅಕ್ರಮಕ್ಕೆ ಸ್ಥಳೀಯರಿಂದ ತೀವ್ರ ವಿರೋಧ
Image Credit : X

ಎರಡು ದಿನಗಳ ಹಿಂದೆ ನಡೆದ ಅಕ್ರಮಕ್ಕೆ ಸ್ಥಳೀಯರಿಂದ ತೀವ್ರ ವಿರೋಧ

ಕಳೆದ ಎರಡು ದಿನಗಳ ಹಿಂದೆ ಮಸೀದಿಯ ಒಳಗಡೆ ಈ ರಹಸ್ಯ ಎಸ್‌ಐಆರ್ (SIR) ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಧಾರ್ಮಿಕ ಕೇಂದ್ರವೊಂದರಲ್ಲಿ ಅಧಿಕೃತ ಸರ್ಕಾರಿ ಮತ್ತು ಚುನಾವಣಾ ಪ್ರಕ್ರಿಯೆಗಳನ್ನು ನಡೆಸುತ್ತಿರುವುದನ್ನು ಗಮನಿಸಿದ ಸ್ಥಳೀಯ ನಾಗರಿಕರು ಸ್ಥಳದಲ್ಲೇ ಬಿಎಲ್‌ಓ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ತಮ್ಮ ತೀವ್ರ ವಿರೋಧವನ್ನು ದಾಖಲಿಸಿದ್ದಾರೆ.

56
ಜನಾಕ್ರೋಶಕ್ಕೆ ಹೆದರಿ ಮಸೀದಿಯಿಂದ ಕಾಲ್ಕಿತ್ತ ಅಧಿಕಾರಿಗಳು!
Image Credit : X

ಜನಾಕ್ರೋಶಕ್ಕೆ ಹೆದರಿ ಮಸೀದಿಯಿಂದ ಕಾಲ್ಕಿತ್ತ ಅಧಿಕಾರಿಗಳು!

ಮಸೀದಿಯಲ್ಲಿ ಮತಪಟ್ಟಿ ಪರಿಷ್ಕರಣೆ ಮಾಡುತ್ತಿದ್ದ ಕ್ರಮಕ್ಕೆ ಸ್ಥಳೀಯರಿಂದ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆ ಬಿಎಲ್‌ಓಗಳು ಗಾಬರಿಗೊಂಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಅಧಿಕಾರಿಗಳು, ಸ್ಥಳೀಯರ ತೀವ್ರ ವಿರೋಧದ ಬಳಿಕ ಅಲ್ಲಿಂದ ತರಾತುರಿಯಲ್ಲಿ ತಮ್ಮ ಸಾಮಗ್ರಿಗಳನ್ನು ಚದುರಿಸಿಕೊಂಡು ಕಾಲ್ಕಿತ್ತಿದ್ದಾರೆ.

66
ರಾಮನಗರದ ಕಲ್ಯಾಣಮಂಟಪದಲ್ಲಿ ಎಸ್‌ಐಆರ್‌
Image Credit : X

ರಾಮನಗರದ ಕಲ್ಯಾಣಮಂಟಪದಲ್ಲಿ ಎಸ್‌ಐಆರ್‌

ರಾಮನಗರದ ಕಲ್ಯಾಣ ಮಂಟಪದಲ್ಲಿ ಜನ ಸೇರಿಸಿ ಎಸ್‌ಐಆರ್‌ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಲ್ಲದೆ, ಅದರ ವಿಡಿಯೋ ಕೂಡ ರಿಲೀಸ್‌ ಮಾಡಿದ್ದರು. ಮನೆಮನೆಗೆ ಹೋಗುವ ಬದಲು ಸಾಮೂಹಕವಾಗಿ ಮತಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಸಾವಿರಾರು ಬಾಂಗ್ಲಾ ಅಕ್ರಮ ವಲಸಿಗರಿಗೆ ಮತದಾನ ದಾಖಲೆ ಸೃಷ್ಟಿಸುವ ಯತ್ನ ಮಾಡಲಾಗಿದೆ. ಅಮಿತ್‌ ಶಾ ಹಾಗೂ ಚುನಾವಣಾ ಆಯೋಗಕ್ಕೆ ಈ ಬಗ್ಗೆ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಬೆಂಗಳೂರು
ರಾಮನಗರ
ಮತದಾರರ ಪಟ್ಟಿ ಪರಿಷ್ಕರಣೆ
ಚುನಾವಣೆ
ಚುನಾವಣಾ ಆಯೋಗ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಬೆಂಗಳೂರಿನ IISc ವಿಜ್ಞಾನಿಗಳ ಕ್ರಾಂತಿಕಾರಿ ಆವಿಷ್ಕಾರ!; ಬಾಯಿ ಕ್ಯಾನ್ಸರ್ ನಿಯಂತ್ರಣಕ್ಕೆ ಅಲ್ಟ್ರಾಸೌಂಡ್ ರಾಮಬಾಣ
Recommended image2
ಡಿಸಿಎಂ ಜಿ ಪರಮೇಶ್ವರ ಫೇಕ್ ಲವ್‌ ಸ್ಟೋರಿ ಕಥೆ ಕಟ್ಟಿದ ಯೂಟ್ಯೂಬರ್ ಹೆಡೆಮುರಿ ಕಟ್ಟಿದ ಪೊಲೀಸ್
Recommended image3
NCERT ಕನ್ನಡವನ್ನು 3ನೇ ಭಾಷೆಯಾಗಿಸುವ ಆದೇಶಕ್ಕೆ ಕರವೇ ಕೆಂಡಾಮಂಡಲ!
Related Stories
Recommended image1
ಮನೆಯಲ್ಲೇ ಕುಳಿತು SIR ಫಾರ್ಮ್​ ತುಂಬೋದು ಹೇಗೆ? ಮತದಾರರ ಪರಿಷ್ಕರಣೆಯ ಹಂತ ಹಂತದ ಮಾಹಿತಿ
Recommended image2
SIR: ರಾಮನಗರ ಅಷ್ಟೇ ಅಲ್ಲ, ಕುಣಿಗಲ್‌, ತೀರ್ಥಹಳ್ಳಿ, ಬೆಂಗಳೂರಲ್ಲೂ ಅರ್ಜಿ ಸಾಮೂಹಿಕ ಭರ್ತಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved