Published : Aug 10, 2026, 07:22 AM ISTUpdated : Aug 10, 2026, 10:24 PM IST

Karnataka news live: Cars - ₹3.35 ಲಕ್ಷ ಕಡಿಮೆ ಬೆಲೆಗೆ Tata Curvv EV! 585 ಕಿ.ಮೀ. ರೇಂಜ್‌ನ ಎಲೆಕ್ಟ್ರಿಕ್ ಕಾರಿಗೆ ಭರ್ಜರಿ ಆಫರ್

ಸಾರಾಂಶ

ರಾಜ್ಯದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ರಾಜಕೀಯ ಪಕ್ಷಗಳ ಹೋರಾಟಕ್ಕೆ ದಾಳವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆ ಅಭಿವೃದ್ಧಿಗೆ ಬಿಡದಿ ಟೌನ್ ಶಿಪ್ ಯೋಜನೆ ಮಾಡುವುದಾಗಿ ಟೊಂಕಕಟ್ಟಿ ನಿಂತಿದ್ದಾರೆ. ಆದರೆ, ಕೃಷಿ ಭೂಮಿಯನ್ನು ನಾಶ ಮಾಡಿ ಟೌನ್‌ಶಿಪ್ ಯೋಜನೆ ಮಾಡುವುದಕ್ಕೆ ಕೆಲವು ರೈತರು ವಿರೋಧ ವ್ಯಕ್ತಪಡಿಸಿದ್ದು, ಇದಕ್ಕೆ ಜೆಡಿಎಸ್ ಪಕ್ಷವೂ ಕೂಡ ರೈತರಿಗೆ ಬೆಂಬಲವನ್ನು ನೀಡಿದೆ. ಈನಿಟ್ಟಿನಲ್ಲಿ ಬಿಡದಿ ಟೌನ್‌ಶಿಪ್ ವಿರೋಧಿಸಿ ಜೆಡಿಎಸ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು 2ನೇ ದಿನದ ಪಾದಯಾತ್ರೆಗೆ ಸ್ವತಃ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರೇ ಚಾಲನೆ ನೀಡಲಿದ್ದಾರೆ. ಇದಕ್ಕೆ ಬಿಜೆಪಿ ಕೂಡ ಬೆಂಬಲ ನೀಡಿದೆ. ಇಂದು ಬಿಡದಿಯ ಬಿಜಿಎಸ್ ವೃತ್ತದಿಂದ-ಮೈಸೂರು ರಸ್ತೆಯ ನೈಸ್ ರೋಡ್ ಜಂಕ್ಷನ್‌ವರೆಗೆ 16 ಕಿ.ಮೀ ಪಾದಯಾತ್ರೆ ಸಾಗಲಿದೆ.

Chinese EV Car

10:24 PM (IST) Aug 10

Cars - ₹3.35 ಲಕ್ಷ ಕಡಿಮೆ ಬೆಲೆಗೆ Tata Curvv EV! 585 ಕಿ.ಮೀ. ರೇಂಜ್‌ನ ಎಲೆಕ್ಟ್ರಿಕ್ ಕಾರಿಗೆ ಭರ್ಜರಿ ಆಫರ್

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಕೂಪ್-ಎಸ್‌ಯುವಿ, ಕರ್ವ್ ಇವಿ ಮೇಲೆ ₹3.35 ಲಕ್ಷದವರೆಗೆ ಭಾರಿ ರಿಯಾಯಿತಿ ನೀಡುತ್ತಿದೆ. ಈ ಕಾರು 585 ಕಿ.ಮೀ. ರೇಂಜ್, 5-ಸ್ಟಾರ್ ಸುರಕ್ಷತೆ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತಿದ್ದು, ಆಫರ್‌ನ ನಿಖರ ವಿವರಗಳು ಡೀಲರ್‌ಶಿಪ್‌ಗೆ ಅನುಗುಣವಾಗಿ ಬದಲಾಗಬಹುದು.
Read Full Story

09:57 PM (IST) Aug 10

ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ಕ್ರೂರ ಕೃತ್ಯ.. ಇಬ್ಬರು ಮದ್ದಾದ ಮಕ್ಕಳ ಜೀವ ತೆಗೆದ ಅಪ್ಪ

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಘೋರ ಕೃತ್ಯವೊಂದು ನಡೆದಿದೆ. ಪಾಪಿ ತಂದೆಯೊಬ್ಬ ತನ್ನಿಬ್ಬರು ಹೆಣ್ಮಕ್ಕಳನ್ನು ಬರ್ಬರವಾಗಿ ಜೀವ ತೆಗೆದಿದ್ದಾನೆ. ಆತ ಯಾಕೆ ಹಾಗೆ ಮಾಡಿದ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story

09:47 PM (IST) Aug 10

ಬೆಂಗಳೂರಲ್ಲಿ ಜಿಟಿಜಿಟಿ ಮಳೆ - ಈ ವೆದರ್‌ನಲ್ಲಿ ಮಜಾ ಮಾಡಲು 5 ಸೂಪರ್ ಐಡಿಯಾಗಳು!

ಬೆಂಗಳೂರಲ್ಲಿ ಮಳೆ ಸುರಿಯುತ್ತಿದೆಯಾ? ಈ ಚಂದದ ವಾತಾವರಣದಲ್ಲಿ ಸುಮ್ಮನೆ ಕೂರಬೇಡಿ. ಕೆಫೆಗೆ ಹೋಗುವುದರಿಂದ ಹಿಡಿದು, ಬುಕ್‌ಸ್ಟೋರ್‌ ಅಲೆಯುವವರೆಗೆ, ಈ ಮಳೆಗಾಲವನ್ನು ಎಂಜಾಯ್ ಮಾಡಲು ಇಲ್ಲಿದೆ ಕೆಲವು ಮಸ್ತ್ ಐಡಿಯಾಗಳು.

Read Full Story

09:10 PM (IST) Aug 10

ಪ್ರಯಾಣಿಕರಿಗೆ ಗುಡ್‌ನ್ಯೂಸ್‌! ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಶೀಘ್ರದಲ್ಲೇ - 16 ಗಂಟೆಯಲ್ಲಿ ಪಯಣ

ಬೆಂಗಳೂರು-ಮುಂಬೈ ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಸದ್ಯದಲ್ಲೇ ಆರಂಭವಾಗುವ ಸಾಧ್ಯತೆಯಿದೆ. ನೈಋತ್ಯ ರೈಲ್ವೆ (SWR) ಈಗಾಗಲೇ 16 ಕೋಚ್‌ಗಳ ಎರಡು ರೈಲು ಸೆಟ್‌ಗಳನ್ನು ಪಡೆದುಕೊಂಡಿದೆ.

Read Full Story

08:40 PM (IST) Aug 10

ನಾಂಪಳ್ಳಿಯ ಈ ಸುರಂಗ ನೋಡಿದ್ರೆ ಅಚ್ಚರಿಯಾಗುತ್ತೆ! ಒಳಗೆ ನಿಧಿ ಇದೆಯಂತೆ - ರಹಸ್ಯ ಮಾತ್ರ ಬಯಲಾಗಿಲ್ಲ

ತೆಲಂಗಾಣದ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ನಾಂಪಳ್ಳಿಯಲ್ಲಿ ಪುರಾತನ ಇತಿಹಾಸ ಹಾಗೂ ಧಾರ್ಮಿಕ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಬೃಹತ್‌ ಸುರಂಗವೊಂದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Read Full Story

08:10 PM (IST) Aug 10

ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ - ಚೆಸ್ ನೋಡುತ್ತಿದ್ದ 10ನೇ ತರಗತಿ ವಿದ್ಯಾರ್ಥಿ ಏಕಾಏಕಿ ಕುಸಿದು ಸಾವು

ಶಾಲೆಯಲ್ಲಿ ಸಹಪಾಠಿಗಳು ಚೆಸ್ ಆಡುತ್ತಿದ್ದುದನ್ನು ನೋಡುತ್ತಾ ಕುಳಿತಿದ್ದ 15 ವರ್ಷದ ಬಾಲಕನೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

Read Full Story

08:03 PM (IST) Aug 10

Viral News - ಕೈಯಲ್ಲಿ ಪೊರಕೆ, ಕಣ್ಣಲ್ಲಿ ನೀರು! ಮಹಿಳೆಗೆ ಸಹೋದ್ಯೋಗಿಗಳು ಮಾಡಿದ್ದೇನು? ವಿಡಿಯೋ ವೈರಲ್!

ಕಝಕಿಸ್ತಾನ್‌ನಲ್ಲಿ, ಮಹಿಳಾ ನೈರ್ಮಲ್ಯ ಕಾರ್ಯಕರ್ತೆಯೊಬ್ಬರಿಗೆ ಅವರ ಸಹೋದ್ಯೋಗಿಗಳು ಸಿಹಿ ಅಚ್ಚರಿ ನೀಡಿದ್ದಾರೆ. ಕೋಣೆಯನ್ನು ಸ್ವಚ್ಛಗೊಳಿಸಲು ಕರೆದಿದ್ದಾರೆಂದು ಭಾವಿಸಿ ಬಂದ ಆಕೆಗೆ, ಕೃತಜ್ಞತೆಯ ಸಂಕೇತವಾಗಿ ಚಾಕೊಲೇಟ್‌ ಮತ್ತು ಸಿಹಿತಿಂಡಿಗಳ ದೊಡ್ಡ ಉಡುಗೊರೆಯನ್ನು ನೀಡಿ ಗೌರವಿಸಲಾಗಿದೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Read Full Story

07:41 PM (IST) Aug 10

ದೀಪಾ-ದಿಶಾಗೆ ವಿದಾಯ ಹೇಳಿ ಭಾವುಕರಾದ ದಿಯಾ ಪಾಲಕ್ಕಲ್ - ‘ಬ್ರಹ್ಮಗಂಟು’ ನೆನೆದು ಏನಂದ್ರು?

Brahmagantu Serial: ದೀಪಾ ಹಾಗೂ ದಿಶಾ ಎಂಬ ಎರಡು ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದ ದಿಯಾ, ಇದೀಗ ತಮ್ಮ ಪಾತ್ರಗಳಿಗೆ ಭಾವುಕವಾಗಿ ಗುಡ್‌ಬೈ ಹೇಳಿದ್ದಾರೆ.

Read Full Story

07:16 PM (IST) Aug 10

Cricket - ನೀವೆಲ್ಲ ಚೀಟರ್ಸ್, ನಿಮ್ ತಂದೆ-ತಾಯಿ ಇದನ್ನೇ ಕಲಿಸಿದ್ದಾ?’ - ಭಾರತದ ಸ್ಟಾರ್ ಕ್ರಿಕೆಟಿಗನ ವಿರುದ್ಧ ಸಂಗಕ್ಕಾರ ಗರಂ ಆಗಿದ್ದೇಕೆ?

ಪಂದ್ಯದಲ್ಲಿ ಗೆಲ್ಲುವ ಉತ್ಸಾಹ, ಒತ್ತಡ ಮತ್ತು ಪೈಪೋಟಿ ನಡುವೆ ಕೆಲವೊಮ್ಮೆ ಆಟಗಾರರು ಪರಸ್ಪರ ಮಾತಿನ ಚಕಮಕಿ ನಡೆಸುತ್ತಾರೆ. ಕೆಲವು ಘಟನೆಗಳು ನೇರ ಪ್ರಸಾರದ ಕ್ಯಾಮೆರಾಗಳಲ್ಲಿ ಸೆರೆಯಾದರೆ, ಇನ್ನೂ ಕೆಲವು ಘಟನೆಗಳು ಆಟಗಾರರ ನೆನಪುಗಳಲ್ಲೇ ಉಳಿಯುತ್ತವೆ. ಅಂತಹ ಒಂದು ಹಳೆಯ ಘಟನೆಯನ್ನು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

06:47 PM (IST) Aug 10

ಗ್ಲಾಮರ್ ಅಲ್ಲ, ಖಡಕ್ ಆ್ಯಕ್ಷನ್ - ದುನಿಯಾ ವಿಜಯ್ ಸಿನಿಮಾದಲ್ಲಿ ನಟಿ ಟಬು ಹೊಸ ಅವತಾರ

ನಟಿ ಟಬು ಎಂದಾಕ್ಷಣ ವಿಭಿನ್ನ ಪಾತ್ರಗಳು, ಗಂಭೀರ ಅಭಿನಯ ಮತ್ತು ಪರದೆಯ ಮೇಲಿನ ಅವರ ವಿಶಿಷ್ಟ ಛಾಪು ನೆನಪಾಗುತ್ತದೆ. ಇದೀಗ ಮತ್ತೊಮ್ಮೆ ಅಂಥದ್ದೇ ಒಂದು ಪವರ್‌ಫುಲ್‌ ಪಾತ್ರದ ಮೂಲಕ ಬರಲು ಸಜ್ಜಾಗಿದ್ದಾರೆ.

Read Full Story

06:34 PM (IST) Aug 10

ಗುರುತೇ ಸಿಗದಂತಾದ ಕರ್ನಾಟಕದ ಪಾರಂಪರಿಕ ತಾಣಗಳ 314 ಸಂರಕ್ಷಿತ ಸ್ಮಾರಕಗಳು!

ಕರ್ನಾಟಕ ಡಿಜಿಟಲ್ ಹೆರಿಟೇಜ್ ಯೋಜನೆಯಡಿ ನಡೆಸಿದ 3D ಲೇಸರ್ ಸ್ಕ್ಯಾನಿಂಗ್ ಸರ್ವೇಯಲ್ಲಿ, ರಾಜ್ಯದ 848 ಸಂರಕ್ಷಿತ ಸ್ಮಾರಕಗಳ ಪೈಕಿ 314 ಕಣ್ಮರೆಯಾಗಿರುವುದು ಬಹಿರಂಗವಾಗಿದೆ.

Read Full Story

06:23 PM (IST) Aug 10

ಅಡುಗೆ ಮನೆಯ ಟೈಲ್ಸ್‌ ಮೇಲೆ ಎಣ್ಣೆ ಜಿಡ್ಡು, ಅಂಟು ಪದರ ಕಾಡುತ್ತಿದೆಯಾ? ಈ ಸರಳ ಟಿಪ್ಸ್‌ ಟ್ರೈ ಮಾಡಿ!

Kitchen Tips: ಹೊಸದಾಗಿ ಬಿದ್ದ ಎಣ್ಣೆ ಕಲೆಗಳಿಗೆ ದುಬಾರಿ ಕ್ಲೀನಿಂಗ್‌ ಉತ್ಪನ್ನಗಳ ಅಗತ್ಯವಿಲ್ಲ. ಬೆಚ್ಚಗಿನ ನೀರಿಗೆ ಕೆಲವು ಹನಿ ಡಿಶ್‌ವಾಶ್‌ ಲಿಕ್ವಿಡ್‌ ಹಾಕಿ ಮೈಕ್ರೋಫೈಬರ್‌ ಬಟ್ಟೆಯಿಂದ ಟೈಲ್ಸ್‌ ಒರೆಸಿ.

Read Full Story

04:58 PM (IST) Aug 10

‘ಕಾಲವನ್ನು ತಡೆಯೋರು ಯಾರು ಇಲ್ಲ’.. ಜಗ್ಗೇಶ್‌ರ ಬುಲೆಟ್‌ ಕಥೆ ಹೇಳಿದ ಜೀವನ ಪಾಠವೇನು?

ತಮ್ಮ ಹಳೆಯ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಜೊತೆಗಿನ ಅಪರೂಪದ ಫೋಟೋವನ್ನು ಹಂಚಿಕೊಂಡಿರುವ ಜಗ್ಗೇಶ್‌, ಆ ಬೈಕ್‌ನೊಂದಿಗೆ ಬೆಸೆದುಕೊಂಡಿರುವ ತಮ್ಮ ಬದುಕಿನ ನೆನಪುಗಳನ್ನು ಭಾವನಾತ್ಮಕವಾಗಿ ಬಿಚ್ಚಿಟ್ಟಿದ್ದಾರೆ.

Read Full Story

04:51 PM (IST) Aug 10

ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಏಕೆ ಕರೆಯುತ್ತಾರೆ? ಈ ನಗರ ದೇಶದ ಐಟಿ ಹಬ್ ಆಗಿದ್ದು ಹೇಗೆ?

ಬೆಂಗಳೂರು 'ಭಾರತದ ಸಿಲಿಕಾನ್ ವ್ಯಾಲಿ' ಎಂದು ಪ್ರಸಿದ್ಧವಾಗಿದೆ. ಐಟಿ, ನವೋದ್ಯಮ, ಮತ್ತು ಸಂಶೋಧನೆಯ ಕೇಂದ್ರವಾಗಿರುವ ಈ ನಗರದ ಬೆಳವಣಿಗೆಯು, ಐತಿಹಾಸಿಕ ಶೈಕ್ಷಣಿಕ ಅಡಿಪಾಯ ಮತ್ತು ಜಾಗತಿಕ ಕಂಪನಿಗಳ ಆಗಮನದಿಂದ ಸಾಧ್ಯವಾಗಿದೆ. ಇದು ಇಂದು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ಜಾಗತಿಕ ಮನ್ನಣೆ ಗಳಿಸಿದೆ.
Read Full Story

04:47 PM (IST) Aug 10

ಅಣ್ಣನ ನೋಡಲು ಓಡೋಡಿ ಬಂದ ತಂಗಿ.. ಸ್ಕೂಲ್‌ ಬಸ್ಸಿಗೆ ಸಿಲುಕಿ 3 ವರ್ಷದ ಕಂದಮ್ಮ ಸಾವು

ನಗರದ ಕೈಗಾರಿಕಾ ಪ್ರದೇಶದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಅಣ್ಣನನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಮನೆಯಿಂದ ಹೊರಬಂದ 3 ವರ್ಷದ ಪುಟಾಣಿ ಬಾಲಕಿಯೊಬ್ಬಳು ಶಾಲಾ ಬಸ್‌ನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

Read Full Story

04:45 PM (IST) Aug 10

ನಮ್ಮ ಮೆಟ್ರೋ ‘ಆರೆಂಜ್ ಲೈನ್’ಗೆ ಕೇಂದ್ರದ ಬ್ರೇಕ್ - ಡಬಲ್-ಡೆಕ್ಕರ್ ಸೌಲಭ್ಯ 11 ಕಿ.ಮೀಗೆ ಸೀಮಿತ?

ಪ್ರಧಾನಿ ಮೋದಿಯವರಿಂದ ಶಂಕುಸ್ಥಾಪನೆಗೊಂಡು ವರ್ಷವಾದರೂ, ಬೆಂಗಳೂರು ಮೆಟ್ರೋ 3ನೇ ಹಂತದ ‘ಆರೆಂಜ್ ಲೈನ್’ ಯೋಜನೆ ಕಾಮಗಾರಿ ಆರಂಭವಾಗಿಲ್ಲ. ಪೂರ್ಣ ಪ್ರಮಾಣದ ‘ಡಬಲ್-ಡೆಕ್ಕರ್’ ನಿರ್ಮಾಣದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Read Full Story

04:39 PM (IST) Aug 10

‘ಟಾಕ್ಸಿಕ್’ನಲ್ಲಿ ಮೆಲಿಸ್ಸಾ ಪಾತ್ರಕ್ಕೆ ರುಕ್ಮಿಣಿ ವಸಂತ್ ಪಡೆದ ಸಂಭಾವನೆ ಎಷ್ಟು ಕೋಟಿ?

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾ ಇನ್ನೂ ತೆರೆಕಾಣಬೇಕಿದೆ. ಆದರೆ, ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ರುಕ್ಮಿಣಿ ವಸಂತ್ ಮಾತ್ರ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

Read Full Story

04:24 PM (IST) Aug 10

Independence Day Essay in Kannada - ಸ್ವಾತಂತ್ರ್ಯ ದಿನದ ಬಗ್ಗೆ ಪ್ರಬಂಧ ಬರೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ 10 ಸಾಲುಗಳ, ಚಿಕ್ಕ ಹಾಗೂ ದೀರ್ಘ ಪ್ರಬಂಧಗಳನ್ನು ಇಲ್ಲಿ ನೀಡಲಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹೋರಾಟಗಾರರ ತ್ಯಾಗ, ಸ್ವಾತಂತ್ರ್ಯದ ಮಹತ್ವ ಮತ್ತು ದೇಶದ ಬಗ್ಗೆ ನಮ್ಮ ಜವಾಬ್ದಾರಿಯನ್ನು ಸರಳ ಕನ್ನಡದಲ್ಲಿ ವಿವರಿಸಲಾಗಿದೆ.

Read Full Story

04:17 PM (IST) Aug 10

ಅಮೃತ್ ಭಾರತ್ ಯೋಜನೆ - ಕರ್ನಾಟಕದಲ್ಲಿ ಕೇವಲ 12 ರೈಲು ನಿಲ್ದಾಣಗಳು ಮಾತ್ರ ಪೂರ್ಣ! ವಿಳಂಬಕ್ಕೆ ಕಾರಣ ಬಹಿರಂಗ

ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಗುರುತಿಸಲಾದ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ದೇಶಾದ್ಯಂತ ಕೇವಲ ಶೇ. 19ರಷ್ಟು ಮಾತ್ರ ಪೂರ್ಣಗೊಂಡಿದೆ. ಕರ್ನಾಟಕದಲ್ಲಿ 61 ನಿಲ್ದಾಣಗಳ ಪೈಕಿ 12 ಪೂರ್ಣಗೊಂಡಿದ್ದು, ಬೆಂಗಳೂರಿನ ಪ್ರಮುಖ ನಿಲ್ದಾಣಗಳಲ್ಲಿ ಕಾಮಗಾರಿ ಬಾಕಿ ಇದೆ.

Read Full Story

04:15 PM (IST) Aug 10

ಕರ್ನಾಟಕದಲ್ಲಿ ಕಳವಳ ಮೂಡಿಸಿದ ರೈತರಿಗೆ ಬರೋ ನಿಗೂಢ ಕಿಡ್ನಿ ಕಾಯಿಲೆ, ಸೂಕ್ತ ತನಿಖೆಗೆ ಸರ್ಕಾರ ನಿರ್ದೇಶನ

ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರೈತರು ಮತ್ತು ಕಾರ್ಮಿಕರಲ್ಲಿ 'ಅಜ್ಞಾತ ಮೂಲದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ' (CKDu) ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ.

Read Full Story

04:13 PM (IST) Aug 10

ಲಂಡನ್‌ನಲ್ಲಿ ನಟನಾ ತರಬೇತಿ, ಸಿಟಿ ಲೈಟ್ಸ್‌ನಲ್ಲಿ ವಿಭಿನ್ನ ಪಾತ್ರ - ದುನಿಯಾ ವಿಜಯ್ ಪುತ್ರಿ ಹೇಳಿದ್ದೇನು?

City Lights Kannada Movie: ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್‌ ಅವರಿಗೆ ಜಾನಪ ಹಾಡು, ಕತೆಗಳೆಂದರೆ ಬಲು ಪ್ರೀತಿ. ಇದಕ್ಕೆ ‘ಭೀಮ’, ‘ಸಲಗ’, ‘ಲ್ಯಾಂಡ್‌ ಲಾರ್ಡ್‌’ ಚಿತ್ರಗಳಲ್ಲಿ ಬಂದ ಹಾಡುಗಳೇ ಸಾಕ್ಷಿ.

Read Full Story

03:43 PM (IST) Aug 10

ಕೊಂಕಣ ರೈಲ್ವೆ ನೇಮಕಾತಿ 2026 - 201 ಸ್ಟೇಷನ್ ಮಾಸ್ಟರ್, ಎಎಲ್‌ಪಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನ

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಸ್ಟೇಷನ್ ಮಾಸ್ಟರ್, ಸಹಾಯಕ ಲೋಕೋ ಪೈಲಟ್, ಮತ್ತು ಎಂಜಿನಿಯರಿಂಗ್ ಸೇರಿದಂತೆ 201 ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 10ನೇ ತರಗತಿ, ಐಟಿಐ, ಡಿಪ್ಲೊಮಾ, ಅಥವಾ ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
Read Full Story

02:34 PM (IST) Aug 10

ಬೆಂಗಳೂರಿನ ಫೈವ್‌ ಸ್ಟಾರ್‌ ಹೋಟೆಲ್‌ಗಳ ಮೇಲೆ FSSAI ದಾಳಿ ಮಾಡಿದ್ದೇಕೆ? ಸಚಿವ ಯು.ಟಿ. ಖಾದರ್ ಕೊಟ್ಟರು ಸ್ಪಷ್ಟನೆ!

ಬೆಂಗಳೂರಿನ ಐಷಾರಾಮಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಿಢೀರ್ ದಾಳಿ ನಡೆಸಿದೆ. ಇದು ಬೀದಿ ಬದಿಯಿಂದ ಫೈವ್ ಸ್ಟಾರ್‌ವರೆಗೂ ಸ್ವಚ್ಛತೆ ಕಾಪಾಡುವ ಉದ್ದೇಶದ ಕ್ರಮವಾಗಿದ್ದು, ಅನುಮಾನಾಸ್ಪದ ಮಟನ್ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
Read Full Story

02:15 PM (IST) Aug 10

Independence Day Speech in Kannada - ಸ್ವಾತಂತ್ರ್ಯ ದಿನದಂದು ಶಾಲೆಯಲ್ಲಿ ಭಾಷಣ ಮಾಡಬೇಕೇ? ಇಲ್ಲಿದೆ ಸುಲಭ ಭಾಷಣ

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸರಳ ಹಾಗೂ ಅರ್ಥಪೂರ್ಣ ಕನ್ನಡ ಭಾಷಣ ಇಲ್ಲಿದೆ. ಭಾರತದ ಸ್ವಾತಂತ್ರ್ಯ ಹೋರಾಟ, ಹೋರಾಟಗಾರರ ತ್ಯಾಗ, ಸ್ವಾತಂತ್ರ್ಯದ ಮಹತ್ವ ಮತ್ತು ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಒಳಗೊಂಡಿರುವ ಈ ಭಾಷಣವನ್ನು ಶಾಲಾ ಕಾರ್ಯಕ್ರಮಗಳಲ್ಲಿ ಬಳಸಬಹುದು.

Read Full Story

01:58 PM (IST) Aug 10

ದರ್ಶನ್‌ಗೆ ಭಯ ಹುಟ್ಟಿಸಿದ ಮಾಫಿ ಸಾಕ್ಷಿ, 11 ಪುಟಗಳ ಅರ್ಜಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟ ಭಯಾನಕ ಮಾಹಿತಿ ಇದು!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಮತ್ತು ದರ್ಶನ್ ಆಪ್ತ ಪ್ರದೋಷ್, ಮಾಫಿ ಸಾಕ್ಷಿಯಾಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಜೂನ್ 8 ರಂದು ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಸಂಪೂರ್ಣ ಘಟನಾವಳಿ, ದರ್ಶನ್ ಮತ್ತು ಇತರ ಆರೋಪಿಗಳು ನಡೆಸಿದ ಭೀಕರ ಹಲ್ಲೆಯ ವಿವರಗಳನ್ನು ತನ್ನ ಅರ್ಜಿಯಲ್ಲಿ ಆತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
Read Full Story

01:33 PM (IST) Aug 10

ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್, ಯಾವ ಸಿನಿಮಾ, ಹೀರೋ ಯಾರು? ನೋಡಿ..

ಕನ್ನಡದ ಪ್ರತಿಭೆ ರುಕ್ಮಿಣಿ ವಸಂತ್ ಈಗ ಪರಭಾಷೆಗಳಲ್ಲೂ ತನ್ನ ಬಾವುಟ ಹಾರಿಸುತ್ತಿದ್ದಾರೆ. ಕೇರಳದ ಮಣ್ಣಿನಲ್ಲಿ ಈ ಕನ್ನಡದ ಕೋಗಿಲೆ ಯಾವ ರೀತಿ ಮೋಡಿ ಮಾಡಲಿದೆ ಎಂದು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

Read Full Story

01:18 PM (IST) Aug 10

ಹೆಂಡತಿಗೆ ಮುತ್ತೈದೆ ಸಾವು ಕರುಣಿಸಿ, ತಾನೂ ಸಾವಿನಲ್ಲಿ ಒಂದಾದ ಗಂಡ; ಶೋಕದಲ್ಲಿ ಮುಳುಗಿದ ಗ್ರಾಮ!

ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದಜ್ಜಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಅವರ ಪತಿ ಮಲ್ಲಜ್ಜ ಕೂಡ ಪತ್ನಿಯ ಅಗಲಿಕೆಯ ದುಃಖದಲ್ಲಿ ಕೊನೆಯುಸಿರೆಳೆದಿದ್ದಾರೆ. ಸಾವಿನಲ್ಲೂ ಒಂದಾದ ಈ ವೃದ್ಧ ದಂಪತಿಯ ಹೃದಯವಿದ್ರಾವಕ ಘಟನೆ ಇಡೀ ಗ್ರಾಮದಲ್ಲಿ ಶೋಕವನ್ನುಂಟುಮಾಡಿದೆ.

Read Full Story

01:09 PM (IST) Aug 10

ಶಿವಣ್ಣಗೆ ರಾಕಿ ಭಾಯ್ ಕೊಟ್ಟ ಗೌರವ ಎಂಥದ್ದು? ಈ ಸುದ್ದಿ ಇಷ್ಟೊಂದು ಚರ್ಚೆ ಆಗ್ತಿರೋದು ಏಕೆ?

ಟಾಕ್ಸಿಕ್ ಹಾಗೂ ರಾಮಾಯಣದಂತಹ ಬೃಹತ್ ಸಿನಿಮಾಗಳ ಮೂಲಕ ವಿಶ್ವವೇ ಕರ್ನಾಟಕದ ಕಡೆಗೆ ತಿರುಗಿ ನೋಡುವಂತೆ ಮಾಡುತ್ತಿರುವ ಯಶ್, ನಟ ಶಿವಣ್ಣರ ಜೊತೆ ನಡೆದುಕೊಂಡ ರೀತಿ ಈಗ ಚರ್ಚೆ ಅಗುತ್ತಿದೆ. ಏನದು? ಈ ಸ್ಟೋರಿ ನೋಡಿ..

Read Full Story

12:36 PM (IST) Aug 10

9 ರೂಪಾಯಿಗೆ ಸತಾಯಿಸಿದ ಬ್ಯಾಂಕ್​ಗೇ ಬುದ್ಧಿ ಕಲಿಸಿದ ಹಾಸನದ ರೈತ - ಅಭಿನಂದನೆಗಳ ಸುರಿಮಳೆ

ಹಾಸನ ಜಿಲ್ಲೆ ಸಕಲೇಶಪುರದ ರೈತರೊಬ್ಬರು ತಾವು ಪಡೆದಿದ್ದ ಸಾಲ ಮರುಪಾವತಿಸಿದರೂ, ಬಾಕಿ ಉಳಿದಿದ್ದ 9.34 ರೂ. ಪಾವತಿಸುವಂತೆ ಬ್ಯಾಂಕ್ ಸಿಬ್ಬಂದಿ ಪೀಡಿಸಿದರು. ಇದಕ್ಕೆ ಪ್ರತಿಯಾಗಿ, ರೈತ 10 ರೂ. ನೀಡಿ 66 ಪೈಸೆ ಚಿಲ್ಲರೆ ಕೇಳುವ ಮೂಲಕ ಬ್ಯಾಂಕ್ ಸಿಬ್ಬಂದಿಗೆ ತಕ್ಕ ಪಾಠ ಕಲಿಸಿದ್ದು, ಈ ಘಟನೆ ವೈರಲ್ ಆಗಿದೆ.

Read Full Story

12:16 PM (IST) Aug 10

Hampi Excavation - ಹಂಪಿ ಉತ್ಖನನ ವೇಳೆ ಅಪರೂಪದ ವಿಗ್ರಹಗಳು ಪತ್ತೆ; ಏನಿದರ ವಿಶೇಷತೆ?

ಯುನೆಸ್ಕೋ ವಿಶ್ವಪರಂಪರೆಯ ತಾಣವಾದ ಹಂಪಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ವಿಜಯನಗರ ಕಾಲದ ಅಪರೂಪದ ಶಿಲ್ಪಗಳು ಪತ್ತೆಯಾಗಿವೆ. ಮಾನವ ಮತ್ತು ಹಾವಿನ ಲಕ್ಷಣಗಳಿರುವ ನಾಗಿಣಿ ಶಿಲ್ಪ ಹಾಗೂ ಗರುಡ ಶಿಲ್ಪ ಇದರಲ್ಲಿ ಸೇರಿದೆ.

Read Full Story

12:14 PM (IST) Aug 10

ಬಿಡದಿ ಟೌನ್‌ಶಿಪ್ ಯೋಜನೆ - ಡಿಕೆ ಬಗ್ಗೆ ಹೆಚ್‌ಡಿ ಕುಮಾರಸ್ವಾಮಿ ಗಂಭೀರ ಆರೋಪ! ಏನಿದು ಮಂತ್ಲಿ ಅಗ್ರಿಮೆಂಟ್?

ಬಿಡದಿ ಟೌನ್‌ಶಿಪ್ ಯೋಜನೆಯು ದೆಹಲಿ ನಾಯಕರಿಗೆ ಮಾಸಿಕ ಹಣ ಪಾವತಿಸುವ ಡಿಕೆ ಶಿವಕುಮಾರ್ ಅವರ ಒಪ್ಪಂದದ ಭಾಗವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಬ್ರಹ್ಮಾಂಡ ಭ್ರಷ್ಟಾಚಾರದ ಯೋಜನೆಯು ಕಾಂಗ್ರೆಸ್ ಸರ್ಕಾರಕ್ಕೆ ಮರಣಶಾಸನವಾಗಲಿದೆ, ರೈತರು ಮೋಸ ಹೋಗಬಾರದು ಎಂದು ಎಚ್ಚರಿಸಿದರು.

Read Full Story

12:08 PM (IST) Aug 10

ಒಂದೂ ಡ್ಯಾಮ್​ ಕಟ್ಟದೆ, ಬೆಂಗಳೂರಿನ 14 ಕೆರೆಗೆ ಜೀವ ತಂದ ಯೋಧನ ರೋಚಕ ಸ್ಟೋರಿ; ಆ ನಕ್ಷೆಯೇ ಶ್ರೀರಕ್ಷೆ

ನಿವೃತ್ತ ಸೇನಾ ಕ್ಯಾಪ್ಟನ್ ಸಂತೋಷ್ ಕುಮಾರ್, ಬ್ರಿಟಿಷ್ ಕಾಲದ ನಕ್ಷೆಗಳ ಸಹಾಯದಿಂದ ಬೆಂಗಳೂರಿನ ಆನೇಕಲ್ ಬಳಿ ಅತಿಕ್ರಮಣಗೊಂಡಿದ್ದ ರಾಜಕಾಲುವೆಗಳನ್ನು ಪತ್ತೆಹಚ್ಚಿದರು. ಸ್ಥಳೀಯರ ಸಹಕಾರದೊಂದಿಗೆ ಸುಮಾರು 4 ಕಿ.ಮೀ. ರಾಜಕಾಲುವೆಯನ್ನು ಪುನಶ್ಚೇತನಗೊಳಿಸಿ, ಬತ್ತಿಹೋಗಿದ್ದ 14 ಕೆರೆಗಳಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾದರು.
Read Full Story

12:02 PM (IST) Aug 10

​"ಅಯ್ಯೋ... ನನ್ನ 5 ಲಕ್ಷ ಎಲ್ಲಿ ಹೋಯ್ತು?!" – ಮನೆಮಂದಿಗೆ ತಿಳಿಸದೆ ಹೊಲದಲ್ಲಿ ಹಣ ಬಚ್ಚಿಟ್ಟು ಕಣ್ಣೀರಿಟ್ಟ ರೈತ!

ರಾಜಸ್ಥಾನದ ಬಲೋತ್ರಾ ಜಿಲ್ಲೆಯ ರೈತ ಮಂಗಿಲಾಲ್ ಮೇಘವಾಲ್ ಜಮೀನು ಮಾರಾಟದಿಂದ ಬಂದ ₹5 ಲಕ್ಷವನ್ನು ಮನೆಯಲ್ಲಿ ಇಡುವ ಬದಲು ಹೊಲದಲ್ಲಿ ಪಾಲಿಥಿನ್ ಚೀಲದಲ್ಲಿ ಹೂತಿಟ್ಟಿದ್ದರು. ಬಳಿಕ ಹಣ ಹೂತ ಜಾಗವನ್ನೇ ಮರೆತರು. ಸುಮಾರು ಒಂದು ವರ್ಷದ ಬಳಿಕ ಹಣ ಪತ್ತೆಯಾದಾಗ ಗೆದ್ದಲುಗಳು ನೋಟುಗಳ ಬಹುತೇಕ ಭಾಗವನ್ನು ನಾಶಪಡಿಸಿದ್ದವು.

Read Full Story

11:51 AM (IST) Aug 10

ಬರಗಾಲದಿಂದ ಬೆಳೆಯಿಲ್ಲದೆ ರೈತರಿಗೆ ಸಂಕಟ; ಊಟಕ್ಕೊಂದಿಷ್ಟು ಜೋಳ ಬೆಳೆದರೆ ಕಾಡುಹಂದಿಗಳ ಕಾಟ!

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ, ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ರೈತನ ಜೋಳದ ಬೆಳೆಯನ್ನು ಕಾಡುಹಂದಿಗಳ ಹಿಂಡು ರಾತ್ರೋರಾತ್ರಿ ನಾಶಪಡಿಸಿದೆ. ಈ ಘಟನೆಯಿಂದಾಗಿ ರೈತ ವೀರೇಶ್‌ಗೆ ಅಪಾರ ನಷ್ಟವಾಗಿದ್ದು, ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರಕ್ಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Read Full Story

11:34 AM (IST) Aug 10

ವಿಜಯಪುರ - ನಿವೃತ್ತ ಶಿಕ್ಷಕರಿಗೆ ಪುಸ್ತಕಗಳಿಂದ ತುಲಾಭಾರ ಮಾಡಿದ ವಿದ್ಯಾರ್ಥಿಗಳು

ವಿಜಯಪುರ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ವೈ.ಬಿ. ವಾಲಿಕಾರ ಅವರಿಗೆ ಪುಸ್ತಕಗಳಿಂದ ತುಲಾಭಾರ ಮಾಡುವ ಮೂಲಕ ವಿಶಿಷ್ಟವಾಗಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಾಲಿಕಾರ ಅವರ ಗುರುಗಳಾದ ಡಿ.ಬಿ. ಡೇಂಬ್ರೆ ಅವರು ಭಾಗವಹಿಸಿ, ಶಿಷ್ಯನ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಗುರು-ಶಿಷ್ಯರ ಪರಂಪರೆಯ ಮಹತ್ವವನ್ನು ಸಾರುವ ಈ ಸಮಾರಂಭದಲ್ಲಿ ಹಲವು ಗಣ್ಯರು ಗುರುವನ್ನು ಒಂದು ಶಕ್ತಿಯೆಂದು ಬಣ್ಣಿಸಿದರು.
Read Full Story

11:10 AM (IST) Aug 10

ಕರ್ನಾಟಕ ಹೈಕೋರ್ಟ್‌ಗೆ 6 ಹೊಸ ನ್ಯಾಯಮೂರ್ತಿಗಳ ಪ್ರಮಾಣ ವಚನ - ನ್ಯಾಯಾಧೀಶರ ಸಂಖ್ಯೆ 54ಕ್ಕೆ ಏರಿಕೆ

ಕರ್ನಾಟಕ ಹೈಕೋರ್ಟ್‌ಗೆ ಹೊಸದಾಗಿ ನೇಮಕಗೊಂಡ ಆರು ಹೆಚ್ಚುವರಿ ನ್ಯಾಯಮೂರ್ತಿಗಳು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಈ ನೇಮಕದಿಂದ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
Read Full Story

10:01 AM (IST) Aug 10

ರಾಹುಲ್ ಗಾಂಧಿ ಬಗ್ಗೆ ಶಶಿ ತರೂರ್ ಹೇಳಿಕೆ; ಕಾಂಗ್ರೆಸ್‌ನಲ್ಲಿ ಅಸಮಾಧಾನ! ಬಿಜೆಪಿಗೆ ಖುಷಿ ನೀಡುವ ಮಾತು ಬೇಡ ಎಂದ ವೇಣುಗೋಪಾಲ್

ರಾಹುಲ್ ಗಾಂಧಿ ಅವರ ಕಾರ್ಯಕ್ರಮದ ಕುರಿತು ಸಂಸದ ಶಶಿ ತರೂರ್‌ ನೀಡಿದ ಹೇಳಿಕೆಯು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಜೆಪಿಗೆ ಸಂತೋಷ ತರುವಂತಹ ಯಾವುದೇ ಹೇಳಿಕೆ ನೀಡಬಾರದು ಎಂದು ಪಕ್ಷದ ನಾಯಕರಿಗೆ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

Read Full Story

09:14 AM (IST) Aug 10

ಕರ್ನಾಟಕವನ್ನು ಕಾಡುತ್ತಿರುವ 'ಚಡ್ಡಿ ಗ್ಯಾಂಗ್' ಬೆಂಗಳೂರಿಗೆ ಎಂಟ್ರಿ; ಜನರ ಜೀವಕ್ಕೆ ಬೆಲೆ ಕೊಡದ ದರೋಡೆಕೊರರು!

ಕರ್ನಾಟಕದಲ್ಲಿ ಸರಣಿ ದರೋಡೆ ನಡೆಸುತ್ತಿದ್ದ ಕುಖ್ಯಾತ 'ಚಡ್ಡಿ ಗ್ಯಾಂಗ್' ಇದೀಗ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಪ್ರತ್ಯಕ್ಷವಾಗಿದೆ. ಲೇಔಟ್ ಒಂದರಲ್ಲಿ ದರೋಡೆಗೆ ಯತ್ನಿಸಿದಾಗ, ಮಹಿಳೆಯೊಬ್ಬರ ಜಾಗರೂಕತೆಯಿಂದ ಪ್ರಯತ್ನ ವಿಫಲವಾಗಿದೆ. ಈ ಹಿಂಸಾತ್ಮಕ ಗ್ಯಾಂಗ್‌ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿ, ಜನರಿಗೆ ಜಾಗರೂಕರಾಗಿರಲು ಸೂಚಿಸಿದ್ದಾರೆ.

Read Full Story

09:14 AM (IST) Aug 10

AISA Protest - ಜಾರ್ಖಂಡ್‌ನಲ್ಲಿ ಹೋರಾಟಗಾರ್ತಿ ನೇಹಾ ಬೋರಾ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ; ಆರೆಸ್ಸೆಸ್ ವಿರುದ್ಧ ಆಕ್ರೋಶ!

ಜಾರ್ಖಂಡ್‌ನ ರಾಂಚಿಯಲ್ಲಿ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹರಪನಹಳ್ಳಿಯಲ್ಲಿ ಎಐಎಸ್ಎ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ಕೃತ್ಯದ ಹಿಂದೆ ಆರೆಸ್ಸೆಸ್ ಸಂಘ ಪರಿವಾರದ ಕೈವಾಡವಿದೆ. ದಾಳಿಕೋರರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.

Read Full Story

09:11 AM (IST) Aug 10

ವಿಶ್ವದರ್ಜೆಯ ಎಐ ಸಿಟಿಯಾಗಿ ಬಿಡದಿ ಅಭಿವೃದ್ಧಿ - ಮುಖ್ಯಮಂತ್ರಿ ಡಿಕೆಶಿ, ರೈತರಿಗೆ ಬಂಪರ್ ಆಫರ್!

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ವಿಶ್ವದರ್ಜೆಯ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲಾಗುವುದು ಮತ್ತು ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

More Trending News