LIVE NOW
Published : Aug 11, 2026, 07:24 AM ISTUpdated : Aug 11, 2026, 09:10 AM IST

Karnataka News Live: ಬೆಂಗಳೂರು ಟ್ರಾಫಿಕ್ ಮುಕ್ತಿಗೆ ಪಂಚಸೂತ್ರ; ಈ 5 ಫ್ಲೈಓವರ್‌ಗಳ ಮೇಲೆ ಬೈಕ್, ಗೂಡ್ಸ್ ವಾಹನ ಸಂಚಾರ ನಿಷೇಧ!

ಸಾರಾಂಶ

ಕರ್ನಾಟಕ ರಾಜ್ಯ ಸಚಿವ ಸಂಪುಟದ ಕುರಿತಾಗಿ ಆಕ್ರೋಶ ಭುಗಿಲೆದ್ದ ಬೆನ್ನಲ್ಲಿಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಕೆಲವೊಂದು ಬದಲಾವಣೆಗೆ ಕೇಂದ್ರ, ರಾಜ್ಯ ನಾಯಕರ ಒಲವು ತೋರಿಸಲಾಗಿದೆ. ಎಐಸಿಸಿ ಅಧ್ಯಕ್ಷ ಖರ್ಗೆ, ವೇಣುಗೋಪಾಲ್‌, ರಾಜ್ಯ ಉಸ್ತುವಾರಿ ಸುರ್ಜೇವಾಲ ಜೊತೆ ಸಿಎಂ ಚರ್ಚೆ ಮಾಡಿದ್ದು, ಬಂಡಾಯ, ಬದಲಾವಣೆ, ಖಾತೆ ಹಂಚಿಕೆ, ಬಾಕಿ ಸ್ಥಾನ ತುಂಬುವ ಬಗ್ಗೆ ಮಾಹಿತಿ ಪಡೆದು ಅಂತಿಮ ನಿರ್ಧಾರವನ್ನು ದಿಲ್ಲಿ ನಾಯಕರು ಬಾಕಿ ಉಳಿಸಿಕೊಂಡಿದ್ದಾರೆ.

ಬಿಡದಿ ಟೌನ್ ಶಿಪ್ ವಿರೋಧಿಸಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ರಾಜ್ಯ ಸರ್ಕಾರ ಬೆಂಗಳೂರು ಪ್ರವೇಶ ಮಾಡದಂತೆ ತಡೆದಿದೆ. ಈಹಿನ್ನೆಲೆಯಲ್ಲಿ 2ನೇ ದಿನಕ್ಕೆ ಪಾದಯಾತ್ರೆ ಮೊಟಕುಗೊಳಿಸಿ ಆ.18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

09:10 AM (IST) Aug 11

ಬೆಂಗಳೂರು ಟ್ರಾಫಿಕ್ ಮುಕ್ತಿಗೆ ಪಂಚಸೂತ್ರ; ಈ 5 ಫ್ಲೈಓವರ್‌ಗಳ ಮೇಲೆ ಬೈಕ್, ಗೂಡ್ಸ್ ವಾಹನ ಸಂಚಾರ ನಿಷೇಧ!

ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ಅಪಘಾತಗಳನ್ನು ನಿಯಂತ್ರಿಸಲು, ಸಂಚಾರ ಪೊಲೀಸರು 5 ಪ್ರಮುಖ ಫ್ಲೈಓವರ್‌ಗಳಲ್ಲಿ 'ಪಂಚಸೂತ್ರ' ಎಂಬ ಹೊಸ ಯೋಜನೆ ಜಾರಿಗೆ ತರುತ್ತಿದ್ದಾರೆ. ಈ ಯೋಜನೆಯಡಿ, ಎಲೆಕ್ಟ್ರಾನಿಕ್ ಸಿಟಿ ಮತ್ತು ಏರ್‌ಪೋರ್ಟ್ ಫ್ಲೈಓವರ್‌ಗಳಲ್ಲಿ ದ್ವಿಚಕ್ರ ವಾಹನಗಳನ್ನು ನಿಷೇಧಿಸಲಾಗುವುದು. ಅಲ್ಲದೆ, ಭಾರಿ ವಾಹನಗಳು, ಆಟೋಗಳು ಮತ್ತು ನಿಧಾನಗತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.

Read Full Story

09:10 AM (IST) Aug 11

ಕಾಮನ್‌ವೆಲ್ತ್ ಗೇಮ್ಸ್ ಪದಕ ಸಾಧಕರ ಜೊತೆಗೆ ಪ್ರಧಾನಿ ಸಂವಾದ - ಅಥ್ಲೀಟ್‌ಗಳ ದೇಶಭಕ್ತಿಗೆ ಸಲಾಂ!

ಗ್ಲಾಸ್ಗೋ ಕಾಮನ್‌ವೆಲ್ತ್‌ ಕ್ರೀಡಾಕೂಟದ ಪದಕ ವಿಜೇತರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಸಂವಾದ ನಡೆಸಿದರು. ಈ ವೇಳೆ, ಬಾಕ್ಸರ್‌ಗಳಾದ ಲವ್ಲೀನಾ, ನರೇಂದರ್‌ ಬರ್ವಾಲ್ ಹಂಚಿಕೊಂಡ ಸ್ವಾರಸ್ಯಕರ ಸಂಗತಿಗಳು ಹಾಗೂ ಮೀರಾಬಾಯಿ ಚಾನು ಅವರ ಸವಾಲಿನ ಪಯಣದಂತಹ ಹಲವು ವಿಷಯಗಳನ್ನು ಕ್ರೀಡಾಪಟುಗಳು ಹಂಚಿಕೊಂಡರು.
Read Full Story

08:03 AM (IST) Aug 11

14 ಲಕ್ಷ ಸಂಬಳವಿದ್ದರೂ ಇನ್ಫೋಸಿಸ್ ನೀಡಿದ್ದು ಎಷ್ಟು ಗೊತ್ತಾ? ಟೆಕ್ಕಿ ಕೊಟ್ಟ ರಿಲ್ಯಾಕ್ಸ್ಡ್ 'ರಿವೇಂಜ್' ಈಗ ವೈರಲ್!

₹8.7 ಲಕ್ಷ ವಾರ್ಷಿಕ ಸಂಬಳ ಪಡೆಯುತ್ತಿದ್ದ ಟೆಕ್ಕಿಗೆ ₹14 ಲಕ್ಷದ ಮತ್ತೊಂದು ಆಫರ್ ಇದ್ದರೂ, ಎರಡು ಸಂದರ್ಶನ ಸುತ್ತುಗಳ ಬಳಿಕ ಇನ್ಫೋಸಿಸ್ ಕೇವಲ ₹7.5 ಲಕ್ಷದ ಆಫರ್ ನೀಡಿದೆ ಎನ್ನಲಾಗಿದೆ. ಆರಂಭದಲ್ಲಿ ಒಪ್ಪಿಕೊಂಡರೂ, ಬಳಿಕ ಕಡಿಮೆ ಸಂಬಳ ಕಾರಣ ನೀಡಿ ಟೆಕ್ಕಿ ಆಫರ್ ತಿರಸ್ಕರಿಸಿದ್ದಾರೆ. ಘಟನೆ ಆನ್‌ಲೈನ್‌ನಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

Read Full Story

07:25 AM (IST) Aug 11

ಬಿಡದಿ ಟೌನ್‌ಶಿಪ್ ಪಾದಯಾತ್ರೆ 2ನೇ ದಿನಕ್ಕೆ ಮೊಟಕು; ಅಡ್ಡಗಟ್ಟಿದ ಪೊಲೀಸರು, ಆ.18ಕ್ಕೆ ಮತ್ತೆ ಹೋರಾಟ-ನಿಖಿಲ್ ಕುಮಾರಸ್ವಾಮಿ

ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಯು ಬೆಂಗಳೂರು ನಗರದತ್ತ ತೆರಳದಂತೆ ಪೊಲೀಸರು ಸೋಮವಾರ ತಡೆಯೊಡ್ಡಿದ್ದರಿಂದ ತಳ್ಳಾಟ-ನೂಕಾಟದಂತಹ ಹೈಡ್ರಾಮಾ ನಡೆದು ಯಾತ್ರೆ ಎರಡನೇ ದಿನವೇ ಮೊಟಕುಗೊಂಡಿತು. ಆದರೆ, ಯೋಜನೆ ವಿರುದ್ಧ ಚಳವಳಿ ಮುಂದುವರಿಸುವುದಾಗಿ ಹೇಳಿರುವ ನಿಖಿಲ್‌, ಆಗಸ್ಟ್ 18ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.

Read Full Story

More Trending News