Published : Aug 11, 2026, 07:24 AM ISTUpdated : Aug 11, 2026, 11:23 PM IST

Karnataka News Live: ಟ್ಯಾಂಕರ್-ಆಟೋ ಮಧ್ಯೆ ಭೀಕರ ಅಪಘಾತ.. ಬೀದರ್‍‌ ಮೂಲದ ಆರು ಮಂದಿ ದಾರುಣ ಸಾವು

ಸಾರಾಂಶ

ಕರ್ನಾಟಕ ರಾಜ್ಯ ಸಚಿವ ಸಂಪುಟದ ಕುರಿತಾಗಿ ಆಕ್ರೋಶ ಭುಗಿಲೆದ್ದ ಬೆನ್ನಲ್ಲಿಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಕೆಲವೊಂದು ಬದಲಾವಣೆಗೆ ಕೇಂದ್ರ, ರಾಜ್ಯ ನಾಯಕರ ಒಲವು ತೋರಿಸಲಾಗಿದೆ. ಎಐಸಿಸಿ ಅಧ್ಯಕ್ಷ ಖರ್ಗೆ, ವೇಣುಗೋಪಾಲ್‌, ರಾಜ್ಯ ಉಸ್ತುವಾರಿ ಸುರ್ಜೇವಾಲ ಜೊತೆ ಸಿಎಂ ಚರ್ಚೆ ಮಾಡಿದ್ದು, ಬಂಡಾಯ, ಬದಲಾವಣೆ, ಖಾತೆ ಹಂಚಿಕೆ, ಬಾಕಿ ಸ್ಥಾನ ತುಂಬುವ ಬಗ್ಗೆ ಮಾಹಿತಿ ಪಡೆದು ಅಂತಿಮ ನಿರ್ಧಾರವನ್ನು ದಿಲ್ಲಿ ನಾಯಕರು ಬಾಕಿ ಉಳಿಸಿಕೊಂಡಿದ್ದಾರೆ.

ಬಿಡದಿ ಟೌನ್ ಶಿಪ್ ವಿರೋಧಿಸಿ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ರಾಜ್ಯ ಸರ್ಕಾರ ಬೆಂಗಳೂರು ಪ್ರವೇಶ ಮಾಡದಂತೆ ತಡೆದಿದೆ. ಈಹಿನ್ನೆಲೆಯಲ್ಲಿ 2ನೇ ದಿನಕ್ಕೆ ಪಾದಯಾತ್ರೆ ಮೊಟಕುಗೊಳಿಸಿ ಆ.18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

11:23 PM (IST) Aug 11

ಟ್ಯಾಂಕರ್-ಆಟೋ ಮಧ್ಯೆ ಭೀಕರ ಅಪಘಾತ.. ಬೀದರ್‍‌ ಮೂಲದ ಆರು ಮಂದಿ ದಾರುಣ ಸಾವು

ತೆಲಂಗಾಣದ ಸಂಗಾರೆಡ್ಡಿಯಲ್ಲಿ ಟ್ಯಾಂಕರ್ ಡಿಕ್ಕಿಯಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬೀದರ್‌ನ 6 ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಒಂದೇ ಆಟೋದಲ್ಲಿ 14 ಜನ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಈ ದುರಂತಕ್ಕೆ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

Read Full Story

11:04 PM (IST) Aug 11

ಪೋಸ್ಟ್ ಆಫೀಸ್‌ನ ಈ ಪ್ಲಾನ್‌ನಲ್ಲಿದೆ ಬಂಪರ್ ಲಾಭ! ತಿಂಗಳಿಗೆ ಸಣ್ಣ ಉಳಿತಾಯ ಮಾಡಿ, ₹10 ಲಕ್ಷದೊಂದಿಗೆ 7 ತೊಲ ಚಿನ್ನ ನಿಮ್ಮದಾಗಿಸಿ!

ಅಂಚೆ ಕಚೇರಿಯ ಮರುಕಳಿಸುವ ಠೇವಣಿ (RD) ಯೋಜನೆಯು ಸಣ್ಣ ಮಾಸಿಕ ಹೂಡಿಕೆಯ ಮೂಲಕ ದೊಡ್ಡ ಮೊತ್ತವನ್ನು ಗಳಿಸಲು ಉತ್ತಮ ಅವಕಾಶ ನೀಡುತ್ತದೆ. ದಿನಕ್ಕೆ ₹100 ಉಳಿಸುವ ಮೂಲಕ 5 ವರ್ಷಗಳಲ್ಲಿ ₹2 ಲಕ್ಷಕ್ಕೂ ಹೆಚ್ಚು ಗಳಿಸಬಹುದು, ಮತ್ತು ದಿನಕ್ಕೆ ₹500 ಉಳಿಸಿದರೆ ₹10 ಲಕ್ಷಕ್ಕೂ ಅಧಿಕ ನಿಧಿ ಸಂಗ್ರಹಿಸಬಹುದು.

Read Full Story

10:58 PM (IST) Aug 11

ಒಂದೇ ಜಾಗ.. ಒಂದೇ ವಾರದಲ್ಲಿ ಕೃಷ್ಣ ನದಿಗೆ ಬಿದ್ದ ಮೂರು ಕಾರುಗಳು.. ಬಾಗಲಕೋಟೆಯ ಈ ಜಾಗದಲ್ಲಿ ಏನೋ ಸಮಸ್ಯೆ..

ಬಾಗಲಕೋಟೆಯ ಗಲಗಲಿ-ರಬಕವಿ ರಸ್ತೆಯಲ್ಲಿ ನಿರ್ಲಕ್ಷ್ಯದ ಕಾಮಗಾರಿಯಿಂದಾಗಿ ಒಂದೇ ವಾರದಲ್ಲಿ ಮೂರು ಕಾರುಗಳು ಕೃಷ್ಣಾ ನದಿಗೆ ಬಿದ್ದಿವೆ. ಅಧಿಕಾರಿಗಳ ವಿರುದ್ಧ ದೂರು ನೀಡಲು ಹೋದರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ

Read Full Story

10:37 PM (IST) Aug 11

ಯಶ್ ‘ಟಾಕ್ಸಿಕ್’ ಸಿನಿಮಾ ರಿಜೆಕ್ಟ್ ಮಾಡಿದ ಆ ಸ್ಟಾರ್ ಹೀರೋ ಯಾರು? ಗೋಲ್ಡನ್ ಚಾನ್ಸ್ ಮಿಸ್ ಮಾಡ್ಕೊಂಡ್ರಾ..?

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾವನ್ನು ಮೊದಲು ಕಾಲಿವುಡ್ ನಟ ಸೂರ್ಯ ಅವರು ರಿಜೆಕ್ಟ್ ಮಾಡಿದ್ದರು ಎಂಬ ಸುದ್ದಿ ವೈರಲ್ ಆಗಿದೆ. ಸೂರ್ಯ ಅವರು ಚಿತ್ರವನ್ನು ನಿರಾಕರಿಸಲು ಬಲವಾದ ಕಾರಣ ಕೂಡ ಇದೆ.

Read Full Story

10:32 PM (IST) Aug 11

ಬಿಗ್‌ಬಾಸ್‌ ಎಂಟ್ರಿಗಾಗಿ ನೆಲದ ಮೇಲೆ ಬಿದ್ದು ಹೊರಳಾಡಿದ ಗಂಗಾ, ನಿಮಗೆ ಅರ್ಹತೆಯೇ ಇಲ್ಲ ಎಂದ ಸಂಗೀತಾ ಶೃಂಗೇರಿ!

ಕನ್ನಡ ಬಿಗ್‌ಬಾಸ್‌ ಪ್ರವೇಶಕ್ಕಾಗಿ ನಡೆಯುತ್ತಿರುವ 'ಅಗ್ನಿಪರೀಕ್ಷೆ' ಶೋನಲ್ಲಿ ನಾಟಕೀಯ ಘಟನೆಗಳು ನಡೆದಿವೆ. ಸೋಶಿಯಲ್ ಮೀಡಿಯಾ ಸ್ಟಾರ್ ಗಂಗಾ ಅವರ ವರ್ತನೆಯನ್ನು 'ಕ್ರಿಂಜ್' ಎಂದು ಕರೆದು ಸಂಗೀತಾ ಶೃಂಗೇರಿ ತಿರಸ್ಕರಿಸಿದರೆ, ಇನ್ನೊಬ್ಬ ಸ್ಪರ್ಧಿ ವಿನಯ್ ಗೌಡರ ಅರ್ಹತೆಯನ್ನೇ ಪ್ರಶ್ನಿಸಿದ್ದಾರೆ.
Read Full Story

10:03 PM (IST) Aug 11

ಜೂನಿಯರ್ NTRಗೆ ಮೇಜರ್ ಸರ್ಜರಿ.. ಸ್ಟಾರ್ ನಟನ ಆರೋಗ್ಯದಲ್ಲಿ ಹಠಾತ್ ಏನಾಯ್ತು..?

ಸಿನಿಮಾ ಶೂಟಿಂಗ್ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಜೂನಿಯರ್ ಎನ್‌ಟಿಆರ್, ವೈದ್ಯರ ಸಲಹೆಯಂತೆ ಹೈದರಾಬಾದ್‌ನಲ್ಲಿ ಮೇಜರ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ನಟ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Read Full Story

09:55 PM (IST) Aug 11

ಆಪ್ತ ಸ್ನೇಹಿತರ ಜೊತೆ ವಿಶೇಷವಾಗಿ ʻಬ್ರೈಡ್‌ ಟು ಬಿʼ ಪಾರ್ಟಿ ಆಚರಿಸಿಕೊಂಡ ಚಿಕ್ಕಣ್ಣ ಭಾವಿ ಪತ್ನಿ ಪಾವನಾ!

ಹಾಸ್ಯ ನಟ ಚಿಕ್ಕಣ್ಣ ಅವರು ಆಗಸ್ಟ್ 29 ಮತ್ತು 30 ರಂದು ಮೈಸೂರಿನಲ್ಲಿ ಪಾವನಾ ಗೌಡ ಅವರನ್ನು ವಿವಾಹವಾಗಲಿದ್ದಾರೆ. ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಭಾವಿ ಪತ್ನಿ ಪಾವನಾ ಗೌಡ ಅವರ 'ಬ್ರೈಡ್ ಟು ಬಿ' ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Read Full Story

09:40 PM (IST) Aug 11

Viral - ಇದು ಸಾಮನ್ಯ ಅಲ್ಲ! ಭಯಾನಕ ಅಘೋರಿಯನ್ನೇ ಮಂಡಿಯೂರಿ ಕೂರುವಂತೆ ಮಾಡಿದ ಮಗು; ದಂಗಾದ ಜನ! ಅಷ್ಟಕ್ಕೂ ಆಗಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊವೊಂದರಲ್ಲಿ, ಅಘೋರಿ ಸಾಧುವೊಬ್ಬರು ಪುಟ್ಟ ಹುಡುಗಿಯ ಮುಂದೆ ತಲೆಬಾಗಿ ನಮಸ್ಕರಿಸಿದ್ದಾರೆ. ವಯಸ್ಸು ಅಥವಾ ಸ್ಥಾನಮಾನಕ್ಕಿಂತ ಮುಗ್ಧತೆ ಮತ್ತು ಪರಿಶುದ್ಧತೆ ಶ್ರೇಷ್ಠ ಎಂಬುದನ್ನು ಈ ಹೃದಯಸ್ಪರ್ಶಿ ಘಟನೆ ಸಾರುತ್ತದೆ. ಈ ಮೌನ ದೃಶ್ಯವು ಮಾನವೀಯತೆಯ ಪಾಠವನ್ನು ಹೇಳುತ್ತಾ ನೆಟ್ಟಿಗರ ಮನಗೆದ್ದಿದೆ.
Read Full Story

08:20 PM (IST) Aug 11

App ki adalat - ಮೋದಿ, ಶಾರುಖ್‌, ವಾಜಪೇಯಿ ಕೂತ ಹಾಟ್‌ಸೀಟ್‌ನಲ್ಲಿ ಯಶ್; ಈ ಶೋನಲ್ಲಿ ಕಾಣಿಸಿಕೊಂಡ ಮೊದಲ ಕನ್ನಡಿಗ!

ಕೆಜಿಎಫ್ ಖ್ಯಾತಿಯ ನಟ ಯಶ್, 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ, ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ವೇದಿಕೆಯಲ್ಲಿ ಕಾಣಿಸಿಕೊಂಡ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಸ್ಯಾಂಡಲ್‌ವುಡ್‌ಗೆ ಹೆಮ್ಮೆ ತಂದಿದ್ದಾರೆ.
Read Full Story

07:54 PM (IST) Aug 11

BGC Hospitals Kannada YouTube ಚಾನೆಲ್‌ಗೆ 1 ಲಕ್ಷ ಸಬ್‌ಸ್ಕ್ರೈಬರ್ಸ್‌; ಜೀರ್ಣಾಂಗ ಆರೋಗ್ಯ ಶಿಕ್ಷಣದಲ್ಲಿ ಐತಿಹಾಸಿಕ ಸಾಧನೆ

ಬೆಂಗಳೂರು ಗ್ಯಾಸ್ಟ್ರೋ ಸೆಂಟರ್ (BGC Hospitals) ನ ಕನ್ನಡ ಯೂಟ್ಯೂಬ್ ಚಾನೆಲ್ 1 ಲಕ್ಷಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ತಲುಪಿದೆ. ಈ ಚಾನೆಲ್ ಹೊಟ್ಟೆ, ಯಕೃತ್ತು, ಮತ್ತು ಇತರ ಜೀರ್ಣಾಂಗ ಸಮಸ್ಯೆಗಳ ಬಗ್ಗೆ ವೈಜ್ಞಾನಿಕ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ.

Read Full Story

07:01 PM (IST) Aug 11

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಅವಳಿಗಳ ದರ್ಬಾರ್.. ದಕ್ಷಿಣ ಆಫ್ರಿಕಾದಲ್ಲಿ ಸಹೋದರರ ಸವಾಲ್..!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಳಿ ಸೋದರರ ಹವಾ ಮತ್ತೊಮ್ಮೆ ಶುರುವಾಗಿದೆ. ಆಸ್ಟ್ರೇಲಿಯಾದ ಸ್ಟೀವ್ ವಾ - ಮಾರ್ಕ್ ವಾ, ನ್ಯೂಜಿಲೆಂಡ್‌ನ ಹ್ಯಾಮಿಶ್ ಮಾರ್ಷಲ್ - ಜೇಮ್ಸ್ ಮಾರ್ಷಲ್ ನಂತರ ಈಗ ದಕ್ಷಿಣ ಆಫ್ರಿಕಾದ ಜಾನ್ಸೆನ್ ಸೋದರರು ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ.

Read Full Story

06:45 PM (IST) Aug 11

'ಅನ್ನ ವಿಷ ಮಾಡಿದರೆ ಅವರ ವಂಶವೇ ಸರ್ವನಾಶ..' ಹೋಟೆಲ್ ಮಾಫಿಯಾ ವಿರುದ್ಧ ಸಿಡಿದೆದ್ದ ಜಗ್ಗೇಶ್‌

ಬೆಂಗಳೂರಿನ ಐಷಾರಾಮಿ ಹೋಟೆಲ್‌ಗಳಲ್ಲಿ ಕೊಳೆತ ಮಾಂಸ, ಫಂಗಸ್‌ಯುಕ್ತ ಆಹಾರ ಪತ್ತೆಯಾದ ಪ್ರಕರಣಕ್ಕೆ ನಟ ಜಗ್ಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ರೋಗಗ್ರಸ್ತ ಊಟದಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳು ಬರುತ್ತವೆ ಎಂದು ಎಚ್ಚರಿಸಿದ್ದಾರೆ.

Read Full Story

06:22 PM (IST) Aug 11

ನೀಟ್‌ ವಿದ್ಯಾರ್ಥಿನಿಯಾಗಿದ್ದ ತಂಗಿ ಸಾವು, ದುಬೈನಲ್ಲಿ ಇಂಜಿನಿಯರ್‌ ಆಗಿದ್ದ ಅಣ್ಣ ಮಂಗಳೂರಿಗೆ ಬಂದು ಜೀವ ಮುಗಿಸಿದ!

ನೀಟ್ ಪರೀಕ್ಷೆಯ ಅಕ್ರಮದಿಂದಾಗಿ ಜೂನ್‌ನಲ್ಲಿ ಸಾವು ಕಂಡ ಕೇರಳದ ಯುವತಿಯ ಅಣ್ಣ, ತಂಗಿಯ ಅಗಲಿಕೆಯ ನೋವಿನಿಂದ ಮಂಗಳೂರಿನ ಹೋಟೆಲ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. 24 ವರ್ಷದ ಅರ್ಜುನ್, ತೀವ್ರ ಖಿನ್ನತೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.

Read Full Story

05:53 PM (IST) Aug 11

Viral News - ಹಣದಿಂದ ಸೌಕರ್ಯ ಕೊಳ್ಳಬಹುದು, ನೆನಪುಗಳನ್ನಲ್ಲ! 12 ರೂ., ಬಸ್ ಪಯಣದಲ್ಲಿ ದೊರೆತ, ಬೆಲೆ ಕಟ್ಟಲಾಗದ ಆ ದಿನಗಳು!

ಬೆಂಗಳೂರಿನಲ್ಲಿ ರ್ಯಾಪಿಡೋ ಬುಕ್ ಮಾಡಲು ವಿಫಲರಾದ ವ್ಯಕ್ತಿಯೊಬ್ಬರು, ಅನಿವಾರ್ಯವಾಗಿ ಬಿಎಂಟಿಸಿ ಬಸ್ ಹತ್ತುತ್ತಾರೆ. ಕೇವಲ 12 ರೂಪಾಯಿಯ ಈ ಪ್ರಯಾಣವು ಅವರನ್ನು ತಮ್ಮ ಶಾಲಾ-ಕಾಲೇಜು ದಿನಗಳ ನೆನಪಿನ ಲೋಕಕ್ಕೆ ಕರೆದೊಯ್ದ ಟ್ರಾವೆಲ್!

Read Full Story

05:32 PM (IST) Aug 11

Kalaburagi - ಕೋಪದ ಕೈಗೆ ಬುದ್ಧಿ ಕೊಟ್ಟ ಗಂಡ - ಹೆಂಡತಿ ಮೇಲಿನ ಸಿಟ್ಟಿಗೆ ಪತ್ನಿ, ಮಕ್ಕಳಿದ್ದ ರೂಮ್‌ಗೆ ನುಗ್ಗಿ..

ಹೆಂಡತಿಯ ಶೀಲದ ಮೇಲೆ ಸದಾ ಅನುಮಾನ ಪಡುತ್ತಿದ್ದ ವ್ಯಕ್ತಿಯೊಬ್ಬ, ಜಿಲೆಟಿನ್ ಕಡ್ಡಿಗಳನ್ನು ಇಡೀ ಮೈಗೆ ಕಟ್ಟಿಕೊಂಡು ಮನೆಗೆ ನುಗ್ಗಿ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆ. ಈ ಭೀಕರ ದುರಂತದಲ್ಲಿ ಆತ ಹಾಗೂ ಆತನ 16 ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹೆಂಡತಿ, ಮಗ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜ್ಯವೇ ಬೆಚ್ಚಿ ಬೀಳಿಸುವ ಈ ಭಯಾನಕ ಘಟನೆಯ ಕುರಿತು ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Read Full Story

05:14 PM (IST) Aug 11

ಹಸುಗಳಿಂದ ಬೆಂಗಳೂರಲ್ಲಿ ಭಾರೀ ಟ್ರಾಫಿಕ್ ಜಾಮ್ ಆರೋಪ - ಗೋವುಗಳ ಮಾಲೀನ ವಿರುದ್ಧ ಎಫ್‌ಐಆರ್..!

ಬೆಂಗಳೂರಲ್ಲಿ ಒಂದು ಅಪರೂಪದ ಪ್ರಕರಣ ದಾಖಲಾಗಿದೆ. ಟ್ರಾಫಿಕ್ ಜಾಮ್ ಮಾಡಿದ ಹಸುಗಳ ಮಾಲೀಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..

Read Full Story

05:03 PM (IST) Aug 11

Tamilnadu Politics - ಡಿಎಂಕೆ-ಬಿಜೆಪಿ ನಡುವೆ ಮೈತ್ರಿ? ದ್ರಾವಿಡ ಪಕ್ಷಕ್ಕೆ ನೇರ ಆಹ್ವಾನ ನೀಡಿತಾ ಕೇಸರಿ ಪಡೆ! ವೈರಲ್‌ ಆ ಒಂದು ಮಾತು!

ಡಿಎಂಕೆ ಮತ್ತು ಬಿಜೆಪಿ ಮೈತ್ರಿ ಕುರಿತಾದ ಚರ್ಚೆ ತೀವ್ರಗೊಂಡಿವೆ. ರಾಜಕೀಯದಲ್ಲಿ ಶಾಶ್ವತ ಶತ್ರು-ಮಿತ್ರರಿಲ್ಲ ಎಂಬ ಡಿಎಂಕೆ ನಾಯಕಿ ಕನಿಮೊಳಿ ಸೋಮು ಮತ್ತು ಬಿಜೆಪಿ ನಾಯಕಿ ವನತಿ ಶ್ರೀನಿವಾಸನ್ ಅವರ ಒಂದೇ ರೀತಿಯ ಹೇಳಿಕೆಗಳು ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.

Read Full Story

04:09 PM (IST) Aug 11

Viral - 40ನೇ ವಯಸ್ಸಿನಲ್ಲಿ ಕೆಲಸ ಹೋಯ್ತು, ಆದ್ರೆ ವ್ಯಕ್ತಿ ಹೇಳಿದ್ದೇನು ಗೊತ್ತಾ? ಆ ಮಾತು ಈಗ ಫುಲ್ ವೈರಲ್!

40ನೇ ವಯಸ್ಸಿನಲ್ಲಿ 18 ವರ್ಷಗಳ ಕಾರ್ಪೊರೇಟ್ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬರು, ಇದನ್ನು ಜೀವನದ 'ರೀಸೆಟ್ ಬಟನ್' ಎಂದು ಪರಿಗಣಿಸಿದ್ದಾರೆ. ಈ ಅನಿರೀಕ್ಷಿತ ಲೇಆಫ್ ಅವರಿಗೆ ನಿಜವಾದ ಸ್ನೇಹ, ಹಣದ ಮೌಲ್ಯ ಮತ್ತು ಕಾರ್ಪೊರೇಟ್ ಭ್ರಮೆಯ ಬಗ್ಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದೆ ಎಂದಿದ್ದಾರೆ. ಅಲ್ಲದೇ ಅವರ ಅನುಭವದ ಮಾತಿನ ವಿಡಿಯೋ ಈಗ ವೈರಲ್ ಆಗುತ್ತಿದೆ.

Read Full Story

03:13 PM (IST) Aug 11

‘ದಾನ ನಾಶ ಮಾಡಿದರೆ ಅಪಾರ ಪಾಪ’ ಕ್ರಿ.ಶ 800 ರ ಅಪರೂಪದ ಶಾಸನ ಪತ್ತೆ - ಕರಾವಳಿ ಇತಿಹಾಸಕ್ಕೆ ಸಿಕ್ಕಿತು ಹೊಸ ಬೆಳಕು!

ಹೊನ್ನಾವರದ ಕಡಗೇರಿ ಗ್ರಾಮದಲ್ಲಿ ಪತ್ತೆಯಾದ ಕ್ರಿ.ಶ 800ರ ಶಾಸನವು ಕರಾವಳಿ ಕರ್ನಾಟಕದ ಆರಂಭಿಕ ಕನ್ನಡ ಲಿಪಿ, ಹಳೆಗನ್ನಡ ಭಾಷೆ, ಮತ್ತು ದೇವಾಲಯದ ಆಡಳಿತದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಶಾಸನವು ದಾನ ವ್ಯವಸ್ಥೆ, ಕೃಷಿ ಆದಾಯ ಮತ್ತು ಅಂದಿನ ಸಾಮಾಜಿಕ ನಿಯಮಗಳನ್ನು ತಿಳಿಸುವ ಪ್ರಮುಖ ಐತಿಹಾಸಿಕ ದಾಖಲೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
Read Full Story

03:03 PM (IST) Aug 11

Inspiring Story - ಸೋಲೊಪ್ಪದ ಟೆಕ್ಕಿ - 36 ಇಂಟರ್ವ್ಯೂಗಳಲ್ಲಿ ರಿಜೆಕ್ಷನ್ ಅನುಭವಿಸಿದ ಬೆಂಗಳೂರಿನ ಯುವಕನಿಗೆ ಈಗ ₹30 ಲಕ್ಷದ ಪ್ಯಾಕೇಜ್!

ನನಗೆ ದೊಡ್ಡ ಸಂಬಳ ಸಿಕ್ಕಿಲ್ಲ, ಆದರೆ ಇಷ್ಟು ತಿಂಗಳುಗಳ ನಂತರ ನನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಸಿಲು ಇದರಿಂದ ನನಗೆ ಸಾಧ್ಯವಾಗಿದೆ ಎಂದು ಯುವಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ.

Read Full Story

02:56 PM (IST) Aug 11

ರೇಣುಕಾಸ್ವಾಮಿ ಕೇಸ್ - ಸಾಕ್ಷಿಗೆ ಬೆದರಿಕೆ ಪ್ರಕರಣದಲ್ಲಿ FSLನಿಂದ ಸ್ಫೋಟಕ ಸತ್ಯ, ಪ್ರಭಾವಿ ಮಹಿಳೆಯ ಹೆಸರು ಬೆಳಕಿಗೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿಯು ಸ್ಫೋಟಕ ಸತ್ಯಗಳನ್ನು ಬಹಿರಂಗಪಡಿಸಿದೆ. ವಾಟ್ಸಾಪ್ ಕಾನ್ಫರೆನ್ಸ್ ಕಾಲ್ ಮೂಲಕ ಬೆದರಿಕೆ ಹಾಕಲಾಗಿದ್ದು, ಇದರ ಹಿಂದೆ ಪ್ರಭಾವಿ ಮಹಿಳೆಯೊಬ್ಬಳ ಕೈವಾಡವಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಇದೀಗ ಪ್ರಕರಣದ ಪ್ರಮುಖ ಆರೋಪಿಗಳ ಬಂಧನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
Read Full Story

02:39 PM (IST) Aug 11

ಬೆಂಗಳೂರು ಕಂಠೀರವ ಸ್ಟುಡಿಯೋ ಬಳಿ ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು!

ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಬಿಡಿಎ ನಡೆಸುತ್ತಿದ್ದ ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣಿನ ತಡೆಗೋಡೆ ಕುಸಿದು ಇಬ್ಬರು ಹೊರರಾಜ್ಯದ ಕಾರ್ಮಿಕರು ಮೃತಪಟ್ಟಿದ್ದಾರೆ. ಭಾರಿ ಮಳೆಯಿಂದಾಗಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
Read Full Story

02:28 PM (IST) Aug 11

ಕರ್ಣ ಸೀರಿಯಲ್‌ ಬಿಟ್ಟ ನಮ್ರತಾ ಗೌಡ ಕಿರಣ್‌ ಜೊತೆ ಕಾಣಿಸಿಕೊಂಡ್ರು? ಅಚ್ಚರಿಯ ಈ ಬೆಳವಣಿಗೆ ರಹಸ್ಯವೇನು?

'ಬಿಗ್ ಬಾಸ್' ಮನೆಯಲ್ಲಿ ತನ್ನ ಚಾರ್ಮ್ ಮೂಲಕ ಗಮನ ಸೆಳೆದಿದ್ದ ಮತ್ತು 'ಕರ್ಣ' ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಮ್ರತಾ ಗೌಡ, ಈಗ ಹೊಸ ಅಚ್ಚರಿಯ ಸುದ್ದಿ ನೀಡಿದ್ದಾರೆ. ಏನಿದು ಅಮೃತಾ ಗೌಡ ಸುದ್ದಿ? ಯಾರದು ಕಿರಣ್ ..?

Read Full Story

02:27 PM (IST) Aug 11

ಸಚಿವರಿಗೆ ಸರ್ಕಾರಿ ಮನೆ ಹಂಚಿಕೆ - ನಿಮ್ಮ ಜಿಲ್ಲೆಯ ಮಿನಿಸ್ಟರ್ ಮನೆ ಎಲ್ಲಿದೆ? ಇಲ್ಲಿದೆ ಕಂಪ್ಲೀಟ್ ಅಡ್ರೆಸ್!

ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಪ್ರಮುಖ 10 ಸಚಿವರಿಗೆ ಬೆಂಗಳೂರು ನಗರದಲ್ಲಿ ಅಧಿಕೃತ ಸರ್ಕಾರಿ ವಸತಿ ಗೃಹಗಳನ್ನು ಹಂಚಿಕೆ ಮಾಡಲಾಗಿದೆ. ಸದಾಶಿವನಗರ, ಸ್ಯಾಂಕಿ ರಸ್ತೆ ಹಾಗೂ ಜಯಮಹಲ್ ಬಡಾವಣೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಚಿವರಿಗೆ ನಿವಾಸಗಳನ್ನು ನಿಗದಿಪಡಿಸಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಸಂಪೂರ್ಣ ವಿಳಾಸದ ವಿವರವನ್ನು ಇಲ್ಲಿ ನೀಡಲಾಗಿದೆ.
Read Full Story

02:10 PM (IST) Aug 11

ಕನ್ನಡಿಗರಿಗೆ ಚೊಂಬು, ತಮಿಳುನಾಡಿಗೆ ಕಾವೇರಿ - ಮುಂದಿನ 15 ದಿನವೂ 12,000 ಕ್ಯೂಸೆಕ್ ನೀರು ಬಿಡಲು CWRC ಶಿಫಾರಸು!

ರಾಜ್ಯದಲ್ಲಿ ಕುಡಿಯುವ ನೀರಿಗೆ ಅಭಾವ ಎದುರಾಗುವ ಭೀತಿಯಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಆದೇಶಿಸಿದೆ. ತಮಿಳುನಾಡಿಗೆ ಮುಂದಿನ 15 ದಿನ ದಿನಕ್ಕೆ 12,000 ಕ್ಯೂಸೆಕ್‌ನಂತೆ ಭರ್ಜರಿ 16 ಟಿಎಂಸಿ ನೀರು ಬಿಡುವಂತೆ CWRC ಶಿಫಾರಸು ಮಾಡಿದೆ. ಇದನ್ನು ವಿರೋಧಿಸಲು ಕರ್ನಾಟಕ ಸಜ್ಜಾಗಿದೆ.

Read Full Story

01:55 PM (IST) Aug 11

ದೇಶದಾದ್ಯಂತ Passport Seva ಸರ್ವರ್ ಡೌನ್ - ಮಂಗಳೂರಿನಲ್ಲಿ ಜನರ ಪರದಾಟ, ಎಸಿ ರೂಮಲ್ಲಿ ಅಧಿಕಾರಿಗಳು, ಬೀದಿಯಲ್ಲಿ ಅರ್ಜಿದಾರರು!

ಭಾರತದಾದ್ಯಂತ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸರ್ವರ್ ಸಮಸ್ಯೆಯಿಂದಾಗಿ ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸಲು ಅಥವಾ ಮರುಹೊಂದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮಂಗಳೂರು ಸೇರಿದಂತೆ ಹಲವು ಕೇಂದ್ರಗಳಲ್ಲಿ ದೂರದೂರುಗಳಿಂದ ಬಂದಿದ್ದ ಸಾವಿರಾರು ಅರ್ಜಿದಾರರು ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ.

Read Full Story

01:12 PM (IST) Aug 11

ರ‍್ಯಾಪಿಡೋ ಚಾಲಕನೆಂದು ರಾತ್ರಿ ಮಹಿಳೆಗೆ ವಂಚಿಸಲು ಯತ್ನ; ನಕಲಿ ರೈಡರ್ ಬೆಂಡೆತ್ತಿದ ಯುವತಿಯ ವಿಡಿಯೋ ವೈರಲ್!

ಹೈದರಾಬಾದ್‌ನ ಚಾರ್ಮಿನಾರ್ ಬಳಿ ರಾತ್ರಿ ವೇಳೆ ಆಟೋಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರನ್ನು ರ‍್ಯಾಪಿಡೋ ಚಾಲಕನೆಂದು ನಂಬಿಸಲು ಯತ್ನಿಸಿದ ವ್ಯಕ್ತಿಯನ್ನು ಆಕೆ ಜಾಗರೂಕತೆಯಿಂದ ಪ್ರಶ್ನಿಸಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ವಾಹನ ಮತ್ತು ಐಡಿ ಇಲ್ಲದ ಆತನನ್ನು ತರಾಟೆಗೆ ತೆಗೆದುಕೊಂಡ ಈ ಘಟನೆ ಮಹಿಳೆಯರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಿದೆ.

Read Full Story

01:01 PM (IST) Aug 11

ಎಲ್ಲಾ ದಾಖಲೆ ಉಡೀಸ್‌ ಮಾಡಿದ ಯಶ್ 'ಟಾಕ್ಸಿಕ್'.. ಅಮೆರಿಕಾದಲ್ಲಿ ಆಗಿರೋ ಶಾಕಿಂಗ್ ಬೆಳವಣಿಗೆ ಏನ್ ಗೊತ್ತಾ?!

ಸ್ನೇಹ, ಫ್ಯಾಮಿಲಿ ಎಮೋಷನ್ಸ್ ಮತ್ತು ರಕ್ತಸಿಕ್ತ ಆಕ್ಷನ್‌ನ ಸಂಗಮವಾಗಿರುವ ಈ 'ದೊಡ್ಡವರಿಗಾಗಿರುವ ಕಾಲ್ಪನಿಕ ಕಥೆ'ಯನ್ನು ಕಣ್ತುಂಬಿಕೊಳ್ಳಲು ಇಡೀ ಜಗತ್ತೇ ತುದಿಗಾಲಿನಲ್ಲಿ ನಿಂತಿದೆ. ಬಾಕ್ಸ್ ಆಫೀಸ್ ಸುಲ್ತಾನ್ ಯಶ್ ಈಗ ಹಳೆಯ ದಾಖಲೆಗಳನ್ನು ಬದಿಗಿಟ್ಟು ಹೊಸ ಇತಿಹಾಸ ಬರೆಯತೊಡಗಿದ್ದಾರೆ. ಏನಿದು ಅಮೆರಿಕಾ ಸುದ್ದಿ?

Read Full Story

01:00 PM (IST) Aug 11

ಬೆಂಗಳೂರು ಜನರಿಂದ ಮತ್ತೊಂದು ದಾಖಲೆ - ನಮ್ಮ ಮೆಟ್ರೋದಲ್ಲಿ ಒಂದೇ ದಿನ 11.19 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಚಾರ!

ಬೆಂಗಳೂರಿನ 'ನಮ್ಮ ಮೆಟ್ರೋ' ಆಗಸ್ಟ್ 10 ರಂದು ಸಾರ್ವಕಾಲಿಕ ದಾಖಲೆ ಬರೆದಿದೆ. ಅಂದು ಒಂದೇ ದಿನದಲ್ಲಿ 11.19 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಇದು ಈ ತಿಂಗಳ ಅತ್ಯಧಿಕ ದೈನಂದಿನ ಬೋರ್ಡಿಂಗ್ ಸಂಖ್ಯೆಯಾಗಿದೆ. ನಗರದ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರ್ಯಾಯವಾಗಿ ಮೆಟ್ರೋ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಬೆಂಬಲಕ್ಕೆ ಬಿಎಂಆರ್‌ಸಿಎಲ್ ಸಾರ್ವಜನಿಕರಿಗೆ ಧನ್ಯವಾದ ತಿಳಿಸಿದೆ.

Read Full Story

12:40 PM (IST) Aug 11

Kalaburagi - ಸಚಿವ ಪ್ರಿಯಾಂಕ್ ಖರ್ಗೆ ಸಭೆಯಲ್ಲಿ 'ಪ್ರಭು ಶ್ರೀರಾಮಚಂದ್ರ' ಪ್ರತ್ಯಕ್ಷ, ಕೈಮುಗಿದು ನ್ಯಾಯಕ್ಕಾಗಿ ಮನವಿ; ವಿಡಿಯೋ ನೋಡಿ

ಹಗಲು ವೇಷ ಧರಿಸಿಯೇ ಜೀವನ ನಡೆಸುವ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಿಂದ ಆಗಮಿಸಿದ ವ್ಯಕ್ತಿಯೊಬ್ಬ, ತಮ್ಮ ನಿತ್ಯ ಕಾಯಕದ ಶ್ರೀರಾಮನ ಹಗಲು ವೇಷದಲ್ಲಿಯೇ ಸಚಿವರ ಸಭೆಗೆ ಬಂದು ಗಮನ ಸೆಳೆದರು.

Read Full Story

12:25 PM (IST) Aug 11

KEA ನೇಮಕಾತಿ 2026 - ಫಾರ್ಮಸಿ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಸೇರಿದಂತೆ ಒಟ್ಟು 233 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಲೇಖನವು ಹುದ್ದೆಗಳ ವಿವರ, ಅರ್ಹತಾ ಮಾನದಂಡಗಳು, ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.
Read Full Story

12:12 PM (IST) Aug 11

ನಟ ಪ್ರಕಾಶ್ ರಾಜ್ ಬೆಂಗಳೂರಿನ ವೋಟರ್ ಐಡಿ ಡಿಲೀಟ್ - ಹುಟ್ಟಿ ಬೆಳೆದ ಕ್ಷೇತ್ರದಲ್ಲಿ ನನ್ನ ಹೆಸರೇ ಇಲ್ಲ ಎಂದ ನಟ!

ಬೆಂಗಳೂರಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರು ರದ್ದಾಗಿರುವುದಾಗಿ ನಟ ಪ್ರಕಾಶ್ ರಾಜ್ ವಿಡಿಯೋ ಮೂಲಕ ತಿಳಿಸಿದ್ದಾರೆ. ತಾವು ಸ್ಪರ್ಧಿಸಿದ್ದ ಕ್ಷೇತ್ರದಲ್ಲೇ ಮತದ ಹಕ್ಕನ್ನು ಕಳೆದುಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್‌ಐಆರ್ ನೆಪದಲ್ಲಿ ಲಕ್ಷಾಂತರ ಮತಗಳನ್ನು ಅಳಿಸಿಹಾಕಿರುವುದು ಪ್ರಜಾಪ್ರಭುತ್ವದ ಹಕ್ಕನ್ನು ಕಸಿದಂತೆ ಎಂದು ಅವರು ಚುನಾವಣಾ ಆಯೋಗದ ಕ್ರಮವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.

Read Full Story

12:00 PM (IST) Aug 11

ಇಷ್ಟು ದಿನ ಭೂಮಿ ಟೈಟ್‌... ಈಗ ಡುಮ್ಮ ಸರ್‌ ಗೌತಮ್‌ ಸರದಿ - 'ಅಮೃತಧಾರೆ'ಯ ಈ ಸೀನ್‌ ವೈರಲ್‌

ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ಯಲ್ಲಿ ಇದೀಗ ಸಂಭ್ರಮದ ವಾತಾವರಣ. ಕ್ಯಾನ್ಸರ್‌ನಿಂದ ಭೂಮಿಕಾ ಸಾವನ್ನಪ್ಪುತ್ತಾಳೆ ಎಂದುಕೊಂಡಿದ್ದ ವೀಕ್ಷಕರ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದೆ.

Read Full Story

11:54 AM (IST) Aug 11

ವೈಷ್ಣವಿ ಗೌಡ-ಕೃತಿಕಾ ರವೀಂದ್ರ ಜೊತೆಯಾಗಿ ಮನೆಮನೆಗೆ ಬರಲಿದ್ದಾರೆ.. ಆ ದಿನ, ಸಾಯಂಕಾಲ ಈ ಟೈಂ!

ಸ್ನೇಹ ಅಂದ್ರೆ ಬರೀ ಹರಟೆಯಲ್ಲ, ಅದು ಎರಡು ಜೀವಗಳ ಬೆಸುಗೆ. ಬಾಲ್ಯದಲ್ಲಿ ಒಂದೇ ತಟ್ಟೆಯಲ್ಲಿ ಉಂಡು, ಜೊತೆಯಲ್ಲೇ ಆಡಿ ಬೆಳೆದ ಪಾರ್ವತಿ ಮತ್ತು ಗಾಯತ್ರಿ ವಿಧಿಯ ಆಟದಿಂದ ದೂರವಾಗುತ್ತಾರೆ. ಈಗ ಪಾರ್ವತಿಯ ಬಳಿ ಎಲ್ಲವೂ ಇದೆ—ಸಿರಿತನವಿದೆ, ಪ್ರೀತಿಯ ಪತಿ ಇದ್ದಾನೆ, ಮುದ್ದಾದ ಮಗಳಿದ್ದಾಳೆ. ಆದರೆ, ಗಾಯತ್ರಿ ಎಲ್ಲಿ..?

Read Full Story

11:52 AM (IST) Aug 11

ಗಣೇಶ ಹಬ್ಬಕ್ಕೆ ಚಂದಾ ವಸೂಲಿ ಮಾಡಿದ ಇಲಿ; ಚಿಕನ್ ಅಂಗಡಿ ಗಲ್ಲಾಪೆಟ್ಟಿಗೆಯಿಂದ ಹಣ ಕದ್ದೊಯ್ದು ಬಿಲದಲ್ಲಿಟ್ಟ ಮೂಷಿಕ!

ಚಿಕ್ಕಮಗಳೂರಿನ ಅಜ್ಜಂಪುರ ಪಟ್ಟಣದ ಚಿಕನ್ ಅಂಗಡಿಯೊಂದರಲ್ಲಿ, ಗಲ್ಲಾಪೆಟ್ಟಿಗೆಯಿಂದ ನಿರಂತರವಾಗಿ ಹಣ ಕಣ್ಮರೆಯಾಗುತ್ತಿತ್ತು. ಕೊನೆಗೆ ಅಂಗಡಿ ಮಾಲೀಕರು ಪರಿಶೀಲಿಸಿದಾಗ, ಇಲಿಯೊಂದು ನೋಟುಗಳನ್ನು ಕದ್ದು ತನ್ನ ಗೂಡಿನಲ್ಲಿ ಸಂಗ್ರಹಿಸಿಟ್ಟಿದ್ದ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.
Read Full Story

11:51 AM (IST) Aug 11

Cauvery Water Dispute - ತಮಿಳುನಾಡಿನ ನೀರಿನ ದಾಹ ತೀರಿಸಿದ ಕಬಿನಿ; ಕೇವಲ 11 ದಿನಗಳಲ್ಲಿ ಹರಿಯಿತು 13 ಟಿಎಂಸಿ ನೀರು

ಕರ್ನಾಟಕದಲ್ಲಿ ವರ್ಷಕ್ಕೆ ಎರಡು ಬಾರಿ ಭರ್ತಿಯಾಗುವ ಏಕೈಕ ಜಲಾಶಯ ಎಂಬ ಕೀರ್ತಿಯನ್ನು ಕಬಿನಿ ಜಲಾಶಯ ಪಡೆದುಕೊಂಡಿದೆ. ಈ ವರ್ಷ ತೀವ್ರ ಬರದ ನಡುವೆಯೂ ಕಬಿನಿ ಜಲಾಶಯ ಭರ್ತಿಯಾಗಿದ್ದು, ರಾಜ್ಯದ ರೈತ ಸಂಘದ ಪದಾಧಿಕಾರಿಗಳು ಬಾಗಿನ ಅರ್ಪಿಸುವ ಕಾರ್ಯವನ್ನು ಮಾಡಿದ್ದಾರೆ.

Read Full Story

11:27 AM (IST) Aug 11

ದೇಶದ ಅಡಕೆ GSTಯಲ್ಲಿ ಕರ್ನಾಟಕದ ಸಿಂಹಪಾಲು; ಶಿವಮೊಗ್ಗ ಸಂಸದ ರಾಘವೇಂದ್ರ ಪ್ರಶ್ನೆಗೆ ಕೇಂದ್ರದ ಮಾಹಿತಿ

ದೇಶದ ಒಟ್ಟು ಅಡಕೆ ಆಧಾರಿತ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ಶೇ.76ಕ್ಕಿಂತ ಅಧಿಕ ಪಾಲು ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮಾಹಿತಿ ಬಹಿರಂಗಪಡಿಸಿದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದ ಕೊಡುಗೆಯು ಶೇ.120ರಷ್ಟು ಹೆಚ್ಚಾಗಿದ್ದು, ಇದು ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ಆರ್ಥಿಕತೆಗೆ ಅಡಕೆ ಬೆಳೆಯ ಮಹತ್ವವನ್ನು ತೋರಿಸುತ್ತದೆ.
Read Full Story

11:19 AM (IST) Aug 11

ಬೆಂಗಳೂರು - ಆ.15ರ ಒಳಗೆ ಖಾಲಿ ನಿವೇಶನ ಸ್ವಚ್ಛ ಮಾಡದಿದ್ರೆ ಮಾಲೀಕರಿಗೆ ಸೈಟ್‌ ಗಾತ್ರದಂತೆ ದುಪ್ಪಟ್ಟು ದಂಡ

ಬೆಂಗಳೂರಿನಲ್ಲಿ ಖಾಲಿ ನಿವೇಶನಗಳಲ್ಲಿನ ಕಸವನ್ನು ಆ.15ರೊಳಗೆ ಸ್ವತಃ ತೆರವುಗೊಳಿಸುವಂತೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾಲೀಕರಿಗೆ ಗಡುವು ನೀಡಿದೆ. ತಪ್ಪಿದಲ್ಲಿ, ಪಾಲಿಕೆಯೇ ಸ್ವಚ್ಛಗೊಳಿಸಿ ನಿವೇಶನದ ಅಳತೆಗನುಗುಣವಾಗಿ ₹25,900 ರಿಂದ ₹1.74 ಲಕ್ಷದವರೆಗೆ ದಂಡ ವಿಧಿಸಲಿದ್ದು, ಈ ಮೊತ್ತವನ್ನು ಆಸ್ತಿ ತೆರಿಗೆಗೆ ಸೇರಿಸಿ ವಸೂಲಿ ಮಾಡಲಿದೆ.
Read Full Story

11:14 AM (IST) Aug 11

ಹುಬ್ಬಳ್ಳಿ ಆಂಕೋಲಾ ನಡುವೆ ₹18,424 ಕೋಟಿ ವೆಚ್ಚದ ಹೊಸ ರೈಲ್ವೆ ಯೋಜನೆ; ಬರೋಬ್ಬರಿ 57 ಸುರಂಗ ನಿರ್ಮಾಣ

ದಶಕಗಳ ಕನಸಾದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಪರಿಷ್ಕೃತ ರೂಪದಲ್ಲಿ ಮರುಚಾಲನೆ ನೀಡಲಾಗಿದ್ದು, 163 ಕಿ.ಮೀ. ಉದ್ದದ ವಿದ್ಯುದೀಕೃತ ಜೋಡಿ ಮಾರ್ಗಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಪಶ್ಚಿಮ ಘಟ್ಟದ ಪರಿಸರ ಹಾನಿ ತಗ್ಗಿಸಲು 57 ಸುರಂಗ ಪ್ರಸ್ತಾಪಿಸಲಾಗಿದ್ದು, ಅರಣ್ಯ ಇಲಾಖೆಯ ಅನುಮತಿಗಳು ಬೇಕಾಗಿವೆ.

Read Full Story

10:48 AM (IST) Aug 11

Kalaburagi - ಗೃಹ ಸಚಿವರೊಂದಿಗೆ ಸಭೆ ನಡೆಯುತ್ತಿರುವಾಗಲೇ ಡಿಸಿ, ಎಡಿಸಿ, ಎಸಿ ಕಾರು ಜಪ್ತಿ; ಮುಜುಗರಕ್ಕೆ ಒಳಗಾದ ಅಧಿಕಾರಿಗಳು, ಆಗಿದ್ದೇನು?

ಕಲಬುರಗಿಯ ನಂದಿಕೂರ ಗ್ರಾಮದಲ್ಲಿ ಎಸ್ಸಿಪಿ ಘಟಕ ನಿರ್ಮಾಣಕ್ಕೆ ರೈತನ ಎರಡು ಎಕರೆ ಹನ್ನೊಂದು ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಭೂಮಿಗೆ ಪರಿಹಾರವಾಗಿ ನೀಡಬೇಕಿರುವ 8 ಕೋಟಿ ರೂಪಾಯಿ ನೀಡಲು ಅಧಿಕಾರಿಗಳು ವಿಳಂಬ ಮಾಡಿದ್ದರು.

Read Full Story

More Trending News