Published : Nov 09, 2025, 07:35 AM ISTUpdated : Nov 09, 2025, 09:40 PM IST

State News Live: ರಾಜ್ಯದಲ್ಲಿ ತೀವ್ರಗೊಂಡ ರೈತ ಹೋರಾಟ, ನಾಳೆ ಅಫಜಲಪುರ ಬಂದ್‌ಗೆ ಕರೆ

ಸಾರಾಂಶ

ಬೆಂಗಳೂರು (ನ.9): ರಾಜ್ಯದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿರುವ ಪರಪ್ಪನ ಅಗ್ರಹಾರ ಸೆಂಟ್ರಲ್‌ ಜೈಲಿನ ಅಧಿಕಾರಿಗಳ ದುರಾಸೆ ಮತ್ತೆ ಜನರ ಎದುರಿಗೆ ಬೆತ್ತಲಾಗಿದೆ.ಹಣಕ್ಕಾಗಿ ಐಸಿಸ್ ಉಗ್ರ, ವಿಕೃತ ಕಾಮಿಗೆ ಜೈಲಲ್ಲೇ ಮೊಬೈಲ್‌, ಟಿವಿ ಭಾಗ್ಯ ನೀಡಿದ್ದಾರೆ. ರಾಜಾತಿಥ್ಯದ ವಿಡಿಯೋ ಬಿಡುಗಡೆಯಾಗಿದ್ದು ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಇದು ಜೈಲಾ, ಹಾಸ್ಟೆಲ್ಲಾ ಎಂದು ಜನರು ಟೀಕೆ ಮಾಡಿದ್ದಾರೆ. ಇದೇ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಜೈಲಿನ ಅಧಿಕಾರಿಗಳಿಗೆ ತಪರಾಕಿ ಹಾಕಿದ್ದರೂ ಕಾರಾಗೃಹದ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿವೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

09:40 PM (IST) Nov 09

ರಾಜ್ಯದಲ್ಲಿ ತೀವ್ರಗೊಂಡ ರೈತ ಹೋರಾಟ, ನಾಳೆ ಅಫಜಲಪುರ ಬಂದ್‌ಗೆ ಕರೆ

ರಾಜ್ಯದಲ್ಲಿ ತೀವ್ರಗೊಂಡ ರೈತ ಹೋರಾಟ, ನಾಳೆ ಅಫಜಲಪುರ ಬಂದ್‌ಗೆ ಕರೆ ನೀಡಲಾಗಿದೆ. ಕಬ್ಬು ಬೆಳೆಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದ ಭಾಗವಾಗಿ ಬಂದ್‌ಕೆ ಕರೆ ನೀಡಲಾಗಿದೆ.

 

Read Full Story

09:40 PM (IST) Nov 09

ತಲೈವರ್ 173 ಬಜೆಟ್ ಎಷ್ಟು - ಕಮಲ್ ಹಾಸನ್ ಉದಾರ ಕೊಡುಗೆ.. ನಿರ್ದೇಶಕ ಸುಂದರ್ ಸಂಭಾವನೆ ಇಷ್ಟೊಂದಾ?

ಸೂಪರ್‌ ಸ್ಟಾರ್ ರಜನಿಕಾಂತ್ ನಟನೆಯ ತಲೈವರ್ 173 ಚಿತ್ರಕ್ಕೆ ಕಮಲ್ ಹಾಸನ್ ಭರ್ಜರಿ ಬಜೆಟ್ ನೀಡಿದ್ದಾರಂತೆ. ಅಷ್ಟೇ ಅಲ್ಲ, ನಿರ್ದೇಶಕ ಸುಂದರ್ ಸಿ ಅವರ ಸಂಭಾವನೆ ವಿವರ ಕೂಡ ಹೊರಬಿದ್ದಿದೆ.

Read Full Story

09:14 PM (IST) Nov 09

ಅಯ್ಯೋ ದುರ್ವಿಧಿಯೇ.. ಆಸ್ತಿ ವಿಚಾರಕ್ಕೆ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಮಗ

ಆಸ್ತಿ ಹಂಚಿಕೆಗೆ ಒಪ್ಪದ ತಂದೆಯನ್ನ ,ಮಗನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೆಳ್ಳುಂಬಿ ಬಳಿಯ ಮಾವಿನಕಟ್ಟಾದಲ್ಲಿ ನಡೆದಿದೆ. ನಾರಾಯಣ ಪರಶು ಮರಾಠಿ ಕೊಲೆಯಾದ ವ್ಯಕ್ತಿ.

Read Full Story

08:39 PM (IST) Nov 09

ರಣಬೀರ್-ಆಲಿಯಾ 'ಲವ್ ಅಂಡ್ ವಾರ್' ರಿಲೀಸ್ ಡೇಟ್ ಫಿಕ್ಸ್ - ಈ ಸೂಪರ್‌ಸ್ಟಾರ್ ಜೊತೆ ಬಾಕ್ಸಾಫೀಸ್ ಫೈಟ್

ರಣಬೀರ್ ಕಪೂರ್-ಆಲಿಯಾ ಭಟ್ ಅಭಿನಯದ 'ಲವ್ ಅಂಡ್ ವಾರ್' ಸಿನಿಮಾ ಬಹಳ ದಿನಗಳಿಂದ ಚರ್ಚೆಯಲ್ಲಿದೆ. ಚಿತ್ರದ ಶೂಟಿಂಗ್ ಇನ್ನೂ ನಡೆಯುತ್ತಿದೆ. ಇತ್ತೀಚೆಗೆ, ಚಿತ್ರದ ಸೆಟ್‌ನಿಂದ ಆಲಿಯಾ ಅವರ ಲುಕ್ ಕೂಡ ರಿವೀಲ್ ಆಗಿತ್ತು.

Read Full Story

08:17 PM (IST) Nov 09

ಕಬ್ಬು ಬೆಳೆಗಾರರ ಕಿವಿಯಲ್ಲಿ ಹೂ ಇಟ್ಟು ದೋಖಾ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ರೈತರನ್ನು ನಂಬಿಸಿ ಸರ್ಕಾರ ಮೋಸ ಮಾಡಿದೆ. ಕಬ್ಬು ಬೆಳೆಗಾರರಿಗೆ ಕಿವಿಯಲ್ಲಿ ಹೂವು ಇಟ್ಟು ರಾಜ್ಯ ಸರ್ಕಾರ ದೊಡ್ಡ ದೋಖಾ ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

Read Full Story

08:01 PM (IST) Nov 09

ಇಂತವರು ಅಪ್ಪಿತಪ್ಪಿಯೂ ಬಿಯರ್ ಕುಡಿಯಬಾರದು.. ಕುಡಿದ್ರೆ ತುಂಬಾನೇ ಡೇಂಜರ್, ತಕ್ಷಣ ನಿಲ್ಲಿಸಿ!

ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವರಲ್ಲಿ ಆಲ್ಕೋಹಾಲ್ ತೀವ್ರ ಪರಿಣಾಮ ಬೀರುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಯಾವುದೇ ಕಾರಣಕ್ಕೂ ಬಿಯರ್‌ನಿಂದ ದೂರವಿರಬೇಕು ಎಂದು ತಜ್ಞರು ಹೇಳುತ್ತಾರೆ.

Read Full Story

07:45 PM (IST) Nov 09

ಮುಧೋಳ ರೈತರ ಜೊತೆಗಿನ ಸಚಿವರ ಸಂಧಾನ ಸಭೆ ವಿಫಲ, ಆಕ್ರೋಶಕ್ಕೆ ರಾಜ್ಯ ಹೆದ್ದಾರಿ ಬಂದ್

ಮುಧೋಳ ರೈತರ ಜೊತೆಗಿನ ಸಚಿವರ ಸಂಧಾನ ಸಭೆ ವಿಫಲ, ಆಕ್ರೋಶಕ್ಕೆ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ. ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆಗೆ ಸಚಿವ ತಿಮ್ಮಾಪುರ ನಡೆಸಿದ ಸಭೆ ವಿಫಲಗೊಂಡಿದೆ.

Read Full Story

07:07 PM (IST) Nov 09

Bigg Boss - ಸೈಕಿಗೆ ಮಾಡ್ತಿಲ್ಲ ಲೈಕು! ಕಾವು ಕೊಡೋದ್ಯಾಕೆ ನೋವು? ಡಮಾಲ್ ಡುಮಲ್ ಡಕ್ಕಾ- ಹೋಗೋದು ಪಕ್ಕಾ!

ಬಿಗ್ ಬಾಸ್ ಮನೆಯಲ್ಲಿ 'ಗಿಲ್ಲಿ ನಟ' ವೀಕ್ಷಕರ 'ಡಮಾಲ್ ಡುಮಲ್ ಡಕ್ಕಾ' ಕವನ ವಾಚಿಸಿ ಎಲ್ಲರ ಕಾಲೆಳೆದರು. ಇದೇ ವೇಳೆ, 'ಊಸರವಳ್ಳಿ' ಎಂದು ಕರೆದಿದ್ದಕ್ಕೆ ತೀವ್ರ ಬೇಸರಗೊಂಡ ಚಂದ್ರಪ್ರಭ, ಎಲಿಮಿನೇಷನ್‌ಗೂ ಮುನ್ನವೇ ಅನಿರೀಕ್ಷಿತವಾಗಿ ಮನೆಯಿಂದ ಹೊರನಡೆದಿದ್ದಾರೆ.
Read Full Story

07:01 PM (IST) Nov 09

ರಾಜಮೌಳಿ ಸಿನಿಮಾಗಳೆಲ್ಲಾ ಆ ಭಾಷೆಯಲ್ಲಿ ಅಟ್ಟರ್ ಫ್ಲಾಪ್ - ಧೈರ್ಯ ಕೊಟ್ಟ ಸ್ಟಾರ್ ಹೀರೋ ಬಗ್ಗೆ ಜಕ್ಕಣ್ಣ ಹೀಗಂದ್ರು..

ಆ ಭಾಷೆಯಲ್ಲಿ ರಾಜಮೌಳಿ ಸಿನಿಮಾಗಳೆಲ್ಲಾ ಫ್ಲಾಪ್ ಆಗ್ತಿದ್ದವು. ಇದರಿಂದ ಜಕ್ಕಣ್ಣನಿಗೆ ಒಬ್ಬ ಸ್ಟಾರ್ ಹೀರೋ ಧೈರ್ಯ ತುಂಬಿದ್ರು. ಆ ಭಾಷೆಯಲ್ಲಿ ರಾಜಮೌಳಿಗೆ ಸಿಕ್ಕ ಮೊದಲ ಗೆಲುವು ಯಾವುದು ಅನ್ನೋದನ್ನ ಈ ಲೇಖನದಲ್ಲಿ ತಿಳಿಯಿರಿ.

Read Full Story

06:49 PM (IST) Nov 09

ಹಿಂದೂ ಭಾವನೆ ಮರೆತರೆ ರಾಷ್ಟ್ರ ವಿಭಜನೆ - ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌

ಹಿಂದೂ ಎಂದು ಕರೆಯಲು ಇಷ್ಟವಿಲ್ಲದಿದ್ದರೆ ಭಾರತ, ಇಂಡಿಯಾ ಎಂದು ಯಾವ ಹೆಸರಿನಿಂದಾದರೂ ಕರೆಯಿರಿ. ಆದರೆ, ಆಲೋಚನೆ ಮಾತ್ರ ಒಂದು ರಾಷ್ಟವಾಗಿರಲಿ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ.ಮೋಹನ್ ಭಾಗವತ್‌ ಹೇಳಿದರು.

Read Full Story

06:47 PM (IST) Nov 09

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಮಗು? ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿದ ಪೋಷಕರು

ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಮಗು? ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿದ ಪೋಷಕರು, ತಕ್ಷಣದ ಚಿಕಿತ್ಸೆ ಸಿಕ್ಕಿದ್ದರೆ ಮಗು ಬದುಕುಳಿಯುತ್ತಿತ್ತು. ಆದರೆ ನಡೆದಿದ್ದೇ ಬೇರೆ. ಪೋಷಕರು ಅಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಮಗು ಬದುಕುಳಿಯಲಿಲ್ಲ.

Read Full Story

06:41 PM (IST) Nov 09

ಬ್ರಾಹ್ಮಣ ಮಹಾಸಂಘ ಹೊಸ ನೇಮಕಾತಿ - ಮಹಿಳಾ ವಿಭಾಗ ಬಲವರ್ಧನೆಗೆ ವಿಶೇಷ ಒತ್ತು

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ (ರಿ), ಹೊಸ ಚೈತನ್ಯ ನೀಡುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಹೊಸ ಹುದ್ದೆದಾರರ ಪದಗ್ರಹಣ ಮತ್ತು ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮವು ಇಂದು ಭವ್ಯವಾಗಿ ನೆರವೇರಿತು.

Read Full Story

06:27 PM (IST) Nov 09

ಪ್ರಾಣ ಕೈಲಿ ಹಿಡಿದು ಕಿಟಕಿಯಿಂದ ಜಿಗಿದು ಓಡಿಹೋದ್ರಂತೆ ಆ್ಯಂಕರ್ ಸುಮಾ.. ಚಿರಂಜೀವಿ, ಪವನ್ ಎಫೆಕ್ಟ್ ಕಾರಣವಂತೆ!

ಸುಮಾ ಕನಕಾಲ ಇತ್ತೀಚೆಗೆ ತಮ್ಮ ವೃತ್ತಿಜೀವನದ ಮೊದಲ ಬ್ರೇಕ್ ಬಗ್ಗೆ ಮಾತನಾಡಿದ್ದಾರೆ. ಪ್ರೀ-ರಿಲೀಸ್ ಈವೆಂಟ್‌ಗಳಲ್ಲಿ ಎದುರಾದ ಕಹಿ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಕೆಲವು ಬಾರಿ ಪ್ರೀ-ರಿಲೀಸ್ ಈವೆಂಟ್‌ಗಳಲ್ಲಿ ಕಿಟಕಿಯಿಂದ ಜಿಗಿದು ಓಡಿಹೋಗಬೇಕಾಯಿತು ಎಂದು ಹೇಳಿದ್ದಾರೆ.

Read Full Story

05:46 PM (IST) Nov 09

ಕಾಂತಾರ ಚಾಪ್ಟರ್ 1 ಒಟ್ಟು ಕಲೆಕ್ಷನ್ ಎಷ್ಟು? ಈ ರಾಜ್ಯಗಳಲ್ಲಿ ರಿಷಬ್ ಶೆಟ್ಟಿ ಸಿನಿಮಾಗೆ ತುಂಬಾ ನಷ್ಟವಂತೆ?

ಭಾರೀ ನಿರೀಕ್ಷೆಯೊಂದಿಗೆ ವಿಶ್ವಾದ್ಯಂತ ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿದ್ದ ಕಾಂತಾರ ಚಾಪ್ಟರ್ 1 ಸಿನಿಮಾ. 1000 ಕೋಟಿ ಕಲೆಕ್ಷನ್ ಮಾಡಲು ವಿಫಲವಾದ ರಿಷಬ್ ಶೆಟ್ಟಿ ಸಿನಿಮಾ ಒಟ್ಟಾರೆಯಾಗಿ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ?

Read Full Story

05:32 PM (IST) Nov 09

ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ, ನವೆಂಬರ್‌ನಲ್ಲಿ ರಾಜಕೀಯ ಬದಲಾವಣೆ - ಸಂಸದ ಜಗದೀಶ್ ಶೆಟ್ಟರ್

ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಕಾಳಜಿಯಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಕಬ್ಬು ಬೆಳೆಗಾರರು ಹೋರಾಟದ ಹಾದಿ ತುಳಿಯುವಂತಾಯಿತು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಸರ್ಕಾರದ ವಿರುದ್ಧ ಹರಿಹಾಯ್ದರು.

Read Full Story

05:27 PM (IST) Nov 09

ಆರ್‌ಎಸ್‌ಎಸ್ ನಿಷೇಧ ಹೇಳಿಕೆ ಮೂರ್ಖತನದ್ದು - ಪ್ರಮೋದ್‌ ಮುತಾಲಿಕ್ ಆಕ್ರೋಶ

ಆರ್‌ಎಸ್‌ಎಸ್ ನಿಷೇಧ ಮಾಡುವುದು ಪ್ರಿಯಾಂಕ್ ಖರ್ಗೆ ಮತ್ತು ಅವರ ತಂದೆಯವರಿಂದ ಸಾಧ್ಯವಿಲ್ಲ. ಇದನ್ನು ನಿಷೇಧ ಮಾಡುವ ಹೇಳಿಕೆ ನೀಡುವುದು ಮೂರ್ಖತನ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

Read Full Story

05:00 PM (IST) Nov 09

ಡೆಲಿವರಿ ಆದ್ಮೇಲೆ ಮುಟ್ಟು ಆಗದಿದ್ರೂ ಗರ್ಭಿಣಿ ಆಗೋ ಸಾಧ್ಯತೆ ಇದೆ - ವೈದ್ಯೆ ಕೊಟ್ಟ ಸಲಹೆ, ಎಚ್ಚರಿಕೆ ಏನು?

ಹೆರಿಗೆಯ ನಂತರ ದೈಹಿಕ ಸಂಪರ್ಕ ಮತ್ತು ಮುಟ್ಟಿನ ಬಗ್ಗೆ ಮಹಿಳೆಯರಿಗಿರುವ ಗೊಂದಲಗಳಿಗೆ ಸ್ತ್ರೀರೋಗ ತಜ್ಞರು ಉತ್ತರಿಸಿದ್ದಾರೆ. ಎದೆಹಾಲುಣಿಸುವಾಗ ಮುಟ್ಟು ವಿಳಂಬವಾದರೂ, ಅಂಡೋತ್ಪತ್ತಿ ಸಂಭವಿಸಿ ಗರ್ಭಧರಿಸುವ ಸಾಧ್ಯತೆ ಇರುವುದರಿಂದ, ಸುರಕ್ಷತಾ ವಿಧಾನಗಳನ್ನು ಬಳಸುವುದು ಅತ್ಯಗತ್ಯ ಎಂದು  ಎಚ್ಚರಿಸಿದ್ದಾರೆ.

Read Full Story

04:54 PM (IST) Nov 09

ಒಂದು ದಿನ ಹೋರಾಟ ಮಾಡಿದರೆ ರೈತರ ಮಕ್ಕಳಾಗಲ್ಲ - ಶಾಸಕ ಬಸನಗೌಡ ಯತ್ನಾಳ

ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಮೋದಿ. ಕೇವಲ ಒಂದು ದಿನ ಮಲಗಿದರೆ ರೈತರ ಮಕ್ಕಳಾಗಲು ಸಾಧ್ಯವೇ? ರೈತರ ಮಕ್ಕಳಾಗಿದ್ದರೆ ದುಬೈನಲ್ಲಿ ಯಾಕೆ ಆಸ್ತಿ ಮಾಡಿದ್ದಾರೆ ಎಂದು ಶಾಸಕ ವಿಜಯಪುರ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Read Full Story

04:54 PM (IST) Nov 09

ರೈಲಿನಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ ಶಾಲಾ ಮಕ್ಕಳು - ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ

ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ಕುರಿತು ಕೇರಳ ಸರ್ಕಾರ ತನಿಖೆಗೆ ಆದೇಶಿಸಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. 

Read Full Story

04:46 PM (IST) Nov 09

ಏಯ್ ಕೂಡ್ರಿ, ಭಾಷಣದ ವೇಳೆ ಹೊರಟ ಜನರನ್ನು ಗದರಿಸಿ ಕೂರಿಸಿದ ಸಿಎಂ ಸಿದ್ದರಾಮಯ್ಯ

ಏಯ್ ಕೂಡ್ರಿ, ಭಾಷಣದ ವೇಳೆ ಹೊರಟ ಜನರನ್ನು ಗದರಿಸಿ ಕೂರಿಸಿದ ಸಿಎಂ ಸಿದ್ದರಾಮಯ್ಯ, ಕೂಡ್ಲಿಗೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಭಾಷಣದ ನಡುವೇ ಹೌದೋ, ಅಲ್ವೋ ಎಂಬ ಪ್ರಶ್ನೆಗೆ ಎಲ್ಲರೂ ಮೌನವಾಗಿ ಕುಳಿತಿದ್ದು ಸಿದ್ದರಾಮಯ್ಯ ಪಿತ್ತ ನೆತ್ತಿಗೇರುವಂತೆ ಮಾಡಿದೆ.

Read Full Story

04:12 PM (IST) Nov 09

ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಕೃಷಿಕ ಸಮಾಜ - ಸಚಿವ ಚಲುವರಾಯಸ್ವಾಮಿ

ಕೃಷಿಕ ಸಮಾಜವು ರಾಷ್ಟ್ರ ಮಟ್ಟದಲ್ಲಿ ಎಲ್ಲ ರಾಜ್ಯದಲ್ಲಿಯೂ ಒಳಗೊಂಡಿದೆ. ರಾಜ್ಯದಲ್ಲಿ ಸರ್ಕಾರದೊಂದಿಗೆ ಸದಾ ಸಂಪರ್ಕದಲ್ಲಿದ್ದುಕೊಂಡು ಅತ್ಯಂತ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

Read Full Story

04:09 PM (IST) Nov 09

ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆ ಹಿಂದು ರಾಷ್ಟ್ರ ಆಗಲಿದೆ, ಮೋಹನ್ ಭಾಗವತ್

ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆ ಹಿಂದು ರಾಷ್ಟ್ರ ಆಗಲಿದೆ, ಮೋಹನ್ ಭಾಗವತ್, ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್ ಹಿಂದೂ ರಾಷ್ಟ್ರ ಪರಿಕಲ್ಪನೆ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

Read Full Story

03:52 PM (IST) Nov 09

ಪಶ್ಚಿಮ ಬಂಗಾಳದಲ್ಲಿ ಪೈಶಾಚಿಕ ಕೃತ್ಯ - ಅಜ್ಜಿ ಪಕ್ಕ ಮಲಗಿದ್ದ 4 ವರ್ಷದ ಕಂದನ ಅಪಹರಿಸಿ ಅತ್ಯಾ*ಚಾರ

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಭಯಾನಕ ಘಟನೆ ನಡೆದಿದೆ. ಅಜ್ಜಿಯ ಪಕ್ಕ ಮಲಗಿದ್ದ 4 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾ*ಚಾರವೆಸಗಲಾಗಿದೆ. ಸೊಳ್ಳೆ ಪರದೆ ಕತ್ತರಿಸಿ ಕೃತ್ಯ ಎಸಗಿದ್ದು, ಮಗು ಚರಂಡಿಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ.

Read Full Story

03:51 PM (IST) Nov 09

Mahanati Grand Finale - 15 ಲಕ್ಷ ರೂ. ಬೆಲೆಬಾಳುವ ಕಿರೀಟ ಇಂದು ಈ ನಟಿಯ ಮುಡಿ ಏರಲಿದೆ!

20 ವಾರಗಳ ನಂತರ 'ಮಹಾನಟಿ ಸೀಸನ್-2' ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದು, ಐವರು ಫೈನಲಿಸ್ಟ್‌ಗಳಾದ ಮಾನ್ಯ, ವರ್ಷಾ, ವಂಶಿ, ಶ್ರೀಯ, ಮತ್ತು ಭೂಮಿಕಾ ನಡುವೆ ತೀವ್ರ ಪೈಪೋಟಿ ಇದೆ.  15 ಲಕ್ಷ ಮೌಲ್ಯದ ಕಿರೀಟವನ್ನು ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ.

Read Full Story

03:46 PM (IST) Nov 09

ಕೂಡ್ಲಿಗೆ ಕಾರ್ಯಕ್ರಮದಲ್ಲಿ ಅಕ್ಕ ಪಕ್ಕ ಕುಳಿತರೂ ಮಾತಿಲ್ಲ, ಮುನಿಸಿಕೊಂಡ್ರಾ ಸಿಎಂ-ಡಿಸಿಎಂ?

ಕೂಡ್ಲಿಗೆ ಕಾರ್ಯಕ್ರಮದಲ್ಲಿ ಅಕ್ಕ ಪಕ್ಕ ಕುಳಿತರೂ ಮಾತಿಲ್ಲ, ಮುನಿಸಿಕೊಂಡ್ರಾ ಸಿಎಂ-ಡಿಸಿಎಂ? ಡಿಕೆ ಶಿವಕುಮಾರ್ ತಡವಾಗಿ ವೇದಿಕೆಗೆ ಆಗಮಿಸಿ ಅಕ್ಕ ಪಕ್ಕದಲ್ಲಿ ಕುಳಿತರೂ ಮಾತಿಲ್ಲ ಕತೆಯಿಲ್ಲ. ಅಧಿಕಾರ ಹಂಚಿಕೆ ಮುಸುಕಿನ ಗುದ್ದಾಟದಲ್ಲಿ ಮುನಿಸಿಕೊಂಡ್ರಾ?

Read Full Story

03:40 PM (IST) Nov 09

ನಾನ್‌ ಮದುವೆ ಆಗಲ್ಲ, ಏನ್‌ ಮಾಡ್ತೀರಾ? ; ಏಕಾಏಕಿ Bhargavi LLB Serial ಹೀರೋ ಸಿಟ್ಟಾಗಿದ್ದೇಕೆ?

Bhargavi LLB Serial Hero- Actor Manoj Kumar: ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಅರ್ಜುನ್‌ ಪಾತ್ರಧಾರಿ ಮನೋಜ್‌ ಕುಮಾರ್‌ ಅವರು ಏಕಾಏಕಿ ವಿಡಿಯೋ ಮಾಡಿ, “ನಾನು ಮದುವೆ ಆಗಲ್ಲ, ಏನ್‌ ಮಾಡ್ತೀರಾ?” ಎಂದು ಕಿಡಿಕಾರಿದ್ದಾರೆ. ಅವರು ಈ ರೀತಿ ಮಾಡೋದಿಕ್ಕೂ ಕಾರಣ ಇದೆಯಂತೆ.

Read Full Story

03:08 PM (IST) Nov 09

Photos - ತಂದೆ-ತಾಯಿ ಆಸೆಯಂತೆ ನಿಶ್ಚಿತಾರ್ಥ ಮಾಡ್ಕೊಂಡ BBK 11 ಸ್ಪರ್ಧಿ ಉಗ್ರಂ ಮಂಜು!

Ugramm Manju And Sandhya Engagement Photos: ವಯಸ್ಸಾಗ್ತಿದೆ, ಮಗನ ಹವ್ಯಾಸ ಬದಲಾಗಬೇಕು, ಮದುವೆ ಆಗಬೇಕು ಎಂದು ಉಗ್ರಂ ಮಂಜು ಅವರ ತಂದೆ-ತಾಯಿ ಬಿಗ್‌ ಬಾಸ್‌ ವೇದಿಕೆಯಲ್ಲಿ ಕಣ್ಣೀರು ಹಾಕಿ ಹೇಳಿದ್ದರು. ಬಿಗ್‌ ಬಾಸ್‌ ಶೋ ಮುಗಿದು ವರ್ಷವಾಯ್ತು, ಈಗ ಉಗ್ರಂ ಮಂಜು ಬದುಕಿಗೆ ಸಂಗಾತಿಯ ಆಗಮನವಾಗಿದೆ.

 

Read Full Story

02:50 PM (IST) Nov 09

ಕಿಚ್ಚನ ಪಂಚಾಯಿತಿ ಮಧ್ಯೆ ಸುದೀಪ್‌ಗೂ ಹೇಳದೆ, ಏಕಾಏಕಿ Bigg Boss ಶೋನಿಂದ ಹೊರಬಿದ್ದ ಚಂದ್ರಪ್ರಭ!

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಿಚ್ಚ ಸುದೀಪ್‌ ಅವರ ಪಂಚಾಯಿತಿ ನಡೆಯುತ್ತಿತ್ತು. ಚಂದ್ರಪ್ರಭ ಅವರಿಗೆ ಬೇಸರವಾಗಿ ಯಾರಿಗೂ ಹೇಳದೆ, ಏಕಾಏಕಿ ಮನೆಯಿಂದ ಹೊರಬಂದಿದ್ದಾರೆ. ಸದ್ಯ ವಾಹಿನಿಯು ಪ್ರೋಮೋ ರಿಲೀಸ್‌ ಆಗಿದೆ. ಹಾಗಾದರೆ ಏನಾಯ್ತು?

Read Full Story

02:10 PM (IST) Nov 09

ಬೆಂಗಳೂರು - ಆನೇಕಲ್ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರ ದಾರುಣ ಸಾವು!

boys drown in bangalore lake: ಬೆಂಗಳೂರು ಹೊರವಲಯದ ಅತ್ತಿಬೆಲೆ ಸಮೀಪದ ಬಳ್ಳೂರು ಗ್ರಾಮದ ಕೆರೆಯಲ್ಲಿ ಆಟವಾಡಲು ತೆರಳಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕರ ಮಕ್ಕಳಾದ ಅನಿಕೇತ್ ಕುಮಾರ್ (12) ಮತ್ತು ರೆಹಮಾತ್ ಬಾಬಾ (11) ಮೃತ ಮಕ್ಕಳು.

Read Full Story

01:40 PM (IST) Nov 09

ಕಬ್ಬಿನ ದರ ಸಮರ - ಕೇಂದ್ರದ ಎಫ್‌ಆರ್‌ಪಿಗಿಂತ ₹ 700 ಕೊಡ್ಸಿದ್ದೇವೆ -ಎಂಬಿ ಪಾಟೀಲ್

ಕಬ್ಬಿನ ದರ ನಿಗದಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರವೇ ಮೂಲ ಸಮಸ್ಯೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ರಾಜ್ಯ ಸರ್ಕಾರವು ಎಫ್‌ಆರ್‌ಪಿಗಿಂತ 700 ರೂ. ಹೆಚ್ಚು ನೀಡುತ್ತಿದ್ದು, ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ  ರೈತರನ್ನು ಎತ್ತಿಕಟ್ಟುತ್ತಿದೆ ಎಂದು ಆರೋಪಿಸಿದ್ದಾರೆ.

Read Full Story

01:38 PM (IST) Nov 09

ನಾಳೆ ಹೂಡಿಕೆ ಡಬಲ್ ಎಂದು ಬಂಗಾರ ಖರೀದಿಸ್ತೀರಾ? ಈ ಸತ್ಯ ತಿಳಿದುಕೊಂಡಿಲ್ಲ ಅಂದ್ರೆ ಅಪಾಯ ತಪ್ಪಿದ್ದಲ್ಲ!

ಬಂಗಾರದ ದರ ಹೆಚ್ಚಾಗುತ್ತಲೇ ಇದೆ. ಆಗೊಮ್ಮೆ ಈಗೊಮ್ಮೆ ಬಂಗಾರದ ದರ ಸ್ವಲ್ಪ ಕಡಿಮೆಯಾದರೂ ಕೂಡ, ಸಾಮಾನ್ಯ ಜನರಿಗೆ ಬಂಗಾರ ಖರೀದಿಸೋದು ಸುಲಭವಿಲ್ಲ. ಈಗ ಬಂಗಾರವನ್ನು ಖರೀದಿ ಮಾಡುವಾಗ ಒಂದಿಷ್ಟು ವಿಷಯದಲ್ಲಿ ಹುಷಾರು ಆಗಿರಬೇಕು.

Read Full Story

01:08 PM (IST) Nov 09

Shravani Subramanya - ಇಡೀ ರಾಜ್ಯವೇ ಬೆಚ್ಚಿಬೀಳೋ ಬ್ರೇಕಿಂಗ್​ ನ್ಯೂಸ್​- ರಾಜಕಾರಣಿ ಮಗನಿಂದ ಆಕೆಗೆ...

'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ, ರಾಜಕಾರಣಿ ಪುತ್ರ ಮದನ್‌ನಿಂದ ಮೋಸ ಹೋದ ಕೆಲಸದಾಕೆ ಸಾವಿತ್ರಿಗೆ ಶ್ರಾವಣಿ ನ್ಯಾಯ ಒದಗಿಸಿದ್ದಾಳೆ. ಮದನ್‌ನ ಕುತಂತ್ರವನ್ನು ರೆಕಾರ್ಡ್ ಮಾಡಿ, ಅದನ್ನು ಬಳಸಿ ಸಾವಿತ್ರಿಯೊಂದಿಗೆ ಅವನ ಮದುವೆ ಮಾಡಿಸುವಲ್ಲಿ ಶ್ರಾವಣಿ ಯಶಸ್ವಿಯಾಗುತ್ತಾಳೆ.
Read Full Story

12:56 PM (IST) Nov 09

Pocso - ಯೋಗಗುರು ನಿರಂಜನ್ ಮೂರ್ತಿಯ ಮತ್ತಷ್ಟು ಕಾಮಕಾಂಡ ಬಯಲು, ಚಾರ್ಜ್‌ಶೀಟ್ ಸಲ್ಲಿಕೆ

ಯೋಗ ವಿದ್ಯಾರ್ಥಿನಿ ಮೇಲೆ ಅತ್ಯಾ೧ಚಾರ ಎಸಗಿದ ಆರೋಪದ ಮೇಲೆ ಯೋಗಗುರು ನಿರಂಜನ್ ಮೂರ್ತಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ತನಿಖೆಯ ವೇಳೆ, ಇತರೆ ಹಲವು ಮಹಿಳೆಯರ ಮೇಲೂ ಬಲತ್ಕಾರ. ಆದರೆ ದೂರು ನೀಡಲು ಮುಂದೆ ಬಾರದ ಕಾರಣ, ವಿದ್ಯಾರ್ಥಿನಿಯ ದೂರಿನ ಆಧಾರದ ಮೇಲೆ ತನಿಖೆ ಪೂರ್ಣ

Read Full Story

12:55 PM (IST) Nov 09

BBK 12 - ಇಬ್ಬರ ಜಗಳ ಮೂರನೇಯವರಿಗೆ ಲಾಭ; ಲಾಟರಿ ಹೊಡೆದ ರಕ್ಷಿತಾ ಶೆಟ್ಟಿ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ತಪ್ಪು ಮಾಡಿದ ಕಾಕ್ರೋಚ್‌ ಸುಧಿ ಅವರಿಗೆ ಕಿಚ್ಚ ಸುದೀಪ್‌ ಒಂದು ಅಪರೂಪದ ಶಿಕ್ಷೆ ಕೊಟ್ಟಿದ್ದಾರೆ. ಅವರ ಬಳಿಯಿರುವ ಇಮ್ಯುನಿಟಿ ಪವರ್‌ಗೆ ಈಗ ಕುತ್ತು ಬರುವ ಟೈಮ್‌ ಬಂದಿದೆ. ಹಾಗಾದರೆ ಮುಂದೆ ಏನಾಗುವುದು? ಏನು ಸಮಸ್ಯೆ ಆಗುತ್ತದೆ ಎಂದು ಕಾದು ನೋಡಬೇಕಿದೆ. 

Read Full Story

12:47 PM (IST) Nov 09

ಪರಪ್ಪನ ಅಗ್ರಹಾರ ಜೈಲನ್ನು ಬೆಂಗಳೂರಿನ ಪ್ರಸಿದ್ಧ ಬಾರ್‌ & ರೆಸ್ಟೋರೆಂಟ್‌ ಮಾಡಿದ ಕಾರಾಗೃಹ ಅಧಿಕಾರಿಗಳು!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳು ಮೊಬೈಲ್, ಮದ್ಯ ಬಳಸಿ ಬಿಂದಾಸ್ ಜೀವನ ನಡೆಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದರೂ ಏನೂ ಪತ್ತೆಯಾಗದ ಕಾರಣ, ಆಂತರಿಕ ತನಿಖೆಗೆ ಆದೇಶಿಸಲಾಗಿದ್ದು, ಎನ್‌ಐಎ ಮತ್ತು ಡಿಆರ್‌ಐ ತನಿಖೆಯ ಸಾಧ್ಯತೆಯೂ ಇದೆ.
Read Full Story

12:12 PM (IST) Nov 09

Bhargavi LL.B 2.0 - ಸತ್ತ ಸಂಧ್ಯಾಳ ಫೋನ್​ ಸ್ವಿಚ್​ ಆನ್​ - ಮದುವೆ ಮನೆಯಲ್ಲಿ ಯಾರೂ ಊಹಿಸದ ತಿರುವು!

ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್​ಬಿ' ಧಾರಾವಾಹಿಯಲ್ಲಿ, ಲಾಯರ್ ಭಾರ್ಗವಿ ತನ್ನ ಮಾವ ಜೆಪಿ ಪಾಟೀಲ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿದ್ದಾಳೆ. ಸಂಧ್ಯಾ ಸಾವಿನ ರಹಸ್ಯ ಭೇದಿಸುವಾಗ ಸಿಕ್ಕ ಪ್ರಮುಖ ಸುಳಿವಿನ ಆಧಾರದ ಮೇಲೆ, ಮದುವೆ ಮನೆಗೆ ಪೊಲೀಸರೊಂದಿಗೆ ಎಂಟ್ರಿ ಕೊಟ್ಟು ಮಾವನಿಗೆ ಶಾಕ್ ನೀಡಿದ್ದಾಳೆ.

Read Full Story

12:09 PM (IST) Nov 09

ಕಟೀಲು ದೇವಳಕ್ಕೆ ಬಂದರೆ ನನ್ನ ಮನೆಗೆ ಬಂದ ಅನುಭವ - ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಅವರು ಕಟೀಲು ದೇವಸ್ಥಾನದ ನುಡಿಹಬ್ಬದಲ್ಲಿ ಪಾಲ್ಗೊಂಡು, ಯಕ್ಷಗಾನ ಮತ್ತು ಶಿಕ್ಷಣ ಕ್ಷೇತ್ರಕ್ಕೆ ದೇವಳ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು. ಇದೇ ವೇಳೆ ಬಾಲ್ಯದಲ್ಲ ನೆನಪುಗಳನ್ನು ಹಂಚಿಕೊಂಡರು.

Read Full Story

11:54 AM (IST) Nov 09

ಆನೇಕಲ್‌ - ಡಬಲ್‌ ಮರ್ಡರ್‌ ಆರೋಪಿಯ ಕಾಲಿಗೆ ಗುಂಡು ಹಾಕಿದ ಕರ್ನಾಟಕ ಪೊಲೀಸ್‌!

ಆನೇಕಲ್‌ನಲ್ಲಿ ಉದ್ಯಮಿ ಸೇರಿದಂತೆ ಇಬ್ಬರನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ರವಿ ಪ್ರಸಾದ್ ರೆಡ್ಡಿ ಎಂಬಾತನೇ ಈ ಕೃತ್ಯ ಎಸಗಿದ್ದು, ಬಂಧನದ ವೇಳೆ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.
Read Full Story

11:44 AM (IST) Nov 09

Bigg Boss ಇತಿಹಾಸದಲ್ಲಿಯೇ ಮೂರು ದಾಖಲೆ ಬರೆದ ಮಲ್ಲಮ್ಮ! ಇಂಟರೆಸ್ಟಿಂಗ್​ ವಿಷಯ ತಿಳಿಸಿದ ಕಿಚ್ಚ ಸುದೀಪ್​ ​

ಬಿಗ್​ಬಾಸ್​ ಮನೆಯಲ್ಲಿ ಕೆಲವೇ ದಿನಗಳಿದ್ದರೂ, ಮಲ್ಲಮ್ಮ ತಮ್ಮ ಮೌನ ಮತ್ತು ಪ್ರೀತಿಯ ವ್ಯಕ್ತಿತ್ವದಿಂದ ಅಪಾರ ಜನಪ್ರീതി ಗಳಿಸಿದರು. ಮನೆಯಿಂದ ಹೊರಬಂದಾಗ, ಕಿಚ್ಚ ಸುದೀಪ್ ಅವರು ಬಿಗ್​ಬಾಸ್ ಇತಿಹಾಸದಲ್ಲಿ ಮಲ್ಲಮ್ಮ ಸೃಷ್ಟಿಸಿದ ಮೂರು ವಿಶಿಷ್ಟ ದಾಖಲೆಗಳನ್ನು ಬಹಿರಂಗಪಡಿಸಿದರು.  

Read Full Story

11:38 AM (IST) Nov 09

ದಾವಣಗೆರೆ - 40 ವರ್ಷಗಳಿಂದ ಬಸ್ ಕಾಣದ ಊರಿಗೆ ಸ್ವತಃ ಬಸ್ ಚಲಾಯಿಸಿಕೊಂಡು ಬಂದ ಶಾಸಕ!

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು 40 ವರ್ಷಗಳಿಂದ ಬಸ್ ಸೌಲಭ್ಯವಿಲ್ಲದ ವಡೇರಹಳ್ಳಿ ಮತ್ತು ಕಳವೂರು ಗ್ರಾಮಗಳಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಸ್ವತಃ ತಾವೇ ಬಸ್ ಚಲಾಯಿಸಿಕೊಂಡು ಬರುವ ಮೂಲಕ ಈ ಸೇವೆಗೆ ಚಾಲನೆ ನೀಡಿದ್ದು, ಇದು ಗ್ರಾಮಸ್ಥರು ಮತ್ತು ಶಾಲಾ ಮಕ್ಕಳಿಗೆ ಅನುಕೂಲ ಕಲ್ಪಿಸಿದೆ.
Read Full Story

More Trending News