ಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಹೇಳಿಕೆ ನೀಡಿರುವ ಶಾಸಕ ಯತಿಂದ್ರ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ಯಾವುದೇ ನೋಟಿಸ್ ನೀಡದೇ ಇರುವುದು ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂದು ಮಾಧ್ಯಮಗಳ ಅಭಿಪ್ರಾಯವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ಮಂಡ್ಯ ಶಾಸಕ ರವಿ ಗಣಿಗ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯತೀಂದ್ರ ಸಿದ್ದರಾಮಯ್ಯ ಏನು ಹೇಳಿದ್ದಾರೋ ಗೊತ್ತಿಲ್ಲ. ಆಲ್ ದಿ ಬೆಸ್ಟ್ ಟು ಯತೀಂದ್ರ ಸಿದ್ದರಾಮಯ್ಯ ಎಂದರು.
ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಇಬ್ಬರೂ ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ಸಚಿವನಾಗುವುದಿಲ್ಲ ಎಂದು ಕೆ.ಎನ್. ರಾಜಣ್ಣ ಹೇಳಿದ್ದಾರೆ. ಹಾಗಾದರೆ ಮುಖ್ಯಮಂತ್ರಿ ಆಗುತ್ತಾರೆ ಎಂದಲ್ಲವೇ? ಎಂದು ಪ್ರಶ್ನಿಸಿದರು.
10:54 PM (IST) Dec 09
ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು , ಕಳೆದ ವರ್ಷ ರಾಮನಗರದಲ್ಲಿ ಸೆರೆ ಹಿಡಿದ್ದ ಆನೆಯನ್ನು ದುಬಾರಿ ಶಿಬಿರದಲ್ಲಿ ಪಳಗಿಸಲಾಗಿತ್ತು. ಇದೀಗ ಆನೆ ಮೃತಪಟ್ಟಿದೆ.
10:07 PM (IST) Dec 09
ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಅಭಿಷೇಕ್ ಶ್ರೀಕಾಂತ್, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ರಘು ಮತ್ತು ಗಿಲ್ಲಿ ನಟರ ಚಪಾತಿ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗಿಲ್ಲಿ ನಟನ ಈ ವರ್ತನೆ ಇದಕ್ಕೆ ಕಾರಣ ಎಂದಿದ್ದಾರೆ. ಅವರು ಹೇಳಿದ್ದೇನು?
09:42 PM (IST) Dec 09
ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿ ಮಾಳು ನಿಪನಾಳ ಅವರಿಗೆ ರಕ್ಷಿತಾ ಶೆಟ್ಟಿ ತಲೆ ಮಸಾಜ್ ಮಾಡಿಸಿಕೊಂಡಿದ್ದಾರೆ. ಈ ವೇಳೆ, ಹೆಂಡತಿಯನ್ನು ಹೇಗೆ ಖುಷಿಯಾಗಿಡಬೇಕು ಎಂಬುದರ ಬಗ್ಗೆ ಮಾಳುಗೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.
09:14 PM (IST) Dec 09
'ಅಮೃತಧಾರೆ' ಧಾರಾವಾಹಿಯಲ್ಲಿ ಜೈದೇವ್ ಆಸ್ತಿ ಕಬಳಿಸಲು ಹೊಸ ಪ್ಲ್ಯಾನ್ ಮಾಡಿದ್ದಾನೆ. ಗೌತಮ್-ಭೂಮಿಕಾರನ್ನು ಒಂದು ಮಾಡಲು ಬಂದ ಲವ್ ಅಜ್ಜಿಗೆ ನಿದ್ದೆ ಮಾತ್ರೆ ನೀಡಿ, ಆಕೆಯ ಸಂಪೂರ್ಣ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಇದು ಅಜ್ಜಿಯ ನಾಟಕವೇ ಅಥವಾ ಜೈದೇವನ ಕುತಂತ್ರವೆ?
08:22 PM (IST) Dec 09
ಹೊಸ ಕಾರಲ್ಲ, ಸರ್ಕಾರ ಕೆಲಸಕ್ಕೆ ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆದಿದೆ. ಟೆಂಡರ್ ಕುರಿತು ಚರ್ಚೆ ನಡೆದಿದೆ. ಸುವರ್ಣಸೌಧದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ಈ ನಿರ್ಧಾರ ಪರ ವಿರೋಧಕ್ಕೆ ಕಾರಣವಾಗಿದೆ.
07:18 PM (IST) Dec 09
ಕರ್ನಾಟಕದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸುಮಾರು 2.84 ಲಕ್ಷ ಹುದ್ದೆಗಳು ಖಾಲಿಯಿದ್ದು, ಆರ್ಥಿಕ ಇಲಾಖೆಯು ಕೇವಲ 24,300 ಹುದ್ದೆಗಳ ಭರ್ತಿಗೆ ಅನುಮತಿ ನೀಡಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರವಾಗಿ ಟೀಕಿಸಿದ್ದು, ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಆಗ್ರಹಿಸಿದ್ದಾರೆ.
06:30 PM (IST) Dec 09
05:40 PM (IST) Dec 09
ಕಾರವಾರ ತಾಲೂಕಿನ ಮುಡಗೇರಿ ಅರಣ್ಯ ಪ್ರದೇಶದ ಮೂಲಕ ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಮದ್ಯ ಮತ್ತು ವಾಹನವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದೆ.
05:21 PM (IST) Dec 09
ಕನ್ನಡ ಸೀರಿಯಲ್ಗಳಲ್ಲಿ ಜ್ಯೋತಿಷಿಗಳನ್ನು ವಂಚಕರಂತೆ ಚಿತ್ರಿಸಲಾಗುತ್ತಿದೆ. ಕರ್ಣ ಸೀರಿಯಲ್ನಲ್ಲಿ, ವಿಲನ್ ರಮೇಶ್ ಜ್ಯೋತಿಷಿಗೆ ಲಂಚ ನೀಡಿ, ಕರ್ಣ ಮತ್ತು ನಿತ್ಯಾಳ ಮದುವೆಯನ್ನು ಬಲವಂತವಾಗಿ ಮಾಡಲು ಸುಳ್ಳು ಶಾಸ್ತ್ರ ಹೇಳಿಸುತ್ತಾನೆ. ಈ ಕುರಿತು ವೀಕ್ಷಕರು ಭಾರಿ ಅಸಮಾಧಾನ ಹೊರಹಾಕಿದ್ದಾರೆ.
04:19 PM (IST) Dec 09
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೋಮನಹಳ್ಳಿ ಉಪಕೇಂದ್ರ ವ್ಯಾಪ್ತಿಯ ಐಬೆಕ್ಸ್ ಫ್ಯಾಕ್ಟರಿ, ರಾವುಗೋಡ್ಲು, ಕಗ್ಗಲೀಪುರ ಸೇರಿ ಹಲವೆಡೆ ಬುಧವಾರ ವಿದ್ಯುತ್ ಕಡಿತವಾಗಲಿದೆ.
04:15 PM (IST) Dec 09
03:55 PM (IST) Dec 09
ಡ್ರೈವರ್ ಮಂಜು ಮತ್ತು ಲೀಲಾ ಅವರ ವಿವಾದಾತ್ಮಕ ಕೌಟುಂಬಿಕ ಗೊಂದಲ ಸುಖಾಂತ್ಯ ಕಂಡಿದೆ. ಕೋರ್ಟ್ ಮೆಟ್ಟಿಲೇರಿದ ಬಳಿಕ ದಂಪತಿ ಮಕ್ಕಳಿಗಾಗಿ ಮತ್ತೆ ಒಂದಾಗಲು ನಿರ್ಧರಿಸಿದ್ದು, ಪ್ರೇಮಿ ಸಂತು ಕೂಡ ಇದಕ್ಕೆ ಸಮ್ಮತಿ ನೀಡಿದ್ದಾನೆ ಎನ್ನಲಾಗುತ್ತಿದೆ. ಇಲ್ಲಿದೆ ಕೊನೆಯ ವಿಡಿಯೋ..
03:52 PM (IST) Dec 09
Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಕಾಮಿಡಿ ಮಾಡೋದು ಒಳಗಡೆ ಇದ್ದವರಿಗೆ ಬೇಸರ ತಂದರೆ, ಹೊರಗಡೆ ವೀಕ್ಷಕರಿಗೆ ಭರ್ಜರಿ ಖುಷಿ ಕೊಟ್ಟಿದೆ. ಈ ಕಾರಣಕ್ಕೆ ಇರಬಹುದು, ಈ ಬಾರಿ TRP ಹೆಚ್ಚಾಗಿ, ಚಾನೆಲ್ ಕೂಡ ನಂ 1 ಆಗಿದೆ.
03:37 PM (IST) Dec 09
ತುಳುನಾಡ ದೈವಾರಾಧಕ ತಮ್ಮಣ್ಣ ಶೆಟ್ಟಿ ಅವರು, ರಿಷಬ್ ಶೆಟ್ಟಿ ಮತ್ತು ವಿಜಯ್ ಕಿರಗಂದೂರು 'ಕಾಂತಾರ' ಚಿತ್ರದ ಮೂಲಕ ದೈವಾರಾಧನೆಯನ್ನು ವ್ಯಾಪಾರೀಕರಣ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
03:18 PM (IST) Dec 09
Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ರಘು ಬಗ್ಗೆ ಗಿಲ್ಲಿ ನಟ ಮಾತನಾಡಿರೋದು ಬೇಸರ ತಂದಿದೆಯಂತೆ. ಕಾವ್ಯ ಶೈವ ಬಗ್ಗೆ ಮಾತಾಡೋದು, ಕಾವು ಕಾವು ಎನ್ನೋದು ಕೂಡ ಇಷ್ಟ ಆಗ್ತಿಲ್ಲವಂತೆ. ಈ ವಿಚಾರವಾಗಿ ಚರ್ಚೆ ನಡೆದಿದೆ.
02:45 PM (IST) Dec 09
Bigg Boss Kannada Season 12 Show Episode: ಜಗಳ ಇಲ್ಲದೆ ಬಿಗ್ ಬಾಸ್ ಶೋ ಇಲ್ಲ ಎಂದು ಕಾಣುತ್ತದೆ. ಈ ಬಾರಿ ಕೂಡ ಕನ್ನಡ ಬಿಗ್ ಬಾಸ್ ಶೋನಲ್ಲಿ ಕೂಡ ಜಗಳ ತಾಂಡವವಾಡುತ್ತಿದೆ. ಕಳೆದ ಒಂದು ವಾರದಿಂದ ಶಾಂತಿ ನಿವಾಸದ ಥರ, ಸೈಲೆಂಟ್ ಆಗಿದ್ದ ಅಶ್ವಿನಿ ಈಗ ಕೆರಳಿದ್ದಾರೆ.
02:22 PM (IST) Dec 09
01:57 PM (IST) Dec 09
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ರಿಲೀಸ್ಗೂ ಮುನ್ನವೇ ಅಂದಾಜು 3.5 ಕೋಟಿ ರು.ಗೂ ಅಧಿಕ ಸಂಗ್ರಹ ಮಾಡಿದೆ. ಈ ಸಿನಿಮಾ ನಿರ್ಮಾಣ ಸಂಸ್ಥೆ ಜೈ ಮಾತಾ ಮಾತಾ ಕಂಬೈನ್ಸ್ ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿದೆ.
01:32 PM (IST) Dec 09
Landlord Movie Release: ನಟ ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ 'ಲ್ಯಾಂಡ್ ಲಾರ್ಡ್' ಸಿನಿಮಾದ ಸರ್ವೈವರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಜಡೇಶ್ ಕೆ ಹಂಪಿ ನಿರ್ದೇಶನದ ‘ದಿ ರೂಲರ್’ ಟೀಸರ್ ಬಿಡುಗಡೆಯಾಗಿದೆ. ‘ದಿ ರೂಲರ್’ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದಾರೆ.
01:28 PM (IST) Dec 09
ಯಂಗ್ ಟೈಗರ್ ಜೂ.ಎನ್ಟಿಆರ್ ಇತ್ತೀಚೆಗೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳ ಪಾಲಿಗೆ ಶಾಪವಾಗುತ್ತಿರುವುದು ಗೊತ್ತೇ ಇದೆ. ಅಸಲಿಗೆ ಏನಾಯಿತು ಅಂತ ಈ ಸ್ಟೋರಿನಲ್ಲಿ ತಿಳಿಯಿರಿ.
01:23 PM (IST) Dec 09
01:22 PM (IST) Dec 09
ಬಿಗ್ ಬಾಸ್ 12ರ ಸ್ಪರ್ಧಿ ಡಾಗ್ ಸತೀಶ್, ಮನೆಯಲ್ಲಿದ್ದಾಗ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ರಾತ್ರಿ ಲೈಟ್ ಆಫ್ ಆದ ಮೇಲೆ ನಡೆಯುತ್ತಿದ್ದ ಘಟನೆಗಳಿಂದ ನಿದ್ದೆಗೆಟ್ಟು, ಇನ್ನೊಂದು ವಾರ ಇದ್ದಿದ್ದರೆ ಸತ್ತೇ ಹೋಗುತ್ತಿದ್ದೆ ಎಂದು ಅವರು ಹೇಳಿದ್ದಾರೆ.
01:08 PM (IST) Dec 09
01:03 PM (IST) Dec 09
12:39 PM (IST) Dec 09
R Ashwin Sunny Leone Post Decoded The IPL Link to Uncapped All-rounder Sunny Sandhu ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಆರ್.ಅಶ್ವಿನ್, ಬಾಲಿವುಡ್ ನಟಿ ಸನ್ನಿ ಲಿಯೋನ್ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿದ್ದರು.
12:38 PM (IST) Dec 09
ಸಿದ್ದರಾಮಯ್ಯನವರೇ ಅಹಿಂದ'ದ ಕಿಂಗ್ ಆಗಿರುವಾಗ, ಸತೀಶ್ ಜಾರಕಿಹೊಳಿ ಪರ ಬಿ.ಕೆ. ಹರಿಪ್ರಸಾದ್ ಹೇಳಿಕೆ ನೀಡಿದ್ದೇಕೆ? ಇದಕ್ಕೆ ಸಚಿವ ಬೈರತಿ ಸುರೇಶ್ ಅವರ ಸ್ಪಷ್ಟ ಮತ್ತು ಖಡಕ್ ಪ್ರತಿಕ್ರಿಯೆ ಇಲ್ಲಿದೆ.
12:27 PM (IST) Dec 09
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಎಲ್ಲರನ್ನು ನಗಿಸುತ್ತಿರುವ ಗಿಲ್ಲಿ ನಟನಿಗೆ ಹಾವು, ವಿಷಕಾರಿ ಎಂಬೆಲ್ಲ ಪಟ್ಟಗಳು ಸಿಕ್ಕಿವೆ. ಈ ಬಗ್ಗೆ ಖಾಸಗಿ ಕಂಪೆನಿ HR ಮಾಡಿದ ವಿಮರ್ಶೆ ಹೀಗಿದೆ.
12:17 PM (IST) Dec 09
ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ವೇತನ ಸಹಿತ ರಜೆ ನೀಡುವ ರಾಜ್ಯ ಸರ್ಕಾರದ ನವೆಂಬರ್ 20ರ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದೇಶಕ್ಕೆ ಮುನ್ನ ಸಂಘಟನೆಗಳ ಅಭಿಪ್ರಾಯ ಪಡೆಯದಿರುವ ಬಗ್ಗೆ ಕೋರ್ಟ್ ಪ್ರಶ್ನಿಸಿದೆ.
12:14 PM (IST) Dec 09
ಬಿಗ್ಬಾಸ್ ಮನೆಯಲ್ಲಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ಲವ್ಸ್ಟೋರಿ ಸದ್ದು ಮಾಡುತ್ತಿರುವಾಗಲೇ, ರಾಶಿಕಾ ಇದೀಗ ರಜತ್ ಜೊತೆ ರೊಮ್ಯಾಂಟಿಕ್ ಡಾನ್ಸ್ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಧ್ರುವಂತ್ ಅವರ ರಿಯಾಕ್ಷನ್ ಕೂಡ ಗಮನ ಸೆಳೆದಿದೆ.
11:50 AM (IST) Dec 09
Bigg Boss Kannada Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಗ್ಗೆ HR ಆಗಿ ಕೆಲಸ ಮಾಡುತ್ತಿರುವ ಸಂಕೇತ್ ಮೇಘರವಳ್ಳಿ ಅವರು ಬರೆದ ಬರೆಹ ಹೀಗಿದೆ. ರಕ್ಷಿತಾ ಶೆಟ್ಟಿಯ ಗುಣವನ್ನು ಅವರು ಇಲ್ಲಿ ಎಚ್ಆರ್ ದೃಷ್ಟಿಯಿಂದ ಅಳೆದು ತೂಗಿದ್ದಾರೆ.
11:36 AM (IST) Dec 09
ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 1.4 ಕೋಟಿ ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಆದರೆ, ವೀಕ್ಷಣೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದ್ದು, ಇದು ನಿಜವಾದ ವೀಕ್ಷಣೆಗಳೇ ಎಂಬ ಚರ್ಚೆ ನಡೆಯುತ್ತಿದೆ. ಯಾಕಿಷ್ಟು ಚರ್ಚೆ?
11:33 AM (IST) Dec 09
ನಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ನಾವು ಯಾವುದೇ ಪೋಸ್ಟ್ ಮಾಡಲ್ಲ. ಅದಕ್ಕಾಗಿ ಕೆಲವು ಜನರನ್ನು ನೇಮಿಸಲಾಗಿರುತ್ತದೆ. ಸಿಬ್ಬಂದಿ ಪೋಸ್ಟ್ ಮಾಡುವ ಸಂದರ್ಭದಲ್ಲಿ ಅಚಾತುರ್ಯವಾಗಿದೆ. ಅದು ಕೂಡ ತಪ್ಪು. ಆ ತಪ್ಪನ್ನು ನಾನು ತಪ್ಪು ಅಂತಾನೆ ಹೇಳ್ತೀನಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದರು.
11:31 AM (IST) Dec 09
ಸಲಗ ಮುಂದಿನ ವರ್ಷಾರಂಭಕ್ಕೆ ಲ್ಯಾಂಡ್ಲಾರ್ಡ್ ಸಿನಿಮಾ ಮೂಲಕ ಸಿನಿಪ್ರಿಯರ ಮುಂದೆ ಬರ್ತಾ ಇದ್ದಾರೆ. ಲ್ಯಾಂಡ್ಲಾರ್ಡ್ ನಲ್ಲಿ ವಿಜಯ್ ಮಾಸ್ ಅವತಾರ ಇದ್ದು, ಇವರಿಗೆ ಟಕ್ಕರ್ ಕೊಡೋ ರೂಲರ್ ಯಾರು ಅನ್ನೋ ಕುತೂಹಲಕ್ಕೆ ಈಗ ತೆರೆಬಿದ್ದಿದೆ.
10:44 AM (IST) Dec 09
Bengaluru Uber Driver: ಚಾಲಕ ಮತ್ತು ಪ್ರಯಾಣಿಕರ ನಡುವಿನ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರೊಬ್ಬರು ರೆಡ್ಡಿಟ್ನಲ್ಲಿ ಕ್ಯಾಬ್ ಬುಕ್ ಮಾಡಿದಾಗ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.
10:38 AM (IST) Dec 09
ಎಐ ಅನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಸಂಸ್ಥೆಗಳಲ್ಲಿ ಸ್ಯಾಮ್ಸಂಗ್ ಕೂಡ ಒಂದು. ಗ್ಯಾಲಕ್ಸಿ ಎಐ ಮೂಲಕ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್ಫೋನ್ಗಳನ್ನೂ ಅತ್ಯಂತ ಆಕರ್ಷಕವಾಗಿ ರೂಪಿಸುತ್ತಿದ್ದಾರೆ. ಅದಕ್ಕೆ ಉತ್ತಮ ನಿದರ್ಶನ ಗ್ಯಾಲಕ್ಸಿ ಎ17 5ಜಿ.
10:27 AM (IST) Dec 09
ದರ್ಶನ್ ಜೈಲು ಸೇರಿದರೂ ಬದಲಾಗಿಲ್ವಾ..? ಮತ್ತದೇ ದೌಲತ್ತು, ದುರಂಹಕಾರದಿಂದ ಜೈಲಿನಲ್ಲೂ ಮೆರೀತಾ ಇದ್ದಾರಾ.?. ಸಹಕೈದಿಗಳಿಗೆ ದಾಸನಿಂದ ಕಿರುಕುಳ ಆಗ್ತಾ ಇದೆಯಾ..? ಖುದ್ದು ಡಿ ಗ್ಯಾಂಗ್ ಸದಸ್ಯರು ದಾಸನ ದಾದಾಗಿರಿಗೆ ತತ್ತರಿಸಿ ಹೋಗಿದ್ದಾರಂತೆ.
09:53 AM (IST) Dec 09
ಸ್ಟಾರ್ ನಟಿ ಸಮಂತಾ ಮತ್ತು ಬಾಲಿವುಡ್ ನಿರ್ದೇಶಕ ರಾಜ್ ನಿಡಿಮೋರು ಮದುವೆಯಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಹನಿಮೂನ್ಗಾಗಿ ರೊಮ್ಯಾಂಟಿಕ್ ಸ್ಥಳಗಳನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸಮಂತಾ ಹನಿಮೂನ್ ಟ್ರಿಪ್ ಯಾವಾಗ?
09:17 AM (IST) Dec 09
ಬಮೂಲ್ ಅಧ್ಯಕ್ಷ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರಿನಲ್ಲಿ ಕೋಟ್ಯಂತರ ರು. ವಂಚನೆ ಪ್ರಕರಣ ಸಂಬಂಧ ಚಲನಚಿತ್ರ ನಟ ಧರ್ಮ ಅವರಿಗೆ ಧ್ವನಿ ಪರೀಕ್ಷೆಯ ಸಂಕಷ್ಟ ಎದುರಾಗಿದೆ.
09:13 AM (IST) Dec 09
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟನ ಕಾಮಿಡಿ ಅನೇಕರಿಗೆ ಇರಿಸುಮುರಿಸು ತಂದಿದೆ, ಬೇಸರ ಉಂಟು ಮಾಡಿದೆ. ಗಿಲ್ಲಿ ನಟ ಹಾಗೂ ಧ್ರುವಂತ್ ಪರಸ್ಪರ ಮಾತಿನಲ್ಲಿ ಯುದ್ಧ ಮಾಡುತ್ತಿರುತ್ತಾರೆ. ಈಗ ಧ್ರುವಂತ್ ಹೊಸ ಹೆಜ್ಜೆ ಹಾಕಿದ್ದಾರೆ.
08:43 AM (IST) Dec 09
Colors Kannada Bigg Boss Kannada Season Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ನಾಮಿನೇಶನ್ ಎಂದು ಬಂದಾಗ, ಸ್ಪರ್ಧಿಗಳು ಕೊಡುವ ಕಾರಣಕ್ಕೆ ಜಗಳ ಆಗುವುದು. ಈಗ ಇದೇ ವಿಚಾರಕ್ಕೆ ರಜತ್ ಹಾಗೂ ಧ್ರುವಂತ್ ಮಧ್ಯೆ ಗಲಾಟೆ ಆಗಿದೆ. ಇದರ ಕಿಡಿ ಹೊತ್ತಿರೋದು ಕಾವ್ಯ ಮಾತಿನಿಂದ.