LIVE NOW
Published : Jul 08, 2026, 06:57 AM ISTUpdated : Jul 08, 2026, 10:38 PM IST

Karnataka News Live: IND vs ENG - ಟೀಂ ಇಂಡಿಯಾ ಹೆಡ್‌ ಕೋಚಿಂದ್ ಬಿಗ್‌ ಮೇಸೇಜ್‌; ವೈಭವ್‌ ಸೇರಿ ಇನ್ನೋರ್ವಗೆ ಶಾಕ್‌? ಇನ್ನಿಬ್ಬರಿಗೆ ಮಾಡು ಇಲ್ಲವೇ, ಮಡಿ!

ಸಾರಾಂಶ

ಮೈಸೂರು: ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಬ್ಯಾನರ್ ಹಾಕಿಲ್ಲ, ಪೋಸ್ಟರ್ ಹಾಕಿಲ್ಲ ಅನ್ನೋ ವಿಚಾರಕ್ಕೆ ನಮ್ಮ ತಂದೆ ತಲೆ ಕೆಡಿಸಿಕೊಳ್ಳೋವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ನಗರಾಭಿವೃದ್ಧಿ ಸಚಿವ ಸ್ಥಾನದಿಂದ ತಮ್ಮನ್ನು ಕೈಬಿಡಬೇಕೆಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೇನೆ. ಮುಡಾ ಕೇಸ್ ಸಂಬಂಧ ಲೋಕಾಯುಕ್ತದಿಂದ ಸಂಪೂರ್ಣ ತನಿಖೆ ಆಗಿದೆ. ತನಿಖೆ ರಿಪೋರ್ಟ್ ಕೂಡ ಸಲ್ಲಿಸಲಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯವೂ ಇದನ್ನು ಒಪ್ಪಿದೆ. ಆದರೂ ಹೈಯರ್ ಅಪೀಲ್ ಹೋಗಿದ್ದಾರೆ. ತನಿಖೆ ಪೂರ್ಣಗೊಂಡಿರುವುದರಿಂದ ನಾವು ಪ್ರಭಾವ ಬೀರಲು ಸಾಧ್ಯವಿಲ್ಲ. ಇವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.

 

10:38 PM (IST) Jul 08

IND vs ENG - ಟೀಂ ಇಂಡಿಯಾ ಹೆಡ್‌ ಕೋಚಿಂದ್ ಬಿಗ್‌ ಮೇಸೇಜ್‌; ವೈಭವ್‌ ಸೇರಿ ಇನ್ನೋರ್ವಗೆ ಶಾಕ್‌? ಇನ್ನಿಬ್ಬರಿಗೆ ಮಾಡು ಇಲ್ಲವೇ, ಮಡಿ!

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯ ಭಾರತಕ್ಕೆ 'ಮಾಡು ಇಲ್ಲವೇ ಮಡಿ' ಸನ್ನಿವೇಶ ಸೃಷ್ಟಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡವು, ಬ್ಯಾಟಿಂಗ್ ಬಲಪಡಿಸಲು ಪ್ಲೇಯಿಂಗ್ ಇಲೆವೆನ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಿದೆ ಎನ್ನಲಾಗಿದೆ. ಈ ಕುರಿತು ಗಂಭೀರ್‌ ಮಹತ್ವದ ಸುಳಿವು ನೀಡಿದ್ದಾರೆ. 

Read Full Story

10:06 PM (IST) Jul 08

Fish - ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು! ಆದರೆ ಹೀಗೆ ತಿಂದರೆ ಏನಾಗುತ್ತದೆಂದು ಗೊತ್ತಾದರೆ ಮುಟ್ಟಲೂ ಇಷ್ಟಪಡುವುದಿಲ್ಲ!

ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ (MASLD) ಅನಾರೋಗ್ಯಕರ ಆಹಾರ ಪದ್ಧತಿ ಪ್ರಮುಖ ಕಾರಣವಾಗಿದೆ. ಆದರೆ, ಆರೋಗ್ಯಕರ ಜೀವನಶೈಲಿ ಮತ್ತು ಸರಿಯಾದ ಅಡುಗೆ ವಿಧಾನವನ್ನು ಪಾಲಿಸುವುದು ಅಷ್ಟೇ ಮುಖ್ಯವೆಂದು ಈ ಸ್ಟೋರಿ ಹೇಳುತ್ತದೆ. 

Read Full Story

09:58 PM (IST) Jul 08

Vaishnavi Gowda - ಮದುವೆ ಬಳಿಕ ಮತ್ತೆ ಬಂದ ವೈಷ್ಣವಿ, ಮನೆಮನೆಗೆ ಬರಲಿರುವ 'ಅಗ್ನಿಸಾಕ್ಷಿ' ಸನ್ನಿಧಿ!

ಸೀತಾ ರಾಮ ಮುಗಿಯುತ್ತಿದ್ದಂತೆ ವೈಷ್ಣವಿ ಗೌಡ ಮದುವೆ ಸುದ್ದಿಯೂ ಕೇಳಿಬಂತು. ಉತ್ತರ ಭಾರತದ ಅನುಕೂಲ್ ಮೀಶ್ರಾ ಜೊತೆಗೆ ಕಳೆದ ವರ್ಷ ಸಪ್ತಪದಿ ತುಳಿದಿದ್ರು ವೈಷ್ಣವಿ. ಈಗ ಮತ್ತೆ ಹೊಸ ಸುದ್ದಿಯ ಮೂಲಕ ಫ್ಯಾನ್ಸ್‌ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ.

Read Full Story

09:57 PM (IST) Jul 08

'ಕಾಂತಾರ'ಗೆ ಮತ್ತೊಂದು ಜಾಗತಿಕ ಗೌರವ - IFFM ನಾಮಿನೇಷನ್‌ನಲ್ಲಿ ರಿಷಬ್ ಶೆಟ್ಟಿ ಡಬಲ್ ಧಮಾಕಾ

ಮೆಲ್ಬೋರ್ನ್‌ನ ಭಾರತೀಯ ಚಲನಚಿತ್ರೋತ್ಸವ (IFFM) ತನ್ನ 17ನೇ ಆವೃತ್ತಿಯ ನಾಮಿನೇಷನ್‌ಗಳನ್ನು ಪ್ರಕಟಿಸಿದೆ. 'ಸಿತಾರೆ ಜಮೀನ್ ಪರ್' ಮತ್ತು 'ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1' ಚಿತ್ರಗಳು ಪ್ರಮುಖ ಸ್ಪರ್ಧಿಗಳಾಗಿವೆ.

Read Full Story

09:32 PM (IST) Jul 08

ಮಳೆ ಬಂದಾಗ ಮೊದಲು ಮಿಂಚು, ನಂತರ ಗುಡುಗು... ಇದರ ಹಿಂದಿನ ರಹಸ್ಯ ಏನು?

Lightning Explained: ಮಳೆ ತರುವ ದೊಡ್ಡ ಮೋಡಗಳು ರೂಪುಗೊಂಡಾಗ, ಅವುಗಳೊಳಗೆ ನೀರಿನ ಹನಿಗಳು, ಸಣ್ಣ ಹಿಮದ ಕಣಗಳು ಮತ್ತು ಆಲಿಕಲ್ಲುಗಳು ನಿರಂತರವಾಗಿ ಮೇಲಕ್ಕೂ ಕೆಳಕ್ಕೂ ಚಲಿಸುತ್ತಿರುತ್ತವೆ.

Read Full Story

09:08 PM (IST) Jul 08

Tax Experts - ಸ್ಯಾಲರಿ ಸ್ಲಿಪ್‌ನಲ್ಲಿ ಈ 3 ವಿಷಯ ಗಮನಿಸಿದ್ದೀರಾ? ತೆರಿಗೆ ತಜ್ಞರು ಹೇಳುವ ಸೂತ್ರ ಬಳಸಿ ಹಣ ಉಳಿಸಿ!

ಉದ್ಯೋಗಿಗಳು  ಸ್ಯಾಲರಿ ಸ್ಲಿಪ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕಾರಣ ಅಗತ್ಯಕ್ಕಿಂತ ಹೆಚ್ಚು ತೆರಿಗೆ ಪಾವತಿಸುತ್ತಾರೆ. ಕೆಲ ಅಂಶಗಳನ್ನು ತಿಳಿದುಕೊಳ್ಳುವ ಮೂಲಕ, ಯಾವುದೇ ಹೆಚ್ಚುವರಿ ಹೂಡಿಕೆ ಇಲ್ಲದೆ ಕಾನೂನುಬದ್ಧವಾಗಿ ಆದಾಯ ತೆರಿಗೆಯನ್ನು ಕಡಿಮೆ ಮಾಡಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

08:52 PM (IST) Jul 08

Karavali Controversy - ಟ್ರೈಲರ್ ಲಾಂಚ್‌ಗೆ ಪ್ರಜ್ವಲ್ ಅಬ್ಸೆಂಟ್; ಇದಕ್ಕೆಲ್ಲಾ ಕಾರಣ ಅಲ್ವಾ ಪೇಮೆಂಟ್? ಹಾಗಿದ್ರೆ ಸತ್ಯ ಏನು?

ಅದ್ಧೂರಿಯಾಗಿ ಸಿದ್ದವಾಗಿರೋ 'ಕರಾವಳಿ ಸಿನಿಮಾ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ತಮ್ಮದೇ ಚಿತ್ರವನ್ನ ಒಬ್ಬ ನಟ ಸಾಯಿಸೋದಕ್ಕೆ ಹೊರಟರಾ? ಅಥವಾ ಸತ್ಯ ಇನ್ನೇನೋ ಇದೆಯಾ? ಇಲ್ಲಿದೆ ಹಲವು ಸಂಗತಿಗಳು.. 

Read Full Story

08:23 PM (IST) Jul 08

Cricket - 76ಕ್ಕೆ ಆಲೌಟ್, ಗಂಭೀರ್ ಎದುರೇ ಆಕ್ರೋಶ; ವಿಡಿಯೋ ವೈರಲ್! ಇಂಗ್ಲೆಂಡ್‌ನಲ್ಲಿ ಗೌತಿಗೆ ತೀವ್ರ ಮುಖಭಂಗ!

ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 76 ರನ್‌ಗಳಿಗೆ ಆಲೌಟ್ ಆಗಿತ್ತು. 202 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಬ್ಯಾಟಿಂಗ್ ಕುಸಿತದಿಂದಾಗಿ 125 ರನ್‌ಗಳ ಹೀನಾಯ ಸೋಲುಂಟಾಯಿತು. ಈ ಹಿನ್ನೆಲೆಯಲ್ಲಿ ಗಂಭೀರ್‌ ಎದುರೆ ಒಂದು ಘಟನೆ ನಡೆಯಿತು. ಅದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ!

Read Full Story

08:07 PM (IST) Jul 08

ಕೊಡಗಿನ ಕನ್ನಂಬಾಡಿಯಲ್ಲಿ 2 ದಿನಗಳ ಕಾಲ ಕೆರೆಯಲ್ಲಿ ಸಿಲುಕಿದ್ದ ಕಾಡಾನೆ - ಕೊನೆಗೆ ಏನಾಯಿತು?

ಗಜರಾಜ ಅಚಾನಕ್ಕಾಗಿ ಕಾಡಿನಿಂದ ನಾಡಿನ ಕಡೆಗೆ ಬಂದಿದ್ದ. ರಾತ್ರಿ ಬಂದವನು ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದ. ಹೀಗೆ ಬಿದ್ದು ಬರೋಬ್ಬರಿ ಎರಡು ದಿನಗಳ ಕಾಲ ನೀರಿನಲ್ಲಿ ಜೀವನ್ಮರಣದ ಮಧ್ಯೆ ಹೋರಾಡಿದ ಕರುಣಾಜನಕ ಕಥೆ ಇಲ್ಲಿದೆ.

Read Full Story

07:52 PM (IST) Jul 08

ಘನ ತ್ಯಾಜ್ಯ ವಿಲೇವಾರಿಗೆ ನಾಗರಿಕರು ಸಹಕರಿಸಿ - ಗಂಗಾವತಿ ಪ್ರಾಣೇಶ್ ವಿಶೇಷ ಮನವಿ

ವಿವಿಧ ವಾರ್ಡುಗಳಲ್ಲಿ ಪೌರ ಕಾರ್ಮಿಕರು ವಾಹನಗಳ ಮೂಲಕ ಆಗಮಿಸಿದ್ದ ಸಂದರ್ಭದಲ್ಲಿ ಘನ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ನಾಗರಿಕರು ಸಹಕರಿಸಬೇಕೆಂದು ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಹೇಳಿದರು.

Read Full Story

07:46 PM (IST) Jul 08

Investment - ಮಗಳ ಭವಿಷ್ಯಕ್ಕೆ ಸೂಪರ್ ಪ್ಲಾನ್; ಹೂಡಿಕೆ ಮಾಡುವ ಮುನ್ನ ಈ ಲೆಕ್ಕ ತಿಳಿಯಿರಿ! ಬಂಪರ್‌ ರಿಟರ್ನ್ಸ್‌ ಪಡೆಯಿರಿ!

ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಅತ್ಯಗತ್ಯ. ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಎಫ್‌ಡಿ ಎರಡು ಪ್ರಮುಖ ಆಯ್ಕೆಗಳಾಗಿವೆ. ಈ ಲೇಖನವು ಎರಡೂ ಯೋಜನೆಗಳ ಪ್ರಯೋಜನಗಳು, ಬಡ್ಡಿ ದರ, ತೆರಿಗೆ ವಿನಾಯಿತಿ ಹೋಲಿಸಿ, ನಿಮ್ಮ ಮಗಳಿಗೆ ಯಾವುದು ಉತ್ತಮ ಆಯ್ಕೆ ಎನ್ನನುವ ಸಂಪೂರ್ಣ ಮಾಹಿತಿ ಇಲ್ಲಿದೆ. 

Read Full Story

07:35 PM (IST) Jul 08

Ganga Jal - ಗಂಗಾಜಲವನ್ನು ಪವಿತ್ರವೆಂದು ಏಕೆ ಪರಿಗಣಿಸಲಾಗುತ್ತದೆ? ಇಲ್ಲಿದೆ ಬಹುತೇಕರಿಗೆ ಗೊತ್ತಿಲ್ಲದ ಸತ್ಯ!

ಗಂಗಾಜಲ ಬಳಸದೆ ಯಾವುದೇ ಪೂಜೆ ನಡೆಯುವುದಿಲ್ಲ ಎನ್ನಬಹುದು. ಗೃಹಪ್ರವೇಶ, ಮದುವೆ, ಯಜ್ಞ, ನಾಮಕರಣ, ಅಂತ್ಯಕ್ರಿಯೆ ಅಥವಾ ಯಾವುದೇ ದೇವತಾ ಪೂಜೆಯಿರಲಿ, ಪ್ರತಿಯೊಂದು ಶುಭ ಕಾರ್ಯದಲ್ಲೂ ಗಂಗಾಜಲಕ್ಕೆ ವಿಶೇಷ ಮಹತ್ವವಿದೆ.

Read Full Story

06:47 PM (IST) Jul 08

ಕೇಕ್ ಅಲ್ಲ, ಕಲ್ಲಂಗಡಿ-ಬಾಳೆಹಣ್ಣುಗಳಿಂದ ಬರ್ತ್‌ಡೇ - ಬನ್ನೇರುಘಟ್ಟದ ರೀಟಾ ಮರಿಯಾನೆಯ ಸಂಭ್ರಮ ವೈರಲ್

ಬನ್ನೇರುಘಟ್ಟ ಸಫಾರಿಯ ಸೀಗೆಕಟ್ಟೆ ಪ್ರದೇಶದಲ್ಲಿರುವ ಹೆಣ್ಣು ಆನೆ ರೀಟಾನ ಗಂಡು ಮರಿಗೆ ಎರಡನೇ ವರ್ಷದ ಹುಟ್ಟುಹಬ್ಬವನ್ನು ಉದ್ಯಾನವನದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷವಾಗಿ ಆಚರಿಸಿದರು.

Read Full Story

06:41 PM (IST) Jul 08

ಬೆಂಗಳೂರು ಮಂಗಳೂರು ವಂದೇ ಭಾರತ್ ರೈಲಿನ ಟ್ರಯಲ್ ಆರಂಭ, ಪ್ರಕೃತಿ ಸೊಬಗಿನ ನಡುವೆ ಎಕ್ಸ್‌ಪ್ರೆಸ್

ಬಹುನಿರೀಕ್ಷಿತ ಬೆಂಗಳೂರು ಮಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟ್ರಯಲ್ ಆರಂಭಗೊಂಡಿದೆ. ಶೀಘ್ರದಲ್ಲೇ ಪ್ರಯಾಣಿಕರಿಗೆ ಮುಕ್ತವಾಗಲಿದ್ದು, ರೈಲಿನ ಟಿಕೆಟ್, ಸಮಯ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Read Full Story

06:31 PM (IST) Jul 08

ಕೇವಲ ₹55ಕ್ಕೆ 1000+ ಲೈವ್ ಟಿವಿ ಚಾನೆಲ್‌ಗಳು; ಏನಿದು ಆಫರ್‌? ಎಲ್ಲಿ ನೀಡಲಾಗುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಕಂಪನಿಯು ಕೇವಲ ₹55ಗೆ ಪ್ರೊ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ, ಇದು 30 ದಿನಗಳ ಮಾನ್ಯತೆ ಹೊಂದಿದೆ. ಹಾಗಾದರೆ ಏನಿದು ಯೋಜನೆ? ಯಾವ ಅಪ್ಲೀಕೇಶನ್? ಅದರ ಅಳವಡಿಕೆ ಹೇಗೆ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

06:27 PM (IST) Jul 08

Strong Password - ಪಾಸ್‌ವರ್ಡ್ ಸ್ಟ್ರಾಂಗ್ ಯಾಕೆ ಇರಬೇಕು? '123456' ಪಾಸ್‌ವರ್ಡ್ ಯಾಕೆ ಡೇಂಜರ್?

ಇವತ್ತಿನ ದಿನಗಳಲ್ಲಿ ಬ್ಯಾಂಕಿಂಗ್, ಸೋಶಿಯಲ್ ಮೀಡಿಯಾ, ಇಮೇಲ್, ಆನ್‌ಲೈನ್ ಶಾಪಿಂಗ್, ಸರ್ಕಾರಿ ಸೇವೆಗಳು... ಹೀಗೆ ಎಲ್ಲವೂ ಪಾಸ್‌ವರ್ಡ್ ಮೇಲೆಯೇ ನಿಂತಿವೆ. ಹಾಗಾಗಿ, ಪಾಸ್‌ವರ್ಡ್ ಯಾಕೆ ಸ್ಟ್ರಾಂಗ್ ಆಗಿರಬೇಕು?

Read Full Story

06:06 PM (IST) Jul 08

ಕರಾವಳಿ ವಿವಾದಕ್ಕೆ ಹೊಸ ತಿರುವು - ಪತಿ ಪ್ರಜ್ವಲ್ ದೇವರಾಜ್ ಪರ ನಿಂತ ಪತ್ನಿ ರಾಗಿಣಿ ಚಂದ್ರನ್

ಜುಲೈ 24ರಂದು ಬಿಡುಗಡೆಯಾಗಲಿರುವ ಕರಾವಳಿ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತ್ತು. ಆದರೆ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಳ್ಳದಿರುವುದು ಮೊದಲ ಚರ್ಚೆಗೆ ಕಾರಣವಾಯಿತು.

Read Full Story

05:56 PM (IST) Jul 08

ಬೈಕ್ ಇದೆಯೇ? ಹಾಗಾದರೆ ಸಾರಿಗೆ ಇಲಾಖೆ ಈ ರಹಸ್ಯ ಪ್ಲಾನ್ ತಿಳಿಯಲೇಬೇಕು! ದಿನಕ್ಕೆ ಕೇವಲ 5 ರೂಪಾಯಿ ಕಟ್ಟಿ ಹಣ ಗಳಿಸಿ!

Bike taxi legalization in India: ಪೆಟ್ರೋಲ್ ಬೈಕ್ ಟ್ಯಾಕ್ಸಿಗಳನ್ನು ತಿರಸ್ಕರಿಸಿದ್ದ ಸಾರಿಗೆ ಇಲಾಖೆ, ಇದೀಗ ದಿನಕ್ಕೆ 5 ರೂ. ಸಂಗ್ರಹಿಸುವ ಮೂಲಕ ಅವುಗಳನ್ನು ಕಾನೂನುಬದ್ಧಗೊಳಿಸಲು ಮುಂದಾಗಿದೆ. ಈ ಹೊಸ ಪ್ರಸ್ತಾವನೆಯು ಸರ್ಕಾರದ ಇವಿ ನೀತಿಗೆ ಸವಾಲಾಗಿದ್ದು, ಚಾಲಕರ ಸುರಕ್ಷತೆಗಾಗಿ ಕಠಿಣ ನಿಯಮಗಳನ್ನು ಸಹ ಒಳಗೊಂಡಿದೆ. ಇದು ಜಾರಿ ಗೊಂಡಿರುವುದು ಎಲ್ಲಿ ಗೊತ್ತಾ? 

Read Full Story

05:41 PM (IST) Jul 08

'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ - ಮುಂದಿನ ಭಾಗದ ಕಥೆಯ ರಹಸ್ಯ ಬಯಲು!

'ಕಾಂತಾರ' ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡ ಕಾಂತಾರ ಫ್ರಾಂಚೈಸಿಯ ಮುಂದಿನ ಭಾಗದ ಕುರಿತು ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Read Full Story

05:22 PM (IST) Jul 08

Smart Phone - ಮಲಗುವ 1 ಗಂಟೆ ಮೊದಲು ನಿಮ್ಮ ಮೊಬೈಲ್ ಪಕ್ಕಕ್ಕಿಡಿ; ನಿಮ್ಮ ದೇಹದಲ್ಲಿ ಆಗುವ ಮ್ಯಾಜಿಕ್ ನೋಡಿ!

ನೀವು ಚೆನ್ನಾಗಿ ನಿದ್ರೆ ಮಾಡಿದಾಗ ದೇಹದಲ್ಲಿ 'ಹ್ಯೂಮನ್ ಗ್ರೋತ್ ಹಾರ್ಮೋನ್' ಚೆನ್ನಾಗಿ ಬಿಡುಗಡೆಯಾಗುತ್ತದೆ. ಇದು ನಿಮ್ಮ ಚರ್ಮದ ಕೋಶಗಳನ್ನು ಪುನಶ್ಚೇತನಗೊಳಿಸಿ, ಮುಖದ ಮೇಲೆ ಸುಕ್ಕುಗಳು ಬರದಂತೆ ತಡೆಯುತ್ತದೆ. ಇನ್ನೂ ಬಹಳಷ್ಟು ಉಪಯೋಗ ಇದೆ, ನೋಡಿ..

Read Full Story

05:15 PM (IST) Jul 08

Esha Lankesh - ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಸ್ಟಾರ್ ಕಿಡ್ ಎಂಟ್ರಿ - ನಾಯಕಿಯಾದ ಪಿ.ಲಂಕೇಶ್ ಮೊಮ್ಮಗಳು

ನವಿಶಾ ಫಿಲ್ಮ್ಸ್ ಬ್ಯಾನರ್‌ನಡಿ ಶಿವರಾಜ್ ಕನಗನಪಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಸಂಸ್ಥೆಯ ಎರಡನೇ ನಿರ್ಮಾಣವಾಗಿದೆ. ರಂಗಭೂಮಿಯಲ್ಲಿ ಈಗಾಗಲೇ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ಇಶಾ ಲಂಕೇಶ್.

Read Full Story

04:59 PM (IST) Jul 08

Football - ಕಡು ಬಡತನದಲ್ಲೂ ಕಮರಲಿಲ್ಲ ಕನಸು; ಬರಿಗಾಲಿನ ಹೆಣ್ಣುಮಕ್ಕಳಿಗೆ ಉಚಿತ ಫುಟ್‌ಬಾಲ್ ಕಲಿಸಿ ವಿಧಿ ಬರಹವನ್ನೇ ಬದಲಿಸಿದ ಗೃಹಿಣಿ!

ಫುಟ್ಬಾಲ್ ಆಟಗಾರ್ತಿಯಾಗುವ ತನ್ನ ಕನಸು ನನಸಾಗದಿದ್ದರೂ, ಹಿಂದುಳಿದ ಹುಡುಗಿಯರಿಗಾಗಿ ಉಚಿತ ಫುಟ್ಬಾಲ್ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದರು. ಆರ್ಥಿಕ ಸಂಕಷ್ಟಗಳ ನಡುವೆಯೂ, ಅವರು ಅನೇಕ ಹುಡುಗಿಯರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಡಲು ತರಬೇತಿ ನೀಡಿ, ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದ್ದಾರೆ. ಅವರ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

04:45 PM (IST) Jul 08

ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯ ಬೆಲೆಬಾಳುವ 5 ಎಕರೆ ಜಾಗ ರೈಲ್ವೇಸ್‌ನದ್ದು; ಹೈಕೋರ್ಟ್ ಮಹತ್ವದ ತೀರ್ಪು!

ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯ 5 ಎಕರೆ ಬೆಲೆಬಾಳುವ ಭೂಮಿ ರೈಲ್ವೆ ಇಲಾಖೆಗೆ ಸೇರಿದ್ದು ಎಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ತೀರ್ಪು ನೀಡಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭೂಮಿಯನ್ನು ಕಬಳಿಸಲು ಯತ್ನಿಸಿದ ಖಾಸಗಿ ವ್ಯಕ್ತಿಗಳ ವಂಚನೆಯನ್ನು ಕೋರರ್ಟ್‌ ಬಯಲಿಗೆಳೆದಿದೆ.

Read Full Story

04:43 PM (IST) Jul 08

Science of Anger - ಕೋಪ ಯಾಕೆ ಬರುತ್ತೆ? ಮನಸ್ಸು, ದೇಹ, ಭಾವನೆಗಳ ನಡುವೆ ಏನಾಗುತ್ತೆ ಗೊತ್ತಾ?

Science of Anger: ಕೋಪ ಅನ್ನೋದು ನಮ್ಮ ದೇಹ ಮತ್ತು ಮನಸ್ಸಿನ ಒಂದು ಸಾಮಾನ್ಯ ಭಾವನಾತ್ಮಕ ಪ್ರತಿಕ್ರಿಯೆ (Emotional Response). ನಮ್ಮ ಜೊತೆ ಏನೋ ತಪ್ಪು ನಡೀತು, ಏನೋ ಅಪಾಯ ಇದೆ.

Read Full Story

04:37 PM (IST) Jul 08

ಹೆಬ್ಬಾಳ ಬಳಿಕ ಬೆಂಗಳೂರಿಗೆ 6 ಪಥಗಳ ಮತ್ತೊಂದು ಸುರಂಗ ರಸ್ತೆ, ಡಾ.ರಾಜ್ ಸ್ಮಾರಕದಿಂದ ಬಿಇಎಲ್ ವೃತ್ತದವರೆಗೆ ನಿರ್ಮಾಣ

ಬೆಂಗಳೂರಿನ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಬಿಡಿಎ ಹೊಸ ಯೋಜನೆಯನ್ನು ಪ್ರಸ್ತಾಪಿಸಿದೆ. ಡಾ. ರಾಜ್‌ಕುಮಾರ್ ಸ್ಮಾರಕದಿಂದ ಬಿಇಎಲ್ ವೃತ್ತದವರೆಗೆ 4.5 ಕಿ.ಮೀ. ಉದ್ದದ 6 ಪಥಗಳ ಸುರಂಗ ರಸ್ತೆ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಈ ಯೋಜನೆಯು ನಮ್ಮ ಮೆಟ್ರೋ ಯೋಜನೆಗಳೊಂದಿಗೆ ಸಮನ್ವಯ ಸಾಧಿಸಲಿದೆ.
Read Full Story

04:08 PM (IST) Jul 08

IPL Star Player - ಅಂದು ಐಪಿಎಲ್ ಮೈದಾನದಲ್ಲಿ ಅಬ್ಬರಿಸಿದ್ದ ಆಲ್ ರೌಂಡರ್; ಇಂದು ರೈಲ್ವೆ ನಿಲ್ದಾಣದಲ್ಲಿ! ಇದು ಹಣೆಬರಹದ ಕ್ರೂರ ಆಟವೇ?

ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಗಾಯಗೊಂಡಿದ್ದ ಐಪಿಎಲ್‌ ಆಟಗಾರ ಇಂದು ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಕ್ರಿಕೆಟ್ ಹೊರತಾದ ಆ ಕ್ರಿಕೆಟರ್‌ ಬದುಕಿನ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

Read Full Story

04:05 PM (IST) Jul 08

ಬೆಂಗಳೂರು ಕ್ಲಬ್‌ನಲ್ಲಿ 13 ರೂಪಾಯಿ ಬಾರ್‌ ಬಿಲ್‌ ಉಳಿಸಿಕೊಂಡಿರುವ ಇಂಗ್ಲೆಂಡ್‌ ಮಾಜಿ ಪ್ರಧಾನಿ!

158 ವರ್ಷಗಳ ಇತಿಹಾಸವಿರುವ ಬೆಂಗಳೂರು ಕ್ಲಬ್, ಬ್ರಿಟನ್ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಇಲ್ಲಿ 13 ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದ ರೋಚಕ ಕಥೆಗೆ ಹೆಸರುವಾಸಿಯಾಗಿದೆ. ಇಂದು ಕೋಟ್ಯಂತರ ಆದಾಯ ಗಳಿಸುತ್ತಿರುವ ಈ ಕ್ಲಬ್ -ಪ್ರೊಫೈಲ್ ವ್ಯಕ್ತಿಗಳ ನೆಚ್ಚಿನ ತಾಣವಾಗಿದೆ.

Read Full Story

03:41 PM (IST) Jul 08

Srinagara Kitty Birthday - ನಟ ಶ್ರೀನಗರ ಕಿಟ್ಟಿಗೆ ಹುಟ್ಟುಹಬ್ಬದ ದಿನ; ಪತ್ನಿ-ಮಗಳೊಂದಿಗೆ ಮನೆಯಲ್ಲೇ ಸರಳ ಸಂಭ್ರಮ!

ನಟ ಶ್ರೀನಗರ ಕಿಟ್ಟಿಯವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಅತ್ಯಂತ ಸರಳವಾಗಿ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಪತ್ನಿ ಭಾವನಾ ಬೆಳಗೆರೆ, ಮಗಳು ಪರಿಣಿತಾ ಹಾಗೂ ಆತ್ಮೀಯರು, ಕುಟುಂಬಸ್ಥರು ಸೇರಿ ಕಿಟ್ಟಿ ಅವರ ಹುಟ್ಟುಹಬ್ಬವನ್ನ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದಾರೆ.

Read Full Story

02:50 PM (IST) Jul 08

1 ವರ್ಷದ ಬಳಿಕ ಶಿವಮೊಗ್ಗ ಬಾಲಕಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ಶವ ಸೂಟ್‌ಕೇಸ್‌ಲ್ಲಿಟ್ಟು ಪ್ರಪಾತಕ್ಕೆ ತಳ್ಳಿದ ಪಿಜಿ ಓನರ್ಸ್!

ಶಿಕಾರಿಪುರದಲ್ಲಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂಬ ಸತ್ಯ ತನಿಖೆಯಿಂದ ಬಯಲಾಗಿದೆ. ಪಿಜಿಗೆ ಕೆಟ್ಟ ಹೆಸರು ಬರುತ್ತದೆಂಬ ಭಯದಿಂದ, ಮಾಲೀಕರು ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಪ್ರಪಾತಕ್ಕೆ ಎಸೆದಿದ್ದರು.

Read Full Story

12:29 PM (IST) Jul 08

Rishab Shetty - ಹುಟ್ಟುಹಬ್ಬದ ಸಂಭ್ರಮದಲ್ಲಿ ಹಲವು ಗುಟ್ಟು ಹಂಚಿಕೊಂಡ ರಿಷಬ್ ಶೆಟ್ಟಿ; ಸೀಕ್ರೆಟ್ ಮೂಟೆಯಲ್ಲಿ ಏನೇನಿದೆ ನೋಡಿ!

ರಿಷಬ್ ನಟಿಸ್ತಾ ಇರೋ ನೆಕ್ಸ್ಟ್ ಸಿನಿಮಾ ಛತ್ರಪತಿ ಶಿವಾಜಿ ಮಹಾರಾಜ್. ಅಸಲಿಗೆ ಈ ಸಿನಿಮಾ ಅನೌನ್ಸ್ ಆದಾಗ ಹಲವು ಕನ್ನಡ ಪರ ಸಂಘಟನೆಗಳು ರಿಷಬ್ ಈ ಸಿನಿಮಾ ಮಾಡಬಾರದು ಅಂತ ಒತ್ತಾಯಿಸಿದ್ವು. ಶಿವಾಜಿ ಕನ್ನಡ ವಿರೋಧಿ.. ಅವರ ಬಯೋಪಿಕ್​ನಲ್ಲಿ ಕನ್ನಡಿಗರ ನಟಿಸೋದು ಎಷ್ಟು ಸರಿ ಅಂತ ವಾದ ಮಾಡಿದ್ರು. ಆದರೆ, ರಿಷಬ್ ಅವರು ಈ ಬಗ್ಗೆ ಏನು ಹೇಳಿದ್ದಾರೆ ನೋಡಿ..

Read Full Story

12:28 PM (IST) Jul 08

ರೇಣುಕಾಸ್ವಾಮಿ ಕೇಸ್‌ - ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣದ ಹಿಂದೆ ಪ್ರಭಾವಿಗಳಿರೋ ಶಂಕೆ? ಡೀಲ್ ಕೊಟ್ಟವರಿಗೂ ನಡುಕ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿಗಳನ್ನು ಬಂಧಿಸಲಾಗಿದ್ದು, ತನಿಖೆ ತೀವ್ರಗೊಂಡಿದೆ. ಪ್ರಭಾವಿಗಳ ಸೂಚನೆ ಮೇರೆಗೆ ನಡೆದಿದೆ ಎನ್ನಲಾದ ಈ 'ಡೀಲ್'ನ ರಹಸ್ಯವನ್ನು ಆರೋಪಿಗಳ ಮೊಬೈಲ್ ಫೋನ್‌ನ ಎಫ್‌ಎಸ್‌ಎಲ್ ವರದಿ ಬಯಲು ಮಾಡುವ ನಿರೀಕ್ಷೆಯಿದೆ, ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
Read Full Story

12:04 PM (IST) Jul 08

Bengaluru Techie - 'ಸಂಬಳಕ್ಕಿಂತ ನೆಮ್ಮದಿ ಮುಖ್ಯ'! ಕೆಲಸ ತೊರೆದ ಬೆಂಗಳೂರು ಟೆಕ್ಕಿಯ ವೈರಲ್ ಕಥೆ..!

ಬೆಂಗಳೂರಿನ ಟೆಕ್ಕಿಯೊಬ್ಬರು ತಮಗಿದ್ದ ಕೈತುಂಬಾ ಸಂಬಳದ ಕೆಲಸವನ್ನು ಯಾವುದೇ ಬ್ಯಾಕಪ್ ಇಲ್ಲದೆ ತೊರೆದಿರುವ ಸುದ್ದಿ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Read Full Story

11:46 AM (IST) Jul 08

ಹ್ಯಾಪಿ ಮೂಡ್‌ನಲ್ಲಿರೋ ಗೌತಮ್-ಭೂಮಿಕಾಗೆ ಡಬಲ್ ಶಾಕ್; ಇಬ್ಬರಲ್ಲಿ ಯಾರಿಗೆ ಕಾದಿದೆ ಆಪತ್ತು?

Zee Kannada Serial Amruthadhaare Promo Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಆದರೆ, ಎರಡು ದೊಡ್ಡ ಆಘಾತಗಳು ಕಾದಿದ್ದು, ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ.

Read Full Story

11:25 AM (IST) Jul 08

ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ - 6 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ!

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ರಾಜ್ಯದ ಧಾರವಾಡ, ರಾಯಚೂರು, ಚಿತ್ರದುರ್ಗ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪ್ರಮುಖ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಮೆಗಾ ಆಪರೇಷನ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗುವ ಶಂಕೆ ವ್ಯಕ್ತವಾಗಿದೆ.
Read Full Story

10:45 AM (IST) Jul 08

ರಾಜಸ್ಥಾನ ಸುತ್ತಾಡಲು ಆಸೆ ಇರುವ ಕರ್ನಾಟಕದ ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ಬೆಂಗಳೂರಿನಿಂದ ಉದಯಪುರಕ್ಕೆ ನೇರ ವಿಮಾನ

ಆಕಾಸಾ ಏರ್ ವಿಮಾನಯಾನ ಸಂಸ್ಥೆಯು ಬೆಂಗಳೂರು ಮತ್ತು ಮುಂಬೈನಿಂದ ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣ ಉದಯಪುರಕ್ಕೆ ಹೊಸ ದೈನಂದಿನ ನೇರ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಅಕ್ಟೋಬರ್ 15, 2026 ರಿಂದ ಈ ಸೇವೆ ಪ್ರಾರಂಭವಾಗಲಿದ್ದು, 'ಲೇಕ್‌ ಸಿಟಿ'ಗೆ ಪ್ರಯಾಣವನ್ನು ಸುಲಭಗೊಳಿಸಲಿದೆ.
Read Full Story

10:19 AM (IST) Jul 08

ಚಾರ್ಮಾಡಿ ಘಾಟಿಯಲ್ಲಿ ಲಘು ಭೂಕುಸಿತ, ದಟ್ಟ ಮಂಜಿನಲ್ಲಿ ರಸ್ತೆ ಸರಿಯಾಗಿ ಕಾಣಿಸದೆ ಪಲ್ಟಿಯಾದ ಕಾರು!

ಮುಂಗಾರು ಮಳೆಗೆ ಚಾರ್ಮಾಡಿ ಘಾಟಿಯು ಹಸಿರಿನಿಂದ ಕಂಗೊಳಿಸುತ್ತಿದ್ದು, ಮೈದುಂಬಿ ಹರಿಯುವ ಜಲಪಾತಗಳು ಮತ್ತು ದಟ್ಟ ಮಂಜು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಅಲ್ಲಲ್ಲಿ ಸಂಭವಿಸುತ್ತಿರುವ ಲಘು ಗುಡ್ಡ ಕುಸಿತ ಈ ಮಾರ್ಗದಲ್ಲಿ ಸಂಚರಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.

Read Full Story

09:16 AM (IST) Jul 08

ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ - ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಮುಂದಿನ 3 ದಿನಗಳು ನಿರ್ಣಾಯಕ!

ರಾಜ್ಯ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಲ್ಲಿ, ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದೆ. ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಭೂಕುಸಿತದ ಆತಂಕವಿದ್ದು, ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
Read Full Story

08:43 AM (IST) Jul 08

TB Dam - ರೈತರಿಗೆ ಶುಭ ಸುದ್ದಿ, ತುಂಗಭದ್ರೆಗೆ ಒಳಹರಿವು ಹೆಚ್ಚಳ! ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟು?

ಕಳೆದ ಎರಡು ದಿನಗಳಿಂದ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ, ಸೊರಗಿದ್ದ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ಮುಂಗಾರು ಬೆಳೆ ಕೈತಪ್ಪುವ ಭೀತಿಯಲ್ಲಿದ್ದ ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
Read Full Story

08:35 AM (IST) Jul 08

ಬೆಂಗಳೂರು - ಫುಟ್‌ಪಾತ್ ತೆರವು ವಿರುದ್ಧ ರೊಚ್ಚಿಗೆದ್ದ ಬೀದಿಬದಿ ವ್ಯಾಪಾರಿಗಳು, ಬೃಹತ್ ಪ್ರತಿಭಟನೆ, ಬೇಡಿಕೆಗಳೇನು?

ಬೆಂಗಳೂರಿನಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಬೀದಿಬದಿ ವ್ಯಾಪಾರಿಗಳು ಜುಲೈ 8 ರಂದು ನಗರಾದ್ಯಂತ ಬಂದ್ ಆಚರಿಸಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಈ ಕ್ರಮವು ಕಾನೂನುಬಾಹಿರವಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ, 13 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
Read Full Story

08:35 AM (IST) Jul 08

ಸತ್ಯಶೋಧಕ್ಕೆ ಮುಂದಾದ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್; ಅಪಘಾತ ಜನ್ಮರಹಸ್ಯ ಬಯಲಾಗುತ್ತಾ?

ಕರ್ಣ ಸೀರಿಯಲ್‌ನಲ್ಲಿ ಡಾಕ್ಟರ್ ಕರ್ಣ ಈಗ ಡಿಟೆಕ್ಟಿವ್ ಆಗಿ ಬದಲಾಗಿದ್ದಾರೆ. ಪತ್ನಿ ನಿಧಿಯ ತಂದೆ-ತಾಯಿಯ ಸಾವು ಅಪಘಾತವಲ್ಲ, ಕೊಲೆ ಎಂದು ತಿಳಿದು, ಹಳೆಯ ಕ್ಯಾಮೆರಾದ ಸಹಾಯದಿಂದ ಸತ್ಯಶೋಧಕ್ಕೆ ಮುಂದಾಗಿದ್ದಾರೆ. ಈ ತನಿಖೆಯು ಕರ್ಣನ ಜನ್ಮರಹಸ್ಯವನ್ನೂ ಬಯಲು ಮಾಡುವ ಹಾದಿಯಲ್ಲಿದೆ.
Read Full Story

More Trending News