LIVE NOW
Published : Jun 03, 2026, 06:47 AM ISTUpdated : Jun 03, 2026, 08:27 AM IST

Karnataka News Live: ಸಿಲ್ಕ್‌ಬೋರ್ಡ್‌ To ಹೆಬ್ಬಾಳದ 17 ಕಿ.ಮೀ ಉದ್ದದ ಸುರಂಗ ಗುತ್ತಿಗೆ ಅದಾನಿ ಕಂಪನಿಗೆ - 22 ಸಾವಿರ ಕೋಟಿಗೆ ಬಿಡ್

ಸಾರಾಂಶ

ನವದೆಹಲಿ: ಕರ್ನಾಟಕದ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರನ್ನಾಗಿ ನೇಮಕ ಮಾಡಿ ಪಕ್ಷವು ಮಂಗಳವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ. ಈವರೆಗೆ ಸಿಎಂ ಆಗಿದ್ದ ಸಿದ್ದರಾಮಯ್ಯ ಸಿಡಬ್ಲ್ಯುಸಿಯ ಪದನಿಮಿತ್ತ ಸದಸ್ಯರಾಗಿದ್ದರು. ಈಗ ಸಿಎಂ ಸ್ಥಾನದಿಂದ ನಿರ್ಗಮನದ ಕಾರಣ ಕಾಯಂ ಸದಸ್ಯರೆಂದು ನೇಮಿಸಲಾಗಿದೆ.

Silkboard to Hebbal 17 km long tunnel

08:27 AM (IST) Jun 03

ಸಿಲ್ಕ್‌ಬೋರ್ಡ್‌ To ಹೆಬ್ಬಾಳದ 17 ಕಿ.ಮೀ ಉದ್ದದ ಸುರಂಗ ಗುತ್ತಿಗೆ ಅದಾನಿ ಕಂಪನಿಗೆ - 22 ಸಾವಿರ ಕೋಟಿಗೆ ಬಿಡ್

ಬೆಂಗಳೂರಿನ ಸಿಲ್ಕ್‌ಬೋರ್ಡ್‌ನಿಂದ ಹೆಬ್ಬಾಳದವರೆಗಿನ 17 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣದ ಗುತ್ತಿಗೆಯನ್ನು ಅದಾನಿ ಎಂಟರ್‌ಪ್ರೈಸಸ್‌ಗೆ ನೀಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಅಂದಾಜಿಗಿಂತ 4,600 ಕೋಟಿ ರೂ. ಹೆಚ್ಚು, ಅಂದರೆ 22,267 ಕೋಟಿ ರೂ.ಗೆ ಅದಾನಿ ಸಂಸ್ಥೆ ಬಿಡ್ ಮಾಡಿದ್ದು, ಅಂತಿಮ ನಿರ್ಧಾರ ಸಚಿವ ಸಂಪುಟ ಸಭೆಯಲ್ಲಿ ಆಗಲಿದೆ.
Read Full Story

08:12 AM (IST) Jun 03

ಟೆಕ್ಕಿಯನ್ನು ಬಲಿ ಪಡೆದುಕೊಂಡಿದ್ದ ಅಂಡರ್‌ಪಾಸ್‌ಗೆ 3 ವರ್ಷಗಳ ಬಳಿಕ ದುರಸ್ತಿ ಕಾರ್ಯ

ಬೆಂಗಳೂರಿನ ಕೆ.ಆರ್. ಸರ್ಕಲ್‌ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಲ್ಲುವ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪಾಲಿಕೆ ಮುಂದಾಗಿದೆ. ಅಂಡರ್‌ಪಾಸ್‌ನಿಂದ ಬೃಹತ್ ನೀರುಗಾಲುವೆಗೆ 900 ಮಿ.ಮೀ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

Read Full Story

07:46 AM (IST) Jun 03

6 ಕಾರಣಗಳಿಗೆ ತುಮಕೂರಿಗೆ ಮೆಟ್ರೋ ರೈಲು ಯೋಜನೆ ಬೇಡವಂತೆ; ಪತ್ರಿಕಾ ಹೇಳಿಕೆ ಬಿಡುಗಡೆ

ತುಮಕೂರಿಗೆ ಪ್ರಸ್ತಾಪಿತ ಮೆಟ್ರೋ ರೈಲು ಯೋಜನೆಯು ಅನುಕೂಲಕ್ಕಿಂತ ಅನಾನುಕೂಲವನ್ನೇ ಹೆಚ್ಚು ತರಲಿದೆ ಎಂದು ಜನಸಂಗ್ರಾಮ ಪರಿಷತ್ ವಿರೋಧ ವ್ಯಕ್ತಪಡಿಸಿದೆ. 25 ಸಾವಿರ ಕೋಟಿ ವೆಚ್ಚ, ಅಧಿಕ ಪ್ರಯಾಣ ದರ ಮತ್ತು ಸಮಯವನ್ನು ಉಲ್ಲೇಖಿಸಿ, ಅಸ್ತಿತ್ವದಲ್ಲಿರುವ ಸಾಮಾನ್ಯ ರೈಲು ಸೇವೆಯೇ ಉತ್ತಮ ಪರ್ಯಾಯ ಎಂದು ಪ್ರತಿಪಾದಿಸಿದೆ.
Read Full Story

07:27 AM (IST) Jun 03

ಮಾಜಿ ಎಂಎಲ್‌ಸಿ ದಯಾನಂದರೆಡ್ಡಿ ಅಪಹರಣ; ₹10 ಕೋಟಿ ಸುಪಾರಿ, 2 ಕೋಟಿಗೆ ಡಿಮ್ಯಾಂಡ್

ವಿಧಾನ ಪರಿಷತ್‌ ಮಾಜಿ ಸದಸ್ಯ ದಯಾನಂದರೆಡ್ಡಿ ಅವರನ್ನು ಬೆಂಗಳೂರಿನ ಆನೇಕಲ್ ಬಳಿ ಕೇರಳ ಮೂಲದ ಗ್ಯಾಂಗ್ ಅಪಹರಿಸಿದೆ. ₹10 ಕೋಟಿ ಸುಪಾರಿ ನೀಡಲಾಗಿದೆ ಎಂದು ಬೆದರಿಸಿ, ನಂತರ ₹2 ಕೋಟಿಗೆ ಬೇಡಿಕೆಯಿಟ್ಟು, ಹಣ ನೀಡುವುದಾಗಿ ಒಪ್ಪಿದ ನಂತರ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

07:06 AM (IST) Jun 03

ಮೂರು ಜಿಲ್ಲೇಲಿ ಮಳೆಯಬ್ಬರ - ಕರಾವಳಿಗೆ 4 ದಿನ ಯೆಲ್ಲೋ ಅಲರ್ಟ್‌, ಬಳ್ಳಾರೀಲಿ 100 ಮರ ಧರೆಗೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರೆದಿದ್ದು, ಬಳ್ಳಾರಿ, ಮಂಗಳೂರು ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ. ಹವಾಮಾನ ಇಲಾಖೆಯು ಕರಾವಳಿ ಭಾಗಕ್ಕೆ ಜೂ.3 ರಿಂದ 6ರವರೆಗೆ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಜೂ. 4ರಂದು ಮುಂಗಾರು ರಾಜ್ಯ ಪ್ರವೇಶಿಸುವ ಸಾಧ್ಯತೆಯಿದೆ.
Read Full Story

More Trending News