Published : Dec 03, 2025, 06:57 AM ISTUpdated : Dec 03, 2025, 11:24 PM IST

Karnataka News Live: ನಮಗೆ ಆಗಲಿಲ್ಲ ಅಂತಾರಲ್ಲ.. ನೀವೇ ಮಾಡಿ ತೋರಿಸಿ - ರಾಜಮೌಳಿಗೆ ಆ ಒಂದು ಸವಾಲು ಹಾಕಿದ ಜೂ.ಎನ್‌ಟಿಆರ್‌

ಸಾರಾಂಶ

ಬೆಂಗಳೂರು: ಮುಂದಿನ ವರ್ಷದ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳಾಗಲಿದ್ದು, ಮುಖ್ಯಮಂತ್ರಿ ಬದಲಾವಣೆ ನಡೆಯುವುದು ಖಚಿತ ಎಂದು ಕೋಡಿಮಠದ ಶಿವರಾತ್ರಿ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವನ ಮುಡಿಯ ಮೇಲಿರುವ ಮಲ್ಲಿಗೆಯು ಶಿವನ ಪಾದಕ್ಕೆ ಬೀಳಲೇಬೇಕು. ರಾಜ್ಯ ರಾಜಕಾರಣದ ಗೊಂದಲವು ಸಂಪೂರ್ಣವಾಗಿ ಬಗೆಹರಿಯಲಿದ್ದು, ಸುಖಾಂತ್ಯವಾಗಲಿದೆ. 

ಮಕರ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದ ನಾಯಕತ್ವದ ಗುದ್ದಾಟವು ಬಗೆಹರಿಯಲಿದೆ ಎಂದು ಹೇಳಿದ್ದಾರೆ. ನಾನು ಶಾಸ್ತ್ರ ಹೇಳುವವನಲ್ಲ ಶಾಸ್ತ್ರಕಾರನಲ್ಲ ಮುಂದೆ ನಡೆಯುವ ವಿಚಾರಗಳನ್ನು ತಿಳಿಸುವ ಶಕ್ತಿ ಹೊಂದಿದ್ದೇನೆ. ಅದೇ ರೀತಿ ರಾಷ್ಟ್ರ ರಾಜಕಾರಣದಲ್ಲಿಯೂ ಕೂಡ ಯುಗಾದಿ ನಂತರ ಸಮಸ್ಯೆಗಳು ಎದುರಾಗಲಿವೆ. ಇತ್ತೀಚಿಗೆ ನಡೆದ ಬಾಂಬ್ ಬ್ಲಾಸ್ಟ್ ನಂತಹ ಅಹಿತಕರ ಘಟನೆಗಳು ರಾಷ್ಟ್ರ ಮಟ್ಟದಲ್ಲಿ ನಡೆಯಲಿವೆ ಎಂದು ಎಚ್ಚರಿಸಿದರು.

11:24 PM (IST) Dec 03

ನಮಗೆ ಆಗಲಿಲ್ಲ ಅಂತಾರಲ್ಲ.. ನೀವೇ ಮಾಡಿ ತೋರಿಸಿ - ರಾಜಮೌಳಿಗೆ ಆ ಒಂದು ಸವಾಲು ಹಾಕಿದ ಜೂ.ಎನ್‌ಟಿಆರ್‌

ರಾಜಮೌಳಿಗೆ ಜೂ.ಎನ್‌ಟಿಆರ್‌ ಓಪನ್ ಚಾಲೆಂಜ್ ಹಾಕಿದ್ದಾರೆ. ಶೂಟಿಂಗ್‌ನಲ್ಲಿ ತಮಗೆ ಟಾರ್ಚರ್ ಕೊಡುತ್ತಾರೆ ಎಂದು ದೂರಿದ ತಾರಕ್, 17 ಟೇಕ್‌ಗಳನ್ನು ತೆಗೆದುಕೊಂಡ ಒಂದು ದೃಶ್ಯದ ಬಗ್ಗೆ ಮಾತನಾಡುತ್ತಾ ಜಕ್ಕಣ್ಣನಿಗೆ ಶಾಕ್ ನೀಡಿದ್ದಾರೆ.

Read Full Story

11:01 PM (IST) Dec 03

ಆ ಸಿನಿಮಾ ಓಟಿಟಿಗೆ ಬಂದ ಕೂಡಲೇ ರಶ್ಮಿಕಾ ಡೀಪ್‌ಫೇಕ್ ಫೋಟೋ ವೈರಲ್ - ಅಂಥವರನ್ನು ಬಿಡಬಾರದು ಎಂದಿದ್ಯಾಕೆ?

ಇತ್ತೀಚೆಗೆ ಎಐ ಬಳಸಿ ನಟಿಯರ ಫೋಟೋಗಳನ್ನು ಅಸಭ್ಯವಾಗಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಇದೀಗ ರಶ್ಮಿಕಾ ಕೂಡ ಎಐನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

Read Full Story

10:37 PM (IST) Dec 03

ತಾಯಿ-ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮವಹಿಸಿ - ಸಚಿವ ದಿನೇಶ್ ಗುಂಡೂರಾವ್ ಸೂಚನೆ

ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಅಗತ್ಯವಾದ ಎಲ್ಲ‌ ಕ್ರಮ ವಹಿಸಬೇಕು. ಜೊತೆಗೆ ಲಿಂಗಾನುಪಾತ ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.

Read Full Story

10:36 PM (IST) Dec 03

ಮದುವೆ ಆಗಿ ಮೂರು ತಿಂಗಳಾದ ದಿನವೇ ಆ*ತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ!

ಬೆಂಗಳೂರಿನಲ್ಲಿ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಅಮೂಲ್ಯ, ಕೇವಲ ಮೂರು ತಿಂಗಳಿಗೆ ಆ*ತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಮನೆಯವರ ಕಿರುಕುಳವೇ ಸಾವಿಗೆ ಕಾರಣ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದು, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

10:23 PM (IST) Dec 03

ನಿಗೂಢ ದಿಬ್ಬ ಮತ್ತುಒಂಬತ್ತು ಅಂತಸ್ತಿನ ಅರಮನೆ.. ಓಡಿಶಾದಲ್ಲಿರುವ ಬಾರಾಬತಿ ಕೋಟೆಯ ಬಗ್ಗೆ ನಿಮಗೆ ಗೊತ್ತೇ?

ಬಾರಾಬತಿ ಕೋಟೆಯು ಒಡಿಶಾದ ಕಟಕ್‌ನಲ್ಲಿರುವ ಸೋಮವಂಶಿ (ಕೇಸರಿ) ರಾಜವಂಶದ ಮರಕಟ ಕೇಸರಿ ನಿರ್ಮಿಸಿದ ಕೋಟೆಯಾಗಿದೆ. ಕೋಟೆಯ ಅವಶೇಷಗಳು ಅದರ ಕಂದಕ, ದ್ವಾರ ಮತ್ತು ಒಂಬತ್ತು ಅಂತಸ್ತಿನ ಅರಮನೆಯ ಮಣ್ಣಿನ ದಿಬ್ಬದೊಂದಿಗೆ ಉಳಿದಿವೆ.

Read Full Story

10:11 PM (IST) Dec 03

ನರಿ ಕೂಗು ಗಿರಿ ಮುಟ್ಟಲ್ಲ - ಬಿಜೆಪಿ ರೆಬೆಲ್ಸ್ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಮಾತಿನ ಬಾಣ

ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ‌.ವಿಜಯೇಂದ್ರ ದೆಹಲಿಗೆ ಏನೋ ಕೆಲಸಕ್ಕೆ ಹೋಗಿರಬೇಕಷ್ಟೆ ಹೋಗ್ಲಿ. ನಾವು ಹೋಗ್ಬೇಡ ಅಂತ ಹೇಳೋಕೆ ಆಗುತ್ತಾ.? ಹೈಕಮಾಂಡ್ ಮನಸ್ಸು ಮಾಡಿದರೆ ಯಾರು ಬೇಕಾದ್ರು ಇಳಿಯಬಹುದು.

Read Full Story

09:33 PM (IST) Dec 03

ಸಮಂತಾರಿಂದ ಜಯಸುಧಾವರೆಗೆ 2ನೇ ಮದುವೆಯಾದ ಸ್ಟಾರ್ ನಟಿಯರು ಯಾರು? ಇಲ್ಲಿದೆ ಸಂಪೂರ್ಣ ಲಿಸ್ಟ್!

ನಟಿ ಸಮಂತಾ ಎರಡನೇ ಮದುವೆಯಾಗಿದ್ದಾರೆ. ಚಿತ್ರರಂಗದಲ್ಲಿ ನಟಿಯರು ಎರಡನೇ ಮದುವೆಯಾಗುವುದು ಅಪರೂಪ. ಟಾಲಿವುಡ್‌ನಲ್ಲಿ ಇಂತಹ ನಟಿಯರ ಸಂಖ್ಯೆ ತೀರಾ ಕಡಿಮೆ. ಸಮಂತಾರಿಂದ ಹಿಡಿದು ಜಯಸುಧಾವರೆಗೆ ಎರಡನೇ ಮದುವೆಯಾದ ತಾರೆಯರು ಯಾರೆಲ್ಲಾ ಇದ್ದಾರೆ ಗೊತ್ತಾ?

Read Full Story

09:11 PM (IST) Dec 03

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ತಿಂಡಿ ತಿನ್ನುವ ಚರ್ಚೆ ವಿಪರ್ಯಾಸ - ಸಿ.ಟಿ.ರವಿ

ರಾಜ್ಯದಲ್ಲಿ ಹಲವಾರು ಸಮಸ್ಯೆಗಳು ಇದ್ದು, ಅವುಗಳ ಬದಲಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಂಡಿ ತಿನ್ನುವ ವಿಷಯ ಚರ್ಚೆಯಾಗುತ್ತಿರುವುದು ವಿಪರ್ಯಾಸ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

Read Full Story

09:04 PM (IST) Dec 03

ಮೊಯ್ಲಿ ಅವಧಿಯಲ್ಲಿ ಟೀ, ಕಪ್ ತೆಗೆದುಕೊಂಡು ಹೊಡೆದಾಡಿಕೊಂಡಿದ್ದ ಕಾಂಗ್ರೆಸ್ಸಿಗರು - ರೇಣುಕಾಚಾರ್ಯ

ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಅವಧಿಯಲ್ಲಿ ಟೀ, ಕಪ್ ತೆಗೆದುಕೊಂಡು ಕಾಂಗ್ರೆಸ್‌ನವರು ಹೊಡೆದಾಡಿಕೊಂಡಿದ್ದರು. ಈಗ ಚಾಕು, ಚೂರಿ ಸಂಸ್ಕೃತಿ ಬಂದಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವ್ಯಂಗ್ಯವಾಡಿದರು.

Read Full Story

08:50 PM (IST) Dec 03

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?

ಅಖಂಡ 2 ಫಸ್ಟ್ ರಿವ್ಯೂ: 'ಅಖಂಡ 2' ಸಿನಿಮಾ ಇನ್ನು ಮೂರು ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಮೊದಲ ವಿಮರ್ಶೆ ಬಂದಿದೆ. ಹಾಗಾದರೆ ಇದರಲ್ಲಿನ ಹೈಲೈಟ್ಸ್ ಮತ್ತು ಮೈನಸ್‌ಗಳು ಯಾವುವು?

Read Full Story

08:25 PM (IST) Dec 03

ಮೈಸೂರು ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಟಚ್‌, ಬರೋಬ್ಬರಿ 395.73 ಕೋಟಿ ರೂ. ವೆಚ್ಚದಲ್ಲಿ ಮರು ಅಭಿವೃದ್ಧಿ!

ಮೈಸೂರು ರೈಲು ನಿಲ್ದಾಣದಲ್ಲಿ 'ಸ್ಟೇಷನ್ ಮಹೋತ್ಸವ'ವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ, ನಿಲ್ದಾಣವನ್ನು ₹395.73 ಕೋಟಿ ವೆಚ್ಚದಲ್ಲಿ ವಿಶ್ವಮಟ್ಟಕ್ಕೆ ಮರು ಅಭಿವೃದ್ಧಿಪಡಿಸುವ ಬೃಹತ್ ಯೋಜನೆಯನ್ನು ಘೋಷಿಸಲಾಯಿತು. ಈ ಯೋಜನೆಯು ಹೊಸ ಪ್ಲಾಟ್‌ಫಾರಂಗಳು ಮತ್ತು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
Read Full Story

08:21 PM (IST) Dec 03

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ ಹೆಸರು ಬದಲಿಸಿದ ಸರ್ಕಾರ, ಇನ್ಮುಂದೆ ಯಾರಬ್‌ ನಗರ ವಾರ್ಡ್‌!

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯ ನಂತರ ವಾರ್ಡ್‌ಗಳ ಹೆಸರು ಬದಲಾವಣೆ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಲೇಔಟ್ ವಾರ್ಡ್‌ಗೆ 'ಯಾರಬ್ ನಗರ' ಎಂದು ಮರುನಾಮಕರಣ ಮಾಡಿರುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Read Full Story

08:21 PM (IST) Dec 03

ಭಾರತದ ನಗರ ಪೈಕಿ ಬೆಂಗಳೂರು ಬೆಸ್ಟ್ ಫುಡ್ ಸಿಟಿ, ಸ್ಕಾಟಿಶ್ ಪ್ರವಾಸಿಗನ ಮನತಣಿಸಿದ ಬ್ರೇಕ್‌ಪಾಸ್ಟ್

ಭಾರತದ ನಗರ ಪೈಕಿ ಬೆಂಗಳೂರು ಬೆಸ್ಟ್ ಫುಡ್ ಸಿಟಿ, ಸ್ಕಾಟಿಶ್ ಪ್ರವಾಸಿಗನ ಮನತಣಿಸಿದ ಬ್ರೇಕ್‌ಪಾಸ್ಟ್, ದೆಹಲಿ, ಮುಂಬೈ, ಹೈದರಾಬಾದ್, ಕೋಲ್ಕತಾ, ಚೈನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಂಗಳೂರಿನ ಖಾದ್ಯ ಸೂಪರ್ ಎಂದಿದ್ದಾರೆ.

Read Full Story

08:19 PM (IST) Dec 03

ಆಗ ನಾಗ ಚೈತನ್ಯ ಬಗ್ಗೆ ಗೊತ್ತಿರಲಿಲ್ಲ.. ಅಖಿಲ್ ಮೇಲೆ ನನ್ನ ಪ್ರಭಾವ ಹೆಚ್ಚು - ಅಮಲಾ ಅಕ್ಕಿನೇನಿ ಎಮೋಷನಲ್ ಹೇಳಿಕೆ

ಅಮಲಾ ಅಕ್ಕಿನೇನಿ, ನಾಗ ಚೈತನ್ಯ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನಾಗ ಚೈತನ್ಯ ಮತ್ತು ಅಖಿಲ್ ಅವರನ್ನು ಹೇಗೆ ಬೆಳೆಸಿದೆವು ಅನ್ನೋದನ್ನು ವಿವರಿಸಿದ್ದಾರೆ. ಆ ವಿವರಗಳು ಈ ಲೇಖನದಲ್ಲಿವೆ.

Read Full Story

08:07 PM (IST) Dec 03

ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ, ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಸಮಯ ಬದಲಾವಣೆ!

ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲಿನ ಸಮಯವನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಬದಲಾಯಿಸಲಾಗಿದೆ. ಇದರೊಂದಿಗೆ, ಕಲಬುರಗಿ ಭಾಗದ ರೇಷ್ಮೆ ಉದ್ಯಮಕ್ಕೆ ಉತ್ತೇಜನ ನೀಡಲು ಹೊಸ ಸಾಗಾಟ ವ್ಯವಸ್ಥೆ ಮತ್ತು ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ವಂಚನೆ ತಡೆಯಲು ಒಟಿಪಿ ನಿಯಮವನ್ನು ರೈಲ್ವೆ ಇಲಾಖೆ ಜಾರಿಗೆ ತರುತ್ತಿದೆ.
Read Full Story

08:06 PM (IST) Dec 03

ಬಿಜೆಪಿ ದೇಶದ ಬದಲು ಧರ್ಮ ಕಟ್ಟುತ್ತಿದೆ, ಇದರಿಂದ ದೇಶಕ್ಕೆ ಉಪಯೋಗವಿಲ್ಲ - ಕಿಮ್ಮನೆ ರತ್ನಾಕರ್‌

ಬಿಜೆಪಿಯವರು ದೇಶ ಕಟ್ಟುವ ಬದಲು ಧರ್ಮ ಕಟ್ಟುತ್ತಿದ್ದಾರೆ. ಇದರಿಂದ ದೇಶಕ್ಕೆ ಉಪಯೋಗವಿಲ್ಲ, ಅಲ್ಲದೇ ಗಾಂಧಿ, ನೆಹರು ಅವರನ್ನು ಬಿಜೆಪಿಯು ವಿರೂಪಗೊಳಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಪಕ್ಷವು ಗಾಂಧಿ ಚಿಂತನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ.

Read Full Story

07:46 PM (IST) Dec 03

ಇದು ಇಡೀ ಬೆಂಗಳೂರೇ ಖುಷಿ ಪಡೋ ಸುದ್ದಿ, 2030ಕ್ಕೆ ಇಡೀ ರಾಜಧಾನಿ ವ್ಯಾಪಿಸಲಿದೆ ನಮ್ಮ ಮೆಟ್ರೋ!

ಮೆಟ್ರೋ ಜಾಲವು 2027ರ ವೇಳೆಗೆ 175 ಕಿ.ಮೀ.ಗೆ ವಿಸ್ತರಿಸುವ ಗುರಿ ಹೊಂದಿದೆ, ಇದರಲ್ಲಿ ಹಳದಿ, ಪಿಂಕ್ ಮತ್ತು ನೀಲಿ ಮಾರ್ಗಗಳು ಸೇರಿವೆ. ಸಾರಿಗೆ ಸುಧಾರಣೆ ಜೊತೆಗೆ, ಅಂಗಾಂಗ ಸಾಗಣೆಯಂತಹ ತುರ್ತು ವೈದ್ಯಕೀಯ ಸೇವೆಗಳಿಗೆ 'ಶೂನ್ಯ ಸಂಚಾರ ಕಾರಿಡಾರ್' ಪರಿಕಲ್ಪನೆಯ ಮೂಲಕ ಮೆಟ್ರೋ ಮಹತ್ವದ ಪಾತ್ರ ವಹಿಸುತ್ತಿದೆ.

Read Full Story

07:46 PM (IST) Dec 03

ಬೆಂಗಳೂರು-ಹಾಸನ-ಮಂಗಳೂರು ಜೋಡಿ ರೈಲು ಹಳಿ ನಿರ್ಮಾಣ; ಸಚಿವ ಎಂ.ಬಿ. ಪಾಟೀಲ ಚರ್ಚೆ!

ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ರಾಜ್ಯದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ್ದು, ಬೆಂಗಳೂರು-ವಿಜಯಪುರ ಪ್ರಯಾಣ ಸಮಯವನ್ನು 10 ಗಂಟೆಗೆ ಇಳಿಸುವ ಮತ್ತು ಬೆಂಗಳೂರು-ಮಂಗಳೂರು ಮಾರ್ಗವನ್ನು ಜೋಡಿ ಹಳಿಗೇರಿಸುವ ಬಗ್ಗೆ ಚರ್ಚಿಸಿದ್ದಾರೆ.

Read Full Story

07:38 PM (IST) Dec 03

ಜಿರಳೆ, ಇಲಿ, ಹಲ್ಲಿ ಓಡಿಸಲು ಪಾಪ್​ಕಾರ್ನ್​ ಟ್ರಿಕ್ಸ್​! ಇಷ್ಟು ಸುಲಭನಾ ಇದು? ಹಂತ ಹಂತದ ಮಾಹಿತಿ ಇಲ್ಲಿದೆ

ಮನೆಯಲ್ಲಿ ಸಾಮಾನ್ಯವಾಗಿ ಕಾಡುವ ಜಿರಳೆ, ಹಲ್ಲಿ, ಇರುವೆಗಳಂತಹ ಕೀಟಗಳನ್ನು ಓಡಿಸಲು ರಾಸಾಯನಿಕಗಳ ಮೊರೆ ಹೋಗುವುದು ಆರೋಗ್ಯಕ್ಕೆ ಹಾನಿಕಾರಕ. ಆದರೆ, ಪಾಪ್‌ಕಾರ್ನ್, ಸ್ನಾನದ ಸೋಪು ಮತ್ತು ಬೇಕಿಂಗ್ ಪೌಡರ್ ಬಳಸಿ ಮಾಡುವ ಸರಳ ಮನೆಮದ್ದಿನಿಂದ ಈ ಎಲ್ಲಾ ಕೀಟಗಳನ್ನು ಸುಲಭವಾಗಿ ದೂರವಿಡಬಹುದು.
Read Full Story

07:31 PM (IST) Dec 03

ನಯನತಾರಾ ಹಾದಿಯಲ್ಲಿ ಸಮಂತಾ, ನಿರ್ದೇಶಕರನ್ನು ಮದುವೆಯಾದ ಸ್ಟಾರ್ ನಟಿಯರು ಯಾರೆಲ್ಲಾ ಗೊತ್ತಾ?

ನಟಿ ಸಮಂತಾ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅವರಿಗಿಂತ ಮೊದಲು ನಯನತಾರಾ, ರೋಜಾ, ಸೋನಾಲಿ ಬೇಂದ್ರೆ ಹೀಗೆ ನಿರ್ದೇಶಕರನ್ನು ಮದುವೆಯಾದ ಬೇರೆ ಸ್ಟಾರ್ ನಟಿಯರು ಯಾರು ಗೊತ್ತಾ?

Read Full Story

07:26 PM (IST) Dec 03

'ಜನರಿಗೆ ಹೆಲ್ಪ್‌ ಮಾಡ್ಬೇಕು, ದುಡಿದ ಹಣವೆಲ್ಲಾ ಹಂಚ್ತಾ ಹೋಗ್ತೇನೆ..' ಭಾವುಕವಾಗಿ ಹೇಳಿದ ಹುಚ್ಚ ವೆಂಕಟ್‌

ನಟ ಹುಚ್ಚ ವೆಂಕಟ್ ತಮ್ಮ ಇತ್ತೀಚಿನ ಸಂದರ್ಶನದಲ್ಲಿ, ತಮಗೆ ಸ್ನೇಹಿತರಿಲ್ಲ, ಗೋಡೆಗಳ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ. ತಮ್ಮ ದುಡಿಮೆಯನ್ನೆಲ್ಲಾ ಜನರಿಗೆ ದಾನ ಮಾಡುವುದಾಗಿ ಹೇಳಿರುವ ಅವರು, ಹಣದ ಸಮಸ್ಯೆ ಇದ್ದರೂ ಸ್ವಾಭಿಮಾನ ಬಿಟ್ಟುಕೊಡದೆ ಬದುಕುತ್ತಿರುವುದಾಗಿ ತಿಳಿಸಿದ್ದಾರೆ.
Read Full Story

07:12 PM (IST) Dec 03

ರಾಮ್ ಚರಣ್ ಅರ್ಜುನ, ಪ್ರಭಾಸ್ ಕರ್ಣ, ರಾಜಮೌಳಿ ಮಹಾಭಾರತದಲ್ಲಿ ಕೃಷ್ಣ ಯಾರು? ವಿಡಿಯೋ ವೈರಲ್

ರಾಜಮೌಳಿ ಅವರ ಮಹಾಭಾರತ ಡ್ರೀಮ್ ಪ್ರಾಜೆಕ್ಟ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಸಿನಿಮಾದಲ್ಲಿ ಪ್ರಭಾಸ್ ಕರ್ಣನಾಗಿ, ರಾಮ್ ಚರಣ್ ಅರ್ಜುನನಾಗಿ ನಟಿಸಿದರೆ ಹೇಗಿರುತ್ತೆ? ಕೃಷ್ಣನ ಪಾತ್ರಕ್ಕೆ ಯಾರು ಸರಿಹೊಂದುತ್ತಾರೆ? ಇದಕ್ಕೆ ಸಂಬಂಧಿಸಿದ ಎಐ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Read Full Story

07:11 PM (IST) Dec 03

Amruthadhaare - ಮಲ್ಲಿಯ ಏಟಿಗೆ ಜೈದೇವ್​ ನಶೆ ಇಳಿದೋಯ್ತು! ಭಾಗ್ಯಮ್ಮನ ಹಿಂದೆ ಹೋದವನ ಸ್ಥಿತಿ ಚಿಂತಾಜನಕ

ಅಮೃತಧಾರೆ ಧಾರಾವಾಹಿಯಲ್ಲಿ, ಅನಿರೀಕ್ಷಿತವಾಗಿ ಒಂದೇ ದೇವಸ್ಥಾನದಲ್ಲಿ ಎಲ್ಲಾ ಪಾತ್ರಧಾರಿಗಳು ಒಟ್ಟಿಗೆ ಸೇರುತ್ತಾರೆ. ಅಲ್ಲಿ ಜೈದೇವ್, ಆಕಾಶ್‌ನನ್ನು ಹಿಡಿದು ಮಲ್ಲಿಯ ಬಗ್ಗೆ ಸತ್ಯ ಹೇಳುವಷ್ಟರಲ್ಲಿ, ಮಲ್ಲಿ ಹಿಂದಿನಿಂದ ಬಂದು ಅವನ ತಲೆಗೆ ಹೊಡೆದು ಕೆಳಗೆ ಬೀಳಿಸುತ್ತಾಳೆ.
Read Full Story

07:10 PM (IST) Dec 03

ಹಳದಿ ಮಾರ್ಗ ಪ್ರಯಾಣಿಕರಿಗೆ ಸಂತಸದ ಸುದ್ದಿ, ಮತ್ತಷ್ಟು ಬೋಗಿಗಳು, ಸಮಯದಲ್ಲೂ ಶೀಘ್ರ ಬದಲಾವಣೆ ಸಾಧ್ಯತೆ

ಬೆಂಗಳೂರಿನ ಮೆಟ್ರೋ ಹಳದಿ ಮಾರ್ಗಕ್ಕೆ ಆರನೇ ರೈಲು ಸೆಟ್ ನಗರಕ್ಕೆ ಬಂದಿದೆ. ಈ ಹೊಸ ರೈಲು ಸೇರ್ಪಡೆಯಿಂದ, ಪೀಕ್ ಅವರ್‌ನಲ್ಲಿ ಕಾಯುವ ಸಮಯ ಕಡಿಮೆಯಾಗಲಿದ್ದು, ಬೆಳಗಿನ ಸೇವೆಗಳು ಬೇಗನೆ ಆರಂಭವಾಗುವ ಸಾಧ್ಯತೆಯಿದೆ. ಸದ್ಯ ರೈಲಿನ ಸ್ಥಿರ ಮತ್ತು ಚಲನಾ ಪರೀಕ್ಷೆಗಳು ನಡೆಯುತ್ತಿವೆ.
Read Full Story

06:51 PM (IST) Dec 03

ತುಂಗಭದ್ರಾ ಜಲಾಶಯದ ಗೇಟ್‌ ಅಳವಡಿಕೆ ವಾರದಲ್ಲಿ ಆರಂಭ - ಸಚಿವ ಬೋಸರಾಜು

ತುಂಗಭದ್ರಾ ಜಲಾಶಯದ ನೂತನ ಗೇಟ್‌ ಅಳವಡಿಕೆ ಕಾರ್ಯ ಇನ್ನೊಂದು ವಾರದಲ್ಲಿ ಪ್ರಾರಂಭವಾಗಲಿದೆ ಎಂದು ಸಣ್ಣ ನೀರಾವರಿ ಸಚಿವ ಬೋಸರಾಜು ಹೇಳಿದರು. ಕೊಪ್ಪಳ ಜಿಲ್ಲೆ ಮುನಿರಾಬಾದ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

Read Full Story

06:44 PM (IST) Dec 03

ನಕ್ಕಳಾ ರಾಜಕುಮಾರಿ! ಸ್ಪಂದನಾ ಕಣ್ಣೀರು ಒರೆಸಲು 'ಜಿಂಕೆ ಮರಿನಾ' ಹಾಡಿಗೆ Bigg Boss Boys ಸ್ಟೆಪ್​

ಬಿಗ್​ಬಾಸ್​ ಮನೆಯಲ್ಲಿ ಒಬ್ಬಳೇ ಕುಳಿತು ಕಣ್ಣೀರಿಡುತ್ತಿದ್ದ ಸ್ಪಂದನಾಳನ್ನು ಇತರ ಸ್ಪರ್ಧಿಗಳಾದ ಸೂರಜ್, ಧನುಷ್ ಮತ್ತು ಅಭಿಷೇಕ್ ನೋಡಿದ್ದಾರೆ. ಸ್ಪಂದನಾಳನ್ನು ಸಮಾಧಾನ ಮಾಡಲು ವಿಫಲರಾದ ಹುಡುಗರು, ಕೊನೆಗೆ 'ಜಿಂಕೆ ಮರಿನಾ' ಹಾಡಿಗೆ ಡಾನ್ಸ್ ಮಾಡಿ ಆಕೆಯನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read Full Story

06:41 PM (IST) Dec 03

ಹುಚ್ಚ ವೆಂಕಟ್‌ಗೆ ಇದೆಂಥಾ ಸ್ಥಿತಿ, ಕಣ್ಣಿಗೆ ಆಪರೇಷನ್‌ ಆಗ್ಬೇಕು ಆದ್ರೆ ಅವರ ಬ್ಯಾಂಕ್‌ ಅಕೌಂಟ್‌ನಲ್ಲಿರೋದು 6 ರೂಪಾಯಿ 56 ಪೈಸೆ!

ಬಹುಕಾಲದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಹುಚ್ಚ ವೆಂಕಟ್ ತಮ್ಮ ಈಗಿನ ಕಷ್ಟದ ಜೀವನದ ಬಗ್ಗೆ ಮಾತನಾಡಿದ್ದಾರೆ. ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದು, ಆಪರೇಷನ್‌ಗೆ ಹಣವಿಲ್ಲದಿದ್ದರೂ ಜನರ ಬಳಿ ಸಹಾಯ ಕೇಳುವುದಿಲ್ಲ ಎಂದಿದ್ದಾರೆ. 

Read Full Story

06:12 PM (IST) Dec 03

ಬೆಂಗಳೂರು-ಬಾಗಲಕೋಟೆ ನಡುವೆ ಕೆಎಸ್‌ಆರ್‌ಟಿಸಿ ಹೊಸ ಎ.ಸಿ. ಸ್ಲೀಪರ್ ಬಸ್ ಸೇವೆ ಪ್ರಾರಂಭ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೆಂಗಳೂರು ಮತ್ತು ಬಾಗಲಕೋಟೆ ನಡುವೆ ಹೊಸ ಎ.ಸಿ. ಸ್ಲೀಪರ್ ಕೋಚ್ ಬಸ್ ಸೇವೆಯನ್ನು ಪ್ರಾರಂಭಿಸಿದೆ. ರಾತ್ರಿ ವೇಳೆಯಲ್ಲಿ ಸಂಚರಿಸುವ ಈ ಐಷಾರಾಮಿ ಬಸ್‌ನ ಟಿಕೆಟ್ ದರ, ವೇಳಾಪಟ್ಟಿ ಮತ್ತು ಆನ್‌ಲೈನ್ ಬುಕಿಂಗ್ ವಿವರಗಳನ್ನು ಇಲ್ಲಿ ನೀಡಲಾಗಿದೆ.

Read Full Story

06:02 PM (IST) Dec 03

Karna Serial - ಬೆಟ್ಟದ ತುದಿಯಲ್ಲಿ ಕೊನೆಗೂ ಸತ್ಯದ ಅನಾವರಣ - ನಿತ್ಯಾಗೆ ಶಾಕ್​- ನಿಧಿ ಮುಂದಿನ ನಡೆ ಏನು?

‘ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಗರ್ಭಿಣಿ ಎನ್ನುವ ಸತ್ಯ ಆಕಸ್ಮಿಕವಾಗಿ ನಿಧಿಗೆ ತಿಳಿದು ಆಘಾತಗೊಂಡಿದ್ದಾಳೆ. ತನ್ನ ಬಳಿ ಸತ್ಯ ಮುಚ್ಚಿಟ್ಟ ಅಕ್ಕ ನಿತ್ಯಾ ಹಾಗೂ ಕರ್ಣನನ್ನು ಪ್ರಶ್ನಿಸಿದಾಗ ಅವರಿಬ್ಬರೂ ತಬ್ಬಿಬ್ಬಾಗಿದ್ದಾರೆ. ಈ ಸತ್ಯ ಬಯಲಾದ ನಂತರ, ಮುಂದೇನು ಎಂದು ವೀಕ್ಷಕರು ಕಾಯುತ್ತಿದ್ದಾರೆ.
Read Full Story

05:53 PM (IST) Dec 03

ಬ್ರೇಕ್‌ಫಾಸ್ಟ್ ರಾಜಕೀಯ.. ಸಿಎಂ, ಡಿಸಿಎಂಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ - ಸಚಿವ ಶಿವಾನಂದ ಪಾಟೀಲ

ನಮ್ಮಲ್ಲಿ ಯಾರೇ ಮುಖ್ಯಮಂತ್ರಿ ಆದರೂ ನಾವು ಪಕ್ಷವನ್ನು ಬಿಟ್ಟುಕೊಡೊದಿಲ್ಲ. ಪಕ್ಷಕ್ಕಾಗಿ ನಾವು ಹೋರಾಡುತ್ತೇವೆ. ನಾವು ಬೇಡ ಅಂದರೂ ಸರ್ಕಾರ ಉಳಿಯುತ್ತದೆ ಎಂದು ಸಕ್ಕರೆ ಹಾಗೂ ಕೃಷಿ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.

Read Full Story

05:45 PM (IST) Dec 03

ಖಾಸಗಿ ಕಂಪನಿಗೆ ಅಂಜನಾದ್ರಿ ಸಹಭಾಗಿತ್ವ ನೀಡಿಲ್ಲ - ಸಚಿವ ಶಿವರಾಜ ತಂಗಡಗಿ

ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಯಲ್ಲಿ ನಡೆಯುತ್ತಿರುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಖಾಸಗಿ ಕಂಪನಿಯವರ ಸಹಭಾಗಿತ್ವ ಪಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

Read Full Story

05:35 PM (IST) Dec 03

ಆರೋಪಿ ಲಕ್ಷ್ಮಣ್ ಮನವಿ ಒಪ್ಪಿದ ಜಡ್ಜ್, ಡಿ ಗ್ಯಾಂಗ್‌ಗೆ ಸಿಕ್ತು ಟಿವಿ ಸೌಲಭ್ಯ! ದರ್ಶನ್‌ ಮನೆಯಲ್ಲಿ ಸಿಕ್ಕ 82 ಲಕ್ಷ ಐಟಿ ಇಲಾಖೆಗೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಬೆಂಗಳೂರು ಸೆಷನ್ಸ್ ಕೋರ್ಟ್‌ನಲ್ಲಿ ನಡೆದಿದ್ದು, ಜೈಲಿನಲ್ಲಿರುವ ಆರೋಪಿಗಳಿಗೆ ಟಿವಿ ಸೌಲಭ್ಯ ನೀಡಲು ಮತ್ತು ದರ್ಶನ್ ಮನೆಯಲ್ಲಿ ಸಿಕ್ಕ ₹82 ಲಕ್ಷವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲು ನ್ಯಾಯಾಲಯ ಆದೇಶಿಸಿದೆ. 

Read Full Story

05:34 PM (IST) Dec 03

ವಿರಾಟ್-ಋತುರಾಜ್ ಶತಕದ ಅಬ್ಬರ; ಹರಿಣಗಳಿಗೆ ಬಿಗ್ ಟಾರ್ಗೆಟ್ ಕೊಟ್ಟ ಭಾರತ!

ರಾಯ್ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 358 ರನ್ ಗಳಿಸಿ ಹರಿಣಗಳಿಗೆ ಕಠಿಣ ಗುರಿ ನೀಡಿದೆ.

Read Full Story

05:34 PM (IST) Dec 03

ಮದುವೆ ದಿನ ಮದುಮಗನಿಗೆ ಎದೆಹಾಲು ಉಣಿಸುವ ಅಮ್ಮ - ಏನೀ ವಿಚಿತ್ರ ಸಂಪ್ರದಾಯ? ವಿಡಿಯೋ ವೈರಲ್​

ರಾಜಸ್ಥಾನದ ವಿಶಿಷ್ಟ ಮದುವೆ ಸಂಪ್ರದಾಯವೊಂದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಮದುವೆಯ ದಿನ ತಾಯಿ ತನ್ನ ಮಗನಿಗೆ ಎದೆಹಾಲುಣಿಸುವ ಪದ್ಧತಿ ಇದ್ದು, ಇದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಹೆಂಡತಿ ಬಂದ ಮೇಲೆ ತಾಯಿಯನ್ನು ಮರೆಯಬಾರದು ಎಂಬುದೇ ಈ ಸಂಪ್ರದಾಯದ ಹಿಂದಿನ ಉದ್ದೇಶವಾಗಿದೆ.
Read Full Story

05:32 PM (IST) Dec 03

ಒಂದೇ ದಿನಕ್ಕೆ 'ಸೀತೆ'ಯಾದ ಸೋನು ಗೌಡ.. ಮಲ್ಲಿಗೆ ಮುಡಿದ ಹಳ್ಳಿ ಹುಡುಗಿ ಯಾರೀ ಬೆಡಗಿ ಎಂದ ನೆಟ್ಟಿಗರು!

ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್​ಗಳ ಮೂಲಕ ಸಖತ್​ ಸದ್ದು ಮಾಡುತ್ತಿದ್ದ ಸೋನು ಶ್ರೀನಿವಾಸ್​ ಗೌಡ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರಿಗೆ ಶಾಕ್ ಕೊಟ್ಟಿದ್ದಾರೆ.

Read Full Story

05:05 PM (IST) Dec 03

ಬಿಗ್ ಬಾಸ್ ಟಾಸ್ಕ್‌ನಲ್ಲಿ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಸ್ಪಂದನಾ ಸೋಮಣ್ಣ; ನಡೆಯಲೂ ಆಗದಷ್ಟು ನೋವು!

ಬಿಗ್ ಬಾಸ್ ಮನೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಸ್ಪರ್ಧಿ ಸ್ಪಂದನಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲ್ ಸಂಗ್ರಹಿಸುವ ಆಟದಲ್ಲಿ ಸಹ ಸ್ಪರ್ಧಿಗಳು ಮೇಲೆ ಬಿದ್ದ ಪರಿಣಾಮ ಅವರ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Read Full Story

04:54 PM (IST) Dec 03

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನಸ್ಸುಗಳೇ ಬ್ರೇಕ್ ಆಗಿವೆ - ಛಲವಾದಿ ನಾರಾಯಣಸ್ವಾಮಿ

ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ, ಇಬ್ಬರು ಕೂಡ ಕುರ್ಚಿ ಆಸೆಗಾಗಿ ಬ್ರೇಕ್ ಪಾಸ್ಟ್ ಗಿಮಿಕ್ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

Read Full Story

04:37 PM (IST) Dec 03

ದುರ್ಗಾ ಪಾತ್ರದಲ್ಲಿ ಹಿತಾ.. 'ಆಜಾದ್ ಭಾರತ್‌' ಎಂದಿದ್ಯಾಕೆ ನಿರ್ದೇಶಕಿ ರೂಪಾ ಅಯ್ಯರ್

ಕನ್ನಡಿಗರೇ ಸೇರಿ ಮಾಡಿರುವ ಆಜಾದ್ ಭಾರತ್‌ ಬಾಲಿವುಡ್‌ ಚಿತ್ರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳಾ ಪಡೆಯನ್ನು ಕಟ್ಟಿದ್ದು ಹೇಗೆ, ಅದರ ಆಲೋಚನೆ ಬಂದಿದ್ದು ಹೇಗೆ, ಆ ಪಡೆ ಹೇಗೆ ಕೆಲಸ ಮಾಡಿತು.

Read Full Story

04:20 PM (IST) Dec 03

ಡಿ.5ರಂದು ಬೆಳಿಗ್ಗೆ 10 ಗಂಟೆಗೆ ನಟ ದರ್ಶನ್ ಬರ್ತಾರೆ.. ಏನಿದು ಹೊಸ ಸುದ್ದಿ..

ದರ್ಶನ್‌ ನಟನೆಯ ‘ಡೆವಿಲ್‌’ ಚಿತ್ರದ ಟ್ರೇಲರ್‌ ಡಿ.5ರಂದು ಬೆಳಿಗ್ಗೆ 10.5 ನಿಮಿಷಕ್ಕೆ ಯೂಟ್ಯೂಬ್‌ನಲ್ಲಿ ಟ್ರೈಲರ್ ರಿಲೀಸ್ ಆಗಲಿದೆ. ಡಿ.11ರಂದು ಬೆಳಿಗ್ಗೆ 6.30ರಿಂದಲೇ ‘ಡೆವಿಲ್‌’ ಚಿತ್ರದ ಪ್ರದರ್ಶನ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

Read Full Story

04:11 PM (IST) Dec 03

Bigg Boss - ಇಂದೇ ಒಂದು ಜೋಡಿಗೆ ಗೇಟ್​ಪಾಸ್​ - ಕ್ಯಾಪ್ಟೆನ್ಸಿ ಟಾಸ್ಕ್‌ನಲ್ಲಿ ಗೆಲ್ಲೋರು ಯಾರು, ಸೋಲೋರು ಯಾರು?

ಬಿಗ್ ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ, ಸ್ಪರ್ಧಿಗಳಿಗೆ ಹೊಸ ಕ್ಯಾಪ್ಟೆನ್ಸಿ ಟಾಸ್ಕ್ ನೀಡಲಾಗಿದೆ. ರಿಂಗ್ ಆಟದಲ್ಲಿ ರಘು ಮತ್ತು ಅಶ್ವಿನಿ ಗೌಡ ಗೆದ್ದರೂ, ಒಂದು ಜೋಡಿ ಕ್ಯಾಪ್ಟೆನ್ಸಿ ರೇಸ್‌ನಿಂದ ಹೊರಬೀಳಲಿದೆ ಎಂದು ಬಿಗ್ ಬಾಸ್ ಘೋಷಿಸಿದ್ದು, ಕುತೂಹಲ ಹೆಚ್ಚಿಸಿದೆ.
Read Full Story

More Trending News